ಗಾಯಕಿ ಮಂಜುಳಾ ಗುರುರಾಜ್ ಅವರ ಮಧುರ ಗಾನ ಸರಣಿ: ಸಂಗೀತ ಪ್ರೇಮಿಗಳಿಗೆ ಸುವರ್ಣಾವಕಾಶ

Untitled design 2025 06 18t232202.396

ಖ್ಯಾತ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆ ಮತ್ತು ಶುಕ್ರ ಸಭಾಂಗಣ ವತಿಯಿಂದ ಮಧುರ ಗಾನ ಒಂದರಿಂದ 12 ಸರಣಿಗಳಂತೆ ಪ್ರತಿ ತಿಂಗಳು ಗಾಯನ ವೇದಿಕೆ ನಡೆಸುತ್ತಿದೆ. ಖುದ್ದಾಗಿ ಮಂಜುಳಾ ಗುರುರಾಜ ಅವರು ತರಬೇತಿ ನೀಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಡೆಸಿಕೊಡುತ್ತಾರೆ.

ಇತ್ತೀಚೆಗೆ ಮಧುರ ಗಾನ ಎರಡು ಕಾರ್ಯಕ್ರಮದಲ್ಲಿ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಅರ್ಪಿಸಿದ, ಕಾರ್ಯಕ್ರಮದಲ್ಲಿ ಮಂಜುಳಾ ಗುರುರಾಜರ ವಿಶೇಷ ಹೆಸರಲ್ಲಿ ಅವರು ಸಂಯೋಜಿಸಿರುವ, ಭಾವ ಭಕ್ತಿ ಗೀತೆಗಳು ಹಾಗೂ ಅವರು ಹಾಡಿರುವ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ADVERTISEMENT
ADVERTISEMENT

ಶಾಲೆಯ ವಿದ್ಯಾರ್ಥಿಗಳಲ್ಲದೆ ಇತರ ಗಾಯಕರುಗಳಿಗೂ ಅವಕಾಶ ಕಲ್ಪಿಸಿ ತರಬೇತಿ ನೀಡಿ ಅರ್ಹತಾ ಪತ್ರ ವಿತರಿಸಲಾಯಿತು. ಸುಮಾರು 43 ಗಾಯಕರು ಈ ವೇದಿಕೆಯಲ್ಲಿ ಸಂಭ್ರಮದಿಂದ ಹಾಡಿದರು ಇದೇ ರೀತಿ ಮಧುರ ಗಾನ ಸರಣಿ 3 ಮುಂದಿನ ತಿಂಗಳು ಜುಲೈ 13ರಂದು ನಡೆಯಲಿದೆ ಆಸಕ್ತರು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಶೇಖರ್ 9.4 80 42 56 03 ಈ ದೂರವಾಣಿಗೆ ಸಂಪರ್ಕಿಸಬಹುದು. 12 ಸರಣಿಗಳ ನಂತರ ವಿಶೇಷ ಕಾರ್ಯಕ್ರಮದಲ್ಲಿ ಸಾಧಕ ಪ್ರಶಸ್ತಿಯನ್ನು ನೀಡಲು ಮಂಜುಳಾ ಗುರುರಾಜ ಅವರು ಯೋಜಿಸಿದ್ದಾರೆ.

Exit mobile version