ಮುಂಬೈನಲ್ಲಿ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅಂತ್ಯಕ್ರಿಯೆಗೆ ಸಿದ್ಧತೆ.!

Untitled design 2025 11 24T171040.396

ಮುಂಬೈ, ನವೆಂಬರ್ 24: ಹಿಂದಿ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ ಸೋಮವಾರ ಬೆಳಿಗ್ಗೆ ತಮ್ಮ ಮುಂಬೈ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಡಿಸೆಂಬರ್ 8 ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಬೇಕಿತ್ತು. ಆದರೆ ಅದಕ್ಕೆ ಕೇವಲ 14 ದಿನಗಳ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ.

ಹಲವು ದಿನಗಳಿಂದ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಅಕ್ಟೋಬರ್ 31ರಂದು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ತುರ್ತು ದಾಖಲಿಸಲಾಗಿತ್ತು. ನವೆಂಬರ್ 10ರಿಂದ ಅವರು ವೆಂಟಿಲೇಟರ್‌ನಲ್ಲಿದ್ದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿದ್ದವು. ದೀರ್ಘ ಚಿಕಿತ್ಸೆಯ ನಂತರ ನವೆಂಬರ್ 12ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ.

ಧರ್ಮೇಂದ್ರ ಅವರ ಪಾರ್ಥಿವ ಶರೀರವನ್ನು ಈಗಾಗ್ಲೇ ಅಂತಿಮ ದರ್ಶನಕ್ಕಾಗಿ ಅವರ ಜುಹು ನಿವಾಸದಲ್ಲಿ ಇರಿಸಲಾಗಿದೆ. ಅಂತ್ಯಕ್ರಿಯೆಯನ್ನು ಮುಂಬೈನ ಪವನ್ ಹನ್ಸ್ ಸ್ಮಶಾನದಲ್ಲಿ ಸಂಜೆ ನಡೆಸಲು ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ.

ಈ ದುಃಖದ ಸುದ್ದಿ ತಿಳಿದ ತಕ್ಷಣ ಚಿತ್ರರಂಗದ ಎಲ್ಲ ಗಣ್ಯರು ಧರ್ಮೇಂದ್ರ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಹೇಮಾ ಮಾಲಿನಿ, ಈಶಾ ದೇಯೋಲ್, ಅಹಾನಾ ದೇಯೋಲ್, ಬಾಬಿ ದೇಯೋಲ್, ಸನ್ನಿ ದೇಯೋಲ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಸಂಜಯ್ ದತ್, ಜಾಕಿ ಶ್ರಾಫ್, ಸಲೀಂ ಖಾನ್, ರಾಜ್‌ಕುಮಾರ್ ಸಂತೋಷಿ, ಅನಿಲ್ ಕಪೂರ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ.

ಆಕ್ಷನ್ ಕಿಂಗ್ ಧರ್ಮೇಂದ್ರ ಇನ್ನೂ ನೆನಪು ಮಾತ್ರ..

ಬಾಲಿವುಡ್‌ನ ನಟ ಧರ್ಮೇಂದ್ರ ಅವರು ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಇಂದು ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ . ಇತ್ತೀಚೆಗೆ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಅವರನ್ನು ಮುಂಬೈನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಗೆ ದಾಖಲಾಗಿದ್ದ ಧರ್ಮೇಂದ್ರರನ್ನು ಕಾಣಲು ಬಾಲಿವುಡ್‌ ಸಲ್ಮಾನ್ ಖಾನ್, ಶಾರುಕ್ ಖಾನ್, ಗೋವಿಂದ, ರಿತೇಶ್ ದೇಶ್ಮುಖ್, ಜೆನಿಲಿಯಾ ದೇಶ್ಮುಖ್, ಅಮೀಷಾ ಪಟೇಲ್ ಸೇರಿದಂತೆ ಅನೇಕ ನಟ-ನಟಿಯರು ಆಸ್ಪತ್ರೆಗೆ ಭೇಟಿ ನೀಡಿ, ಧರ್ಮೇಂದ್ರರ ಆರೋಗ್ಯವನ್ನು ವಿಚಾರಿಸಿದ್ದರು. ದುರಾದೃಷ್ಟವಶಾತ್‌ ಇಂದು ತಮ್ಮ ನಿವಾಸಲ್ಲೇ ಧರ್ಮೇಂದ್ರ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಧರ್ಮೇಂದ್ರರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ವೈದ್ಯಕೀಯ ಸಿಬ್ಬಂದಿಯ ಸಲಹೆಯ ಮೇರೆಗೆ, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆ ತರಲಾಗಿತ್ತು. 89 ವರ್ಷ ವಯಸ್ಸಿನ ಧರ್ಮೇಂದ್ರರು ಬಾಲಿವುಡ್‌ನ ‘ಆಕ್ಷನ್ ಕಿಂಗ್’ ಮತ್ತು ‘ಹೀ-ಮ್ಯಾನ್’ ಆಗಿ ಐದು ದಶಕಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ‘ಶೋಲೆ’, ‘ಚುಪ್ಕೆ ಚುಪ್ಕೆ’, ‘ಸೀತಾ ಔರ್ ಗೀತಾ’ ಮುಂತಾದ ಅನೇಕ ಸೂಪರ್‌ಹಿಟ್ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಧರ್ಮೇಂದ್ರರು, ಭಾರತೀಯ ಸಿನಿಮಾ ಇತಿಹಾಸದ ಒಬ್ಬ ಅಮರ ವ್ಯಕ್ತಿತ್ವವಾಗಿದ್ದಾರೆ.

ಇತ್ತೀಚೆಗೆ, ಧರ್ಮೇಂದ್ರರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (2023) ಮತ್ತು ‘ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ’ (2024) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂದಿನ ಚಿತ್ರ ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟಿಸಲಿದ್ದು, ಈ ಚಿತ್ರವು ಡಿಸೆಂಬರ್ 25ರಂದು ರಿಲೀಸ್ ಆಗಲಿದೆ.

ಪಂಜಾಬ್‌ನ ನಸ್ರಾಲಿಯಲ್ಲಿ ಡಿಸೆಂಬರ್ 8, 1935ರಂದು ಧರ್ಮೇಂದ್ರ ಕೇವಲ್ ಕೃಷ್ಣ ಡಿಯೋಲ್ ಎಂಬ ಹೆಸರಿನಲ್ಲಿ ಜನಿಸಿದ ಅವರು 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ರೊಮ್ಯಾಂಟಿಕ್ ಹೀರೋ, ಆಕ್ಷನ್ ಸ್ಟಾರ್, ಕಾಮಿಡಿ ಆರ್ಟಿಸ್ಟ್ ಎಂಬ ಎಲ್ಲ ಪಾತ್ರಗಳಲ್ಲಿಯೂ ತಮ್ಮನ್ನು ಸಾಬೀತುಪಡಿಸಿಕೊಂಡರು.

1966ರ ‘ಫೂಲ್ ಔರ್ ಪಥ್ಥರ್’, ‘ಆಯೇ ದಿನ್ ಬಹಾರ್ ಕೆ’, ‘ಅನುಪಮಾ’ ಚಿತ್ರಗಳಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಹೃದಯ ಗೆದ್ದ ಅವರು, ‘ಧರ್ಮ್ ವೀರ್’, ‘ಹುಕುಮತ್’ಗಳಲ್ಲಿ ಆಕ್ಷನ್ ಸ್ಟಾರ್ ಆಗಿ ಗುರುತಿಸಿಕೊಂಡರು. ಆದರೆ ಅವರ ವೃತ್ತಿಜೀವನದ ಶ್ರೇಷ್ಠ ಗುರುತು 1975ರ ‘ಶೋಲೆ’ ಚಿತ್ರದಲ್ಲಿನ ವೀರ್ ಪಾತ್ರ. ‘ಬಸಂತೀ ಇನ್ ಕುತ್ತೋಂ ಕೆ ಸಾಮ್ನೇ ಮತ್ ನಾಚ್ನಾ’ ಎಂಬ ಸಂಭಾಷಣೆ ಇಂದಿಗೂ ಅಭಿಮಾನಿಗಳ ನಾಲಿಗೆಯಲ್ಲಿದೆ. ‘ಚುಪ್ಕೆ ಚುಪ್ಕೆ’, ‘ಸೀತಾ ಔರ್ ಗೀತಾ’ಗಳಂಥ ಹಾಸ್ಯ ಮತ್ತು ಕುಟುಂಬ ಚಿತ್ರಗಳೂ ಅವರ ವೈವಿಧ್ಯತೆಯ ಸಾಕ್ಷಿಯಾಗಿವೆ.

ಇತ್ತೀಚಿನ ವರ್ಷಗಳಲ್ಲಿಯೂ ಧರ್ಮೇಂದ್ರ ಅವರು ಸಕ್ರಿಯವಾಗಿದ್ದಾರೆ. 2023ರಲ್ಲಿ ಕರಣ್ ಜೋಹಾರ್ ನಿರ್ಮಾಣದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಯಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್ ಜೊತೆಗೆ ಭರ್ಜರಿ ಕಾಮಿಡಿ ಟೈಮಿಂಗ್ ತೋರಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಿದರು. 2024ರಲ್ಲಿ ‘ತೇರಿ ಬಾಟೋಂ ಮೇಂ ಐಸಾ ಉಲ್ಝಾ ಜಿಯಾ’ ಚಿತ್ರದಲ್ಲಿ ಶಹೀದ್ ಕಪೂರ್ ಮತ್ತು ಕೃತಿ ಸನೋನ್ ಜೊತೆಗೆ ಮತ್ತೊಂದು ಯಶಸ್ವಿ ಇನ್ನಿಂಗ್ಸ್ ಆಡಿದರು.

ಅವರ ಮುಂದಿನ ಬಿಗ್ ರಿಲೀಸ್ ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’. ಈ ಚಿತ್ರವು 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪರಮ ವೀರ ಚಕ್ರ ಪಡೆದ ಅತಿ ಕಿರಿಯ ಸೈನಿಕ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್‌ಪಾಲ್ ಅವರ ನಿಜ ಜೀವನ ಕಥೆಯನ್ನು ಆಧರಿಸಿದೆ. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಧರ್ಮೇಂದ್ರ ಅವರು ಅರುಣ್ ಅವರ ತಂದೆ ಬ್ರಿಗೇಡಿಯರ್ ಎಂ.ಎಲ್. ಖೇತರ್‌ಪಾಲ್ (ನಿವೃತ್ತ) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರಕ್ಕೆ ಅವರೇ ನಿರೂಪಣೆಯನ್ನೂ ನೀಡಿದ್ದಾರೆ. ಈ ಚಿತ್ರವು ಡಿಸೆಂಬರ್ 25, 2025ರಂದು ತೆರೆಕಾಣಲಿದೆ. 2012ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಭಿಮಾನಿಗಳು ‘ಗ್ರಾಮ್ ಧರಂ’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ವೈಯಕ್ತಿಕ ಜೀವನದಲ್ಲಿ ಧರ್ಮೇಂದ್ರ ಅವರು ಪ್ರಕಾಶ್ ಕೌರ್ ಅವರನ್ನು ಮೊದಲು ವಿವಾಹವಾದರು. ನಂತರ ನಟಿ ಹೇಮಾ ಮಾಲಿನಿ ಅವರನ್ನು ಎರಡನೇ ವಿವಾಹ ಮಾಡಿಕೊಂಡರು. ಪ್ರಕಾಶ್ ಕೌರ್ ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ, ಅಜೇತಾ – ನಾಲ್ವರು ಮಕ್ಕಳು. ಹೇಮಾ ಮಾಲಿನಿ ಅವರಿಗೆ ಎಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

Exit mobile version