ದಚ್ಚು ಕಂಪ್ಲೀಟ್ ದೈವಭಕ್ತ.. ‘ಹೊಸ ಬೆಳಕು’ ಮೂಡುತಿದೆ

ಕೇರಳದ ಕೊಟ್ಟಿಯೂರು ಮಹಾದೇವನಿಗೆ ದಾಸ ಮೊರೆ..!

Add a heading (6)

ಪ್ರತಿಯೊಬ್ಬರ ಲೈಫ್‌ನಲ್ಲೂ ಒಂದೊಂದು ಮೇಜರ್ ಟರ್ನಿಂಗ್ ಪಾಯಿಂಟ್ ಅನ್ನೋದು ಇರುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅದ್ರಿಂದ ಹೊರತಾಗಿಲ್ಲ. ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ಹತ್ಯೆಯ ನಂತರ ಅಂತ ದಚ್ಚು ಜೀವನವನ್ನು ವಿಭಾಗಿಸಿ ನೋಡುವ ಪರಿಸ್ಥಿತಿ ಬಂದಿದೆ. ಇತ್ತೀಚೆಗಂತೂ ದಾಸ ಸಖತ್ ಬದಲಾಗಿದ್ದಾರೆ. ದೊಡ್ಡ ದೈವಭಕ್ತನಾಗಿಬಿಟ್ಟಿದ್ದಾರೆ.

ದೇವರು ಅಂದ್ರೆ ನಂಬಿಕೆ.. ದೇವರು ಅಂದ್ರೆ ನೆಮ್ಮದಿ.. ದೇವರು ಅಂದ್ರೆ ಪಾಸಿಟಿವಿಟಿ.. ದೇವರು ಅಂದ್ರೆ ಧೈರ್ಯ.. ಅದೇ ಕಾರಣದಿಂದ ಕಾಣದ, ಕಲ್ಲು ಮಣ್ಣುಗಳ ಗುಡಿಯೊಳಗಿಹ ದೇವರನ್ನ ಸಾಕಷ್ಟು ಮಂದಿ ಹುಡುಕಿ ಹೊರಡುತ್ತಾರೆ. ಆತ ಆಶೀರ್ವದಿಸುತ್ತಾನೆ, ಆಕೆ ಪಾಪಗಳನ್ನ ಪರಿಹರಿಸುತ್ತಾಳೆ, ಕಷ್ಟಗಳಿಗೆ ಮುಕ್ತಿ ಸಿಗಲಿದೆ ಅಂತ ಭಕ್ತಿಯ ಹೆಸರಲ್ಲಿ ಜನ ದೈವದ ಮೊರೆ ಹೋಗ್ತಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದ್ರಿಂದ ಹೊರತಾಗಿಲ್ಲ.

ADVERTISEMENT
ADVERTISEMENT

ದರ್ಶನ್ ಲೈಫ್‌ನ ಎರಡು ಭಾಗಗಳಲ್ಲಿ ವಿಭಜಿಸಿ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ಹೌದು.. ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ರೇಣುಕಾಸ್ವಾಮಿ ಹತ್ಯೆಯ ನಂತರ ಅಂತ ಎರಡು ಆ್ಯಂಗಲ್ಸ್‌‌ನಲ್ಲಿ ನೋಡಬೇಕಾಗಿದೆ. ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡ್ತಾ, ಬಾಕ್ಸ್ ಆಫೀಸ್ ಸುಲ್ತಾನನಾಗಿ, ಕೋಟ್ಯಂತರ ಆರಾಧಿಸೋ ಅಭಿಮಾನಿಗಳ ಒಡೆಯನಾಗಿ ರಾರಾಜಿಸ್ತಿದ್ದ ದರ್ಶನ್‌ಗೆ ಒಂಥರಾ ಒಳ್ಳೆಯ ಪಾಠವಾಗಿದೆ.

ಯೆಸ್.. ಎವೆರಿಥಿಂಗ್ ಈಸ್ ಫಾರ್ ಎ ರೀಸನ್ ಅನ್ನುವಂತೆ ರೇಣುಕಾಸ್ವಾಮಿ ಸಾವು, ಅದ್ರಿಂದ ದರ್ಶನ್‌ಗೆ ಅಂಟಿದ ಕಳಂಕ ಇಡೀ ದಾಸನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿದೆ. ನಿಜಕ್ಕೂ ಇದೆಲ್ಲಾ ಬೇಕಿತ್ತಾ ಅಂತ ಸ್ವತಃ ದರ್ಶನ್‌ಗೇ ಅನಿಸಿಬಿಟ್ಟಿದೆ. ಅದೇ ಕಾರಣದಿಂದ ಮೆಡಿಕಲ್ ಬೇಲ್‌ ಮೇಲೆ ಹೊರಬಂದಿರೋ ದಚ್ಚು, ರೆಗ್ಯುಲರ್ ಬೇಲ್ ಕೂಡ ಪಡೆದರು. ತಾನಾಯ್ತು, ತನ್ನ ಕುಟುಂಬವಾಯ್ತು ಅಂತ ಶೂಟಿಂಗ್ ಮಾಡ್ತಾ ಜೀವನ ಸಾಗಿಸ್ತಾ ಇದ್ದಾರೆ.

ದರ್ಶನ್ ಆಪ್ತರ ಬಳಗ ಕೂಡ ಮಿತಗೊಂಡಿದೆ. ಶಿಸ್ತು, ಸಂಯಮ, ತಾಳ್ಮೆಗಳಿಂದ ತನ್ನನ್ನ ತಾವು ಆತ್ಮಾವಲೋಕನ ಮಾಡಿಕೊಂಡಂತಿದೆ ದಚ್ಚು. ಅದೇ ಕಾರಣದಿಂದ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಮುಗಿಸಿ, ಮತ್ತೆ ಟೆಂಪಲ್ ರನ್ ಶುರು ಮಾಡಿದ್ದಾರೆ ದಾಸ. ಯೆಸ್.. ಈ ಹಿಂದೆ ಕೇರಳದ ಮಡಾಯಿಕಾವು ಭಗವತಿ ಟೆಂಪಲ್‌‌ನಲ್ಲಿ ಶತ್ರು ಸಂಹಾರ ಪೂಜೆ ನಡೆಸಿದ್ದ ದರ್ಶನ್, ಇದೀಗ ಮಗದೊಮ್ಮೆ ಕೇರಳದಲ್ಲಿರೋ ಪ್ರಸಿದ್ಧ ಶಿವನ ಆಲಯಕ್ಕೆ ಭೇಟಿ ನೀಡಿದ್ದಾರೆ.

ಕೇರಳದ ಕೊಟ್ಟಿಯೂರು ಮಹಾದೇವನ ಮೊರೆ ಹೋಗಿರೋ ದಾಸ, ಎಲ್ಲಾ ಪಾಪ ಪುಣ್ಯಗಳ ಲೆಕ್ಕವನ್ನು ಆ ಪರಮಾತ್ಮನಿಗೆ ಒಪ್ಪಿಸಿ ಬಂದಿದ್ದಾರೆ. ಅದಕ್ಕೆ ಡಿಬಾಸ್ ಆಪ್ತ ಗೆಳೆಯ ಧನ್ವೀರ್ ಗೌಡ, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಕೂಡ ಸಾಥ್ ನೀಡಿದ್ದಾರೆ. ಈ ಹಿಂದೆ ಮಡಾಯಿಕಾವು ಆಲಯಕ್ಕೆ ದಚ್ಚು ಭೇಟಿ ನೀಡಿದ ಬಳಿಕ ಅಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಇಲ್ಲಿಗೂ ಸಹ ಮುಂದಿನ ದಿನಗಳಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಅಂದಹಾಗೆ ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ ಸಿನಿಮಾದ ಟಾಕಿ ಮುಕ್ತಾಯವಾಗಿದೆ. ಸಾಂಗ್ಸ್ ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ಬಾಕಿ ಉಳಿದಿದ್ದು, ಸ್ಟಂಟ್ಸ್ ಶುರು ಮಾಡೋಕೆ ಮುನ್ನ ತನಗಿರೋ ಬೆನ್ನು ನೋವಿನಿಂದ ಮತ್ತೆ ಎಡವಟ್ ಆಗದಿರಲಿ ಅಂತ ಶಿವನ ಮೊರೆ ಹೋಗಿದ್ದಾರೆ ದರ್ಶನ್. ಅಲ್ಲದೆ, ರೆಬೆಲ್ ಸ್ಟಾರ್ ಅಂಬರೀಶ್‌ರ ಕನ್ವರ್‌‌ಲಾಲ್ನ ಹೋಲುವ ದಚ್ಚು ಲುಕ್ ಸಖತ್ ಕಿಕ್ ಕೊಡ್ತಿದೆ. ಅದಕ್ಕಿಂತ ಹೆಚ್ಚಾಗಿ ದರ್ಶನ್ ಹಾಡಿದ್ದ ಹೊಸ ಬೆಳಕು ಮೂಡುತಿದೆ ಹಾಡು ಎಲ್ಲೆಡೆ ವೈರಲ್ ಆಗ್ತಿದೆ. ಅಕ್ಷರಶಃ ದಾಸನ ಬಾಳಲ್ಲಿ ಹೊಸ ಮನ್ವಂತರ ಶುರುವಾದಂತಿದೆ.

Exit mobile version