ದರ್ಶನ್‌ ರಿಲೀಸ್ ಯಾವಾಗ..? ಧನ್ವೀರ್ ಎಕ್ಸ್‌‌ಕ್ಲೂಸಿವ್ ಟಾಕ್

ಹಯಗ್ರೀವ ಸಿಲ್ವರ್ ಜ್ಯುಬಿಲಿ.. ಥಿಯೇಟರ್‌‌ನಲ್ಲಿ ಸೆಲೆಬ್ರೇಷನ್

Untitled design 2026 03 26T181217.309

ಹಯಗ್ರೀವ ಚಿತ್ರ ಯಶಸ್ವೀ 25ನೇ ದಿನ ಪೂರೈಸಿರೋ ಹಿನ್ನೆಲೆ ಥಿಯೇಟರ್‌‌ನಲ್ಲಿ ಗ್ರ್ಯಾಂಡ್ ಸೆಲೆಬ್ರೇಷನ್‌ಗೆ ಸಾಕ್ಷಿ ಆಯಿತು. ಡಿಬಾಸ್ ಭಂಟ ಧನ್ವೀರ್ ಗೌಡ ಸಾಕಷ್ಟು ವಿಷಯಗಳ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಅದ್ರಲ್ಲೂ ದಚ್ಚು ರಿಲೀಸ್, ಶತ್ರುಗಳು, ಹಿತಶತ್ರುಗಳ ಬಗ್ಗೆ ಓಪನ್ ಆಗಿ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ.

ಹಯಗ್ರೀವ ಸಿನಿಮಾ ಯಶ್ವೀ 25 ದಿನ ಪೂರೈಸಿದ ಹಿನ್ನೆಲೆ ಆ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಷನ್‌ಗೆ ಇಡೀ ಚಿತ್ರತಂಡ ಸಾಕ್ಷಿ ಆಯಿತು. ರಿಲೀಸ್ ಆದ ಸಂತೋಷ್ ಥಿಯೇಟರ್‌ನಲ್ಲೇ ಅದ್ಧೂರಿ ಸಂಭ್ರಮಾಚರಣೆ ಮಾಡಲಾಯಿತು. ಥಿಯೇಟರ್‌‌ ನಲ್ಲಿ ಕೇಕ್ ಕಟ್ ಮಾಡಿ, ಫ್ಯಾನ್ಸ್‌ಗೆ ತಿನ್ನಿಸೋ ಮೂಲಕ ಧನ್ವೀರ್ ಸಿನಿಮಾ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ರು. ರಘು ಕುಮಾರ್ ನಿರ್ದೇಶನದ ಈ ಸಿನಿಮಾ ಭಿನ್ನ ಅಲೆಯ ಚಿತ್ರ ಅನ್ನೋ ಕಾರಣಕ್ಕೆ ಪ್ರೇಕ್ಷಕರು ಕೂಡ ಮುಗಿಬಿದ್ದು ನೋಡ್ತಿದ್ದಾರೆ.

ಇದೇ ಸಂದರ್ಭದಲ್ಲಿ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಧನ್ವೀರ್ ಗೌಡ, ಡಿಬಾಸ್ ದರ್ಶನ್ ಬಿಡುಗಡೆ ಬಗ್ಗೆಯೂ ಕಮೆಂಟ್ ಮಾಡಿದ್ದಾರೆ. ರಿಲೀಸ್ ಆಗೋದು ದೇವರ ಇಚ್ಚೆ. ಬೇಗ ಆಗಲಿ ಅನ್ನೋದು ನಮಗೂ ಇದೆ. ನೋಡೋಣ ಎಂದಿದ್ದಾರೆ.

ಹೌದು.. ಡಿಬಾಸ್ ದರ್ಶನ್‌ನ ಭಂಟನಂತಿರೋ ಧನ್ವೀರ್ ಹೀಗೆ ಹೇಳಿರೋದು ಒಂಥರಾ ಅಭಿಮಾನಿಗಳ ಧ್ವನಿ ಅಂದ್ರೂ ತಪ್ಪಾಗಲ್ಲ. ರೇಣುಕಾಸ್ವಾಮು ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಬಹಳ ದಿನಗಳೇ ಕಳೆಯಿತು. ಆಗಸ್ಟ್‌ನಿಂದ ಮೂಲಭೂತ ಸೌಕರ್ಯಗಳಿಗೂ ಒದ್ದಾಡ್ತಿದ್ದ ದಚ್ಚು, ಇದೀಗ ಕೋರ್ಟ್ ಟ್ರಯಲ್ಸ್ ಅಟೆಂಡ್ ಮಾಡಿಕೊಂಡು, ನಾಲ್ಕು ಗೋಡೆಗಳ ಮಧ್ಯೆ ಪಂಜರದ ಪಕ್ಷಿಯಂತಾಗಿದ್ದಾರೆ. ಕೇಸ್ ಖುಲಾಸೆ ದೂರದ ಮಾತು. ಆದ್ರೆ ಬೇಲ್ ಕೂಡ ಸಿಗೋದು ಕಷ್ಟ ಎನ್ನಲಾಗ್ತಿದೆ.

ಇದೇ ವೇಳೆ ಹಿತಶತ್ರುಗಳು ಹಾಗೂ ಕಾಲೆಳೆಯೋರ ಬಗ್ಗೆ ಮಾತನಾಡಿದ ಧನ್ವೀರ್ ಗೌಡ, ನನ್ನ ಕಂಡ್ರೆ ಕೆಲವರಿಗೆ ಪ್ರೀತಿ ಜಾಸ್ತಿ. ಅದನ್ನ ತಡೆದುಕೊಳ್ಳುವ ಸಾಮರ್ಥ್ಯ ಇರಬೇಕಷ್ಟೇ ಎಂದಿದ್ದಾರೆ. ಅವರ ಆ ಪ್ರೀತಿಗೆ ತಕ್ಕನಾಗಿ ನಾನು ಕೂಡ ಕೊಡ್ತೀನಿ. ಜೀರ್ಣಿಸಿಕೊಳ್ಳೋ ಶಕ್ತಿ ಭಗವಂತ ಅವ್ರಿಗೆ ಕೊಡಲಿ. ಫೇಕ್ ರಿವ್ಯೂ ಕೊಡೋರಿಗೆ ಕಡಿವಾಣ ಹಾಕಬೇಕು. ಅದ್ರಿಂದ ಕನ್ನಡದ ಸಿನಿಮಾಗಳಿಗೆ ಡ್ಯಾಮೇಜ್ ಆಗ್ತಿದೆ. ದೊಡ್ಡವರು ಕೂತು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಬಣ್ಣದ ಮಾತುಗಳು, ನಾಟಕ, ನೌಟಂಕಿ ಆಟಗಳು ನನಗೆ ಬರಲ್ಲ ಎಂದ ಧನ್ವೀರ್, ದರ್ಶನ್ ಅವ್ರನ್ನ ಭೇಟಿ ಆದಾಗ ಹಯಗ್ರೀವ ಸಿನಿಮಾ ಬಗ್ಗೆ ಮಾತಾಡಿದ್ವಿ. ನಮ್ದು ಅವರದ್ದು ಕ್ಯಾಶುವಲ್ ಟಾಕ್ಸ್ ಇರತ್ತೆ. ಅವರು ಆರಾಮಾಗಿ ಇದ್ದಾರೆ. ಯಾವುದೇ ಹೆಲ್ತ್ ಪ್ರಾಬ್ಲಮ್ಸ್ ಇಲ್ಲ. ಅವ್ರ ಫ್ಯಾನ್ಸ್‌ ಅವರಿಗೆ ಧೈರ್ಯ ಅಂದಿದ್ದಾರೆ ಧನ್ವೀರ್.

ಅಲ್ಲದೆ, ಸಾರಥಿ ಸಿನಿಮಾ ರೀ-ರಿಲೀಸ್ ಬಗ್ಗೆಯೂ ಮಾತನಾಡಿದ್ದು, ಅಷ್ಟರಲ್ಲಿ ದರ್ಶನ್ ರಿಲೀಸ್ ಆದ್ರೆ ಇನ್ನೂ ಒಳ್ಳೆಯದು ಎಂದಿದ್ದಾರೆ.

ಒಟ್ಟಾರೆ ಆ ಆಂಜನೇಯ ಶ್ರೀರಾಮನಿಗೆ ಭಂಟನಾಗಿದ್ದಂತೆ, ಈ ಕಲಿಯುಗದಲ್ಲಿ ದರ್ಶನ್‌ಗೆ ಭಂಟನಾಗಿ ಧನ್ವೀರ್ ಇಷ್ಟೆಲ್ಲಾ ಮಾಡ್ತಿರೋದು ನಿಜಕ್ಕೂ ಗ್ರೇಟ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version