ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದುಕೊಂಡಿತ್ತು. ಈ ಐತಿಹಾಸಿಕ ಗೆಲುವು ತಂಡದ ಅಭಿಮಾನಿಗಳಲ್ಲಿ ಭರ್ಜರಿ ಸಂಭ್ರಮ ಮೂಡಿಸಿತ್ತು. ಆದರೆ, ಈ ಸಂತಸದ ಕ್ಷಣಗಳು ದೀರ್ಘಕಾಲ ಉಳಿಯಲಿಲ್ಲ. ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ 11 ಜನರು ಸಾವನ್ನಪ್ಪಿದರು. ಈ ಘಟನೆಯು ಆರ್ಸಿಬಿ ತಂಡ ಮತ್ತು ಅಭಿಮಾನಿಗಳ ಮೇಲೆ ಭಾರೀ ಆಘಾತವನ್ನು ಉಂಟುಮಾಡಿತ್ತು. ಈ ದುರಂತದ ಬೆನ್ನಲ್ಲೇ, ಗಾಯಕ ಸೋನು ನಿಗಮ್ರ ಒಂದು ವಿವಾದಾತ್ಮಕ ಪೋಸ್ಟ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸೋನು ನಿಗಮ್ ವಿವಾದಾತ್ಮಕ ಟ್ವೀಟ್
ಇತ್ತೀಚೆಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಸೋನು ನಿಗಮ್, “ಆರ್ಸಿಬಿ ಐಪಿಎಲ್ ಗೆದ್ದಾಗಿನಿಂದ, ಜಗತ್ತಿನಲ್ಲಿ ಏನೂ ಒಳ್ಳೆಯದಾಗುತ್ತಿಲ್ಲ” ಎಂದು ಬರೆದಿದ್ದಾರೆ. ಸೋನು ನಿಗಮ್ ತಮ್ಮ ಟ್ವೀಟ್ನಲ್ಲಿ, ಇತ್ತೀಚಿನ ದುರಂತಗಳಾದ ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ವಿಮಾನ ಅಪಘಾತದಲ್ಲಿ 242 ಜನರು ಸಾವಿನ ಸಂಭವವನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಜೂನ್ 15ರಂದು ಕೇದಾರಘಾಟಿಯ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ 7 ಜನರು ಮೃತಪಟ್ಟ ಘಟನೆಯನ್ನೂ ತಿಳಿಸಿದ್ದಾರೆ. ಈ ಎಲ್ಲಾ ದುರಂತಗಳಿಗೆ ಆರ್ಸಿಬಿ ಗೆಲುವೇ ಕಾರಣ ಎಂದು ಸೋನು ನಿಗಮ್ ಆರೋಪಿಸಿದ್ದಾರೆ.
Jabse RCB IPL jeeti hai tabse duniya mein kuch bhi achcha nahi ho raha hai!
— Sonu Nigam (@SonuNigamSingh) June 16, 2025
ಸೋನು ನಿಗಮ್ ಎರಡನೇ ಪೋಸ್ಟ್
ಸೋನು ನಿಗಮ್ರ ಈ ಟ್ವೀಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಿಗರು ಮತ್ತು ಆರ್ಸಿಬಿ ಅಭಿಮಾನಿಗಳು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ವಿವಾದ ತಾರಕಕ್ಕೇರುತ್ತಿದ್ದಂತೆ ಸೋನು ನಿಗಮ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ. “ನನ್ನ ಖಾತೆಯನ್ನು ಅಣಕಿಸುವವರ ಬಗ್ಗೆ ನನಗೆ ಆಳವಾದ ನಂಬಿಕೆ ಇದೆ. ವಿಶೇಷವಾಗಿ ಆರ್ಸಿಬಿ ಅಭಿಮಾನಿಗಳಿಗೆ. ಬೇಗ ಗುಣಮುಖರಾಗಿ,” ಎಂದು ಬರೆದಿದ್ದಾರೆ.
Mere account ko parody bolne walon ke prati mere mann mein sahanabhooti hai.
Specially RCB fans ke liye.
Get well soon guys!— Sonu Nigam (@SonuNigamSingh) June 18, 2025
ಸೋನು ನಿಗಮ್ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ #RCBControversy ಮತ್ತು #SonuNigam ಟ್ರೆಂಡ್ಗಳು ವೈರಲ್ ಆಗಿವೆ. ಕೆಲವರು ಸೋನು ನಿಗಮ್ರ ಹೇಳಿಕೆಯನ್ನು ಕೇವಲ ಒಂದು ಅಭಿಪ್ರಾಯವೆಂದು ಬಿಂಬಿಸಿದರೆ, ಇನ್ನೂ ಕೆಲವರು ಇದನ್ನು ಕನ್ನಡಿಗರ ಮೇಲಿನ ಅವಹೇಳನ ಎಂದು ತಿಳಿದಿದ್ದಾರೆ.