ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾ ಬಿಡುಗಡೆಗೆ 30 ವರ್ಷಗಳ ಸವಿ ನೆನಪು!

ಎಸ್‌ಪಿಬಿ-ಹಂಸಲೇಖರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ

111 (17)

ಬೆಂಗಳೂರು: ಕನ್ನಡ ಚಿತ್ರರಂಗದ ಅಪೂರ್ವ ಕೃತಿಗಳಲ್ಲಿ ಒಂದಾದ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರವು ಬಿಡುಗಡೆಯಾಗಿ ಇಂದಿಗೆ (ಸೆಪ್ಟೆಂಬರ್ 6, 2025) 30 ವರ್ಷಗಳು ಕಳೆದಿವೆ. 1995ರಲ್ಲಿ ತೆರೆಕಂಡ ಈ ಚಿತ್ರವು ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ. ಈ ಚಿತ್ರದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಜನಪ್ರಿಯವಾಗಿದ್ದು, ಕರ್ನಾಟಕದ ದೇವಾಲಯಗಳಲ್ಲಿ ಮತ್ತು ಮಠಗಳಲ್ಲಿ ನೀಡು ಶಿವ ನೀಡದಿರು ಶಿವ ಹಾಡು ಭಕ್ತಿಯ ಸಂಕೇತವಾಗಿ ಗುಂಗುತ್ತಿದೆ.

ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳನ್ನು ತಂದಿತು. ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಈ ಚಿತ್ರದ ಗಾಯನಕ್ಕಾಗಿ ಮೊದಲ ಬಾರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು, ಜೊತೆಗೆ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೂ ಈ ಚಿತ್ರದ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿತು. ಇದರ ಜೊತೆಗೆ, ಚಿತ್ರದ ನಿರ್ದೇಶಕ ಎಂ.ಎಸ್. ರಾಜಶೇಖರ್ ಅವರಿಗೆ ಅಳಿಲು ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಲಭಿಸಿತು.

ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಯಶಸ್ಸಿನ ಹಿಂದೆ ಹಂಸಲೇಖ ಅವರ ಸಂಗೀತದ ಮಾಂತ್ರಿಕತೆ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದ ಹಾಡುಗಳು ಕನ್ನಡಿಗರಿಗೆ ಶಾಶ್ವತ ಸಂಗೀತ ಕೊಡುಗೆಯಾಗಿದ್ದು, ಇಂದಿಗೂ ಆ ಹಾಡುಗಳು ಜನರ ಮನದಲ್ಲಿ ತಾಜಾವಾಗಿವೆ. ಚಿತ್ರದ ನಿರ್ಮಾಪಕಿ ಪದ್ಮಶ್ರೀ ಚಿಂದೊಡಿ ಲೀಲಾ, ಲೋಕೇಶ್, ಗಿರೀಶ್ ಕಾರ್ನಾಡ್, ಶ್ರೀನಾಥ್ ಸೇರಿದಂತೆ ತಾರಾಬಳಗ, ಮತ್ತು ತಂತ್ರಜ್ಞರ ಕೊಡುಗೆ ಈ ಚಿತ್ರವನ್ನು ಅಮರಗೀತೆಯಾಗಿಸಿದೆ.

30ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ, ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಹಂಸಲೇಖ ಅವರಿಗೆ ಗೌರವ ಸಲ್ಲಿಸಲಾಗಿದೆ. ಚಿತ್ರದ ಯಶಸ್ಸಿಗೆ ಕಾರಣರಾದ ಕನ್ನಡಿಗರೆಲ್ಲರಿಗೂ, ಚಿತ್ರರಂಗದ ಕಲಾವಿದರಿಗೆ, ಮತ್ತು ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಿರ್ದೇಶಕ ಚಿಂದೋಡಿ ಬಂಗಾರೇಶ್ ತಿಳಿಸಿದ್ದಾರೆ. ಗಾನಯೋಗಿ ಕನ್ನಡ ಚಿತ್ರರಂಗದ ಒಂದು ಶಾಶ್ವತ ಮೈಲಿಗಲ್ಲಾಗಿ ಉಳಿದಿದೆ.

Exit mobile version