ಸೆಲೆಬ್ರಿಟಿಗಳಿಗೆ ಸುದ್ದಿಗೋಷ್ಠಿಯಲ್ಲಿ ಎದುರಾಗುವ ಪ್ರಶ್ನೆಗಳನ್ನು ಎದುರಿಸುವುದು ಸುಲಭದ ಮಾತಲ್ಲ. ಅದರಲ್ಲೂ ವೈಯಕ್ತಿಕ ಮತ್ತು ಸೂಕ್ಷ್ಮ ಪ್ರಶ್ನೆಗಳು ಬಂದಾಗ ಕಲಾವಿದರು ಅನೇಕ ವೇಳೆ ಭಾವುಕರಾಗುತ್ತಾರೆ. ಇದೀಗ ಡಾಲಿ ಧನಂಜಯ್ ಅವರ ‘ಹೆಡ್ ಬುಷ್’ ಸಿನಿಮಾ ನಾಯಕಿ, ಆರ್ಎಕ್ಸ್ 100 ಖ್ಯಾತಿಯ ನಟಿ ಪಾಯಲ್ ರಜಪೂತ್ (Payal Rajput) ಅವರು ಸುದ್ದಿಗೋಷ್ಠಿಯೊಂದರಲ್ಲಿ ಕಣ್ಣೀರು ಹಾಕುತ್ತಾ ವೇದಿಕೆಯಿಂದ ಎದ್ದು ನಡೆದ ಘಟನೆ ನಡೆದಿದೆ.
ಸುದ್ದಿಗೋಷ್ಠಿಯಲ್ಲಿ ಏನಾಯಿತು?
ಪಾಯಲ್ ರಜಪೂತ್ ಅವರು ತಮ್ಮ ಮುಂಬರುವ ‘ಫಸ್ಟ್ ಟೈಮ್’ ಸಿನಿಮಾದ ಪ್ರಚಾರದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಅವರ ವೃತ್ತಿ ಜೀವನದ ಏರಿಳಿತ, ಖಿನ್ನತೆ, ತಂದೆಯ ನಿಧನ ಸೇರಿದಂತೆ ಹಲವು ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸಲಾಯಿತು.
ಮೊದಲಿಗೆ ಅವರು ಸ್ವಲ್ಪ ಸಮಾಧಾನದಿಂದ ಪ್ರತಿಕ್ರಿಯಿಸಲು ಯತ್ನಿಸಿದರು. ಆದರೆ, ತಂದೆಯನ್ನು ಕಳೆದುಕೊಂಡ ದುಃಖ, ಅದರಿಂದ ಹೊರಬರಲು ತಾವು ಯೋಗ ಮತ್ತು ಧ್ಯಾನವನ್ನು ಅವಲಂಬಿಸಿದ್ದು, ಇಂತಹ ವಿಷಯಗಳನ್ನು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿತು. ಸ್ವಲ್ಪ ಹೊತ್ತು ತಡಿದರೂ, ಕೊನೆಗೆ ದುಃಖ ತಡೆದುಕೊಳ್ಳಲಾಗದೇ, ಸುದ್ದಿಗೋಷ್ಠಿಯಿಂದಲೇ ಎದ್ದು ಹೊರನಡೆದರು.
ವೈಯಕ್ತಿಕ ಪ್ರಶ್ನೆಗಳೇ ಕಾರಣ?
ಪಾಯಲ್ ರಜಪೂತ್ ಅವರಿಗೆ ತಂದೆಯೇ ಎಲ್ಲವೂ ಆಗಿದ್ದರು. ಇತ್ತೀಚೆಗೆ ಅವರು ನಿಧನರಾದ ನಂತರ ನಟಿ ಮಾನಸಿಕವಾಗಿ ಕುಸಿದಿದ್ದರು. ಖಿನ್ನತೆಯಿಂದ ಹೊರಬರಲು ಅವರು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂತಹ ಸಂದರ್ಭದಲ್ಲೇ ಸುದ್ದಿಗೋಷ್ಠಿಯಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆಗಳು ಎದುರಾದವು.
ಒಂದು ಹಂತದಲ್ಲಿ ಪಾಯಲ್ ಅವರು ಮತ್ತೆ ಸಮಾಧಾನಪಟ್ಟುಕೊಂಡು ಮಾತನಾಡಲು ಪ್ರಯತ್ನಿಸಿದರೂ, ಮತ್ತೆ ಕಣ್ಣೀರು ಹರಿಸಿದರು. ಕೊನೆಗೆ ಅವರು ಅಳುವುದನ್ನು ತಡೆಯಲಾಗದೆ ವೇದಿಕೆಯಿಂದ ಎದ್ದು ನಡೆದರು. ಅವರ ಈ ಭಾವನಾತ್ಮಕ ನಿರ್ಗಮನವನ್ನು ಕಂಡು ಸಭೆಯಲ್ಲಿದ್ದ ಎಲ್ಲರೂ ಸ್ತಬ್ಧರಾದರು.
స్టేజీపై కంటతడి పెట్టిన పాయల్ రాజ్పుత్
‘ఫస్ట్ టైమ్’ మూవీ ట్రైలర్ లాంచ్ ఈవెంట్లో ఓ విలేకరి అడిగిన ప్రశ్నకు సమాధానమిస్తూ ఉద్వేగానికి లోనైన పాయల్
‘మా నాన్న క్యాన్సర్ బారిన పడిన సమయంలోనే నేను జైపూర్లో విపాసన ట్రీట్మెంట్ కోసం వెళ్లా.. మా కుటుంబానికి అది చాలా కష్ట సమయం’ అంటూ… pic.twitter.com/Y85jhZrFCa
— BIG TV Breaking News (@bigtvtelugu) April 28, 2026
ಪಾಯಲ್ ರಜಪೂತ್ ಕುರಿತು ಸ್ವಲ್ಪ ಮಾಹಿತಿ
2018ರಲ್ಲಿ ‘ಆರ್ಎಕ್ಸ್ 100’ ಸಿನಿಮಾದ ಮೂಲಕ ಪಾಯಲ್ ರಜಪೂತ್ ಅವರು ತೆಲುಗು ಸಿನಿಮಾರಂಗದಲ್ಲಿ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಅವರ ಬೋಲ್ಡ್ ಪಾತ್ರ ಮತ್ತು ಅಭಿನಯ ವ್ಯಾಪಕ ಮೆಚ್ಚುಗೆ ಗಳಿಸಿತು. ನಂತರ 2022ರಲ್ಲಿ ಡಾಲಿ ಧನಂಜಯ್ ಅವರೊಂದಿಗೆ ‘ಹೆಡ್ ಬುಷ್’ ಸಿನಿಮಾದಲ್ಲಿ ನಟಿಸಿದರು. ಇದು ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಪಾಯಲ್ ಅವರಿಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ಅವಕಾಶಗಳು ದೊರಕುತ್ತಿವೆ.
ಮಾಧ್ಯಮ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ
ಪಾಯಲ್ ರಜಪೂತ್ ಅವರ ಈ ಕಂಬನಿ ಮತ್ತು ನಿರ್ಗಮನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಹಲವರ ಪ್ರಕಾರ, “ವೈಯಕ್ತಿಕವಾಗಿ ಕಟುವಾದ ಪ್ರಶ್ನೆಗಳನ್ನು ಕೇಳುವ ಮೊದಲು ಮಾಧ್ಯಮದವರು ಸ್ವಲ್ಪ ಯೋಚಿಸಬೇಕಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ. ಅನೇಕ ಪ್ರೇಕ್ಷಕರು ಮತ್ತು ಅಭಿಮಾನಿಗಳು ಪಾಯಲ್ ಅವರಿಗೆ ಸಮಾಧಾನ ಮತ್ತು ಬೆಂಬಲ ಸೂಚಿಸುತ್ತಿದ್ದಾರೆ.
