ಟ್ರೇಡ್ ಹೆಚ್ಚಿಸಿದ ತೆಲುಗು, ತಮಿಳ್, ಮಲಯಾಳಂ, ಬಿಟೌನ್

100Cr ಬಾಚಿದ 33 ಚಿತ್ರ.. 1000 ಕೋಟಿ ಕ್ಲಬ್‌ಗೆ ಧುರಂಧರ್

Untitled design 2025 12 29T170610.110

ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್‌ಗೆ ಹೋಲಿಸಿದ್ರೆ ನಮ್ಮ ಸ್ಯಾಂಡಲ್‌ವುಡ್ ಸಿಕ್ಕಾಪಟ್ಟೆ ಡಲ್. ಹೌದು.. ಸಾವಿರ ಕೋಟಿ ಕ್ಲಬ್ ಸಿನಿಮಾಗಳಿಂದ ಹಿಡಿದು ನೂರು ಕೋಟಿ ಕ್ಲಬ್‌ನ 30ಕ್ಕೂ ಅಧಿಕ ಚಿತ್ರಗಳನ್ನ ಪರಭಾಷಾ ರಂಗಗಳು ನೀಡಿವೆ. ಹಾಗಾದ್ರೆ ಯಾವ್ಯಾವ ಸ್ಟಾರ್ ಎಷ್ಟೆಷ್ಟು ಕೋಟಿ ಗಳಿಸಿದ್ರು..? ಆ ಸಿನಿಮಾಗಳು ಯಾವ್ಯಾವು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ…

ಕೊರೋನಾ ಬಳಿಕ ಶಾರೂಖ್ ಖಾನ್‌ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಸಾವಿರ ಕೋಟಿ ಗಳಿಸೋ ಮೂಲಕ ಐಸಿಯುನಲ್ಲಿದ್ದಂತಹ ಬಾಲಿವುಡ್‌ಗೆ ಉಸಿರು ನೀಡಿತ್ತು. ಆದ್ರೆ ಈ ವರ್ಷ ಬಾಲಿವುಡ್ ಉದ್ಯಮ ಬಹಳ ಚೆನ್ನಾಗಿ ಆಗಿದೆ. ಅದಕ್ಕೆ ಕಾರಣ ವಿನೂತನ ಪ್ರಯೋಗಗಳು. ಹೌದು.. ಧುರಂಧರ್, ಛಾವಾ, ಸೈಯ್ಯಾರದಂತಹ ವೆರೈಟಿ ಜಾನರ್ ಸಿನಿಮಾಗಳ ಗೆಲುವು.

ಕನ್ನಡ ಚಿತ್ರರಂಗ ಈ ಬಾರಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಇಂಡಸ್ಟ್ರಿಗಳಿಗೆ ಹೋಲಿಸಿದ್ರೆ ಸಿಕ್ಕಾಪಟ್ಟೆ ಡಲ್ ಹೊಡೆದಿದೆ. ಉಳಿದ ನಾಲ್ಕು ಚಿತ್ರರಂಗಗಳಲ್ಲಿ ಸುಮಾರು 30ಕ್ಕೂ ಅಧಿಕ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿದ್ರೆ, ಒಂದು ಸಿನಿಮಾ ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದು ಅಗ್ರಸ್ಥಾನದಲ್ಲಿದೆ. ಬಾಲಿವುಡ್‌‌ನ ಟಾಪ್ ತ್ರೀ ಸಿನಿಮಾಗಳ ಕಲೆಕ್ಷನ್ ರಿಪೋರ್ಟ್‌ ಇಲ್ಲಿದೆ ನೋಡಿ.

 

ಸಿನಿಮಾ                                                                 ಬಾಕ್ಸ್ ಅಫೀಸ್‌‌ ಕಲೆಕ್ಷನ್

                                                                            (ಕೋಟಿ ರೂ ಗಳಲ್ಲಿ)

========                                                            =======================

ಧುರಂಧರ್                                                             1100 ಕೋಟಿ

ಛಾವಾ                                                                    780 ಕೋಟಿ

ಸೈಯ್ಯಾರ                                                                579 ಕೋಟಿ

 

ರಣ್‌ವೀರ್ ಸಿಂಗ್ ನಟನೆಯ ಧುರಂಧರ್.. ಇಂಡೋ-ಪಾಕ್ ಅತಿದೊಡ್ಡ ಜಿದ್ದಿನ ನೈಜ ಕಥೆ. ಹಾಗಾಗಿ ದೇಶಪ್ರೇಮದ ಕಿಚ್ಚಿರೋ ಸ್ಪೈ ಏಜೆಂಟ್ ಕಥಾನಕದ ಈ ಸಿನಿಮಾ ದಿನಕ್ಕೆ ಕನಿಷ್ಠ 50 ಕೋಟಿ ಗಳಿಸೋ ಮೂಲಕ ಸಾವಿರದ ನೂರು ಕೋಟಿ ಗಳಿಸಿದೆ. ಇಂದಿಗೂ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ.

ಛತ್ರಪತಿ ಶಿವಾಜಿ ಮಾಹಾರಾಜನ ಪುತ್ರನ ಬಯೋಪಿಕ್ ಛಾವಾ ಕೂಡ ನೋಡುಗರ ಮನಸ್ಸು ಗೆದ್ದಿತು. ನಮ್ಮ ರಶ್ಮಿಕಾ ಸಹ ಲೀಡ್‌‌ನಲ್ಲಿದ್ದು, ವಿಕ್ಕಿ ಕೌಶಲ್ ವಿನೂತನ ಪ್ರಯತ್ನ ಫಲಿಸಿತು. ಬಾಕ್ಸ್ ಆಫೀಸ್‌‌ನಲ್ಲಿ 780 ಕೋಟಿ ಗಳಿಸಿತು. ಇಂಟೆನ್ಸ್ ಲವ್ ಸ್ಟೋರಿ ಸೈಯ್ಯಾರ ಯೂತ್‌ ಮನಸ್ಸಿಗೆ ಇಳಿಯಿತು. ಹದಿ ಹರೆಯದ ಮನಸುಗಳ ಪ್ರೀತಿ, ಪ್ರೇಮ, ಪ್ರಣಯದ ಕಥಾನಕ ಇದಾಗಿದ್ದು, ಆಶಿಕಿ-2 ಫ್ಲೇವರ್ ಆದ್ರೂ ಸಹ ಜನ ಮುಗಿಬಿದ್ದು ನೋಡಿ, 579ಕ್ಕೂ ಅಧಿಕ ಕೋಟಿ ಬ್ಯುಸಿನೆಸ್ ಮಾಡುವಂತಾಯ್ತು.

ವಾರ್-2, ಸಿತಾರೆ ಜಮೀನ್‌ಪರ್, ರೈಡ್-2, ಹೌಸ್‌‌ಫುಲ್-5, ಸಿಕಂದರ್ ಹಾಗೂ ಥಮಾ ಸಿನಿಮಾಗಳು ಕೂಡ ಈ ವರ್ಷ ಬಿಟೌನ್‌‌ನಲ್ಲಿ ಸದ್ದು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ರಾರಾಜಿಸಿವೆ.

ಟಾಲಿವುಡ್‌‌ನಲ್ಲಿ ಡಿಸಿಎಂ ಪವನ್ ಕಲ್ಯಾಣ್‌ರ ದೆ ಕಾಲ್ ಹಿಮ್ ಓಜಿ ಸಿನಿಮಾ ಈ ವರ್ಷ ಅತಿಹೆಚ್ಚು ಗಳಿಸಿದ ಚಿತ್ರವಾಗಿದೆ. 325 ಕೋಟಿ ಗಳಿಸಿ ನಂಬರ್ ಒನ್ ಪಟ್ಟಕ್ಕೇರಿದೆ. ಅದೇ ಪವನ್‌ರ ಹರಿಹರ ವೀರಮಲ್ಲು ಕೂಡ 114 ಕೋಟಿ ಗಳಿಸಿ ನೂರು ಕೋಟಿಯ ಗಡಿ ದಾಟಿತ್ತು.

ವಿಕ್ಟರಿ ವೆಂಕಟೇಶ್‌ರ ಸಂಕ್ರಾಂತಿಕಿ ವಸ್ತುನ್ನಾಮ್ 300 ಕೋಟಿ ಗಳಿಸಿದ್ರೆ, ರಾಮ್ ಚರಣ್ ಗೇಮ್ ಚೇಂಜರ್ 195 ಕೋಟಿ ಗಳಿಸಿತು. ಆದ್ರೆ ವಿಮರ್ಶಾತ್ಮಕವಾಗಿ ಗೇಮ್ ಚೇಂಜರ್ ನೆಲ ಕಚ್ಚಿತ್ತು. ಬಾಲಯ್ಯನ ಅಖಂಡ-2, ಢಾಕು ಮಹಾರಾಜ್ ಚಿತ್ರಗಳು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಬಾಲಯ್ಯಗೆ ಇನ್ನೂ ಡಿಮ್ಯಾಂಡ್ ಇದೆ ಅನ್ನೋದನ್ನ ತೋರಿಸಿದವು.

ನಾನಿಯ ಹಿಟ್-3, ತೇಜಾ ಸಜ್ಜಾ ನಟನೆಯ ಮಿರಾಯ್, ನಾಗಾರ್ಜುನ್-ಧನುಷ್-ರಶ್ಮಿಕಾ ಅಭಿನಯದ ಕುಬೇರ ನಿರ್ಮಾಪಕರುಗಳನ್ನ ಕುಬೇರರಾಗಿಸಿದವು.

ತಮಿಳು ಚಿತ್ರರಂಗದ ನಮ್ಮ ಸ್ಯಾಂಡಲ್‌ವುಡ್ ರೀತಿ ಈ ಬಾರಿ ಅಷ್ಟಕ್ಕಷ್ಟೇ. ಸೂಪರ್ ಸ್ಟಾರ್ ರಜನೀಕಾಂತ್‌ರ ಕೂಲಿ ಸಿನಿಮಾ 675 ಕೋಟಿ ಗಳಿಸಿತು. ಅದಕ್ಕೆ ತಲೈವಾಗೆ ನಾಗಾರ್ಜುನ್, ಉಪೇಂದ್ರ, ಸೌಬಿನ್, ಆಮೀರ್ ಖಾನ್ ಹಾಗೂ ನಮ್ಮ ರಚಿತಾ ರಾಮ್ ಕೂಡ ಸಾಥ್ ನೀಡಿದ್ರು.

ಪ್ರದೀಪ್ ರಂಗರಾಜನ್‌ರ ಡ್ರ್ಯಾಗನ್ 150 ಕೋಟಿ, ಡ್ಯೂಡ್ 100 ಕೋಟಿ ಗಳಿಸಿ ಎಲ್ಲರ ಹುಬ್ಬೇರಿಸಿತ್ತು. ತಲಾ ಅಜಿತ್‌ರ ಗುಡ್ ಬ್ಯಾಡ್ ಅಗ್ಲಿ ಹಾಗೂ ವಿದಾಮುರ್ಚಿ, ಕಮಲ್ ಹಾಸನ್‌ರ ಥಗ್ ಲೈಫ್ ಅಟ್ಟರ್ ಫ್ಲಾಪ್ ಆದವು. ಅತೀವ ನಿರೀಕ್ಷೆ ಮೂಡಿಸಿ ನೆಲ ಕಚ್ಚಿದ ಸಿನಿಮಾಗಳು ಪಟ್ಟಿ ಸೇರಿದವು. ಅದ್ರಲ್ಲೂ ಕಮಲ್ ಹಾಸನ್ ಕನ್ನಡದ ವಿರುದ್ಧ ನೀಡಿದ ಹೇಳಿಕೆ ಆತನಿಗೆ ಅಕ್ಷರಶಃ ಮುಳುವಾಯ್ತು.

ಸೂಪರ್ ಹೀರೋ ಫಿಲ್ಮ್ ಲೋಕ್ಹಾ.. ಈ ವರ್ಷ ಮಲಯಾಳಂ ಚಿತ್ರರಂಗದ ನಂಬರ್ 1 ಸಿನಿಮಾ. ದುಲ್ಕರ್ ಸಲ್ಮಾನ್ ನಿರ್ಮಾಣದ ಈ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಮಿಂಚುವುದರ ಮೂಲಕ ಪ್ಯಾನ್ ಇಂಡಿಯಾ ಗಮನ ಸೆಳೆದರು. 303 ಕೋಟಿ ಗಳಿಕೆಯಿಂದ ಮಲಯಾಳಂ ಸೂಪರ್ ಸ್ಟಾರ್‌‌ಗಳ ಹುಬ್ಬೇರಿಸಿತ್ತು ಈ ಲೋಕ್ಹಾ.

ಎಂದಿನಂತೆ ಲಾಲೆಟ್ಟನ್ ಮೋಹನ್‌ಲಾಲ್ ಈ ವರ್ಷ ಕೂಡ ಮಾಲಿವುಡ್ ಮಾನ ಕಾಪಾಡಿದ್ದಾರೆ. ಎಂಪುರಾನ್ ಸಿನಿಮಾ 268 ಕೋಟಿ ಬ್ಯುಸಿನೆಸ್ ಮಾಡಿದ್ರೆ, ಅದ್ರ ಬೆನ್ನಲ್ಲೇ ಬಂದಂತಹ ಥುಡರುಮ್ ಚಿತ್ರ 238 ಕೋಟಿ ಕಲೆಕ್ಷನ್‌‌ನಿಂದ ಪ್ರೇಕ್ಷಕರ ಜೊತೆ ಮಲಯಾಳಂ ಚಿತ್ರೋದ್ಯಮಕ್ಕೂ ಖುಷಿ ನೀಡಿತು.

ಯೆಸ್.. ವಿಷ್ಣುವಿನ ಹತ್ತು ಅವತಾರಗಳಲ್ಲಿ ಮಹಾವತಾರ ನರಸಿಂಹ ಕೂಡ ಒಂದು. ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್‌‌ನ ಚೊಚ್ಚಲ ಚಿತ್ರವಾಗಿ ಹೊರಹೊಮ್ಮಿದ ಮಹಾವತಾರ ನರಸಿಂಹ ಅನ್ನೋ ಪ್ಯಾನ್ ಇಂಡಿಯನ್ ಮೂವಿ ಬರೋಬ್ಬರಿ 325 ಕೋಟಿ ಗಳಿಸೋ ಮೂಲಕ ಎಲ್ಲರ ಕಣ್ಮನ ತಣಿಸಿತು. ಇದು ಅನಿಮೇಟೆಡ್ ಮೂವಿ ಆದ್ರೂ ಹಿರಣ್ಯ ಕಶ್ಯಪು ಹಾಗೂ ಪ್ರಹ್ಲಾದನ ಕಥೆಯನ್ನ ಕಣ್ಣಿಗೆ ಕಟ್ಟಿದಂತೆ ಹೇಳಿತ್ತು. ನಮ್ಮ ಹೆಮ್ಮೆಯ ಹೊಂಬಾಳೆ ಫಿಲಂಸ್ ಪ್ರೆಸೆಂಟ್ ಮಾಡಿದ್ದ ಈ ಸಿನಿಮಾ ಅನಿಮೇಟೆಡ್ ವಿಭಾಗದಲ್ಲಿ ಆಸ್ಕರ್ ಅಂಗಳಕ್ಕೆ ಆಯ್ಕೆ ಆಗಿರೋದು ಹೆಮ್ಮೆಯ ವಿಷಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version