ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಸುಬ್ಬ-ಸುಬ್ಬಿ. ಆದ್ರೀಗ ಸಮಯ ಹಾಗೂ ತಾಳ್ಮೆಯ ಸೀಕ್ರೆಟ್ ಬಿಚ್ಚಿಟ್ಟಿರೋ ಪವಿತ್ರಾ ಗೌಡ, ದೊಡ್ಡದಾಗಿ ಏನೋ ಸಿಗ್ನಲ್ ನೀಡಿದ್ದಾರೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ದಚ್ಚು ಗೆಳತಿ ಸಿಗ್ನಲ್.. ಏನಿದು ಸಮಯ, ತಾಳ್ಮೆ ಸೀಕ್ರೆಟ್.. ?
- ಕೋರ್ಟ್ನಲ್ಲಿ ಸುಬ್ಬ- ಸುಬ್ಬಿ ನಡುವೆ ಸಂಥಿಂಗ್ ಸಂಥಿಂಗ್
- ಲಿಫ್ಟ್ನಲ್ಲಿ ನಂಬರ್ ಎಕ್ಸ್ಚೇಂಜ್..? ಮೌನ ಮುರಿದ ಪವಿತ್ರಾ
- ನಿಲ್ಲುವಂತಿಲ್ಲ ಜಡೆ ಜಗಳ.. ಹೈರಾಣಾಗದಿರಲಿ ದಚ್ಚು ಲೈಫ್..!
ಗಜ ಸಿನಿಮಾದ ಮಾತು ನನ್ನೋಳು, ಮೌನಾನು ನನ್ನೋಳು ಅನ್ನೋ ದರ್ಶನ್ ಹಾಡು ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿಯವರೆಗೂ ಮೌನವ್ರತ ಪಾಠಿಸ್ತಿದ್ದ ಡಿಬಾಸ್ ದರ್ಶನ್ರ ಆಪ್ತ ಗೆಳತಿ ಪವಿತ್ರಾ ಗೌಡ, ಇದ್ದಕ್ಕಿದ್ದಂತೆ ಮೌನ ಮುರಿದಿದ್ದಾರೆ. ಇನ್ಸ್ಟಾದಲ್ಲಿ ಫೋಟೋ ಸಮೇತ ದೊಡ್ಡದಾಗಿ ಸಿಗ್ನಲ್ ನೀಡಿದ್ದಾರೆ.
ಅಂದಹಾಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದಾಗಿ ಜೈಲು ಸೇರಿದ ದರ್ಶನ್ ಹಾಗೂ ಪವಿತ್ರಾ, ಅದಾದ ಬಳಿಕ ಭೇಟಿ ಆದ ನಿದರ್ಶನವೇ ಇಲ್ಲ. ಅಲ್ಲದೆ, ನಿನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ಅರ್ಥದಲ್ಲಿ ಪವಿತ್ರಾ ಸಹವಾಸವೇ ಸಾಕು ಅಂತ ಪರಪ್ಪನ ಅಗ್ರಹಾರದಲ್ಲೂ ಕೂಡ ದರ್ಶನ್ ಆಕೆಯತ್ತ ಮುಖ ಎತ್ತಿ ಕೂಡ ನೋಡಿರಲಿಲ್ಲ. ಕೋರ್ಟ್ಗೆ ಹಾಜರಾದಾಗಲೂ ಮುಖ ಕೂಡ ನೋಡದೆ ಆಕೆಯನ್ನ ಅವಾಯ್ಡ್ ಮಾಡ್ತಿದ್ರು ದಾಸ ದರ್ಶನ್.
ಕುಂಭಮೇಳ, ಟೆಂಪಲ್ ರನ್ ಅಂತ ಬ್ಯುಸಿಯಾಗಿದ್ದ ಪವಿತ್ರಾ ಗೌಡ, ದರ್ಶನ್ ನಂಬರ್ ಕೂಡ ಇಲ್ಲದೆ ಗೆಳೆಯನಿಗಾಗಿ ಹಂಬಲಿಸುತ್ತಿದ್ದರು ಅನಿಸುತ್ತೆ. ಆದ್ರೆ ಯಾವಾಗ ನಂಬರ್ ಸಿಕ್ತೋ, ಈಗ ನಿರಾಳಗೊಂಡಿದ್ದಾರೆ. ತಾಳ್ಮೆಯೇ ಎಲ್ಲಕ್ಕೂ ಉತ್ತರ ಅಂತ ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು ಅನ್ನೋ ಅರ್ಥದಲ್ಲಿ ಖುಷಿಯಿಂದ ಪಾಸಿಟಿವ್ ಆಗಿ ಪೋಸ್ಟ್ ಹಾಕಿಕೊಂಡಿದ್ದಾರೆ.