ಆಸ್ಪತ್ರೆಯೊಂದರ ಉದ್ಘಾಟನೆಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದ ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್, ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಆಂಧ್ರ ಮಾಜಿ ಸಿಎಂ, ದಿ ಲೆಜೆಂಡರಿ ಆ್ಯಕ್ಟರ್ ಎನ್ಟಿಆರ್ ಅವ್ರ ಮೊಮ್ಮಗ ಪಾಲಿಟಿಕ್ಸ್ಗೆ ಪಾದಾರ್ಪಣೆ ಮಾಡೋದ್ರ ಬಗ್ಗೆ ಏನು ಹೇಳಿದ್ರು..? ಸಕ್ಸಸ್ ಟಿಪ್ಸ್ ಜೊತೆ ರಸ್ತೆ ಸುರಕ್ಷತೆ ಬಗ್ಗೆ ನೀಡಿದ ಸ್ಟೇಟ್ಮೆಂಟ್ ಏನು ಅನ್ನೊದು ಇಲ್ಲಿದೆ ನೋಡಿ.
ಬೆಂಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಬ್ಲಾಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಜೂನಿಯರ್ ಎನ್ಟಿಆರ್, ಕನ್ನಡದಲ್ಲೇ ಮಾತು ಶುರು ಮಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ನನಗೆ ಕರ್ನಾಟಕ ಅಥ್ವಾ ಬೆಂಗಳೂರಿಗೆ ಬಂದ್ರೆ ತಂದೆ ಮನೆಯಿಂದ ತಾಯಿ ಮನೆಗೆ ಬಂದಂತೆ ಆಗುತ್ತೆ. ಯಾಕಂದ್ರೆ ನಮ್ಮ ತಾಯಿ ಕುಂದಾಪುರದವರು ಅಂತ ನಿಮಗೆಲ್ಲಾ ಗೊತ್ತು. ಸೋ ನನಗಿದು ಅಮ್ಮಮ್ಮನ ಮನೆಯೂ ಹೌದು. ನಮ್ಮ ತಾತ ನಂದಮೂರಿ ತಾರಕ ರಾಮರಾವ್ ಅವರು 80ರ ದಶಕದಲ್ಲಿ ಈ ಆಸ್ಪತ್ರೆಯ ಉದ್ಘಾಟನೆಯಲ್ಲಿ ಭಾಗಿಯಾಗಿದ್ರು. ಇಷ್ಟು ವರ್ಷಗಳ ನಂತ್ರ ನಾನು ಬಂದಿರೋದು ಮತ್ತಷ್ಟು ಖುಷಿ ಕೊಡುತ್ತೆ ಎಂದರು.
ಪಾಲಿಟಿಕ್ಸ್ಗೆ ಪಾದಾರ್ಪಣೆ.. NTR ಮೊಮ್ಮಗ Jr. ಹೇಳಿದ್ದೇನು?
25 ವರ್ಷದ ನಂತ್ರ ಏನಾಗಿರ್ತಾರೆ ತಾರಕ್..? ಸಿಎಂ ಎಂದ ಜನ
ಎಸ್ ಎಸ್ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾದಿಂದ ಗ್ಲೋಬಲ್ ಆಡಿಯೆನ್ಸ್ ಮೆಚ್ಚುಗೆಗೆ ಪಾತ್ರರಾಗಿರೋ ತಾರಕ್, ಸದ್ಯ ನಮ್ಮ ಕನ್ನಡದ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಡ್ರ್ಯಾಗನ್ ಸಿನಿಮಾ ಮಾಡ್ತಿದ್ದಾರೆ. ಅದರ ನಡುವೆ ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಅವರು, ವೇದಿಕೆಯಲ್ಲಿ 25 ವರ್ಷಗಳ ನಂತ್ರ ತಾರಕ್ ಏನಾಗಿರ್ತಾರೆ ಎಂದು ಕೇಳಿದ ಪ್ರಶ್ನೆಗೆ 67 ವರ್ಷ ಆಗಿರುತ್ತೆ ಅಂತ ಬ್ರಿಲಿಯಂಟ್ ಆನ್ಸರ್ ನೀಡಿದ್ದಾರೆ.
ಆದ್ರೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಜನ ಮಾತ್ರ ಸಿಎಂ.. ಸಿಎಂ.. ಸಿಎಂ.. ಅಂತ ತಾರಕ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ರಾಜಕೀಯ ಎಂಟ್ರಿ ಬಗ್ಗೆ ತಾರಕ್ ಸದ್ಯಕ್ಕೆ ಏನೂ ಉತ್ತರಿಸದೇ ಇರಬಹುದು. ಆದ್ರೆ ಜನರಲ್ಲಿ ಅವ್ರ ತಾತ ನಂದಮೂರಿ ತಾರಕ ರಾಮ ರಾವ್ ಹಾಗೂ ಅವ್ರ ಲೆಗಸಿಗೆ ಒಳ್ಳೆಯ ಪ್ರತಿಕ್ರಿಯೆ ಇದೆ. ತಾತನಂತೆ ಮೊಮ್ಮಗ ಕೂಡ ರಾಜಕಾರಣದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅನ್ನೋದು ಅಸಂಖ್ಯಾತ ನಂದಮೂರಿ ಕುಟುಂಬದ ಅಭಿಮಾನಿಗಳ ಅಭಿಮಾನ, ಪ್ರೀತಿಯ ಆಶಯವಾಗಿದೆ.
ವೈದ್ಯರ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ ತಾರಕ್, ಮನುಷ್ಯನಿಗೆ ಪುನರ್ಜನ್ಮ ನೀಡುವ ಶಕ್ತಿ ಇರೋದು ವೈದ್ಯರಿಗೆ ಮಾತ್ರ. ನಾನು ಮಕ್ಕಳ ಬೆಳವಣಿಗೆ ನೋಡಿ ಖುಷಿ ಪಡ್ತೀನಿ. ಆದ್ರೆ ಮಕ್ಕಳ ತಜ್ಞ ಆಗಕಲಾರೆ ಎಂದಿದ್ದಾರೆ. ತಮ್ಮ ಸಹೋದರ ಹಾಗೂ ತಂದೆಯನ್ನ ರೋಡ್ ಆ್ಯಕ್ಸಿಡೆಂಟ್ನಲ್ಲಿ ಕಳೆದುಕೊಂಡ ತಾರಕ್, ನಾನು ಕೂಡ ಸಾವಿನ ಕದ ತಟ್ಟಿ ಬಂದಿದ್ದೇನೆ. ಸೋ.. ರಸ್ತೆಯಲ್ಲಿ ವಾಹನ ಚಲಾವಣೆ ಮಾಡುವಾಗ ಜಾಗ್ರತೆ ಇರಲಿ ಎಂದಿದ್ದಾರೆ.
ಆಂಧ್ರ ಮಾಜಿ CM, ಲೆಜೆಂಡ್ ಎನ್ಟಿಆರ್ ರೀತಿ ಜನನಾಯಕ?
ಬೆಂಗಳೂರಿನಲ್ಲಿ ಗ್ಲೋಬಲ್ ಸ್ಟಾರ್ ತಾರಕ್ ಸೆನ್ಸೇಷನಲ್ ನ್ಯೂಸ್
ಮಹಿಳಾ ದಿನಾಚರಣೆ ವಿಶೇಷ ಮಹಿಳಾ ವೈದ್ಯರು ಹಾಗೂ ಅಲ್ಲಿ ನೆರೆದಿದ್ದ ಮಹಿಳೆಯರಿಗೆ ಶುಭಾಶಯ ಕೋರಿದ ತಾರಕ್, ಶಾಲೆಯಲ್ಲೇ ಹೆಣ್ಣಿನ ಮಹತ್ವದ ಬಗ್ಗೆ ಮಕ್ಕಳಿಗೆ ಸಾರಬೇಕು. ಅದು ಮನೆಯಿಂದಲೇ ಆದ್ರೆ ಒಳ್ಳೆಯದು. ನನ್ನ ಇಬ್ಬರೂ ಮಕ್ಕಳು ಹೆಣ್ಣನ್ನ ಗೌರವಿಸುತ್ತಲೇ ಬೆಳೆಯುತ್ತಿದ್ದಾರೆ ಅಂತ ಜವಾಬ್ದಾರಿಯುತ ಮಾತುಗಳನ್ನಾಡಿದ್ದಾರೆ.
ಇನ್ನೂ ಸಕ್ಸಸ್ ಅಥ್ವಾ ಪ್ಲ್ಯಾನ್ಡ್ ಆಗಿ ಲೈಫ್ ಲೀಡ್ ಮಾಡುವ ವಿಚಾರ ಮಾತನಾಡಿದ ಜೂನಿಯರ್ ಎನ್ಟಿಆರ್, ನಿಮ್ಮ ಮನದ ಮಾತನ್ನ ಮಾತ್ರ ಕೇಳಿ. ನಾವು ಪ್ಲ್ಯಾನ್ ಮಾಡಿದ ಹಾಗೆ ಏನೂ ನಡೆಯಲ್ಲ. ಜಾಸ್ತಿ ಪ್ಲ್ಯಾನ್ ಮಾಡಿದ್ಟೂ ಫೇಲ್ಯೂರ್ ಜಾಸ್ತಿ ಅಂತ ತಮ್ಮ ಸೀಕ್ರೆಟ್ಸ್ನ ಬಿಚ್ಚಿಟ್ಟಿದ್ದಾರೆ. ಒಟ್ಟಾರೆ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರೋ ಯಂಗ್ ಟೈಗರ್, ಸದ್ಯ ಸಿನಿಮಾಗಳ ಮೇಲಷ್ಟೇ ಫೋಕಸ್ಡ್ ಆಗಿದ್ದಾರೆ. ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿರೋ ತಾರಕ್, ಹಾಲಿವುಡ್ ಸಿನಿಮಾ ಮಾಡೋ ಧಾವಂತದಲ್ಲಿದ್ದಾರೆ.
