ಕಮಲ್ ಹಾಸನ್ ಮಾಡಿದ ಎಡವಟ್ನಿಂದ ರಜನೀಕಾಂತ್ ಮಾಜಿ ಅಳಿಯ ಧನುಷ್ಗೂ ಕುತ್ತು ಬಂದಿದೆ. ಈ ಶುಕ್ರವಾರ ರಿಲೀಸ್ ಆಗ್ತಿರೋ ಕುಬೇರ ಸಿನಿಮಾದ ತಮಿಳು ವರ್ಷನ್ಗೆ ಆನ್ಲೈನ್ ಟಿಕೆಟ್ ಬುಕಿಂಗ್ ಡ್ರಾಪ್ ಆಗಿದೆ. ಈ ಮೂಲಕ ಕನ್ನಡಿಗರು ತಮಿಳು ಮಂದಿ ಸೊಕ್ಕು ಮುರಿಯುವಲ್ಲಿ ಯಶಸ್ವಿ ಆಗಿದ್ದಾರೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.
- ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು !
- ಆನ್ಲೈನ್ನಲ್ಲಿ ತೆಲುಗಿಗೆ ಡಿಮ್ಯಾಂಡ್.. ತಮಿಳು ಕೇಳೋರಿಲ್ಲ
- ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.. ಯಾರೂ ಕೆಮ್ಮಂಗಿಲ್ಲ
- ಧನುಷ್- ನಾಗಾರ್ಜುನ್ ನಟನೆಯ ದ್ವಿಭಾಷಾ ಚಿತ್ರ ಕುಬೇರ..!
ತಮಿಳಿನ ಧನುಷ್, ತೆಲುಗಿನ ನಾಗಾರ್ಜುನ್ ಹಾಗೂ ನಮ್ಮ ಕನ್ನಡದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರೋ ಬಬಹುನಿರೀಕ್ಷಿತ ಸಿನಿಮಾ ಕುಬೇರ ಇದೇ ಜೂನ್ 20ಕ್ಕೆ ತೆರೆಗೆ ಬರ್ತಿದೆ. ಸೆನ್ಸಿಬಲ್ ಡೈರೆಕ್ಟರ್ ಶೇಖರ್ ಕಮ್ಮುಲ ನಿರ್ದೇಶನದ ಸೋಶಿಯಲ್ ಡ್ರಾಮಾ ಇದಾಗಿದ್ದು, ರಾಜಮೌಳಿ ಕೂಡ ಈ ಸಿನಿಮಾನ ನೋಡಲು ಕಾತುರರಾಗಿದ್ದಾರೆ. ಚಿತ್ರದ ಟ್ರೈಲರ್, ಟೀಸರ್ ಹಾಗೂ ಸಾಂಗ್ಸ್ ಈಗಾಗ್ಲೇ ಸಖತ್ ಮೋಡಿ ಮಾಡ್ತಿವೆ.
ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗಿರೋ ಈ ದ್ವಿಭಾಷಾ ಚಿತ್ರಕ್ಕೆ ಕನ್ನಡಿಗರ ಮಹತ್ವದ ಹೊಡೆತ ಬಿದ್ದಿದೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಕಮಲ್ ಹಾಸನ್. ಯೆಸ್.. ಕಮಲ್ ಇತ್ತೀಚೆಗೆ ತಮ್ಮ ಥಗ್ ಲೈಫ್ ಸಿನಿಮಾದ ಪ್ರಮೋಷನ್ಸ್ ವೇಳೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ವಿವಾದಾತ್ಮಕ ಹೇಳಿಕೆ ನೀಡಿದ್ರು. ಅದ್ರಿಂದ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಕನ್ನಡಿಗರಿಂದ ತಿರಸ್ಕರಿಸಲ್ಪಟ್ಟಿತ್ತು.
ಕಮಲ್ ಅಂದು ನೀಡಿದ ಆ ಹೇಳಿಕೆ ಇಂದು ನಟ ಧನುಷ್ ನಟನೆಯ ಕುಬೇರ ಚಿತ್ರಕ್ಕೂ ಎಫೆಕ್ಟ್ ಆಗಿದೆ. ಹೌದು.. ಕರ್ನಾಟಕದಲ್ಲಿ ತೆಲುಗು ಹಾಗೂ ತಮಿಳು ಎರಡೂ ಅವತರಣಿಕೆಗಳಲ್ಲಿ ಕುಬೇರ ರಿಲೀಸ್ ಆಗ್ತಿದ್ದು, ಆನ್ಲೈನ್ ಟಿಕೆಟ್ ಬುಕಿಂಗ್ನಲ್ಲಿ ಜನ ತಮಿಳುಗಿಂತ ತೆಲುಗುಗೇ ಹೆಚ್ಚು ಒಲವು ತೋರಿದ್ದಾರೆ. ತಮಿಳು ಅವತರಣಿಕೆಯ ಸಿನಿಮಾಗೆ ತೀರಾ ಕಡಿಮೆ ಟಿಕೆಟ್ಸ್ ಬುಕ್ ಆಗ್ತಿವೆ. ಇದ್ರಲ್ಲೇ ಗೊತ್ತಾಗ್ತಿದೆ, ಕನ್ನಡ ಭಾಷೆ ಹಾಗೂ ಕನ್ನಡಿಗರ ಭಾವನೆಗಳ ಮೇಲೆ ದಬ್ಬಾಳಿಗೆ ಮಾಡಲು ಬಂದಂತಹ ತಮಿಳುಗರ ಸೊಕ್ಕು ಮುರಿದು, ಅವರಿಗೆ ತಕ್ಕ ಪಾಠ ಕಲಿಸ್ತಿದ್ದಾರೆ ನಮ್ಮ ಕನ್ನಡಿಗರು.
ಅಷ್ಟೇ ಯಾಕೆ ಕುಬೇರ ಸಿನಿಮಾ ಸುಮಾರು 3 ಗಂಟೆಗಳ ಕಾಲ ರನ್ ಟೈಂ ಇರುವ ಬಹುದೊಡ್ಡ ಸಿನಿಮಾ ಎನ್ನಲಾಗ್ತಿದೆ. ಜೊತೆಗೆ ಸೆನ್ಸಾರ್ ಬೋರ್ಡ್ ತೆಲುಗು ವರ್ಷನ್ಗೆ ಬರೋಬ್ಬರಿ 19 ಕಟ್ಸ್ ನೀಡಿದ್ದು, ಎ ಸರ್ಟಿಫಿಕೇಟ್ ಕೂಡ ನೀಡಿದೆಯಂತೆ. ಆದ್ರೆ ನಿರ್ಮಾಪಕರು ಅದನ್ನ ಅಲ್ಲಗೆಳೆದಿದ್ದು, 7 ಕಟ್ಸ್ ಅಷ್ಟೇ ನೀಡಲು ಒಪ್ಪಿದ್ದೇವೆ ಎಂದಿದ್ದಾರೆ.
ಎ ಸರ್ಟಿಫಿಕೇಟ್ ಅಂದಾಗ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಅನ್ನೋದು ದೃಢವಾಗಿದೆ. ಮಕ್ಕಳು ಇಲ್ಲ ಅಂದ್ರೆ ಫ್ಯಾಮಿಲಿ ಆಡಿಯೆನ್ಸ್ ಥಿಯೇಟರ್ಗೆ ಬರಲ್ಲ. ಹಾಗಾಗಿ ಕುಬೇರ ಚಿತ್ರಕ್ಕೆ ಬಹುದೊಡ್ಡ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಂದ್ಕಡೆ ಕಮಲ್ ಮೇಲಿನ ಕೋಪಕ್ಕೆ ಧನುಷ್ ಸಿನಿಮಾ ಅಂತ ಹೊಡೆತ ಬೀಳ್ತಿದ್ರೆ, ಮತ್ತೊಂದ್ಕಡೆ ಸೆನ್ಸಾರ್ ಬೋರ್ಡ್ ಮಾಡಿರೋ ಮಾಸ್ಟರ್ ಸ್ಟ್ರೋಕ್ಗೆ ಬೆಚ್ಚಿಬಿದ್ದಿದೆ ಟೀಂ ಕುಬೇರ. ಹೀಗಾದ್ರೆ ಕರ್ನಾಟಕದಲ್ಲಿ ಕುಬೇರನಿಂದ ಪ್ರೊಡ್ಯೂಸರ್ ಮಾತ್ರ ಯಾವುದೇ ಕಾರಣಕ್ಕೂ ಕುಬೇರನಾಗಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್