ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ: ಕ್ಷಮೆ ಕೇಳಿದ ನಿರ್ದೇಶಕ ಅನುರಾಗ್ ಕಶ್ಯಪ್

Untitled design 2025 04 19t123806.392

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾ ಫುಲೆ ಇದೀಗ ವಿವಾದದ ಕಾರಣವಾಗಿದ್ದು, ಈ ಕುರಿತಂತೆ ಅವರ ವಿರುದ್ಧ ಬ್ರಾಹ್ಮಣ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಿಬಿಎಫ್‌ಸಿ (CBFC – Central Board of Film Certification) ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೀಡಿದೆ. ಇದಕ್ಕೆ ಕಶ್ಯಪ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫುಲೆ ಸಿನಿಮಾ ಸಮಾಜ ಸುಧಾರಕರಾದ ಜೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಕಥಾಹಂದರ ಹೊಂದಿದೆ. ಈ ಸಿನಿಮಾದಲ್ಲಿ ಬ್ರಾಹ್ಮಣರ ಬಗ್ಗೆ ತೀವ್ರ ಟೀಕೆಗಳು ಇದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಕೆಲವು ಸಮುದಾಯದವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಸಿನಿಮಾದ ಬಿಡುಗಡೆಗೆ ವಿಳಂಬವಾಗಿದ್ದು, ಇದಕ್ಕೆ ನಿರ್ದೇಶಕ ಅನುರಾಗ್ ಕಶ್ಯಪ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಧ್ವನಿ ಎತ್ತಿದ್ದಾರೆ.

ಅವರು ತಮ್ಮ ಪೋಸ್ಟ್‌ನಲ್ಲಿ, “ಪಂಜಾಬ್ 95, ತೀಸ್, ಧಡಕ್ 2, ಈಗ ಫುಲೆ ಒಂದರ ಹಿಂದೊಂದು ಸಿನಿಮಾಗಳಿಗೆ ತಡೆ ಒಡ್ಡಲಾಗುತ್ತಿದೆ. ಜಾತಿವಾದ, ಧರ್ಮವಾದ, ಜನಾಂಗೀಯ ಭಾವನೆಗಳಿಂದ ಆಳುವ ಸರ್ಕಾರ ತನ್ನ ನಿಜ ಮುಖವನ್ನು ತೋರಿಸಲು ಹೆದರುತ್ತಿದೆ. ಅವರು ಸ್ವತಃ ಯಾವುದು ಸಮಸ್ಯೆ ಎಂಬುದನ್ನು ಓಪಾಗಿ ಹೇಳಲು ಸಹ ಸಾಧ್ಯವಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು “ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ” ಎಂದು ಹೇಳಿರುವುದನ್ನು ಉಲ್ಲೇಖಿಸಿ, ಕಶ್ಯಪ್ ಪ್ರಶ್ನೆ ಮಾಡಿದ್ದಾರೆ. “ಜಾತಿ ವ್ಯವಸ್ಥೆ ಇಲ್ಲವಾದರೆ ಫುಲೆ ಸಿನಿಮಾಕ್ಕೆ ವಿರೋಧ ಏಕೆ? ಜಾತಿ ಇಲ್ಲವಾದರೆ ನಿಮಗೆ ಉರಿಯುವುದು ಏಕೆ?” ಎಂದು ಬ್ರಾಹ್ಮಣ ಸಮುದಾಯವನ್ನು ಪ್ರಶ್ನಿಸಿದ್ದರು. ಅಲ್ಲದೇ “ಸಿನಿಮಾ ಬಿಡುಗಡೆಗೂ ಮುನ್ನ ವಿರೋಧ ಎತ್ತಿದ್ರು, ಸಿನಿಮಾ ನೋಡಿದ್ದು ಹೇಗೆ? ಸಿಬಿಎಫ್‌ಸಿ ಸಿನಿಮಾ ಲೀಕ್ ಮಾಡಿದ್ದಾರಾ?” ಎಂಬ ಬಗ್ಗೆ ಪ್ರಶ್ನೆ ಮಾಡಿದ್ದರು.

ಇದೇ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರನ, ಕಮೆಂಟ್‌ಗೆ ಕಶ್ಯಪ್ ತೀವ್ರವಾಗಿ ಪ್ರತಿಕ್ರಿಯಿಸಿ “ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ” ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು.

ಇದೀಗ, ಕಶ್ಯಪ್ ತಮ್ಮ ಹೇಳಿಕೆ ಕುರಿತಾಗಿ ಕ್ಷಮೆ ಕೇಳಿದ್ದಾರೆ. ಅವರು ಹೇಳಿದ್ದಾರೆ: “ ‘ಇದು ನನ್ನ ಕ್ಷಮಾಪಣೆ, ನಾನು ಹೇಳಿದ ಮಾತುಗಳಿಗೆ ಅಲ್ಲ ಬದಲಿಗೆ ನನ್ನ ಪೋಸ್ಟ್​ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಪ್ರಸರಣಕ್ಕೆ ಬಳಸಿಕೊಳ್ಳುತ್ತಿರುವ ಕಾರಣಕ್ಕೆ.  ಸಂಸ್ಕಾರವಂತರು ಎನಿಸಿಕೊಂಡವರು ನನ್ನ ಹೆಂಡತಿ, ಮಗಳು, ಗೆಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆಯ ಬೆದರಿಕೆ ನೀಡುತ್ತಿದ್ದಾರೆ. ಯಾವುದೇ ಹೇಳಿಕೆಗೆ ಇಂತಹ ಬೆದರಿಕೆಗಳು ನ್ಯಾಯಯುಕ್ತವಲ್ಲ. ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾರೆ, ಮತ್ತು ತೆಗೆದುಕೊಳ್ಳುವುದೂ ಇಲ್ಲ.” ಎಂದಿದ್ದಾರೆ.

ನಂತರ ಮತ್ತೊಂದು ನಮನ ವ್ಯಕ್ತಪಡಿಸಿದ್ದಾರೆ: “ನನ್ನ ಮಾತಿಗೆ ನೀವು ನನ್ನನ್ನೇ ಬೈಯಿರಿ, ಆದರೆ ನನ್ನ ಕುಟುಂಬದವರನ್ನು ಏಕೆ ಎಳೆದು ತರುತ್ತೀರಿ? ಬ್ರಾಹ್ಮಣರೇ, ಮಹಿಳೆಯರನ್ನು ಬಿಟ್ಟುಬಿಡಿ. ಇದು ನಿಮ್ಮ ಶ್ರದ್ಧಾ ಶಾಸ್ತ್ರಗಳಲ್ಲಿಯೂ ಇದೆ, ಮನುವಾದದಲ್ಲಿ ಮಾತ್ರವಲ್ಲ. ನೀವು ಎಂಥಹ ಬ್ರಾಹ್ಮಣರು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ನನ್ನ ಕಡೆಯಿಂದ ಕ್ಷಮೆ ಇರಲಿ.” ಎಂದು ಹೇಳಿದ್ದಾರೆ.

Exit mobile version