ಕೋರ್ಟ್ ಮೆಟ್ಟಿಲೇರಿದ ಸುದೀಪ್ ‘ಮ್ಯಾಕ್ಸ್’ ಪ್ರೊಡ್ಯೂಸರ್..!

ಕಿಚ್ಚನ ಹೆಸರಿಗೆ ಕಳಂಕ.. KRG ನಾಮ ಹಾಕಿದ್ದು ಎಷ್ಟು ಕೋಟಿ?

Woman dead living relationship age gap kodigehalli (11)

2024ರ ವರ್ಷಾಂತ್ಯಕ್ಕೆ ತೆರೆಕಂಡ ಬಾದ್‌ಷಾ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್ ಚಿತ್ರ ಮ್ಯಾಕ್ಸಿಮಮ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್‌‌‌ನಲ್ಲಿ ಕೂಡ ಸಖತ್ ಸೌಂಡ್ ಮಾಡಿತ್ತು. ಆದ್ರೆ ತಮಿಳು ಪ್ರೊಡ್ಯೂಸರ್ ಕಲೈಪುಲಿ ಎಸ್ ಥಾನು ಮಾತ್ರ ಆ ಸಕ್ಸಸ್‌‌‌ಗೆ ಖುಷಿ ಪಟ್ಟಿಲ್ಲ. ನನಗೆ ಕರ್ನಾಟಕ ಡಿಸ್ಟ್ರಿಬ್ಯೂಷನ್ ಲೆಕ್ಕ ಸಿಕ್ಕಿಲ್ಲ ಅಂತ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಷ್ಟಕ್ಕೂ ನಿರ್ಮಾಪಕರ ಸಮರ ಯಾರ ಮೇಲೆ..? ಎಷ್ಟು ಕೋಟಿ ದುಡ್ಡಿಗಾಗಿ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮ್ಯಾಕ್ಸ್.. 2024ರ ವರ್ಷಾಂತ್ಯದಲ್ಲಿ ಅಂದ್ರೆ ಡಿಸೆಂಬರ್ 25ಕ್ಕೆ ತೆರೆಕಂಡ ಸಿನಿಮಾ. ಬಾದ್‌ಷಾ ಕಿಚ್ಚ ಸುದೀಪ್ ಕರಿಯರ್‌‌ನ ಬಿಗ್ಗೆಸ್ಟ್ ಹಿಟ್ಸ್‌‌ನಲ್ಲಿ ಇದು ಕೂಡ ಒಂದು. ತಮಿಳು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಹಾಗೂ ತಮಿಳು ಪ್ರೊಡಕ್ಷನ್ ಹೌಸ್ ಜೊತೆಗೂಡಿ ಕಿಚ್ಚ ಸುದೀಪ್ ಕೂಡ ಸಹ ನಿರ್ಮಾಣ ಮಾಡಿದಂತಹ ಚಿತ್ರವಿದು. ಸಿನಿಮಾ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಕೂಡ ಜೋರಾಗಿಯೇ ಸದ್ದು ಮಾಡಿತ್ತು.

ಅಷ್ಟು ದೊಡ್ಡ ಹಿಟ್ ಆದಂತಹ ಸಿನಿಮಾದಿಂದ ಇಡೀ ಟೀಂಗೆ ಒಳ್ಳೆಯ ಹೆಸರು ಬಂದಿದ್ದು ಸುಳ್ಳಲ್ಲ. ಆದ್ರೆ ನಿರ್ಮಾಪಕ ಕಲೈಪುಲಿ ಎಸ್ ಥಾನುಗೆ ಮಾತ್ರ ಈ ವಿಚಾರದಲ್ಲಿ ಖುಷಿಯಿಲ್ಲ. ಬದಲಿಗೆ ಮ್ಯಾಕ್ಸ್ ಚಿತ್ರದ ಕರ್ನಾಟಕ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿದ್ದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಒಡೆತನದ ಕೆಆರ್‌ಜಿ ಸ್ಟುಡಿಯೋಸ್‌‌ಗೆ ಚೆನ್ನೈ ಹೈ ಕೋರ್ಟ್‌ನಿಂದ ನೋಟಿಸ್ ಮೇಲೆ ನೋಟಿಸ್ ಕಳಿಸಿದ್ದಾರೆ.

ಹೌದು.. ಮ್ಯಾಕ್ಸ್ ಚಿತ್ರವನ್ನ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದ ಕೆಆರ್‌ಜಿ ಸ್ಟುಡಿಯೋಸ್ ವಿರುದ್ಧ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾ ಸಾಕಷ್ಟು ಲಾಭ ಗಳಿಸಿದ್ರೂ ಸಹ, ಡಿಸ್ಟ್ರಿಬ್ಯೂಟರ್ ಸಮರ್ಪಕವಾದ ಲೆಕ್ಕ ನೀಡಿಲ್ಲ ಅಂತ ಆರೋಪಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದೊಂಥರಾ ಕಲೈಪುಲಿ ಅವರ ದುರಾಸೆಯೂ ಇದ್ದಿರಬಹುದು. ಈ ಸಂಬಂಧ ಚೆನ್ನೈ ಹೈ ಕೋರ್ಟ್‌‌ನಲ್ಲಿ ಪ್ರಕರಣ ದಾಖಲಾಗಿದ್ದು, ಕೆಆರ್‌ಜಿಗೆ ನೋಟಿಸ್ ನೀಡಿದೆ ಕೋರ್ಟ್.

ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಪಕ ಕಲೈಪುಲಿ ಎಸ್ ಥಾನುಗೆ ಲೆಕ್ಕಪತ್ರಗಳನ್ನ ಸರಿಯಾಗಿ ನೀಡದೇ ಇರೋದು ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್‌ ಹೆಸರಿಗೆ ಕಳಂಕ ತರುವಂತಿದೆ. ಸುಖಾಸುಮ್ಮನೆ ಸುದೀಪ್ ಹೆಸರು ಕೂಡ ಈ ಪ್ರಕರಣದಲ್ಲಿ ಥಳುಕು ಹಾಕಿಕೊಳ್ತಿರೋದು ವಿಪರ್ಯಾಸ. ಮೂಲಗಳ ಪ್ರಕಾರ 3 ಕೋಟಿ ರೂಪಾಯಿ ಹಣವನ್ನ ಕೆಆರ್‌ಜಿ ಸ್ಟುಡಿಯೋಸ್ ಕಲೈಪುಲಿಗೆ ನೀಡಬೇಕು ಎನ್ನಲಾಗ್ತಿದೆ.

ಆದ್ರೀಗ ಮ್ಯಾಟರ್ ಅದಲ್ಲ. ಚೆನ್ನೈ ಹೈ ಕೋರ್ಟ್‌‌ನ ವಿಭಾಗೀಯ ಪೀಠವು ಕಲೈಪುಲಿ ಎಸ್ ಥಾನು ನೀಡಿರೋ ಮೊಕದ್ದಮೆಯನ್ನ ಅಲ್ಲಿ ವಿಚಾರಣೆಗೆ ಒಳಪಡಿಸಿಲ್ಲ. ಕಾರಣ ನ್ಯಾಯವ್ಯಾಪ್ತಿಯು ಕೇಂದ್ರ ವಿಷಯವಾಗಿದೆ. LLP ಅಗ್ರಿಮೆಂಟ್ ನಲ್ಲಿ ಬೆಂಗಳೂರಿನ ಕರ್ನಾಟಕ ಸ್ಟಾಂಪ್ ಪೇಪರ್ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಪ್ರತಿವಾದಿಗಳ ಸಹಿ ಅಥ್ವಾ ಒಪ್ಪಿಗೆ ಇಲ್ಲದೆ ನಿರ್ಮಾಪಕರು ಕೇಸ್‌‌ನ ಚೆನ್ನೈನಲ್ಲೇ ಮುಂದುವರಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಹೀಗಾಗಿ ನ್ಯಾಯವ್ಯಾಪ್ತಿ ನಿಗದಿ ಮಾಡುವ ಅಧಿಕಾರ ಚೆನ್ನೈ ಹೈಕೋರ್ಟ್‌‌ಗೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಜೊತೆಗೆ ಮ್ಯಾಕ್ಸ್ ಪ್ರೊಡ್ಯೂಸರ್ ನಮ್ಮ ಬೆಂಗಳೂರು ಕೋರ್ಟ್‌‌ಗೆ ಬರಲೇಬೇಕಾದ ಅನಿವಾರ್ಯತೆ ಕೂಡ ಅವ್ರಿಗೆ ಎದುರಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version