ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳ ಬಿಗ್ ನ್ಯೂಸ್ ಕೊಡ್ತಾರೆ ಅನ್ನೋದನ್ನ ನಾವೇ ನಮ್ಮ ಇದೇ ಗ್ಯಾರಂಟಿ ಪಿಚ್ಚರ್ನಲ್ಲಿ ಎಕ್ಸ್ಕ್ಲೂಸಿವ್ ಆಗಿ ಹೇಳಿದ್ವಿ. ಅದೀಗ ನಿಜವಾಗಿದೆ. ತಮ್ಮ X ಖಾತೆ ಮೂಲಕ ಬಿಲ್ಲ ರಂಗ ಬಾಷ ಸಿನಿಮಾದ ಜೊತೆ ಇನ್ನೂ ನಾಲ್ಕು ಪ್ರಾಜೆಕ್ಟ್ಗಳನ್ನ ಫೈನಲ್ ಮಾಡಿರೋದಾಗಿ ಅನೌನ್ಸ್ ಮಾಡಿದ್ದಾರೆ ಆರಡಿ ಕಟೌಟ್. ಇದರ ಇನ್ಸೈಡ್ ಸ್ಟೋರಿ ಇಲ್ಲಿದೆ ನೋಡಿ..
- ಪಂಚ ಸಿನಿಮಾಗಳಿಂದ ಕಿಚ್ಚ ಕೊಟ್ರು ಪಂಚ್.. BRB ಸ್ಟಾರ್ಟ್
- ಈ ವರ್ಷ ಬಿಲ್ಲ ರಂಗ ಬಾಷ ಫಿಕ್ಸ್.. 4 ಪ್ರಾಜೆಕ್ಟ್ಗಳು ಫೈನಲ್
- ನಿಮ್ಮನ್ನ ರಂಜಿಸುವುದಕ್ಕಿಂತ ದೊಡ್ಡ ಕೆಲಸ ನನಗೇನೂ ಇಲ್ಲ
- ಎಚ್ಚರಗೊಂಡಿದ್ದೇನೆ.. ನಿಮ್ಮ ಪ್ರೀತಿ ಹಗುರವಾಗಿ ಪರಿಗಣಿಸಿಲ್ಲ
ಮಾರ್ಕ್ ಚಿತ್ರದ ಬಳಿಕ ಕಿಚ್ಚ ಸುದೀಪ್ ಕಂಪ್ಲೀಟ್ ರೆಸ್ಟ್ ಮೋಡ್ನಲ್ಲಿದ್ರು. ಬೇರಾವ ಸಿನಿಮಾಗಳ ನ್ಯೂಸ್ ರಿವೀಲ್ ಮಾಡಿರಲಿಲ್ಲ. ಅಥ್ವಾ ಯಾವುದೇ ಸಿನಿಮಾದಲ್ಲಿ ನಟಿಸಲೂ ಇಲ್ಲ. ಹಾಗಾಗಿಯೇ ಅವರ ಡೈ ಹಾರ್ಡ್ ಫ್ಯಾನ್ಸ್ ಎದ್ದೇಳೋ ಸಮಯ ಆಯ್ತು ಅಣ್ಣಾ ಅಂತ ಎಕ್ಸ್ ಖಾತೆಯಲ್ಲಿ ಟ್ರೆಂಡ್ ಮಾಡಿದ್ರು. ಅದಕ್ಕೀಗ ತಕ್ಕ ಉತ್ತರ ಕೊಟ್ಟಿರೋ ಬಾದ್ಷಾ ಸುದೀಪ್, ಒಂದಲ್ಲ ಎರಡಲ್ಲ ಐದೈದು ಚಿತ್ರಗಳ ಮೆಗಾ ನ್ಯೂಸ್ನೊಂದಿಗೆ ಬಂದಿದ್ದಾರೆ.
ಯೆಸ್.. ತಮ್ಮ ಎಕ್ಸ್ ಖಾತೆಯಲ್ಲಿ ಮುಂದಿನ ಸಿನಿಮಾಗಳ ಅಪ್ಡೇಟ್ ನೀಡಿರೋ ಸುದೀಪ್, ಬಿಲ್ಲ ರಂಗ ಬಾಷ ಚಿತ್ರ ಇದೇ ವರ್ಷ ಬರೋದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈಗಾಗ್ಲೇ 4 ಸಿನಿಮಾಗಳ ಕಥೆಗಳನ್ನ ಲಾಕ್ ಮಾಡಿದ್ದು, ಅವುಗಳ ನ್ಯೂಸ್ ಸದ್ಯದಲ್ಲೇ ಹಂಚಿಕೊಳ್ಳೋದಾಗಿ ಬರೆದುಕೊಂಡಿದ್ದಾರೆ. ಕಿಚ್ಚನ ಈ ಪೋಸ್ಟ್ ನೋಡಿ ಇಡೀ ಸುದೀಪಿಯನ್ಸ್ ದಿಲ್ಖುಷ್ ಆಗಿದ್ದಾರೆ.
ಅಂದಹಾಗೆ ಇದೇ ನಮ್ಮ ಗ್ಯಾರಂಟಿ ಪಿಚ್ಚರ್ನಲ್ಲಿ ನಾವು ಐದು ಸಿನಿಮಾಗಳೊಂದಿಗೆ ಸ್ವೀಟ್ ನ್ಯೂಸ್ ಕೊಡಲಿರೋ ಸುದೀಪ್ ಬಗ್ಗೆ ಅಡ್ವಾನ್ಸ್ ಆಗಿ ಹೇಳಿದ್ವಿ. ಇದೀಗ ಆ ಮಾತನ್ನು ನಿಜ ಮಾಡ್ತಿದ್ದಾರೆ ಕಿಚ್ಚ. ತಮ್ಮ ಪೋಸ್ಟ್ನಲ್ಲಿ ಹೀಗಂತ ಬರೆದುಕೊಂಡಿದ್ದಾರೆ. ನೀವೆಲ್ಲರೂ ತಿಳಿದುಕೊಳ್ಳಬೇಕಾದ ಒಂದು ವಿಷಯ ಇಲ್ಲಿದೆ. ನಾನೇನೂ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿರಲಿಲ್ಲ. ಹಾಗಂತ ನಾನು ನಿಮ್ಮ ಪ್ರೀತಿ ಅಥ್ವಾ ಆಶೀರ್ವಾದದ ವೃತ್ತಿಜೀವನವನ್ನ ಹಗುರವಾಗಿಯೂ ಪರಿಗಣಿಸಿರಲಿಲ್ಲ. ಸಿನಿಮಾ ಮಾಡೋದು, ಕಥೆ ಹೇಳೋದು ಹಾಗೂ ನಿಮ್ಮನ್ನ ರಂಜಿಸೋದಕ್ಕಿಂತ ನನಗೆ ಹೆಚ್ಚೇನೂ ಇಲ್ಲ. ನಾನು ಎಚ್ಚರಗೊಂಡಿದ್ದೇನೆ. ಈ ವೇಕಪ್ ನನ್ನ ಕೆಲಸದ ಬಗ್ಗೆ ನಿಮ್ಮ ಪ್ರೀತಿಯನ್ನ ವ್ಯಕ್ತಪಡಿಸೋ ಒಂದು ಉತ್ತಮ ಮಾರ್ಗವಾಗಿದೆ. ಧನ್ಯವಾದಗಳು ಎಂದಿದ್ದಾರೆ.
ಅಷ್ಟೇ ಅಲ್ಲ.. ನನ್ನ ಸ್ನೇಹಿತರೇ.. ನನ್ನ ಉಪಸ್ಥಿತಿ ಹಾಗೂ ಬೆಂಬಲದ ಅಗತ್ಯವಿರುವ ಜನ ಮತ್ತು ಸನ್ನಿವೇಶಗಳಿದ್ದವು. ಹಾಗಾಗಿ ನಾನು ಆ ಸಣ್ಣ ವಿರಾಮದಲ್ಲೂ ಕೆಲಸದಲ್ಲಿದೆ ಅನ್ನೋದನ್ನ ಮ್ಯಾಂಗೋ ಪಚ್ಚ ಚಿತ್ರಕ್ಕಾಗಿ ಸಮಯ ಮೀಸಲಿಟ್ಟ ವಿಷಯ ಹಂಚಿಕೊಂಡಿದ್ದಾರೆ ಅಭಿನಯ ಚಕ್ರವರ್ತಿ. ಅದು ನಿಜವೂ ಹೌದು. ಯಾಕಂದ್ರೆ ತಮ್ಮ ಮನೆ ಮಗನಾದ ಸಂಚಿತ್ ಸಂಜೀವ್ನ ಹೀರೋ ಮಾಡೋಕೆ ಕಿಚ್ಚ ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ದಾರೆ. ಸಿನಿಮಾ ಸ್ಕ್ರಿಪ್ಟ್, ಪಾತ್ರಗಳು, ಮೇಕಿಂಗ್ನಿಂದ ಹಿಡಿದು, ಪ್ರಮೋಷನ್ಸ್ ತನಕ ತಲೆ ಕೆಡಿಸಿಕೊಂಡಿದ್ದು ಗೊತ್ತೇಯಿದೆ.
ಇನ್ನೂ ಅನೂಪ್ ಭಂಡಾರಿ ಜೊತೆಗಿನ ಬಿಲ್ಲ ರಂಗ ಬಾಷ ಸಿನಿಮಾ ಈಗಾಗ್ಲೇ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದು, ಸದ್ಯದಲ್ಲೇ ಶೂಟಿಂಗ್ ಕಿಕ್ಸ್ಟಾರ್ಟ್ ಆಗುವ ಮುನ್ಸೂಚನೆ ನೀಡಿದ್ದಾರೆ. ಇದೇ 2026ಕ್ಕೆ ಬಿಆರ್ಬಿ ಬರೋದಾಗಿ ಖುದ್ದು ಸುದೀಪ್ ಅವರೇ ಹೇಳಿದ್ದಾರೆ. ಅಲ್ಲದೆ, ನಾಲ್ಕು ಚಿತ್ರಗಳ ಸ್ಕ್ರಿಪ್ಟ್ಗಳನ್ನ ಲಾಕ್ ಮಾಡಿದ್ದು, ಅವುಗಳನ್ನ ಶುರು ಮಾಡಲು ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರಂತೆ. ಅದಕ್ಕಾಗಿ ನಾನು ಎಚ್ಚರಗೊಂಡಿದ್ದೇನೆ ಅಂತ ಅವರೇ ಎಚ್ಚೆತ್ತುಕೊಂಡಿರೋದನ್ನ ಮುಕ್ತವಾಗಿ ಹೇಳಿಕೊಂಡಿರೋದು ಉತ್ತಮ ಬೆಳವಣಿಗೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
