ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಬಾಲಿವುಡ್ನ ಮೆಗಾ ಪ್ರಾಜೆಕ್ಟ್ ‘ರಾಮಾಯಣ’ ಈಗಾಗಲೇ ದೇಶದಾದ್ಯಂತ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ರಾಮಾಯಣ ಸಿನಿಮಾದ ಟೀಸರ್ ರಿಲೀಸ್ಗೆ ಡೇಟ್ ಫಿಕ್ಸ್ ಆಗಿದ್ದು, ರಾಮ ಭಕ್ತರಿಗೆ ಖುಷಿ ಆಗಿದೆ.
ನಿತೇಶ್ ತಿವಾರಿ ಡೈರೆಕ್ಷನ್ನಲ್ಲಿ ತಯಾರಾಗ್ತಿರೋ ‘ರಾಮಾಯಣ’ ಸಿನಿಮಾ ಮೊದಲಿನಿಂದಲೂ ಹೈ ಎಕ್ಸ್ಪೆಕ್ಟೇಶನ್ ಕ್ರಿಯೇಟ್ ಮಾಡಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಕಾಣಿಸಿಕೊಳ್ಳ್ತಿರೋದು ದೊಡ್ಡ ಹೈಲೈಟ್. ಮೊದಲಿಗೆ ಶ್ರೀರಾಮನವಮಿಗೆ ಟೀಸರ್ ರಿಲೀಸ್ ಆಗ್ತಿದ್ದೆ ಅಂತ ಹೇಳಿದ್ದ ಚಿತ್ರತಂಡ ಅದ್ಯಾಕೋ ಡೇಟ್ ಪೋಸ್ಟ್ ಫೋನ್ ಮಾಡಿದ್ರು ಆದ್ರೆ ಆ ಡೇಟ್ ಮಿಸ್ ಆದ್ರೂ, ಇದೀಗ ಹೊಸ ಡೇಟ್ ಅನೌನ್ಸ್ ಆಗಿದ್ದು ಫ್ಯಾನ್ಸ್ಗೆ ರಿಲೀಫ್ ಕೊಟ್ಟಿದೆ.
ರಾಮ ಭಕ್ತರಿಗೆ ಬಿಗ್ ಸರ್ಪ್ರೈಸ್.. ‘ರಾಮಾಯಣ’ ಟೀಸರ್ ರಿಲೀಸ್
ಏಪ್ರಿಲ್ 2ಕ್ಕೆ ವರ್ಲ್ಡ್ ವೈಡ್ ರಿವೀಲ್..ಮೆಗಾ ಸೆಲೆಬ್ರೇಷನ್ ಮೋಡ್..!
ಸುಮಾರು 4000 ಕೋಟಿ ಬಜೆಟ್ನಲ್ಲಿ ತಯಾರಾಗ್ತಿರೋ ಈ ಸಿನಿಮಾ ಇಂಡಿಯನ್ ಸಿನೆಮಾದ ಇತಿಹಾಸವನ್ನೇ ಬದಲಾಯಿಸೋ ಮಟ್ಟಕ್ಕೆ ಪ್ಲ್ಯಾನ್ ಆಗಿದೆ. ದೀಪಾವಳಿ ಸಮಯದಲ್ಲಿ ಫಸ್ಟ್ ಪಾರ್ಟ್ ರಿಲೀಸ್ ಮಾಡುವ ಟಾರ್ಗೆಟ್ ಇಟ್ಟಿರೋ ಟೀಂ, ಈಗ ಟೀಸರ್ ಮೂಲಕವೇ ಗ್ಲೋಬಲ್ ಹೈಪ್ ಕ್ರಿಯೇಟ್ ಮಾಡೋಕೆ ಸಜ್ಜಾಗಿದೆ. ಪ್ಯಾನ್ ವರ್ಲ್ಡ್ ಆಡಿಯನ್ಸ್ಗೆ ತಲುಪೋ ಗ್ರ್ಯಾಂಡ್ ಸ್ಟ್ರಾಟೆಜಿ ಇಲ್ಲಿ ಕಾಣಿಸ್ತಿದೆ.
ಪ್ರೊಡ್ಯೂಸರ್ ನಮಿತ್ ಮಲ್ಹೋತ್ರಾ ಹೇಳಿದಂತೆ, ಏಪ್ರಿಲ್ 2ರಂದು ಹನುಮ ಜಯಂತಿಯ ಪವಿತ್ರ ದಿನದಂದು ರಾಮಾಯಣ ಚಿತ್ರದ ‘ರಾಮ’ನ ಸ್ಪೆಷಲ್ ಝಲಕ್ ರಿಲೀಸ್ ಆಗಲಿದೆ. ಇದು ಕೇವಲ ಟೀಸರ್ ಅಲ್ಲ ವರ್ಲ್ಡ್ ವೈಡ್ ಫ್ಯಾನ್ಸ್ ಜೊತೆ ಸೆಲೆಬ್ರೇಷನ್ ಅನ್ನೋ ರೀತಿ ಪ್ಲ್ಯಾನ್ ಮಾಡಲಾಗಿದೆ. ವಿಶ್ವಾದ್ಯಂತ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ಬಿಡುಗಡೆ ಮಾಡುವುದಾಗಿ ಟೀಂ ತಿಳಿಸಿದೆ. ಇದಕ್ಕೆ ‘ಗ್ರ್ಯಾಂಡ್ ವರ್ಲ್ಡ್ ರಿವೀಲ್’ ಅನ್ನೋ ಟ್ಯಾಗ್ಲೈನ್ನಲ್ಲೇ ಈ ಈವೆಂಟ್ ಸ್ಕೆಲ್ ಗೊತ್ತಾಗ್ತಿದೆ.
4000 ಕೋಟಿ ರಾಮಾಯಣ…ಇಂಡಿಯನ್ ಸಿನಿಮಾದ ಗೇಮ್ ಚೇಂಜರ್
ರಾವಣನಾಗಿ ಯಶ್ ಫೈರ್, ರೆಹಮಾನ್ & ಹ್ಯಾನ್ಸ್ ಮ್ಯೂಸಿಕ್ ಮ್ಯಾಜಿಕ್..!
ರಾಮಾಯಣವು ನಮ್ಮೆಲ್ಲರ ಪರಂಪರೆಯಾಗಿದೆ.ಅತ್ಯಂತ ಜವಾಬ್ದಾರಿ ಮತ್ತು ಭಕ್ತಿಯಿಂದ ಈ ಮಹಾಕಾವ್ಯಕ್ಕೆ ಜೀವ ತುಂಬುತ್ತಿದ್ದೇವೆ. ಹನುಮ ಜಯಂತಿಯಂದು ನಡೆಯಲಿರುವ ಈ ‘ಗ್ರಾಂಡ್ ವರ್ಲ್ಡ್ ರಿವೀಲ್’ ಕೇವಲ ಸಿನಿಮಾದ ಅಪ್ಡೇಟ್ ಅಲ್ಲ, ಇದು ವಿಶ್ವಾದ್ಯಂತ ಇರುವ ರಾಮಭಕ್ತರು ಮತ್ತು ಅಭಿಮಾನಿಗಳ ಸಂಭ್ರಮದ ಆಚರಣೆಯಾಗಲಿದೆ’ ಎಂದು ನಿಮಿತ್ ಮಲ್ಹೋತ್ರಾ ಬರೆದುಕೊಂಡಿದ್ದಾರೆ. ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಯಶ್ ರಾವಣನಾಗಿ ಕಾಣಿಸಿಕೊಳ್ಳೋದು ಕನ್ನಡ ಫ್ಯಾನ್ಸ್ಗೆ ಸಪರೇಟ್ ಎಕ್ಸೈಟ್ಮೆಂಟ್. ಫಸ್ಟ್ ಪಾರ್ಟ್ನಲ್ಲಿ ಸೀತಾಪಹರಣದವರೆಗೆ ಮಾತ್ರ ಕಥೆ ಇರೋದರಿಂದ ಯಶ್ ಸ್ಕ್ರೀನ್ ಸ್ಪೇಸ್ ಕಡಿಮೆ ಇರಬಹುದು, ಆದ್ರೆ ಸೆಕೆಂಡ್ ಪಾರ್ಟ್ನಲ್ಲಿ ಲಂಕಾಧಿಪತಿ ರಾವಣನ ರೌದ್ರಾವತಾರ ಫುಲ್ ಡಾಮಿನೇಟ್ ಮಾಡೋದು ಖಚಿತ. ದಶರಥನಾಗಿ ಅರುಣ್ ಗೋವಿಲ್, ಶೂರ್ಪಣಖಿಯಾಗಿ ರಕುಲ್ ಪ್ರೀತ್ ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಸ್ಟಾರ್ ಕಾಸ್ಟ್ ಕೂಡ ಪವರ್ಫುಲ್ ಆಗಿದೆ.
ಒಟ್ಟಿನಲ್ಲಿ ‘ರಾಮಾಯಣ’ ಸಿನಿಮಾ ಕೇವಲ ಒಂದು ಚಿತ್ರವಲ್ಲ, ಇದು ಇಂಡಿಯನ್ ಸಿನೆಮಾದ ಗೇಮ್ ಚೇಂಜರ್ ಆಗೋ ಮಟ್ಟಕ್ಕೆ ಸಿದ್ಧವಾಗ್ತಿದೆ. ಏಪ್ರಿಲ್ 2ರಂದು ಟೀಸರ್ ರಿಲೀಸ್ ಆಗ್ತಿದ್ದಂತೆ, ರಾಮಭಕ್ತರ ಜೊತೆಗೆ ಸಿನಿ ಪ್ರೇಕ್ಷಕರೂ ಕೌಂಟ್ಡೌನ್ ಶುರು ಮಾಡಿದ್ದಾರೆ. ಈಗ ಎಲ್ಲರ ಕಣ್ಣು ‘ರಾಮಾಯಣ’ ಟೀಸರ್ ಮೇಲೆ.





