ರೇಣುಕಾಸ್ವಾಮಿ ಕೊ*ಲೆ ಕೇಸ್: ನಟ ದರ್ಶನ್ ಬೇಲ್‌ ಅರ್ಜಿ ವಿಚಾರಣೆ ಮೇ.14 ಕ್ಕೆ ಮುಂದೂಡಿಕೆ

Untitled design 2025 04 22t162102.281

ಸುಪ್ರೀಂ ಕೋರ್ಟ್‌ನಲ್ಲಿ ಇಂದು (ಏಪ್ರಿಲ್ 22) ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ನಟ ದರ್ಶನ್‌ಗೆ (Darshan) ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸುವ ಮನವಿಯ ವಿಚಾರಣೆ ನಡೆದಿದೆ. ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದ್ದರೆ, ದರ್ಶನ್ ಪರ ವಕೀಲ ಮನು ಸಿಂಘ್ವಿ ಪ್ರತಿವಾದ ಮಾಡಿದ್ದಾರೆ. 73 ನಿಮಿಷಗಳ ವಾದ-ಪ್ರತಿವಾದದ ನಂತರ, ಸುಪ್ರೀಂ ಕೋರ್ಟ್ ಮೇ 14ರಂದು ಮತ್ತೊಮ್ಮೆ ವಿಚಾರಣೆಗೆ ಮುಂದೂಡಿದೆ.

ಸರ್ಕಾರದ ಪರ ವಕೀಲರ ವಾದ

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ನಡೆಸಿದರು. ಅವರು ರೇಣುಕಾಸ್ವಾಮಿ ಹತ್ಯೆಯ ಕ್ರೂರತೆಯನ್ನು ವಿವರಿಸುತ್ತಾ, “ದೇಹದ ಹಲವೆಡೆ ಮರ್ಮಾಂಗಕ್ಕೆ ಗಾಯಗಳಾಗಿವೆ. ರಕ್ತ ಸುರಿದಿದೆ, ಹೆಪ್ಪುಗಟ್ಟಿದೆ. ವಿದ್ಯುತ್ ಶಾಕ್ ನೀಡಲಾಗಿದೆ. ದೇಹದ ಕೆಲವು ಭಾಗಗಳನ್ನು ಪ್ರಾಣಿಗಳು ತಿಂದಿವೆ. ಈ ಎಲ್ಲವೂ ಅತ್ಯಂತ ಕ್ರೂರ ಮತ್ತು ಘೋರ ಕೃತ್ಯವೆಂದು ಸಾಬೀತುಪಡಿಸುತ್ತದೆ” ಎಂದರು.

ADVERTISEMENT
ADVERTISEMENT
ದರ್ಶನ್ ಪರ ವಕೀಲರಿಂದ ಪ್ರತಿವಾದ

ದರ್ಶನ್ ಪರ ಹಿರಿಯ ವಕೀಲ ಮನು ಸಿಂಘ್ವಿ ಮಾತನಾಡುತ್ತಾ, “ದರ್ಶನ್ ವಿರುದ್ಧ ಯಾವುದೇ ನೇರ ಸಾಕ್ಷ್ಯಗಳು ಇಲ್ಲ. ಯಾವ ಸ್ಥಳದಲ್ಲಿಯೂ ಅವರ ಪಾಲ್ಗೊಳ್ಳುವಿಕೆ ಸಾಬೀತಾಗಿಲ್ಲ. ಈಗಿರುವ 3 ಸೆಕೆಂಡ್‌ ವಿಡಿಯೋ ಕೂಡ ಸಾಕ್ಷ್ಯವಲ್ಲ ಎಂದು ಪರಿಗಣಿಸಬೇಕಾಗಿಲ್ಲ” ಎಂದು ಪ್ರತಿಪಾದಿಸಿದರು.

ಸಿಂಘ್ವಿ ತಮ್ಮ ವಾದದಲ್ಲಿ, “ನಾನು ಆ ವಿಡಿಯೋವನ್ನು ನೋಡಿಲ್ಲ. ನನ್ನ ಕ್ಲೈಂಟ್‌ನ ಮೊಬೈಲ್‌ ಫೋನ್‌ನಿಂದ ಯಾವುದೇ ಚಿತ್ರೀಕರಣ ನಡೆಯಲಿಲ್ಲ. ಅವರಿಗೂ ಹತ್ಯೆಗೆ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

ವಕೀಲ ಸಿಂಘ್ವಿ ಆರೋಪಿಸಿ, “ಐವಿಟ್‌ನೆಸ್‌ಗಳ ಹೇಳಿಕೆಗಳನ್ನು ಬಂಧನೆಯ ಮೊದಲು ಪಡೆಯದೆ, ಬಂಧಿಸಿದ ನಂತರ ದಾಖಲಿಸಲಾಗಿದೆ. ದರ್ಶನ್ ಹತ್ಯೆಯಾದ ಸ್ಥಳದ ಮಾಲೀಕರಲ್ಲ, ಅಲ್ಲಿಯ ಸಿಬ್ಬಂದಿಯೂ ಅಲ್ಲ. ಆ ಜಾಗಕ್ಕೂ ದರ್ಶನ್‌ಗೂ ಯಾವುದೇ ನೇರ ಸಂಬಂಧವಿಲ್ಲ” ಎಂದು ವಾದಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದರ್ಶನ್ ಮತ್ತು ಪವಿತ್ರಾ ಗೌಡರ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ, ಸರ್ಕಾರದ ಪರ ವಕೀಲರು “ಪವಿತ್ರಾ ಗೌಡ ದರ್ಶನ್‌ನ ಮಿಸ್ಟ್ರೆಸ್ (ಇಟ್ಟುಕೊಂಡವಳು)” ಎಂದು ಉತ್ತರಿಸಿದ್ದು, ಇದು ವಿವಾದವನ್ನು ಉಂಟುಮಾಡಿದೆ.

‘ಮಿಸ್ಟ್ರೆಸ್’ ಪದದ ವಿವರಣೆ

ಅದರಲ್ಲಿ ‘ಮಿಸ್ಟ್ರೆಸ್’ ಪದ ಬಳಕೆಯೂ ಗಮನ ಸೆಳೆದಿದ್ದು, ಇದಕ್ಕೆ ಇಂಗ್ಲಿಷ್‌ನಲ್ಲಿ ಎರಡು ಪ್ರಮುಖ ಅರ್ಥಗಳಿವೆ. ಅಧಿಕಾರದಲ್ಲಿರುವ ಅಥವಾ ದೊಡ್ಡ ಸ್ಥಾನದಲ್ಲಿರುವ ಮಹಿಳೆ. ವಿವಾಹಿತ ಪುರುಷನೊಂದಿಗೆ ದೀರ್ಘಕಾಲದ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆ

ಕನ್ನಡದಲ್ಲಿ ಈ ಪದಕ್ಕೆ ‘ಇಟ್ಟುಕೊಂಡವಳು’ ಎಂಬ ಅರ್ಥವಿದೆ. ಸುಪ್ರೀಂ ಕೋರ್ಟ್‌ ವಾದದ ಸಂದರ್ಭದಲ್ಲಿ ಇಂತಹ ಪದ ಬಳಕೆಯೇ ಚರ್ಚೆಗೆ ಕಾರಣವಾಗಿದೆ.

ಸದ್ಯದ ವಿಚಾರಣೆ ಮೇ 14ಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ತನಿಖೆ, ಸಾಕ್ಷ್ಯಸಂಗ್ರಹ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ.

Exit mobile version