ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ”ಕೊರಗಜ್ಜ” ಚಿತ್ರದ ಜೀ಼ ಮ್ಯೂಸಿಕ್ ಬಿಡುಗಡೆ ಗೊಳಿಸಿದ್ದ
ಗುಳಿಗಾ…ಗುಳಿಗಾ…ಹಾಡು ದೇಶಾದ್ಯಂತ ಎಬ್ಬಿಸಿದ ಧೂಳು ಇನ್ನೂ ಹಾರಾಡುತ್ತಿರುವಂತೆಯೇ, ಈಗ ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿರುವ ಅತ್ಯಂತ ಸುಮಧುರ ಮತ್ತು “ರಿಚ್ ಪೊಯೆಟಿಕ್” ಸಾಲುಗಳುಳ್ಳ , ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಈ ನಡುವೆ ವಿಶೇಷ ವಿದ್ಯಮಾನವೆಂಬಂತೆ,ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಸುಧೀರ್ ಅತ್ತಾವರ್ ಬರೆದ ಈ
ಹಾಡಿನ ಕಾವ್ಯಮಯ ಸಾಹಿತ್ಯವನ್ನು ಚಿತ್ರತಂಡವು ಮೊದಲು ಬಿಡುಗಡೆಗೊಳಿಸಿದೆ.
ಇಲ್ಲಿದೆ ಈ ಅಪರೂಪದ ಸಾಹಿತ್ಯ…
(ಶ್ರೇಯ ಘೋಷಲ್)
ಗಾಳಿ ಗಂಧ…..ತೀಡಿ ತಂದಾ…..
ಶಬ್ದವಿರದ ಮಾತೂ…. !
(ಅರ್ಮಾನ್ ಮಲಿಕ್):
ಕೇಳಿದಂತಾ….
ಜೋಡಿಯಿಂದಾ…..
ಮುಗ್ಧ ವಿರಹ ಹಾಡೂ….!!
ಗಾಳಿ ಗಂಧ…..ತೀಡಿ ತಂದಾ…..
ಶಬ್ದವಿರದ ಮಾತೂ…. !
( ಶ್ರೇಯ ಘೋಷಲ್ )
ಮೂಗುದಾಣ ಹಾಕಲೇನು ಪ್ರೀತಿ…..
ಸಾಕು ಗಿಣಿಯೇ..?
ಮೂರು ದಾರ ಕಟ್ಟಿ ನಾನು ಬಂಧಿ….
ಸಾಕು ಪ್ರಿಯನೇ…..!
(ಅರ್ಮಾನ್ ಮಲಿಕ್)
ಕಾಡಿಬಂದ ನಿನ್ನ ನೆನಪು….
ಕಾಡಿನಲ್ಲೆ ಸೆಳೆಯಿತೂ…..!
( ಶ್ರೇಯ ಘೋಷಲ್)
ಹೇಳದಂತ ನನ್ನ ಮಾತು….
ಮಾಧುರ್ಯ ತುಂಬಿದಿಂಚರಾ…..!!
ದಾಟಿ ಬಂದ ಮೌನ ಕಲಹ….
ಧಾಟಿ ಯಾಯ್ತು ಕಾವ್ಯಕೇ…..!
(ಅರ್ಮಾನ್ ಮಲಿಕ್)
ತಾಳದಂತ ನನ್ನ ಪುಳಕ….
ಮಾರ್ಧನಿಸಿ ನಿಶಾಚರಾ….!!
( ಶ್ರೇಯ ಘೋಷಲ್ )
IIಮೂಗು ದಾಣII
(ಅರ್ಮಾನ್ ಮಲಿಕ್)
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ…!?
( ಶ್ರೇಯ ಘೋಷಲ್)
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ…!?
(ಕೋರಸ್)
ತಾರೆ ತಂತೀಗ ತಂತೀ…
ತಾಳ ಮೇಳಾ…ತಂಪೂ ನಾದಾ…
ಬಾರೆ ಬಂತೀಗ ಬಂತೀ…
ಢಾಳ ಡೋಲೀ…
ಡೌಲು ಡೋಲೂ….
ಸೇರೆ ಸೇವಂತಿ ಸೋನೇ…ಮಳೆಯಲ್ಲೀ…
( ಶ್ರೇಯ ಘೋಷಲ್ )
IIಮೂಗು ದಾಣII
(ಅರ್ಮಾನ್ ಮಲಿಕ್)
ಲಜ್ಜೆ ಸದ್ದು ಕಾನನಕ್ಕೂ….
ಮತ್ತು ತಂತು ತುಸುನಕ್ಕೂ……!
ಕತ್ತಲನ್ನು ಹೊದ್ದು ಮಲಗಿ….
ಕಾಡು ಕೂಡ ಕನಲಿತೂ…..!!
( ಶ್ರೇಯ ಘೋಷಲ್ )
ಹೆಜ್ಜೆ ಕದ್ದ ಕಾಜಣವೂ…
ಗೆಜ್ಜೆ ಕಟ್ಟಿತು ಹಾಡುತಾ…!
ಮುಗ್ಧ ಪ್ರೀತಿ ಕಂಡು ಹೇಳಿತು..
ಕೆಂಪಾಗದಿರು ಕಾದಂಬಿನಿಯೇ….!!
(ಶ್ರೇಯ ಘೋಷಲ್)
IIಮೂಗು ದಾಣII
(ಅರ್ಮಾನ್ ಮಲಿಕ್)
ಜೌಗು ಮನದ ಜಾರೋ ಕನಸು….
ಮೈಯ ಬಿಸಿಗೆ…..ಒದ್ದೇ…..!
( ಶ್ರೇಯ ಘೋಷಲ್)
ಜೌಗು ಮನದ ಜಾರೋ ಕನಸು….
ಮೈಯ ಬಿಸಿಗೆ…..ಒದ್ದೇ…..!
(ಕೋರಸ್)
IIತಾರೆ ತಂತೀಗ ತಂತೀ…II
ಈ ಅತ್ಯಾಕರ್ಷಕ ನವ್ಯ ಸಾಹಿತ್ಯದ ಸಾಲುಗಳಿಗೆ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ರಾಗ ಕಂಪೋಸ್ ಮಾಡಿದ್ದಾರೆ.
‘ಕೊರಗಜ್ಜ’ ಸಿನಿಮಾಗೆ ಪ್ಯಾನ್ ಇಂಡಿಯಾ ಟಚ್..!
ಕಾಂತಾರ ಚಾಪ್ಟರ್ 1 ಚಿತ್ರದ ಕೊನೆಯ ದೃಶ್ಯದಲ್ಲಿ ಕೊರಗಜ್ಜ ಬರ್ತಾರೆ. ಈಗ ತುಳುನಾಡಿನ ದೈವದ ಮಹಿಮೆಯನ್ನು ಹೇಳುವುದಕ್ಕೆ ಹೊಸ ಟೀಂ ಬರ್ತಿದೆ. ಅದುವೇ ‘ಕೊರಗಜ್ಜ’. ಸಿನಿಮೋತ್ಸಾಹಿ ತಂಡ ಕೊರಗಜ್ಜ ಸಿನಿಮಾಗೆ ಕೈ ಹಾಕಿದ್ದು ಯಾಕೆ..? ಜೈ ಜಗದೀಶ್ ಈ ಸಿನಿಮಾ ಕೈ ಬಿಟ್ಟಿದ್ದು ಯಾಕೆ..? ಕೋಲ ಸೇವೆಯಲ್ಲಿ ಭಾಗಿಯಾದ ನಟಿ ಶ್ರುತಿ, ಭವ್ಯ ಏನು ಹೇಳಿದ್ರು ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಕಾಂತಾರ ಸೂಪರ್ ಹಿಟ್ ನಂತರ ದೈವದ ಮೇಲಿನ ನಂಬಿಕೆ ಆಚಾರ ವಿಚಾರ ಜಗತ್ಜಾಹೀರು ಆಗಿದೆ. ಅದ್ರಲ್ಲೂ ಕೊರಗಜ್ಜ ಅಂದ್ರೆ ವಿದೇಶಿಗರನ್ನು ಕಣ್ಣು ಅರಳಿಸುತ್ತದೆ ಅಷ್ಟರ ಮಟ್ಟಿಗೆ ಪವರ್ ಫುಲ್ ದೇವರು ಎಂಬುದು ಸಾಬೀತು ಆಗಿದೆ. ಸದ್ಯ ಕೊರಗಜ್ಜ ಟೈಟಲ್ ನಲ್ಲೆ ಸಿನಿಮಾವೊಂದು ಬರ್ತಿದ್ದು ಬಿಡುಗಡೆಗೆ ತಯಾರಿ ನಡೆಸಿದೆ. ಎಸ್, 2010 ರಲ್ಲಿಯೇ ಕನ್ನಡದ ನಟ ಜೈಜಗದೀಶ್ ಕೊರಗ್ಗಜ್ಜ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದರು. ಈ ಕಥೆ ಮೇಲೆ ಒಂದು ವರ್ಷದ ಕೆಲಸ ಕೂಡ ಮಾಡಿದ್ದರು. ಆದರೆ, ಅದ್ಯಾಕೋ ಕೆಲಸವೇ ಮುಂದೆ ಹೋಗ್ತಾ ಇರಲಿಲ್ಲ.
ಹೀಗಾಗಿ ಜೈಜಗದೀಶ್ ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋದರು. ದೇವರಲ್ಲಿ ಪ್ರಶ್ನೆ ಇಟ್ಟು ಕೇಳಿದಾಗ ಕೊರಗಜ್ಜನ ಸಿನಿಮಾ ನಿಮಗೆ ಆಗಿ ಬರೋದಿಲ್ಲ. ಇದನ್ನ ಮಾಡೋಕೆ ಹೋಗ್ಬೇಡಿ. ಹಾಗಂತ ದೈವದಿಂದ ಉತ್ತರ ಬಂತು. ಅಷ್ಟೆ ನೋಡಿ. ಇದಾದ್ಮೇಲೆ ಈ ಚಿತ್ರದ ಕೆಲಸವನ್ನ ಇವರು ಮುಂದುವರಿಸಲೇ ಇಲ್ಲ. ತಪ್ಪು ಕಾಣಿಕೆ ಇಟ್ಟು ಈ ಟೈಟಲ್ ನ ಈಗ ಸುಧೀರ್ ಅವ್ರಿಗೆ ಕೊಟ್ಟುಬಿಟ್ರು.
ಈಗ ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತೀಚೆಗೆ ಬಿಡುಗಡೆ ಆಗಿತ್ತು. ಸದ್ಯ ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ಹಮ್ಮಿಕೊಂಡ ಚಿತ್ರತಂಡ ಚಿತ್ರದ ಎರಡು ಹಾಡುಗಳನ್ನ ಬಿಡುಗಡೆಗೊಳಿಸಿದ್ದರು. ಮೂರು ವರ್ಷಗಳ ಹಿಂದೆ ಕೊರಗಜ್ಜ ಸಿನಿಮಾ ಆರಂಭವಾಗಿದ್ದು, ಚಿತ್ರದಲ್ಲಿ ಆರು ಭಾಷೆಗಳಿಂದ ಒಟ್ಟು 31 ಹಾಡುಗಳಿವೆ. ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ಧ ಗಾಯಕ – ಗಾಯಕಿಯರು ಹಾಡಿದ್ದಾರೆ. ಸಿನಿಮಾದ ಸಂಗೀತ ಹಕ್ಕನ್ನು ಝೀ ಮ್ಯೂಸಿಕ್ ಖರೀದಿಸಿದೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕ ಸುಧೀರ್ ಹೇಳಿದ್ದಾರೆ.
ಕೊರಗಜ್ಜ ಸಿನಿಮಾದಲ್ಲಿ ನಟಿ ಭವ್ಯ ಹಾಗು ಶೃತಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಸಿನಿಮಾ ಮೂಡಿಬಂದರೆ ಕೋಲ ಸೇವೆ ನೆರವೇರಿಸೋದಾಗಿ ಚಿತ್ರತಂಡ ಹರಕೆ ಹೋತಿದ್ರು. ಹೀಗಾಗಿ ಚಿತ್ರತಂಡದಿಂದ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು. ಈ ವೇಳೆ ನಟಿ ಶೃತಿ ಅವರ ತಂದೆ ತಾಯಿ ಜೊತೆ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನ ಆಶೀರ್ವಾದ ಪಡೆದರು. ಹಾಗೆ ನಟಿ ಭವ್ಯ.. ಜೈಜಗದೀಶ್.. ವಿಜಯಲಕ್ಷ್ಮಿ ಸೇರಿದಂತೆ ಕೊರಗಜ್ಜ ಚಿತ್ರತಂಡವೇ ಕೋಲಸೇವೆಯಲ್ಲಿ ಭಾಗಿಯಾಗಿ ತಮ್ಮ ಅನುಭವನ್ನು ಹಂಚಿಕೊಂಡರು.
ಅಂದಹಾಗೆ ಈ ಚಿತ್ರಕ್ಕೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಿದ್ದಾರೆ. ಆದಷ್ಟು ಬೇಗ ಕೊರಗಜ್ಜ ಬಿಗ್ ಸ್ಕ್ರೀನ್ ಮೇಲೆ ದರ್ಶನ ಕೊಡಲಿದೆ.
