ಇಲ್ಲಿಯವರೆಗೂ ಒಂದು ಲೆಕ್ಕ.. ಇನ್ಮೇಲೆ ಹೊಸ ಲೆಕ್ಕ. ಯೆಸ್.. ಅದಕ್ಕೆ ಕಾರಣ ರಿಲೀಸ್ ಆಗ್ತಿರೋ ಡಿವಿಲ್ ಸಿನಿಮಾ. ದಾಸ ದರ್ಶನ್ ಜೈಲೊಳಗಿದ್ರೂ ಸಹ, ಅವ್ರ ಫ್ಯಾನ್ಸ್ ಮಾತ್ರ ಡೆವಿಲ್ನ ಜಾತ್ರೆ, ಹಬ್ಬದ ರೀತಿ ಸೆಲೆಬ್ರೇಟ್ ಮಾಡ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಸೆಲೆಬ್ರೇಷನ್ ಹೇಗಿದೆ..? ವಿಜಯಲಕ್ಷ್ಮೀ ದರ್ಶನ್ ಹಾಗೂ ವಿನೀಶ್ ಸಿನಿಮಾನ ಎಲ್ಲಿ ನೋಡ್ತಾರೆ ಅನ್ನೋ ಅಪ್ಡೇಟ್ಸ್ ಜೊತೆ ಸೆಲೆಬ್ರಿಟಿಗಳ ಅಭಿಮಾನದ ನಿಜ ದರ್ಶನ ಕುರಿತು ಹೇಳ್ತೀವಿ ಈ ಸ್ಟೋರಿ ನೋಡಿ.
ಡೆವಿಲ್.. ಡೆವಿಲ್.. ಡೆವಿಲ್.. ಡಿಬಾಸ್ ದರ್ಶನ್ ನಟನೆಯ ಡೆವಿಲ್ ದರ್ಶನಕ್ಕೆ ಕೌಂಟ್ಡೌನ್ ಶುರುವಾಗಿದೆ.. ಬೆಳಗಾದ್ರೆ ಮುಂಜಾನೆ 6.30ರಿಂದಲೇ ಬೆಳ್ಳಿಪರದೆ ಆವರಿಸಿಕೊಳ್ತಾನೆ ಡೆವಿಲ್. ದರ್ಶನ್ ಸಿನಿಕರಿಯರ್ ಇಲ್ಲಿಯವರೆಗೂ ಅಷ್ಟು ಸುಲಭವಾಗಿ ಆಗಿದ್ದಲ್ಲ. ಝೀರೋ ಲೆವೆಲ್ನಿಂದ ಹೀರೋ ಆದವರು. ಸ್ಟಾರ್ ಆದವ್ರು. ಸೂಪರ್ ಸ್ಟಾರ್ ಆಗಿ ಮಿಂಚಿದವರು. ಹಾಗಾಗಿ ಈ ಹಿಂದಿನ 55 ಸಿನಿಮಾಗಳ ಲೆಕ್ಕ ಒಂದು ಆದ್ರೆ, ಇದರ ಲೆಕ್ಕ ಬೇರೇನೇ ಆಗಲಿದೆ.
ಡೆವಿಲ್ ಎಂಟ್ರಿಗೆ ಕೌಂಟ್ಡೌನ್.. ನೆಕ್ಸ್ಟ್ ಲೆವೆಲ್ ಸೆಲೆಬ್ರೇಷನ್
ಎಲ್ಲೆಲ್ಲೂ ಕಟೌಟ್, ಫ್ಲೆಕ್ಸ್ ಅಬ್ಬರ.. ಅಭಿಮಾನದ ನಿಜ ‘ದರ್ಶನ’
ಮಾಸ್ ಆಡಿಯೆನ್ಸ್ ಅಚ್ಚು ಮೆಚ್ಚಿನ ದಚ್ಚು, ಫ್ಯಾಮಿಲಿ ಆಡಿಯೆನ್ಸ್ ಮೆಚ್ಚುವ ಸಿನಿಮಾಗಳನ್ನ ಮಾಡ್ತಿರೋ ಮಾಸ್ಟರ್ಮೈಂಡ್ ಪ್ರಕಾಶ್ ವೀರ್ ಕಾಂಬೋನ ಸಿನಿಮಾ ಈ ಡೆವಿಲ್. ಹಾಗಾಗಿ ಈ ಬಾರಿ ಫ್ಯಾನ್ಸ್, ಮಾಸ್ ಆಡಿಯೆನ್ಸ್ ಜೊತೆಗೆ ಫ್ಯಾಮಿಲಿ ಆಡಿಯೆನ್ಸ್ಗೂ ಡೆವಿಲ್ ರುಚಿಸಲಿದೆ. ಅದ್ಭುತ ಕಥೆ, ಅತ್ಯದ್ಭುತ ಮೇಕಿಂಗ್ ಹಾಗೂ ಬಹುದೊಡ್ಡ ತಾರಾಗಣದಿಂದ ಕಲರ್ಫುಲ್ ಆಗಿ ಕಾಣ್ತಿರೋ ಡೆವಿಲ್ ಸ್ಯಾಂಪಲ್ಸ್, ನೋಡುಗರಿಗೆ ಹೊಸ ಫೀಲ್ ಕೊಡಲಿದೆ.
ದರ್ಶನ್ಗೆ ಕೊಂಚ ಬ್ಯಾಡ್ ಟೈಂ.. ಸದ್ಯ ಪರಪ್ಪನ ಅಗ್ರಹಾರದ ಜೈಲಲ್ಲಿದ್ದಾರೆ. ಬಾಸ್ ನೀವು ಎಲ್ಲಿದ್ರೆ ಏನಂತೆ.. ಡೆವಿಲ್ ಗೆಲ್ಲಿಸೋದು ನಮ್ಮ ಕರ್ತವ್ಯ ಅಂತ ಇಡೀ ಡಿಬಾಸ್ ಅಭಿಮಾನಿಗಳು ಟೊಂಕ ಕಟ್ಟಿ ಪ್ರಮೋಷನ್ಸ್ಗೆ ನಿಂತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಎಲ್ಲಾ 31 ಜಿಲ್ಲೆಗಳಲ್ಲಿ ಸೆಲೆಬ್ರೇಷನ್ ನೆಕ್ಸ್ಟ್ ಲೆವೆಲ್ಗಿದೆ. ದರ್ಶನ್ ಸೆಲೆಬ್ರಿಟಿಗಳೆಲ್ಲಾ ಹಿಂದೆಂದೂ ಯಾರೂ ಮಾಡಿರದಂತಹ ಸಂಭ್ರಮಾಚರಣೆ ಮಾಡೋ ಮೂಲಕ ಡೆವಿಲ್ನ ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದಾರೆ.
31 ಜಿಲ್ಲೆಗಳಲ್ಲೂ ಹಬ್ಬಕ್ಕಿಂತ ಜೋರು.. ಜಾತ್ರೆಯಂತೆ ದರ್ಬಾರು
ಮುಂಜಾನೆ 6.30ಕ್ಕೆ ಸೆಲೆಬ್ರಿಟೀಸ್ ಜೊತೆ ವಿಜಿ ದರ್ಶನ್ ವೀಕ್ಷಣೆ
ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ ಬಳಿ ಜಸ್ಟ್ ಥಿಯೇಟರ್ಗಷ್ಟೇ ಅಲ್ಲ, ಅಲ್ಲಿನ ಬೀದಿಗಳಿಗೂ ವಿಶೇಷ ಲೈಟಿಂಗ್ಸ್ ಮಾಡಿಸಲಾಗಿದೆ. ಒಂದ್ಕಡೆ ದರ್ಶನ್ ಭಾವಚಿತ್ರ ಹೊತ್ತು ಜೋಡೆತ್ತು ಮೆರವಣಿಗೆ ಬರ್ತಿರೋ ದೃಶ್ಯ ನೋಡೋಕೆ ಮಜಾ ಕೊಡ್ತಿದೆ. ಡಿಸಿಎಂ ತವರು ಕನಕಪುರದಲ್ಲಿ ಕೂಡ ಡೆವಿಲ್ ಅಬ್ಬರ ಜೋರಿದ್ದು, ಉತ್ಸವದ ರೀತಿ ಸಂಭ್ರಮಿಸ್ತಿದ್ದಾರೆ. ಬಾಗಲಕೋಟೆಯಲ್ಲಿ ಕೂಡ ದಚ್ಚು ಡೆವಿಲ್ ಕೋಟೆ ನೋಡಿದ್ರೆ ನೀವು ಶಾಕ್ ಆಗ್ತೀರಾ.
ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ದಾವಣಗೆರೆಯಲ್ಲೆಲ್ಲಾ ಥಿಯೇಟರ್ಗಳ ಮುಂದೆ ಮುಗಿಲೆತ್ತರಕ್ಕೆ ತಲೆ ಎತ್ತಿವೆ ಡೆವಿಲ್ ಕಟೌಟ್ಸ್. ಇನ್ನು ರೇಣುಕಾಸ್ವಾಮಿ ಊರಾದ ಚಿತ್ರದುರ್ಗದಲ್ಲಿ ಸಹ ದರ್ಶನ್ ಅಭಿಮಾನಿಗಳು ಭರ್ಜರಿ ಪ್ರಮೋಷನ್ಸ್ ಮಾಡ್ತಿದ್ದಾರೆ. ಥಿಯೇಟರ್ಗಳ ಬಳಿ ಫ್ಲೆಕ್ಸ್, ಬ್ಯಾನರ್, ಕಟೌಟ್ಗಳಿಂದ ಅಭಿಮಾನ ವ್ಯಕ್ತಪಡಿಸ್ತಿದ್ದಾರೆ. ಕರ್ಪೂರದಾರತಿ ಬೆಳಗಿ, ಪಟಾಕಿ ಸಿಡಿಸಿ, ಹಾಲಿನ ಅಭಿಷೇಕದೊಂದಿಗೆ ವೆಲ್ಕಮ್ ಹೇಳಲಾಗ್ತಿದೆ.
ಚಿಕ್ಕಬಾಣಾವರದ ಅಶೋಕ ಥಿಯೇಟರ್, ಆನೇಕಲ್, ಅತ್ತಿಬೆಲೆ, ನವರಂಗ್ ಥಿಯೇಟರ್, ಚಾಮರಾಜನಗರ, ಗುಂಡ್ಲುಪೇಟೆ, ಮಂಡ್ಯ ಹೀಗೆ ಎಲ್ಲೆಲ್ಲೂ ಡೆವಿಲ್ ಹಬ್ಬ. ಸುಮಾ ಥಿಯೇಟರ್ ಅಂತೂ ಡೆವಿಲ್ ಫ್ಲೆಕ್ಸ್ ಹೊದಿಕೆಗಳಿಂದ ತುಂಬಿ ಹೋಗಿದೆ. ಅಭಿಮಾನಿಯ ಕಾರ್ ಮೇಲೆ ಡೆವಿಲ್ ಪೋಸ್ಟರ್ಗಳ ಜಗಮಗಿಸುತ್ತಿರೋದು ಇಂಟರೆಸ್ಟಿಂಗ್. ಇನ್ನು ಮೈಸೂರಿನಲ್ಲಿ ದಾಸನ ಡೈ ಹಾರ್ಡ್ ಫ್ಯಾನ್ಸ್ ಸ್ಟಾರ್ಗಳನ್ನ ಕಟ್ಟಿ, ತೂಗುದೀಪ ಶ್ರೀನಿವಾಸ್ ಸರ್ಕಲ್ ಸೇರಿದಂತೆ ಸಿಟಿ ಪೂರ ರೌಂಡ್ಸ್ ಹೊಡೆದು, ಡೆವಿಲ್ ಪ್ರಚಾರವನ್ನು ಅದ್ದೂರಿಯಾಗಿ ಮಾಡಿದ್ದಾರೆ.
ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್..!
ಒಳಗಿನಿಂದಲೇ ಹೊರಗಿರೋ ಫ್ಯಾನ್ಸ್ಗೆ ದಾಸನ ಧೈರ್ಯ
ನಾಳೆ ಅಭಿಮಾನಿಗಳ ಜೊತೆ ಫಸ್ಟ್ ಡೇ ಫಸ್ಟ್ ಶೋ ನೋಡ್ತಿರೋ ವಿಜಯಲಕ್ಷ್ಮೀ ದರ್ಶನ್, ಪೋಸ್ಟ್ ಮೂಲಕ ಅದನ್ನ ಕಾತರಿಪಡಿಸಿದ್ದಾರೆ. ನರ್ತಕಿ ಥಿಯೇಟರ್ನಲ್ಲಿ ಬೆಳಗ್ಗೆ 6.30ರ ಶೋ ನೋಡೋದಾಗಿ ಅಪ್ಡೇಟ್ ಮಾಡಿದ್ದಾರೆ. ಅಲ್ಲದೆ, ಜೈಲಿನಿಂದಲೇ ಪ್ರೀತಿಯಿಂದ ಸೆಲೆಬ್ರಿಟಿಗಳಿಗೆ ದರ್ಶನ್ ಒಂದು ಪತ್ರ ಬರೆದು, ಅವ್ರ ಅಭಿಮಾನಕ್ಕೆ ಪ್ರೀತಿ, ಗೌರವ ತೋರಿದ್ದಾರೆ.
ಅಲ್ಲದೆ, ಆ ಪತ್ರದಲ್ಲಿ ಜನ ಏನು ಅಂದ್ಕೋತಾರೆ ಅನ್ನೋದಕ್ಕೆ ತಲೆ ಕೆಡಿಸಿಕೋಬೇಡಿ. ಯಾವುದೇ ರೀತಿಯ ವದಂತಿಗಳಿಗೆ ಕಿವಿ ಕೊಡಬೇಡಿ. ನಿಮ್ಮನ್ನ ಭೇಟಿ ಆಗುವ ಆ ದಿನಕ್ಕೆ ತುಂಬಾ ಕಾತರನಾಗಿದ್ದೇನೆ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಅನ್ನೋದನ್ನ ಒಳಗಿನಿಂದಲೇ ಹೊರಗಿರೋ ಫ್ಯಾನ್ಸ್ಗೆ ಹೇಳಿದ್ದಾರೆ ದರ್ಶನ್. ಅದೇನೇ ಇರಲಿ, ಕೊಲೆ ಬೇರೆ, ಕಲೆ ಬೇರೆ. ಡೆವಿಲ್ ಅನ್ನೋ ಸಿನಿಮಾ ಆಗೋಕೆ ಸಾವಿರಾರು ಮಂದಿಯ ಶ್ರಮವಿದೆ. ಆ ಶ್ರಮ ವ್ಯರ್ಥ ಆಗಬಾರದು ಅನ್ನೋದು ನಮ್ಮ ಆಶಯ.