ಮುನಿಸು ಮರೆತ Jr. NTR.. ಬಾಲಯ್ಯ ಫ್ಯಾನ್ಸ್ ದಿಲ್‌‌‌ಖುಷ್

NBK 111 ಚಿತ್ರದ ಸಾಹಸ ದೃಶ್ಯದ ವೇಳೆ ಬಾಲಕೃಷ್ಣಗೆ ಪೆಟ್ಟು..!

ಸ್ವ (60)

ನಂದಮೂರಿ ಕುಟುಂಬದ ಬಾಲಕೃಷ್ಣ ಹಾಗೂ ಜೂನಿಯರ್ ಎನ್‌ಟಿಆರ್ ನಡುವೆ ಇದ್ದಂತಹ ಮುನಿಸು ದೂರವಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಬಾಲಯ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ ತಾರಕ್. ಇದನ್ನ ಕಂಡಂತಹ ಇಡೀ ನಂದಮೂರಿ ಅಭಿಮಾನಿ ಬಳಗಗಳು ಒಗ್ಗಟ್ಟಿನ ಮಂತ್ರ ಪಠಿಸುವಂತಾಗಿದೆ.

ಮುನಿಸು ಮರೆತ Jr. NTR.. ಬಾಲಯ್ಯ ಫ್ಯಾನ್ಸ್ ದಿಲ್‌‌‌ಖುಷ್

‘ಆದಷ್ಟು ಬೇಗ ಚೇತರಿಸಿಕೊಳ್ಳಿ ಬಾಲ ಬಾಬಾಯ್’- ತಾರಕ್

NBK 111 ಚಿತ್ರದ ಸಾಹಸ ದೃಶ್ಯದ ವೇಳೆ ಬಾಲಕೃಷ್ಣಗೆ ಪೆಟ್ಟು..!

ಕಾಕಿನಾಡ ಸೆಟ್‌‌ನಲ್ಲಿ ಮಸಲ್‌ಗೆ ಪೆಟ್ಟು.. ಮೈನರ್ ಸರ್ಜರಿ..!!

ಜೂನಿಯರ್‌ ಎನ್‌ಟಿಆರ್.. ಆಂಧ್ರ ಮಾಜಿ ಸಿಎಂ, ತೆಲುಗು ದೇಶಂ ಪಾರ್ಟಿ ಸಂಸ್ಥಾಪಕ, ಸೂಪರ್ ಸ್ಟಾರ್ ನಂದಮೂರಿ ತಾರಕರಾಮರಾವ್‌ ಅವರ ಮೊಮ್ಮನ. ಮಿಗಿಲಾಗಿ ಯೂತ್‌‌ನಲ್ಲಿ ಸಂಚಲನ ಮೂಡಿಸಿರೋ ಟಾಲಿವುಡ್‌ನ ಮಾಸ್‌ ಹೀರೋ. ರಾಜಮೌಳಿಯ ತ್ರಿಬಲ್ ಆರ್ ಸಿನಿಮಾದಿಂದ ಗ್ಲೋಬಲ್ ಸ್ಟಾರ್ ಆಗಿ ರಾರಾಜಿಸ್ತಿರೋ ತಾರಕ್, ಸದ್ಯ ಟಾಪ್ ಸ್ಟಾರ್‌‌ಗಳ ಲಿಸ್ಟ್‌‌ನಲ್ಲಿ ಮೋಸ್ಟ್ ಸಕ್ಸಸ್‌‌ಫುಲ್ ಹೀರೋ ಅನಿಸಿಕೊಂಡಿದ್ದಾರೆ.

ಇತ್ತ ನಂದಮೂರಿ ಬಾಲಕೃಷ್ಣ ಕೂಡ ನಂದಮೂರಿ ತಾರಕ ರಾಮರಾವ್‌ರ ಮಗನಾಗಿ, 110 ಚಿತ್ರಗಳ ಸೆಂಚುರಿ ಸ್ಟಾರ್ ಆಗಿ, ನಟಸಿಂಹ, ಲೆಜೆಂಡ್ ಅಂತೆಲ್ಲಾ ಕರೆಸಿಕೊಳ್ಳೋ ಇವರು ಹಿಂದೂಪುರದ ಎಂಎಲ್‌ಎ ಕೂಡ ಹೌದು. ಇಂದ್ಕಡೆ ಸಿನಿಮಾ, ಮತ್ತೊಂದ್ಕಡೆ ರಾಜಕೀಯ.. ಹೀಗೆ ಎರಡೂ ದೋಣಿಗಳಲ್ಲಿ ಯಶಸ್ವಿ ಪಯಣ ಮಾಡ್ತಿರೋ ಬಾಲಯ್ಯ ಹಾಗೂ ಜೂನಿಯರ್ ಎನ್‌ಟಿಆರ್ ನಡುವೆ ಎಲ್ಲವೂ ಸರಿ ಇರಲಿಲ್ಲ. ಅದಕ್ಕೆ ಟಿಡಿಪಿ ಪಕ್ಷದ ರಾಜಕೀಯ ಬೆಳವಣಿಗೆಗಳು, ಕೌಟುಂಬಿಕ ಕಲಹಗಳು ಜೊತೆಗೆ ಸ್ಟಾರ್‌ಗಳ ಫ್ಯಾನ್ಸ್ ವಾರ್ ಕೂಡ ಕಾರಣವಾಗಿದ್ದವು.

ಆದ್ರೀಗ ಸುಮಾರು ವರ್ಷಗಳ ನಂತ್ರ ಶೂಟಿಂಗ್ ಸೆಟ್‌‌ನಲ್ಲಿ ಮಸಲ್‌ಗೆ ಪೆಟ್ಟು ಮಾಡಿಕೊಂಡಿರೋ ಬಾಲಕೃಷ್ಣಗೆ ಬೇಗ ಚೇತರಿಸಿಕೊಳ್ಳಿ ಬಾಲ ಬಾಬಾಯ್ ಅಂತ ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿದ್ದಾರೆ ತಾರಕ್. ಅದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಸದ್ಯ ನಂದಮೂರಿ ಕುಟುಂಬದ ಇಬ್ಬರು ಸ್ಟಾರ್‌ಗಳ ನಡುವೆ ಇದ್ದಂತಹ ಹಳೆಯ ಮುನಿಸು ದೂರವಾಗಿದೆ ಅಂತ ಫ್ಯಾನ್ಸ್ ಹಾಗೂ ಆಂಧ್ರ ಮಂದಿ ಸಂತಸ ಪಡ್ತಿದ್ದಾರೆ. ಹೌದು.. ಕಾಕಿನಾಡದಲ್ಲಿ NBK111 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಾಹಸ ದೃಶ್ಯದ ವೇಳೆ ಬಾಲಯ್ಯಗೆ ಮಸಲ್ ಇಂಜ್ಯೂರಿ ಆಗಿದೆ. ಅದಕ್ಕೆ ಸಣ್ಣದೊಂದು ಶಸ್ತ್ರ ಚಕಿತ್ಸೆ ಮಾಡಿಸಿ, ವಿಶ್ರಾಂತಿ ಪಡೆಯುವಂತಾಗಿದೆ. ಅದೇ ಕಾರಣಕ್ಕೆ ತಾರಕ್ ವಿಶ್ ಮಾಡಿದ್ದಾರೆ.

ಫುಲ್ ಫಾರ್ಮ್‌‌ನಲ್ಲಿ ಮೊದಲಿನಂತೆ ಗರ್ಜಿಸಿ ಚಿಕ್ಕಪ್ಪ ಅಂತ ಹೇಳಿರೋ ತಾರಕ್ ಪೋಸ್ಟ್ ಸದ್ಯ ಎಲ್ಲೆಡೆ ಚರ್ಚೆಗೆ ಕಾರಣವಾಗ್ತಿದೆ. ಅಂದಹಾಗೆ 2009ರ ಎಲೆಕ್ಷನ್ಸ್ ಬಳಿಕ ರಾಜಕೀಯದಿಂದ ದೂರ ಉಳಿದಿದ್ದಾರೆ ಜೂನಿಯರ್ ಎನ್‌ಟಿಆರ್. ಆಗ ಎಲೆಕ್ಷನ್ ಕ್ಯಾಂಪೇನ್‌ಗಳಲ್ಲಿ ಭಾಗಿಯಾಗಿದ್ದ ತಾರಕ್, ಅದ್ಯಾಕೋ ಸಡನ್ ಆಗಿ ಸೈಲೆಂಟ್ ಆಗಿಬಿಟ್ರು. ಅದು ಬಾಲಯ್ಯ ಸೇರಿದಂತೆ ಟಿಡಿಪಿ ನಾಯಕರಲ್ಲಿ ಅಸಮಾಧಾನ ತಂದಿತ್ತು. ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡು ಜೈಲಿಗೆ ಹೋದಾಗಲೂ ಸಹ ಮೌನ ತಾಳಿದ್ರು ತಾರಕ್.

ಸದ್ಯ ಫಿಲ್ಮ್ ಕರಿಯರ್ ಬಗ್ಗೆ ಫೋಕಸ್ ಮಾಡಿರೋ ಜೂನಿಯರ್ ಎನ್‌ಟಿಆರ್, ಡ್ರ್ಯಾಗನ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತಂದೆ, ಸಹೋದರರ ಅಕಾಲಿಕ ಮರಣದ ನಂತ್ರ ಸಾಕಷ್ಟು ಕುಗ್ಗಿದ್ದ ತಾರಕ್, ತಾನಾಯ್ತು ತನ್ನ ಸಿನಿಮಾರಂಗ ಆಯ್ತು ಅಂತ ತನ್ನ ಪಾಡಿಗೆ ತಾನು ಒಂಟಿಯಾಗಿದ್ದಾರೆ. ಆದ್ರೂ ಖುಷಿಯಿಂದ ಫ್ಯಾಮಿಲಿ, ಫ್ರೆಂಡ್ಸ್ ಹಾಗೂ ಸಿನಿಮಾಗಳಿಗೆ ಸೀಮಿತ ಆಗಿದ್ದಾರೆ. ಆದ್ರೀಗ ಬಾಲಯ್ಯ ಚಿಕ್ಕಪ್ಪನಿಗೆ ತಾರಕ್ ಶುಭಾಶಯ ಚರ್ಚೆಗಳಿಗೆ ಮುನ್ನುಡಿ ಬರೆದಿರೋದು ಅಚ್ಚರಿ.

 

 

Exit mobile version