ರಣ್ವೀರ್ ಜಸ್ಕಿರತ್ ಹಿಂದಿನ ರಿಯಲ್ ಹೀರೋ ಯಾರು ?

ಅಜಿತ್ ದೋವಲ್ ಪಾತ್ರದಲ್ಲಿ ಆರ್ ಮಾಧವನ್ ಮಿಂಚು

Untitled design 2026 03 21T211041.246

ಧುರಂಧರ್ ಚಿತ್ರದ ಹೀರೋ ರಣ್ವೀರ್ ಸಿಂಗ್ ಮಾಡಿರೋ ರಿಯಲ್ ಹೀರೋ ಜಸ್ಕಿರತ್ ಸಿಂಗ್ ರಂಗಿ ಅಸಲಿಗೆ ಯಾರು..? ಪಂಜಾಬ್‌ನ ಸಿಖ್ ಸಮುದಾಯ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿರೋದು ಏಕೆ..? ಸಾರಾ ಅರ್ಜುನ್ ಬಾಲನಟಿಯಾಗಿ ಮಿಂಚಿದ್ದು ಯಾರೊಟ್ಟಿಗೆ..? ಮಾಧವನ್ ಹಿಂದಿರೋ IB ಡೈರೆಕ್ಟರ್ ಅಜಿತ್ ದೋವಲ್ ಕಥೆ ಏನು ಅನ್ನೋ ಧುರಂಧರ್ ಕಹಾನಿಗಳ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ರಣ್ವೀರ್ ಜಸ್ಕಿರತ್ ಹಿಂದಿನ ರಿಯಲ್ ಹೀರೋ ಯಾರು?

ಅಶೋಕ ಚಕ್ರ ವೀರ ಮೋಹಿತ್ ಶರ್ಮಾ ಬಯೋಗ್ರಫಿ..?!

ಧುರಂಧರ್‌‌ ಚಿತ್ರಗಳಲ್ಲಿ ರಣ್ವೀರ್ ಸಿಂಗ್ ಎರಡು ಶೇಡ್‌‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನಿಗರಿಗೆ ಆತ ಹಮ್ಜಾ ಆಲಿ ಮಝಾರಿ. ಆದ್ರೆ ಭಾರತೀಯರ ಪಾಲಿಗೆ ಆತ ಇಂಡಿಯಾದ ಸ್ಪೈ ಏಜೆಂಟ್ ಜಸ್ಕಿರತ್ ಸಿಂಗ್ ರಂಗಿ. ಆದ್ರೆ ಆ ಜಸ್ಕಿರತ್ ಹಿಂದಿನ ಅಸಲಿ ರಿಯಲ್ ಹೀರೋ ಯಾರು ಅಂತ ಹುಡುಕಿದ್ರೆ ಅಶೋಕ ಚಕ್ರ ವೀರ ಮೋಹಿತ್ ಶರ್ಮಾ ಎನ್ನಲಾಗ್ತಿದೆ. ಈ ಕುರಿತು ಮೋಹಿತ್ ಶರ್ಮಾರ ಕುಟುಂಬ ಕೂಡ ಡೆಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಚಿತ್ರತಂಡ ಅಲ್ಲ ಅಲ್ಲ ಅವರಿಗೂ ಈ ಪಾತ್ರಕ್ಕೂ ಸಂಬಂಧವಿಲ್ಲ ಎಂದಿದೆ.

ನಾಯಕನಟ ಇಲ್ಲಿ ಆರ್ಮಿ ಆಫೀಸರ್ ಮಗನೇ ಅಂತ ತೋರಿಸಲಾಗಿದ್ದು, ಆತನಿಗೆ ಈ ದೇಶದ ವ್ಯವಸ್ಥೆ ಅನ್ಯಾಯ ಮಾಡಿದ್ರೂ ಸಹ, ಆತ ಮಾತ್ರ ದೇಶಸೇವೆಗೆ ತನ್ನನ್ನ ತಾನು ಅರ್ಪಿಸಿಕೊಳ್ಳುತ್ತಾನೆ. ಆತನ ಸೇಡು, ರಿವೆಂಜ್ ಪಾಕಿಸ್ತಾನದಲ್ಲಿರೋ ಟೆರರಿಸ್ಟ್‌ಗಳು ಹಾಗೂ ಆ ಟೆರರಿಸಂಗೆ ಸಾಥ್ ಕೊಡೋ ವ್ಯಕ್ತಿಗಳು ಹಾಗೂ ಸಂಘಟನೆಗಳೇ ಹೊರತು ಪಾಕಿಸ್ತಾನದ ಪ್ರಜೆಗಳಲ್ಲ ಅನ್ನೋದನ್ನ ಡಿಟೈಲ್ಡ್ ಆಗಿ ತೋರಿಸಿದ್ದಾರೆ ಡೈರೆಕ್ಟರ್ ಆಧಿತ್ಯ ಧರ್.

ಅಜಿತ್ ದೋವಲ್ ಪಾತ್ರದಲ್ಲಿ ಆರ್ ಮಾಧವನ್ ಮಿಂಚು

82ನೇ ವಯಸ್ಸಲ್ಲೂ ದೇಶಕ್ಕಾಗಿ ದುಡಿಯುತ್ತಿರೋ ಅಜಿತ್

ತಮಿಳುನಟ ಆರ್ ಮಾಧವನ್ ಮಾಡಿರೋ ಅಜಿತ್ ಸನ್ಯಾಲ್ ಪಾತ್ರ ಅಜಿತ್ ದೋವಲ್‌‌‌‌‌‌‌ರದ್ದು. ಅಂದಹಾಗೆ ಅಜಿತ್ ದೋವಲ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ, NSC ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಡಿಯಾದ ಬಿಗ್ಗೆಸ್ಟ್ ಸ್ಪೈ ಮಾಸ್ಟರ್ ಆಗಿರೋ ಅಜಿತ್ ದೋವಲ್, 82ನೇ ಇಳಿ ವಯಸ್ಸಿನಲ್ಲಿ ಕೂಡ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಅವ್ರ ದೇಶಪ್ರೇಮದ ಕೈಗನ್ನಡಿ ಆಗಿದೆ. ಹೀರೋ ಬಂದಾಗ ಸಿಗದ ಶಿಳ್ಳೆ, ಚಪ್ಪಾಳೆ ಈ ಅಜಿತ್ ಪಾತ್ರಧಾರಿ ಮಾಧವನ್‌‌ಗೆ ಸಿಗ್ತಿರೋದು ಇಂಟರೆಸ್ಟಿಂಗ್.

ಪಂಜಾಬ್ ಸಿಖ್ ಸಮುದಾಯ ಚಿತ್ರದ ವಿರುದ್ಧ ಕಿಡಿ

ಗಲ್ಫ್ ಕೋ ಆಪರೇಷನ್ ಕೌನ್ಸಿಲ್‌‌ನಿಂದ ಚಿತ್ರ ಬ್ಯಾನ್

ಪಾಕಿಸ್ತಾನದಲ್ಲಿ ಮುಗಿಬಿದ್ದು ಪೈರಸಿ ಕಾಪಿಗಳ ವೀಕ್ಷಣೆ

ಇದು ಪಾಕಿಸ್ತಾನದ ಟೆರರಿಸಂ ಮೇಲಿನ ಬಹುದೊಡ್ಡ ಜಿದ್ದಿನ ಚಿತ್ರವಾಗಿದ್ದು, ಈ ಹಿಂದಿನ ಮೊದಲ ಭಾಗ ಕೂಡ ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿತ್ತು. ಈಗಲೂ ಸೀಕ್ವೆಲ್ ಚಿತ್ರ ನಿಷೇಧಿಸಲ್ಪಟ್ಟಿದೆ. ಗರ್ಲ್ಡ್‌ ಕೋ ಆಪರೇಷನ್ ಕೌನ್ಸಿಲ್‌‌ನಿಂದ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಕೂಡ ಧುರಂಧರ್-2 ಬ್ಯಾನ್ ಆಗಿದೆ. ಆದ್ರೆ ಸಿನಿಮಾದಲ್ಲಿ ಪಾಕಿಸ್ತಾನವನ್ನ ಅಲ್ಲಿನ ವ್ಯವಸ್ಥೆಯನ್ನ ಹೇಗೆ ಬಿಂಬಿಸಿದ್ದಾರೋ ಒಮ್ಮೆ ನೋಡಲೇಬೇಕು ಅನ್ನೋ ತುಡಿತ ಅವರಲ್ಲಿ ಹೆಚ್ಚಿದೆ. ಅದೇ ಕಾರಣದಿಂದ ಮೊದಲ ಭಾಗದಂತೆ ಈ ಚಿತ್ರವನ್ನ ಕೂಡ ಪೈರಸಿ ಕಾಪಿ ಡೌನ್‌‌ಲೋಡ್ ಮಾಡಿ ಮುಗಿಬಿದ್ದು ನೋಡ್ತಿದ್ದಾರೆ ಪಾಕಿಸ್ತಾನಿಗರು. ಅದಕ್ಕೆ ವಿಡಿಯೋ ಹಾಗೂ ಸಾಮಾಜಿಕ ಪೋಸ್ಟ್‌ಗಳೇ ಸಾಕ್ಷಿ.

ಇನ್ನೂ ಈ ಸಿನಿಮಾಗೆ ನಮ್ಮ ಭಾರತದ ಪಂಜಾಬ್‌ನಲ್ಲಿ ಸಿಖ್ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾಕಂದ್ರೆ ನಾಯಕನಟ ಜಸ್ಕಿರತ್‌ ಕುಟುಂಬ ಸಿಖ್ ರಾಜಕಾರಣಿ ಜೊತೆ ಭೂ ವಿವಾದದಲ್ಲಿ ಸಿಲುಕಿ ಹೇಗೆ ನಲುಗುತ್ತೆ ಅನ್ನೋದನ್ನ ತೋರಿಸಿದ್ದಾರೆ. ಜಸ್ಕಿರತ್ ತಂದೆಯನ್ನ ನೇಣು ಬಿಗಿದು, ಸಹೋದರಿಯರನ್ನ ಗ್ಯಾಂಗ್ ರೇಪ್ ಮಾಡುವ ದೃಶ್ಯಗಳಿವೆ. ಇದೆಲ್ಲವೂ ಸಿಖ್ ಸಮುದಾಯವನ್ನ ನೆಗೆಟೀವ್ ಆಗಿ ತೋರಿಸಲಾಗಿದೆ ಅಂತ ಪಂಜಾಬ್‌ನಲ್ಲಿ ಸಿನಿಮಾದ ವಿರುದ್ಧ ಅಲೆ ಎದ್ದಿದೆ.

ಚಿಯಾನ್ ವಿಕ್ರಮ್ ಮಗಳಾಗಿ ಸಾರಾ ಅರ್ಜುನ್ ನಟನೆ

ದೈವ ತಿರುಮಗಳ್ ವೇಳೆ ಚಿಟಪಟ ಮಾತಾಡಿದ್ದ ಪೋರಿ..!

ರಣ್ವೀರ್ ಸಿಂಗ್‌ಗೆ ನಾಯಕನಟಿಯಾಗಿ ಬಣ್ಣ ಹಚ್ಚಿರೋ ಸಾರಾ ಅರ್ಜುನ್ ಮೂಲತಃ ಮುಂಬೈ ಮೂಲದ ಬೆಡಗಿ. ಇನ್ನೂ 20 ವರ್ಷದ ಈ ಚೆಲುವೆ, ತಮ್ಮ ಸಾಮರ್ಥ್ಯಕ್ಕೂ ಮೀರಿ ಧುರಂಧರ್ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂದಹಾಗೆ ಈಕೆ 2011ರಲ್ಲೇ ತಮಿಳಿನ ವಿಕ್ರಮ್ ಜೊತೆಗಿನ ದೈವ ತಿರುಮಗಳ್ ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿ ಸೌತ್ ಮಂದಿಯ ದಿಲ್ ದೋಚಿದ್ರು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಅದಾದ ಬಳಿಕ ಸೌತ್‌ನ ಸಾಕಷ್ಟು ಚಿತ್ರಗಳಲ್ಲಿ ಸಾರಾ ನಟಿಸಿದ್ದಾರೆ. ಆದ್ರೆ ರಣ್ವೀರ್ ಪಾತ್ರಧಾರಿ ಹಮ್ಜಾ ಆಲಿ ಮಝಾರಿ ಒಬ್ಬ ಬಲೂಚಿ ಅಂತ ನಂಬಿ, ಆತನ ಪ್ರೀತಿಯಲ್ಲಿ ಬಿದ್ದು, ಅದಕ್ಕೆ ಒಂದು ಮಗು ಕೂಡ ಸಾಕ್ಷಿ ಆಗುತ್ತೆ. ಒನ್ಸ್ ಆತ ಇಂಡಿಯನ್ ಸ್ಪೈ ಏಜೆಂಟ್ ಅಂತ ತಿಳಿದ ಮೇಲೂ ಸಹ ಸತ್ಯಾ ಸತ್ಯತೆಗಳನ್ನ ಅರಿತು ಆತನ ಪರ ನಿಲ್ಲುತ್ತಾಳೆ. ಕೊನೆಗೆ ಆತ ದೇಶಕ್ಕಾಗಿ ಆಕೆಯನ್ನ ತ್ಯಾಗ ಮಾಡಬೇಕಾದ ಸ್ಥಿತಿ ಎದುರಾಗುತ್ತೆ. ಈ ಎಮೋಷನಲ್ ದೃಶ್ಯಗಳನ್ನ ಥಿಯೇಟರ್‌‌ನಲ್ಲಿ ಫೀಲ್ ಮಾಡಿದ್ರೇನೇ ಚೆಂದ.

ಒಟ್ಟಾರೆ ಈ ಎಲ್ಲಾ ಬೆಳವಣಗೆಗಳ ನಡುವೆ ಧುರಂಧರ್ ದಿ ರಿವೆಂಜ್ ದೇಶಪ್ರೇಮದ ಕಿಚ್ಚು ಹೊತ್ತಿಸಿದೆ. ಡೈರೆಕ್ಟರ್ ಆದಿತ್ಯ ಧರ್ ಮಾತ್ರ ಪ್ರೊಪಗಾಂಡ ಅಂತ ಅಂದುಕೊಳ್ಳೋರು ಅಂದುಕೊಳ್ಳಲಿ. ನನಗೆ ಮಾತ್ರ ಗೊತ್ತು ಈ ಕಥೆ ಎಲ್ಲಿಂದ ಬಂದಿದೆ ಅನ್ನೋದನ್ನ ಒಂದು ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಭಾರತ್ ಮಾತಾ ಕೀ ಜೈ ವೇದಘೋಷ ಥಿಯೇಟರ್‌ನಲ್ಲಿ ಚಿತ್ರ ವೀಕ್ಷಿಸೋರ ಬಾಯಲ್ಲಿ ಮೊಳಗಿಸಿದ್ದಾರೆ. ಭಾರತೀಯ ಚಿತ್ರರಂಗದತ್ತ ಇಡೀ ವಿಶ್ವ ಸಿನಿದುನಿಯಾ ತಿರುಗಿ ನೋಡುವಂತೆ ಮಾಡಿದ್ದಾರೆ.

 

 

 

Exit mobile version