ಇಂದು ‘ಬಾಸ್’ ರಿಲೀಸ್..ಡಿಬಾಸ್ ರೋಲ್‌ಗೆ ಜೀವ ತುಂಬಿದ ತನುಷ್ ಶಿವಣ್ಣ

ಬಾಸ್ ಚಿತ್ರದಲ್ಲಿ ದಾಸ ದಚ್ಚು ಎರಡೂ ಗುಣಗಳ ಅನಾವರಣ

Your paragraph text (27)

ಈ ವರ್ಷದ ಮೋಸ್ಟ್ ಕಾಂಟ್ರವರ್ಸಿಯಲ್ ಮೂವಿ. ಡಿಬಾಸ್ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಥೆ ಎನ್ನಲಾಗಿದ್ದ ಈ ಚಿತ್ರ ಇಂದು ಗ್ರ್ಯಾಂಡ್ ರಿಲೀಸ್ ಆಗಿದೆ. ಹಾಗಾದ್ರೆ ಸಿನಿಮಾದ ಅಸಲಿ ಕಥೆ ಆದ್ರೂ ಏನು..? ಈ ಬಾಸ್‌ಗೂ ಡಿಬಾಸ್‌ಗೂ ಇರೋ ಲಿಂಕ್ ಏನು..? ಚಿತ್ರಪ್ರೇಮಿಗಳು ಕೊಟ್ಟ ಮಾರ್ಕ್ಸ್ ಎಷ್ಟು..? ಬಾಸ್ ಸೀಕ್ವೆಲ್ ಬರುತ್ತಾ ಅನ್ನೋದ್ರ ಕಂಪ್ಲೀಟ್ ರಿವ್ಯೂ ಕಹಾನಿ ಇಲ್ಲಿದೆ ನೋಡಿ….

ಬಾಸ್ ಚಿತ್ರದ ಕಥಾಹಂದರ:

ಬಾಸ್.. ಹೆಸರೇ ಹೇಳುವಂತೆ ಇದು ಡಿಬಾಸ್ ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನ ಕೈಗನ್ನಡಿ. ಟೀಸರ್ ನೋಡಿ ಸೀನ್ ಟು ಸೀನ್, ಫ್ರೇಮ್ ಟು ಫ್ರೇಮ್ ಡಿ ಗ್ಯಾಂಗ್ ಕಥೆ ಎಂದಿತ್ತು ಗ್ಯಾರಂಟಿ ನ್ಯೂಸ್. ಅದೀಗ ರಿಲೀಸ್ ಬಳಿಕ ಸತ್ಯವಾಗಿದೆ. ನಟ ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡಗಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿ, ಬೆಂಗಳೂರಿಗೆ ಕರೆತಂದು, ಪಟ್ಟಣಗೆರೆ ಶೆಡ್‌‌ನಲ್ಲಿ ಚಿತ್ರಹಿಂಸೆ ನೀಡಿ, ಸಾಯಿಸಿದ ಕಥೆಯನ್ನ ಕಣ್ಣಿಗೆ ಕಟ್ಟಿದಂತೆ ತೆರೆಗೆ ತಂದಿದೆ ಬಾಸ್ ಚಿತ್ರತಂಡ. ಹೌದು.. ಚಿತ್ರದುರ್ಗದ ಬದಲಿಗೆ ಹಾಸನ, ರೇಣುಕಾಸ್ವಾಮಿ ಬದಲಿಗೆ ಶಿವಸ್ವಾಮಿ, ಪವಿತ್ರಾ ಗೌಡಗೆ ಶೀಲಾ ಗೌಡ, ಡಿಬಾಸ್‌ಗೆ ಬಾಸ್ ಅಂತ ಹೆಸರುಗಳನ್ನಷ್ಟೇ ಬದಲಿಸಲಾಗಿದೆ ಅಷ್ಟೇ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿಗೆ ಹೋಗ್ತಾರೆ ಆದ್ರೆ ನಂತ್ರ ಏನಾಗುತ್ತೆ ಅನ್ನೋದನ್ನ ನೀವು ಬಿಗ್‌‌ಸ್ಕ್ರೀನ್‌‌ನಲ್ಲೇ ನೋಡಿದ್ರೆ ಚೆಂದ.

ಬಾಸ್ ಚಿತ್ರದ ಕಲಾವಿದರ ಪರ್ಫಾಮೆನ್ಸ್:

ಚಿತ್ರದ ನಾಯಕನಟ ತನುಷ್.. ಬಾಸ್ ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡಿದ್ದಾರೆ. ನಟ ದರ್ಶನ್ ರೀತಿಯ ವಾಯ್ಸ್ ಟೋನ್ ಮಾಡ್ಯುಲೇಷನ್, ಸ್ಟೈಲು, ಮ್ಯಾನರಿಸಂ ಜೊತೆಗೆ ಅವ್ರ ಗುಣಗಳನ್ನ ಕೂಡ ಎತ್ತಿ ತೋರಿಸೋ ಕಾರ್ಯ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಆಗಿ, ಗೆಳತಿಗೆ ಬಾಯ್‌ಫ್ರೆಂಡ್ ಆಗಿ, ಪತ್ನಿಗೆ ಗಂಡನಾಗಿ ಕಾಣಸಿಗುವ ತನುಷ್, ತಮ್ಮ ಪಾತ್ರವನ್ನ ನಿರೀಕ್ಷೆಗೂ ಮೀರಿದ ಹಾಗೆ ಮಾಡಿ ತೋರಿಸಿದ್ದಾರೆ. ಇನ್‌ಫ್ಯಾಕ್ಟ್ ಇದು ಅವರ ಕರಿಯರ್‌ನ ದಿ ಬೆಸ್ಟ್ ಪರ್ಫಾಮೆನ್ಸ್ ಅಂದ್ರೂ ತಪ್ಪಾಗಲ್ಲ.

ಸಣ್ಣ ಪುಟ್ಟ ಪಾತ್ರಗಳನ್ನ ಮಾಡ್ತಿದ್ದಂತಹ ನಟ ನಂದಿತಾ ಗೌಡ.. ಬಾಸ್ ಚಿತ್ರದ ಮೂಲಕ ನಾಯಕನಟಿಯಾಗಿ ಬಡ್ತಿ ಪಡೆದಿದ್ದಾರೆ. ಥೇಟ್ ದರ್ಶನ್ ಗರ್ಲ್‌‌ಫ್ರೆಂಡ್ ಪವಿತ್ರಾ ಗೌಡ ರೀತಿ ಎಲ್ಲರ ಶಿಳ್ಳೆ, ಚಪ್ಪಾಳೆ ಗಿಟ್ಟಿಸ್ತಾರೆ ವಂದಿತಾ. ಅದ್ರಲ್ಲೂ ಶಿವಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದಾಗ ಆಕೆಯ ಕಣ್ಣು ಕೆಂಪಾಗೋದ್ರಿಂದ ಹಿಡಿದು, ಆತನಿಗೆ ತಕ್ಕ ಪಾಠ ಕಲಿಸಬೇಕು ಅಂತ ಉರಿದುರಿದು ಬೀಳುವ ಪರಿ ಅದ್ಭುತ ಅನಿಸಲಿದೆ. ಇನ್ನೂ ತನ್ನ ಲಂಬು ಹೀರೋ ಜೊತೆ ಆಕೆಯ ಸಲುಗೆ, ಸ್ನೇಹದ ಸೀಕ್ವೆನ್ಸ್‌‌ಗಳಲ್ಲಿ ಸಹ ಸೂಪರ್ ಅನಿಸ್ತಾರೆ.

ನಟಿ ಪಾಯಲ್ ಚಂಗಪ್ಪ ಇಲ್ಲಿ ಬಾಸ್ ಪತ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ವಿಜಯಲಕ್ಷ್ಮೀಯನ್ನ ಹೋಲುವ ಪಾತ್ರ ಪೋಷಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ಮರು ದಿನ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್‌‌ಮೆಂಟ್‌‌ನ ವಿಜಯಲಕ್ಷ್ಮೀ ಫ್ಲ್ಯಾಟ್‌‌‌ನಲ್ಲಿ ನಡೆದ ಹೋಮ ಪೂಜೆಯನ್ನ ಪ್ರತಿನಿಧಿಸುತ್ತಾರೆ ಪಾಯಲ್.

ರೇಣುಕಾಸ್ವಾಮಿ ಕೇಸ್‌ನ ಡೀಲ್ ಮಾಡಿದ ಸೂಪರ್ ಕಾಪ್, ಖಡಕ್ ಪೊಲೀಸ್ ಆಫೀಸರ್ ಎಸಿಪಿ ಚಂದನ್ ಪಾತ್ರದಲ್ಲಿ ಡಿಸಿಪಿಯಾಗಿ ಮಲಯಾಳಂ ನಟ ವಿಜೇಶ್‌ಲೀ ಹುಬ್ಬೇರಿಸುವ ರೀತಿಯಲ್ಲಿ ನಿಭಾಯಿಸಿದ್ದಾರೆ. ಖಾಕಿ ಖದರ್ ಅಂದ್ರೆ ಏನು ಅನ್ನೋದನ್ನ ಸಮರ್ಪಕವಾಗಿ ಮಾಡೋದ್ರ ಜೊತೆಗೆ ಕರ್ನಾಟಕ ಪೊಲೀಸ್ ಪವರ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ.

ಅಲ್ಲದೆ ಪ್ರದೋಶ್ ಪಾತ್ರದ ಸುಭಾಷ್ ಆಗಿ ಸುಜನಿತ್ ಶೆಟ್ಟಿ, ಇನ್ಸ್‌ಪೆಕ್ಟರ್ ಆಗಿ ಪ್ರಮೋದ್, ಪಿಎಸ್‌ಐ ಉಮೇಶ್, ವಿಜಯ್ ವೀರೇನ್ ಕೇಶವ್, ದೀಪೇಶ್ ಭೀಷ್ಮಾ ರಾಮಯ್ಯ, ಕಾಗೆ ಅಕ್ಷಯ್, ರಾಜೇಂದ್ರ ಮಹೇಶ್, ಜೀವನ್ ಲಕ್ಷ್ಮಣ್ ಪೂಜಾರಿ.. ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಅವುಗಳನ್ನ ಸಮರ್ಪಕವಾಗಿ ನಿಭಾಯಿಸಿದ್ದಾರೆ ಕೂಡ.

ಬಾಸ್ ಚಿತ್ರದ ಪ್ಲಸ್ ಪಾಯಿಂಟ್ಸ್:

 

ಬಾಸ್ ಸಿನಿಮಾದ ಮೈನಸ್ ಪಾಯಿಂಟ್ಸ್:

 

ಬಾಸ್ ಚಿತ್ರಕ್ಕೆ ಗ್ಯಾರಂಟಿ ನ್ಯೂಸ್ ರೇಟಿಂಗ್: 3.5/5

ಬಾಸ್ ಚಿತ್ರದ ಫೈನಲ್ ಸ್ಟೇಟ್ಮೆಂಟ್:

ಡಿಬಾಸ್ ದರ್ಶನ್-ರೇಣುಕಾಸ್ವಾಮಿ ಕೊಲೆ ಕೇಸ್‌‌ನ ಕೈಗನ್ನಡಿಯಾಗಿರೋ ‘ಬಾಸ್’ ಸಿನಿಮಾದಲ್ಲಿ ತೆರೆಮೇಲೆ ಆರೋಪಿ ಪ್ರದೋಷ್ ಈಗ ತಪ್ಪೊಪ್ಪಿಗೆಗೆ ಸಿದ್ಧವಾಗಿರೋ ವಿಷಯವನ್ನ ಅಂದೇ ಚಿತ್ರತಂಡ ಚಿತ್ರಿಸಿಬಿಟ್ಟಿದೆ. ಇದು ನಿರ್ದೇಶಕ ಲವ ಅವರ ಚಾಕಚಕ್ಯತೆಯನ್ನ ತೋರಿಸಲಿದೆ. ಡಿಬಾಸ್ ಅಭಿಮಾನಿಗಳು ಕೂಡ ಇಷ್ಟ ಪಡುವಂತೆ ಈ ಸಿನಿಮಾನ ಕಟ್ಟಿರೋ ಚಿತ್ರತಂಡ, ಥಿಯೇಟರ್‌‌ನಲ್ಲಿ ಶಿಳ್ಳೆ, ಚಪ್ಪಾಳೆ, ಜೈಕಾರಗಳ ಜೊತೆ ಅದ್ಭುತ ರೆಸ್ಪಾನ್ಸ್ ಪಡೆಯುತ್ತಿರೋದು ಇಂಟರೆಸ್ಟಿಂಗ್.

ನಾಯಕನಟಿ ವಂದಿತಾ ಹೀರೋನ ಲಂಬು ಅಂತ ಕರೆಯುವುದು. ಚಿತ್ರದುರ್ಗದ ರೇಣುಕಾಸ್ವಾಮಿಗೆ ಹಾಸನದ ಶಿವಸ್ವಾಮಿ ಅಂತ ಕರೆದಿರೋದು, ಪ್ರಾಣ ಹೋಗುವ ಮುನ್ನ ಬಾಸ್ ನನ್ನ ಬಿಟ್ಟುಬಿಡಿ. ನನಗೆ ವಯಸ್ಸಾದ ಅಪ್ಪ, ಅಮ್ಮ ಇದ್ದಾರೆ. ಹೆಂಡ್ತಿ ಪ್ರೆಗ್ಮೆಂಟ್ ಬಾಸ್ ಅಂದಿರೋದು, ಪಟ್ಟಣಗೆರೆ ಶೆಡ್, ಬಾಡಿ ಬಿಸಾಡುವ ಮೋರಿ, ಪ್ರೆಸ್ಟೀಜ್ ಅಪಾರ್ಟ್‌‌ಮೆಂಟ್‌ಗೆ ವಿ ಗಾರ್ಡ್ ಅಪಾರ್ಟ್‌‌ಮೆಂಟ್ ಅಂತ ಹೆಸರಿಟ್ಟಿರೋದು, ಹೋಮ, ಸ್ಟೇಷನ್‌ಗೆ ಸೈಡ್ ವಾಲ್ ಹಾಕಿಸಿರೋದು, ರೇಣುಕಾಸ್ವಾಮಿ ನಾನು ವೆಜಿಟೇರಿಯನ್ ಅಂದಿರೋದು, ದರ್ಶನ್ ಪೊಲೀಸರ ಬಳಿ ಸಿಗರೇಟ್ ಕೇಳಿರೋದು, ಪೊಲೀಸ್ ವ್ಯಾನ್‌‌ನಲ್ಲಿ ಅವ್ರನ್ನ ಕರೆದೊಯ್ಯುತ್ತಿರೋದು, ಮೈಸೂರು ಜಿಮ್ ಸೀನ್ಸ್, ನಂತ್ರ ಹೋಟೆಲ್ ರೋಮ್‌‌ನಲ್ಲಿ ಅರೆಸ್ಟ್ ಮಾಡಿದಾಗ ಆದ ಹಂಗಾಮ.. ಹೀಗೆ ಪ್ರತಿಯೊಂದನ್ನೂ ಡಿಟೈಲ್ಡ್ ಆಗಿ ಪಿನ್ ಟು ಪಿನ್ ಅದೇ ರೀತಿ ತೋರಿಸೋ ಮೂಲಕ ವ್ಹಾವ್ ಫೀಲ್ ತರಿಸಿದ್ದಾರೆ ಡೈರೆಕ್ಟರ್ ಲವ.

ಇಂದು ರಾಜ್ಯಾದ್ಯಂತ ಬಾಸ್ ಸಿನಿಮಾ ತೆರೆಗಪ್ಪಳಿಸಿದೆ. ಆದ್ರೆ ನಿನ್ನೆಯೇ ಈ ಸಿನಿಮಾ ಎಎಂಬಿ ಕಪಾಲಿ ಸಿನಿಮಾಸ್‌‌ನಲ್ಲಿ ಸ್ಪೆಷಲ್ ಪ್ರೀಮಿಯರ್ ಕಂಡಿತ್ತು. ಆಗ ಚಿತ್ರದ ನಾಯಕನಟ ಕಮ್ ನಿರ್ಮಾಪಕ ತನುಷ್ ಶಿವಣ್ಣ, ಸಿಕ್ಕಾಪಟ್ಟೆ ಭಾವುಕರಾದ್ರು. ಮಾತು ಕೂಡ ಆಡಲಾಗದೆ ಕಣ್ಣೀರು ಹಾಕಿದ್ರು. ಐದಾರು ತಿಂಗಳು ತುಂಬಾ ಕಷ್ಟಪಟ್ಟೆವು ಅಂತ ಶೂಟಿಂಗ್ ಹಾಗೂ ಅದಾದ ಬಳಿಕ ರಿಲೀಸ್ ಮಾಡಲು ಒದ್ದಾಡಿದ ಕ್ಷಣಗಳನ್ನ ನೆನೆದರು.

ನಿರ್ದೇಶಕ ಲವ ಕೂಡ ಮಾತನಾಡುತ್ತಾ ರಿಲೀಸ್‌ ಮಾಡೋಕೆ ನಮಗೆ ನಿಜಕ್ಕೂ ಸಿಕ್ಕಾಪಟ್ಟೆ ಟಾರ್ಚರ್ ಆಗಿತ್ತು. ಇತ್ತೀಚೆಗೆ ಏನೆಲ್ಲಾ ಆಯ್ತು ಅನ್ನೋದು ನಿಮಗೆಲ್ಲಾ ಗೊತ್ತೇಯಿದೆ. ನಮಗೆ ನ್ಯಾಯಾಂಗ ವ್ಯವಸ್ಥೆ ಹಾಗೂ ಮೀಡಿಯಾ ಸರ್ಪೋರ್ಟ್‌ಗೆ ನಿಂತಿತ್ತು. ಈಗಲೂ ಸಹ ಕಾಣದ ಕೈಗಳು ಸಿನಿಮಾಗೆ ಥಿಯೇಟರ್‌‌ಗಳು ಸಿಗಬಾರದು, ರಿಲೀಸ್ ಆಗಬಾರದು ಅಂತ ಆಟ ಆಡ್ತಿವೆ ಅಂತ ಮುಕ್ತವಾಗಿಯೇ ತಮ್ಮ ಅಸಮಾಧಾನವನ್ನ ಹೊರಹಾಕಿದ್ರು.

ಒಟ್ಟಾರೆ ಬಾಸ್ ಸಿನಿಮಾ ಒಂದೊಳ್ಳೆ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಮೂವಿ. ಕೋರ್ಟ್ ಆದೇಶದಂತೆ ಇದೊಂದು ಕಾಲ್ಪನಿಕ ಕಥೆ ಅಂತ ಅವರು ಡಿಸ್ಕ್ಲೈಮರ್‌ನಲ್ಲಿ ನಮೂದಿಸಿದ್ರೂ ಸಹ, ಇದು ಪಕ್ಕಾ ಡಿಬಾಸ್, ಡಿ ಗ್ಯಾಂಗ್ ಮಾಡಿರೋ ರೇಣುಕಾಸ್ವಾಮಿ ಮರ್ಡರ್ ಸ್ಟೋರಿ ಅನ್ನೋದು ಮಕ್ಕಳಿಂದ ಮುದುಕರವರೆಗೆ ಸುಲಭವಾಗಿ ಅರ್ಥವಾಗಿಬಿಡುತ್ತೆ. ನೋಡೋಕೆ ಸಖತ್ ಎಂಗೇಜಿಂಗ್ ಆಗಿದ್ದು, ಮಿಸ್ ಮಾಡದೆ ಕಣ್ತುಂಬಿಕೊಳ್ಳಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version