ಸ್ಯಾಂಡಲ್ವುಡ್ನ ಉಪಾಧ್ಯಕ್ಷ ಚಿಕ್ಕಣ್ಣ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳಿ ಮದುವೆ ಮಂಟಪ ಏರೋಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ.ಆದ್ರೆ, ಈ ಸಂಭ್ರಮದ ನಡುವೆಯೂ ಚರ್ಚೆಯಾಗ್ತಿರೋದು ಒಂದೇ ವಿಷಯ… ಚಿಕ್ಕಣ್ಣ ಮದುವೆಗೆ ನಟ ದರ್ಶನ್ಗೆ ಆಹ್ವಾನ ಸಿಗದಿರಲು ನಿಜವಾದ ಕಾರಣವೇನು? ಮತ್ತೊಂದೆಡೆ ದರ್ಶನ್ ಕರಿಯರ್ನೇ ಮುಗಿಸಿಬಿಡೋ ಆ ಆಘಾತಕಾರಿ ‘ದೋಷ’ ಯಾವುದು..? ದರ್ಶನ್ ಭವಿಷ್ಯ ನಿಜಕ್ಕೂ ಖತಂ ಆಗುತ್ತಾ..? ಈ ಕಂಪ್ಲೀಟ್ ರೋಚಕ ಡೀಟೇಲ್ಸ್ ಹೇಳ್ತೀವಿ ಈ ಸ್ಟೋರಿ ನೋಡಿ.
- ಚಿಕ್ಕಣ್ಣ ಮದ್ವೆಗೆ ದಾಸ ದಚ್ಚುಗಿಲ್ಲ ಆಹ್ವಾನ.. ಅಸಲಿ ಕಾರಣ ರಿವೀಲ್
- ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ.. ಹೀಗಂದರೇಕೆ ಚಿಕ್ಕಣ್ಣ..?
- ಚಿಕ್ಕಣ್ಣ ಮದುವೆ ಮೇಲೂ ರೇಣುಕಾಸ್ವಾಮಿ ಕೇಸ್ ಎಫೆಕ್ಟ್ ಗುರು
- ಆಗಸ್ಟ್ 29-30ರಂದು ಮೈಸೂರಲ್ಲಿ ಚಿಕ್ಕಣ್ಣ ವೆಡ್ಸ್ ಪಾವನಾ ಗೌಡ
ಹಾಸ್ಯನಟ ಚಿಕ್ಕಣ್ಣ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಹಾಸ್ಯ ಶೈಲಿಯ ಮೂಲಕ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ, ಇದೆ ಆಗಸ್ಟ್ 29 ಮತ್ತು 30ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರು ಮೂಲದ ಉದ್ಯಮಿ ಪಾವನಾ ಗೌಡ ಅವರೊಂದಿಗೆ ಮೈಸೂರಿನ ಸ್ಪೆಕ್ಟ್ರಮ್ ಹಾಲ್ನಲ್ಲಿ ಈ ಅದ್ದೂರಿ ಕಲ್ಯಾಣ ನೆರವೇರಲಿದೆ. ಪರಿಸರ ಪ್ರೇಮಿಯಾಗಿರುವ ಪಾವನಾ ಗೌಡ ಬಯೋಡಿಗ್ರೇಡಬಲ್ ಉತ್ಪನ್ನಗಳ ಉದ್ಯಮ ನಡೆಸುತ್ತಿದ್ದು, ಹಿರಿಯರು ನಿಶ್ಚಯಿಸಿದ ಈ ಅರೇಂಜ್ಡ್ ಕಮ್ ಲವ್ ಮ್ಯಾರೇಜ್ಗೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರಿಗೆ ಈಗಾಗಲೇ ಆಹ್ವಾನ ಪತ್ರಿಕೆ ತಲುಪಿದೆ.
ಆದರೆ, ಚಿತ್ರರಂಗದ ಪ್ರತಿಯೊಬ್ಬರಿಗೂ ಆಹ್ವಾನ ನೀಡಿರೋ ಚಿಕ್ಕಣ್ಣ, ನಟ ದರ್ಶನ್ ಅವರಿಗೆ ಮಾತ್ರ ಮದುವೆ ಕಾರ್ಡ್ ನೀಡಿಲ್ಲ ಎಂಬ ವಿಚಾರ ಇದೀಗ ಗಾಂಧಿನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ ಹೀಗೇಕೆ ಮಾಡಿದ್ರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಈ ಕುರಿತು ಸ್ವತಃ ಚಿಕ್ಕಣ್ಣ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣ ಕಾನೂನುಬದ್ಧವಾಗಿ ಸಾಕ್ಷಿ ಆಗಿದ್ದಾರೆ. ಹೀಗಾಗಿ ದರ್ಶನ್ ಆಚೆ ಇದ್ದರೂ ಸಹ ಕಾನೂನಿನ ಪ್ರಕಾರ ನನ್ನ ಮದುವೆಗೆ ಅವರನ್ನು ಕರೆಯೋಕೆ ಆಗಲ್ಲ, ಅವರೂ ಬರೋಕೆ ಆಗ್ತಿರ್ಲಿಲ್ಲ. ಕೇಸ್ ಮುಗಿಸಿಕೊಂಡೇ ಅವರು ನನ್ನನ್ನು ಮೀಟ್ ಆಗಬೇಕಿದೆ. ನಾನು ವಿಟ್ನೆಸ್ ಆಗಿರುವುದರಿಂದ ಪ್ರಕರಣದ ಬಗ್ಗೆ ನಾನು ಇದಕ್ಕಿಂತ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದು ಚಿಕ್ಕಣ್ಣ ಹಂಚಿಕೊಂಡಿದ್ದಾರೆ.
- ಡಿ ಗ್ಯಾಂಗ್ ಕೇಸ್ಗೆ ಹೊಸ ಟ್ವಿಸ್ಟ್.. ಪ್ರದೋಶ್ ಬಾಯಲ್ಲಿ ದೋಷ
- ಅಪ್ರೂವರ್ ಹೇಳಿಕೆ ನಿಜವಾದ್ರೆ ಡಿಬಾಸ್ ದಚ್ಚು ಕರಿಯರ್ ಖತಂ..!
ಇನ್ನು ಪ್ರಕರಣದ ತನಿಖೆ ದಿನಕ್ಕೊಂದು ಆಘಾತಕಾರಿ ತಿರುವು ಪಡೆದುಕೊಳ್ಳುತ್ತಿದ್ದು, ನಟ ದರ್ಶನ್ ಅವರ ಭವಿಷ್ಯ ಈಗ ಪೂರ್ಣವಾಗಿ ಅಗ್ನಿಪರೀಕ್ಷೆಯಲ್ಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೂಶ್, ಇದೀಗ ಅಪ್ರೂವರ್ ಆಗಲು ಸಮ್ಮತಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, 59ನೇ ಸೆಷನ್ಸ್ ಕೋರ್ಟ್ ನ್ಯಾ. ಸುಜಾತ ಎಂ. ಸಂಬ್ರಾಣಿ ಅವರು ಈ ಅರ್ಜಿಯನ್ನು ಅಂಗೀಕರಿಸಿದ್ದಾರೆ. ಇದು ಇಡೀ ಪ್ರಕರಣಕ್ಕೇ ಬಿಗ್ ಟ್ವಿಸ್ಟ್ ನೀಡಿದೆ.
ಈ ಪ್ರಕರಣದಲ್ಲಿ ದರ್ಶನ್ ಪಾಲಿಗೆ ಪ್ರದೂಶ್ ನಿರ್ಧಾರವೇ ದೊಡ್ಡ ಆ ದೋಷವಾಗಿ ಪರಿಣಮಿಸಿದೆ. ಗ್ಯಾಂಗ್ನ ಒಳಗಿನ ಪ್ರತಿಯೊಂದು ರಹಸ್ಯ, ಸತ್ಯ ಸಂಗತಿಗಳು ಮತ್ತು ಕೃತ್ಯದ ಯೋಜನೆಯನ್ನು ಪ್ರದೂಶ್ ಈಗ ಕೋರ್ಟ್ ಎದುರು ಬಿಚ್ಚಿಡಲಿದ್ದಾರೆ. ಮಾಫಿ ಸಾಕ್ಷಿಯಾದವರು ನ್ಯಾಯಾಲಯದ ಮುಂದೆ ಸಂಪೂರ್ಣ ಸತ್ಯವನ್ನಷ್ಟೇ ನುಡಿಯಬೇಕೆಂಬ ನಿಯಮವಿದ್ದು, ಒಂದು ವೇಳೆ ಸುಳ್ಳು ಹೇಳಿಕೆ ನೀಡಿದರೆ ಮತ್ತೆ ಆರೋಪಿ ಸ್ಥಾನಕ್ಕೆ ತಳ್ಳಲ್ಪಡುತ್ತಾರೆ. ಹೀಗಾಗಿ ಪ್ರದೂಶ್ ನೀಡುವ ಪ್ರತಿಯೊಂದು ಸಾಕ್ಷ್ಯವೂ ದರ್ಶನ್ ಗ್ಯಾಂಗ್ಗೆ ಉರುಳಾಗಲಿದೆ.
ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಪ್ರದೂಶ್ ಸಾಕ್ಷಿ ನುಡಿಯಲು ಸಜ್ಜಾಗಿರುವುದರಿಂದ, ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಉಳಿದ 16 ಆರೋಪಿಗಳಿಗೆ ಕಾನೂನಿನ ಸಂಕೋಲೆ ಬಿಗಿಯಾಗಿದೆ. ಪ್ರದೂಶ್ ಬಿಚ್ಚಿಡಲಿರುವ ಈ ದೋಷದ ಸತ್ಯಗಳಿಂದ ದರ್ಶನ್ ಅವರ ಸಿನಿ ಕರಿಯರ್ ಸಂಪೂರ್ಣ ಖತಂ ಆಗುವ ಹಂತಕ್ಕೆ ಬಂದು ತಲುಪಿದೆ ಎನ್ನಲಾಗುತ್ತಿದ್ದು, ಒಟ್ಟಿನಲ್ಲಿ, ಒಂದ್ಕಡೆ ಚಿಕ್ಕಣ್ಣ ನವ ಜೀವನಕ್ಕೆ ಕಾಲಿಡ್ತಿದ್ರೆ, ಇನ್ನೊಂದ್ಕಡೆ ಕೋರ್ಟ್ ಅಂಗಳದಲ್ಲಿ ಪ್ರದೂಶ್ ಹೆಣೆದಿರೋ ಈ ಸಾಕ್ಷಿಯ ಬಲೆ ದಾಸನ ಕರಿಯರ್ಗೆ ಕಂಟಕವಾಗೋದಂತೂ ಪಕ್ಕಾ ಆಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
