ಚಿರು ಫ್ಯಾಮಿಲಿ ಫಂಕ್ಷನ್‌‌ನಲ್ಲಿ ಬಾಲಯ್ಯ..ನೋ ಸ್ಟಾರ್‌‌ವಾರ್..!

ಮೆಗಾ ಫ್ಯಾಮಿಲಿ ಜೊತೆ ಕನ್ನಡ ನಿರ್ಮಾಪಕ ಸಂಜಯ್ ಗೌಡ

Untitled design 2026 03 03T161336.039

ಟಾಲಿವುಡ್ ಅಂಗಳದಲ್ಲಿ ಬ್ಯಾಕ್ ಟು ಬ್ಯಾಕ್ ಶುಭಕಾರ್ಯಗಳಾಗ್ತಿವೆ. ಒಂದ್ಕಡೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಮತ್ತೊಂದ್ಕಡೆ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಮದುವೆ. ಚಿರು-ಬಾಲಯ್ಯ ನಡುವೆ ಇದ್ದಂತಹ ಮನಸ್ತಾಪಕ್ಕೆ ಮೆಗಾ ಫ್ಯಾಮಿಲಿ ಶುಭಕಾರ್ಯ ಫುಲ್‌ಸ್ಟಾಪ್ ಇಟ್ಟಿದೆ. ಈ ಮೂಲಕ ನೋ ಸ್ಟಾರ್‌‌ವಾರ್ ಅನ್ನೋ ಸಂದೇಶ ಕೂಡ ಸಾರಿದೆ. ಅಲ್ಲದೆ ನಮ್ಮ ಕರ್ನಾಟಕದಿಂದ ಯಾರೆಲ್ಲಾ ಅದಕ್ಕೆ ಸಾಕ್ಷಿ ಆದ್ರು ಅನ್ನೋದರ ಡಿಟೈಲ್ಸ್‌ ಇಲ್ಲಿದೆ..

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರೀತಿ ಅವರ ಸಹೋದರ ಅಲ್ಲು ಸಿರೀಶ್ ಕೂಡ ಫಿಲ್ಮ್ ಸ್ಟಾರ್. ಇದೀಗ ಅಲ್ಲು ಸಿರೀಶ್ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದು, ತಮ್ಮನ ಮದುವೆ ಮಹೋತ್ಸವವನ್ನ ಸ್ವತಃ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವರೇ ಮುಂದೆ ನಿಂತು ಗ್ರ್ಯಾಂಡ್ ಆಗಿ ಮಾಡ್ತಿರೋದು ಇಂಟರೆಸ್ಟಿಂಗ್. ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ರಿಸೆಪ್ಷನ್‌‌‌ ಕೋಕಾಪೇಟ್‌‌ನಲ್ಲಿರೋ ಅಲ್ಲು ಸ್ಟುಡಿಯೋಸ್‌‌ನಲ್ಲಿ ಅದ್ಧೂರಿಯಾಗಿ ನಡೆಯಿತು.

ನಯನಿಕಾ ಕೈ ಹಿಡಿಯುತ್ತಿರೋ ಅಲ್ಲು ಸಿರೀಶ್‌ಗೆ ಶುಭ ಹಾರೈಸೋಕೆ ಆಲ್ಮೋಸ್ಟ್ ಇಡೀ ತೆಲುಗು ಚಿತ್ರರಂಗವೇ ನೆರೆದಿತ್ತು. ಒಂದೇ ಸೂರಿನಡಿ ಇದೇ ಮೊದಲ ಬಾರಿಗೆ ಅಷ್ಟು ಮಂದಿ ಸ್ಟಾರ್ ಡೈರೆಕ್ಟರ್ಸ್, ಸ್ಟಾರ್ಸ್, ನಟಿಮಣಿಯರು ಸೇರಿದ್ದು ಇದೇ ಮೊದಲು ಅನಿಸುತ್ತೆ. ನಾಗಾರ್ಜುನ್, ನಂದಮೂರಿ ಬಾಲಕೃಷ್ಣ, ರವಿತೇಜಾ, ಮೋಹನ್‌ಬಾಬು ಫ್ಯಾಮಿಲಿಗಳಿಂದ ಹಿಡಿದು ನಾನಿವರೆಗೂ ಎಲ್ಲರೂ ಈ ಶುಭಕಾರ್ಯಕ್ಕೆ ಸಾಕ್ಷಿ ಆದರು.

ಡೆಲ್ಲಿ ಪ್ರವಾಸದಲ್ಲಿದ್ದ ಡಿಸಿಎಂ ಪವನ್ ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಬಿಟ್ಟರೆ ಉಳಿದಂತೆ ಎಲ್ಲರೂ ಈ ಮೆಗಾ ಫಂಕ್ಷನ್‌‌ನಲ್ಲಿ ಭಾಗಿಯಾಗಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಲಿವಿಂಗ್ ಲೆಜೆಂಡ್ ಬಾಲಯ್ಯ ಕಾಣಿಸಿಕೊಂಡಿದ್ದು ಮಾತ್ರ ಅಚ್ಚರಿ. ಹೌದು.. ಇತ್ತೀಚೆಗೆ ಚಿರಂಜೀವಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಬಾಲಯ್ಯ ವಿರುದ್ಧ ಚಿರು ಫ್ಯಾನ್ಸ್ ತಿರುಗಿಬಿದ್ದಿದ್ರು. ಅವರಿಬ್ಬರ ನಡುವೆ ಮೊದಲಿನಿಂದಲೂ ಸ್ಟಾರ್ ವಾರ್ ರೈವಲ್ರಿ ಇದ್ದೇ ಇತ್ತು. ಇತ್ತೀಚೆಗೆ ನಡೆದ ಆ ಘಟನೆಯಿಂದ ಅದು ಮತ್ತಷ್ಟು ಬೆಂಕಿ ಹೊತ್ತಿತ್ತು. ಆದ್ರೀಗ ಸ್ವತಃ ಬಾಲಯ್ಯನೇ ಫಂಕ್ಷನ್ ಅಟೆಂಡ್ ಮಾಡಿ, ನೋ ಮೋರ್ ಸ್ಟಾರ್ ವಾರ್ ಅನ್ನೋದನ್ನ ಸಾರಿರುವುದು ಒಳ್ಳೆಯ ಬೆಳವಣಿಗೆ.

ಇನ್ನೂ ಅಲ್ಲು ಸಿರೀಶ್-ನಯನಿಕಾ ಆರತಕ್ಷತಾ ಮಹೋತ್ಸವಕ್ಕೆ ನಮ್ಮ ಕನ್ನಡದ ನಿರ್ಮಾಪಕ ಸಂಜಯ್ ಗೌಡ ಕೂಡ ಅತಿಥಿಯಾಗಿ ಹೋಗಿ, ನಮ್ಮ ಚಿತ್ರರಂಗವನ್ನ ಪ್ರತಿನಿಧಿಸಿರುವುದು ಖುಷಿಯ ವಿಚಾರ. ಅಲ್ಲು ಅರ್ಜುನ್‌ಗೆ ಸಿಕ್ಕಾಪಟ್ಟೆ ಕ್ಲೋಸ್ ಇರೋ ಸಂಜಯ್ ಗೌಡ್ರು, ಫ್ಯಾಮಿಲಿ ಫ್ರೆಂಡ್ ಕೂಡ ಹೌದು. ಸದ್ಯದಲ್ಲೇ ಅಲ್ಲು ಅರ್ಜುನ್ ಜೊತೆ ಬಿಗ್ ನ್ಯೂಸ್ ಕೊಟ್ಟರೂ ಅಚ್ಚರಿಯಿಲ್ಲ ಅಂತಿವೆ ಮೂಲಗಳು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version