ಗಣೇಶ ಹಬ್ಬ.. ಸೆಲೆಬ್ರೇಷನ್ಗೆ ಕೇರ್ ಆಫ್ ಅಡ್ರೆಸ್. ಅದ್ರಲ್ಲೂ ಸೆಲೆಬ್ರಿಟಿಗಳು ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸ್ತಾರೆ. ಈ ವರ್ಷ ಆರ್ಗ್ಯಾನಿಕ್ ಹಾಗೂ ಮಣ್ಣಿನ ಗಣಪನನ್ನ ಕೂರಿಸಿ, ಸಮಾಜಕ್ಕೂ ಸಂದೇಶ ನೀಡಿದ್ದಾರೆ ತಾರೆಯರು. ಹಾಗಾದ್ರೆ ಯಾವ್ಯಾವ ಸ್ಟಾರ್ ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ರು ಗಣೇಶ ಚೌತಿ ಅಂತೀರಾ..? ಇದನ್ನೊಮ್ಮೆ ನೀವು ಓದಲೇಬೇಕು.
- ಗ್ಯಾರಂಟಿ ನ್ಯೂಸ್ನಲ್ಲಿ ಸೆಲೆಬ್ರಿಟಿಗಳ ಅದ್ಧೂರಿ ಗಣೇಶೋತ್ಸವ..!
- ಆರ್ಗ್ಯಾನಿಕ್ ಮಣ್ಣಿನ ಗಣಪ.. ಸಮಾಜಕ್ಕೆ ತಾರೆಯರ ಸಂದೇಶ
- ಕಡುಬು, ಹೋಳಿಗೆ, ಸಿಹಿ ಜೊತೆ ಕಲರ್ಫುಲ್ ಫೋಟೋಶೂಟ್
- ಗಲಾಟೆ, ತಂಟೆ-ತಕರಾರು ಬೇಡ.. ವಿಸರ್ಜನೆ ವೇಳೆ ಇರಲಿ ಜಾಗ್ರತೆ
ವಿಘ್ನ ನಿವಾರಕ ಗಣೇಶ ಹಬ್ಬ ಮನೆ ಮನಗಳಲ್ಲಿ, ದೇಶದ ಬೀದಿ ಬೀದಿಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಸಿನಿಮಾ ತಾರೆಯರು ಅದರಲ್ಲೂ ಮುಖ್ಯವಾಗಿ ಬಾಲಿವುಡ್ ನಟ-ನಟಿಯರು ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಮ್ಮ ಕಲಾವಿದರು ಆರ್ಗಾನಿಕ್ ಮಣ್ಣಿನ ಗಣಪನ ಮೊರೆ ಹೋಗಿದ್ದಾರೆ. ಸಿನಿಮಾದಲ್ಲಿ ಸಂದೇಶ ಕೊಡೋದಲ್ಲದೆ ನಿಜ ಜೀವನದಲ್ಲೂ ಫ್ಯಾನ್ಸ್ ಗೆ ಮಾದರಿಯಾಗೋ ಕೆಲಸ ಮಾಡ್ತಿದ್ದಾರೆ ಕನ್ನಡ ಸ್ಟಾರ್ಸ್.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್