ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ

Untitled design (26)

ಮಗಧೀರ ಶೈಲಿಯ ಸಿನಿಮಾವೊಂದು ಸ್ಯಾಂಡಲ್‌ವುಡ್‌‌ನಲ್ಲೂ ತೆರೆಗೆ ಬರೋಕೆ ಸಜ್ಜಾಗಿದೆ. ಆದ್ರೆ ಅದು ಕಾಲ್ಪನಿಕ ಅಲ್ಲ.. ಬದಲಿಗೆ ನಮ್ಮ ಚಾಲುಕ್ಯ ಸಾಮ್ರಾಜ್ಯ, ಇಮ್ಮಡಿ ಪುಲಿಕೇಶಿ ಹಾಗೂ ಪ್ರಸ್ತುತ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ. ಸಿಪಿ ಯೋಗೇಶ್ವರ್ ಮಗ ಧ್ಯಾನ್ ಇಂಟ್ರಡ್ಯೂಸ್ ಆಗ್ತಿರೋ ಕರ್ಣಾಟ ಬಲಂ ಅಜೇಯಂ ಚಿತ್ರದ ಶೂಟಿಂಗ್ ಎಲ್ಲಿ ತನಕ ಬಂದಿದೆ..? ಬಾದಾಮಿಯ ಶೂಟಿಂಗ್ ಸೆಟ್‌‌ನಲ್ಲಿ ಚಿತ್ರತಂಡ ಹೇಳಿದ್ದೇನು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ ನೋಡಿ.

ಇದು ಕರ್ಣಾಟ ಬಲಂ ಅಜೇಯಂ ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣದ ಝಲಕ್. ಯೆಸ್.. ಇತ್ತೀಚೆಗೆ ಬೆಂಗಳೂರಿನ ಪಂಚತಾರಾ ಹೋಟೆಲ್‌‌ನಲ್ಲಿ ಸೆಟ್ಟೇರಿದ ಈ ಸಿನಿಮಾ ಮೂಲಕ ಸೈನಿಕ ಖ್ಯಾತಿಯ ನಟ, ಮಾಜಿ ಸಚಿವ, ಹಾಲಿ ಶಾಸಕ ಸಿಪಿ ಯೋಗೇಶ್ವರ್ ಬಣ್ಣದ ಲೋಕಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ಚಿತ್ರದಿಂದ ಅವ್ರ ಮಗ ಧ್ಯಾನ್ ಯೋಗೇಶ್ವರ್ ಹೀರೋ ಆಗಿ ಇಂಟ್ರಡ್ಯೂಸ್ ಆಗ್ತಿದ್ದಾರೆ. ಕಿಚ್ಚ-ದಚ್ಚುಗಿಂತ ಜಾಸ್ತಿ ಹೈಟ್ ಇರೋ ಧ್ಯಾನ್ 6.3 ಫೀಟ್ ಹೀರೋ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಖ್ಯಾತಿಯ ನಿರ್ದೇಶಕ ನಾಗಣ್ಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಇದು ಚಾಲುಕ್ಯರ ಸಾಮ್ರಾಜ್ಯ, ಅಂದಿನ ಸಾಮ್ರಾಟ ಇಮ್ಮಡಿ ಪುಲಿಕೇಶಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಐತಿಹಾಸಿಕ ತಾಣಗಳು, ಉತ್ತರ ಕರ್ನಾಟಕದ ಜನರ ಸಮಸ್ಯೆಗಳು.. ಹೀಗೆ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಎಂ ಎಸ್ ರಮೇಶ್ ಜೊತೆ ವಿಶ್ವ ಹಾಗೂ ದೇಸಾಯಿ ಚಿತ್ರಕಥೆ, ಸಂಭಾಷಣೆ ಬರೆದಿರೋ ಈ ಚಿತ್ರದ ಶೂಟಿಂಗ್ ಉತ್ತರ ಕರ್ನಾಟಕದಲ್ಲಿ ಭರದಿಂದ ಸಾಗ್ತಿದೆ.

ಸುಮಾರು ಸಾವಿರಾರು ಡ್ಯಾನ್ಸರ್ಸ್, ವಿವಿಧ ಕಲಾ ಪ್ರಕಾರಗಳ ಆರ್ಟಿಸ್ಟ್‌‌ಗಳ ಜೊತೆ ನಾಯಕನಟ ಧ್ಯಾನ್ ಈ ಚಿತ್ರದ ಟೈಟಲ್ ಸಾಂಗ್‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಬಾದಾಮಿಯ ಐತಿಹಾಸಿಕ ಗುಹೆಗಳಲ್ಲಿ ಅದನ್ನ ಸೆರೆಹಿಡಿಯಲಾಗ್ತಿದ್ದು, ಸುಮಾರು ಐದು ದಿನಗಳಿಂದ ನಿರಂತರವಾಗಿ ಈ ಹಾಡನ್ನ ಶೂಟ್ ಮಾಡಲಾಗ್ತಿದೆಯಂತೆ. ನಾಯಕನಟಿಯಾಗಿ ಡೆಲ್ಲಿಯಲ್ಲಿ ಸೆಟಲ್ ಆಗಿರೋ ರಾಜಸ್ಥಾನ ಪೋರಿ ಮಣಿಕಾ ವಿಶ್ವಕರ್ಮ ಬಣ್ಣ ಹಚ್ಚಿದ್ದು, ಹೀರೋ ತಾಯಿ ಪಾತ್ರದಲ್ಲಿ ತೆಲುಗು ನಟಿ ಲಯ ಕಾಣಿಸಿಕೊಳ್ತಿದ್ದಾರೆ. ಬಲ ರಾಜ್ವಾಡಿ, ಸಂಪತ್, ಮಾನಸಿ ಸುಧೀರ್, ಪವನ್ ಸೇರಿದಂತೆ ಸಾಕಷ್ಟು ಮಂದಿ ನುರಿತ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಜೂನಿಯರ್ ಧ್ಯಾನ್ ಆಗಿ ಮೈಸೂರಿನ ವಿಹಾನ್ ಸೂರ್ಯ ನಟಿಸ್ತಿದ್ದು, ಬಾಲನಟನ ಡೈಲಾಗ್ ಡೆಲಿವರಿ ಗತ್ತಿಗೆ ಎಲ್ರೂ ಫಿದಾ ಆಗುವಂತಿದೆ.

ಅಂದಹಾಗೆ ಕರ್ಣಾಟ ಬಲಂ ಚಿತ್ರದ ಬಗ್ಗೆ ಹಾಗೂ ತನ್ನ ಮಗ, ಮಡದಿ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಸಿಪಿ ಯೋಗೇಶ್ವರ್ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ರು.

ಒಟ್ಟಾರೆ ಇದು ರಾಮ್ ಚರಣ್ ನಟನೆಯ ಮಗಧೀರ ಸಿನಿಮಾ ರೀತಿ ಐತಿಹಾಸಿಕ ಅಂಶಗಳ ಜೊತೆ ಮಾಡ್ರನ್ ವಿಷಯಗಳು ಬ್ಲೆಂಡ್ ಅಗಿ ಹೊರಹೊಮ್ಮಲಿದೆ. ಸಿನಿಮಾ 2027ರ ಜನವರಿ 15ರಂದು ಸಂಕ್ರಾಂತಿ ವಿಶೇಷ ತೆರೆಗಪ್ಪಳಿಸಲಿದ್ದು, ಧ್ಯಾನ್‌ ಭವಿಷ್ಯದ ಭರವಸೆಯ ಸ್ಟಾರ್ ಆಗೋದ್ರಲ್ಲಿ ಸಂದೇಹವೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version