ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..? ಸ್ಷಷ್ಟನೆ ನೀಡಿದ ಅಲ್ಲು ಟೀಂ

ಎಲ್ಲವೂ ಸುಳ್ಳು.. ಕಾನೂನು ಕ್ರಮಕ್ಕೆ ಮುಂದಾದ ಅಲ್ಲು

Untitled design 2026 02 12T194209.222

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಟಾಲಿವುಡ್​ ನಟ ಅಲ್ಲು ಅರ್ಜುನ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ.. ಹೀಗಾಗಿ ಅವ್ರನ್ನ ಭೇಟಿ ಮಾಡೋದು ಈಗ ಅಷ್ಟು ಸುಲಭ ಅಲ್ಲ. ಅಲ್ಲು ಭೇಟಿಗಾಗಿ ಸುಮಾರು 42 ಕಂಡೀಷನ್ಸ್​ ಇದೆ ಅಂತೆಲ್ಲಾ ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಆರೋಪವನ್ನ ಮಾಡಿದ್ರು. ಸದ್ಯ ಈ ಹೇಳಿಕೆ ವೈರಲ್​ ಆದ ಬೆನ್ನಲ್ಲೆ ಕೊನೆಗೂ ಅಲ್ಲು ಅರ್ಜುನ್​ ಟೀಂ ಈ ಬಗ್ಗೆ ಕ್ಲಾರಿಟಿ ಕೊಟ್ಟಿದೆ.

ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ..ಕೈಕುಲುವಂತಿಲ್ಲ..!

ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..!?

‘ಪುಷ್ಪ 2’ ರಿಲೀಸ್ ಆದ ಬಳಿಕ  ಟಾಲಿವುಡ್​ ನಟ ಅಲ್ಲು ಅರ್ಜುನ್​ ಖ್ಯಾತಿ ಸಾಕಷ್ಟು ಹೆಚ್ಚಿದೆ. ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ. ಹೀಗಾಗಿ ಭೇಟಿ ಮಾಡಲು ಬರೋಬ್ಬರಿ 42 ಕಠಿಣ ನಿಯಮಗಳಿವೆ ಎಂದು ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಪಾಡ್​​ಕಾಸ್ಟ್​​ನಲ್ಲಿ ಆರೋಪ ಮಾಡಿದ್ದರು.  ಅವರು ಅಲ್ಲು ಅರ್ಜುನ್ ಜೊತೆ ಶೂಟ್ ಒಂದರಲ್ಲಿ ಭಾಗಿ ಆಗಿದ್ದರಂತೆ. ಆಗ ತಮಗೆ ಸಮಸ್ಯೆ ಆಗಿತ್ತು ಎಂದು ಹೇಳಿದ್ದರು. ನಟನ ಭೇಟಿ ಮಾಡಬೇಕು ಎಂದರೆ ಸಾಕಷ್ಟು ಮ್ಯಾನೇಜರ್​​ಗಳನ್ನು ಸಂಪರ್ಕಿಸಬೇಕಾಗುತ್ತದೆ, ನಟನ ಭೇಟಿ ಮಾಡುವಾಗ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ 42 ನಿಯಮಗಳಿವೆ ಎಂದು ಆರೋಪಿಸಿದ್ದರು.

ತೆಲುಗು ನಟ ಅಲ್ಲು ಅರ್ಜುನ್ ಭೇಟಿ ಮಾಡಲು 42 ನಿಯಮಗಳಿವೆ, ಅವೆಲ್ಲವನ್ನೂ ಪಾಲಿಸಿದರೆ ಮಾತ್ರ ನಿಮಗೆ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂದು ಬಾಲಿವುಡ್‌ನ ಖ್ಯಾತ ಬ್ರ್ಯಾಂಡ್ ಸ್ಟ್ರ್ಯಾಟಜರ್ ಕಾವೇರಿ ಬರುವಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಭೇಟಿ ಮಾಡುವವರು ಅಲ್ಲು ಅರ್ಜುನ್ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ, ಕೈಕುಲುವಂತಿಲ್ಲ ಎಂದು ಹೇಳಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಯಾಕೆ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ? ಎಂದು ನಿರೂಪಕಿ ಕೇಳುತ್ತಿದ್ದಂತೆ “ದಟ್ಸ್‌ ದಿ ರೂಲ್” ಎಂದು ತಿಳಿಸಿದ್ದಾರೆ. ಫೋಟೊಶೂಟ್ ವೇಳೆ ಕೂಡ ಸಾಕಷ್ಟು ಕಠಿಣ ನಿಯಮಗಳಿರುತ್ತವೆ ಎಂದಿದ್ದಾರೆ. ಆದರೆ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗ್ತಿದೆ.

ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಆರೋಪ – ಅಲ್ಲು ಟೀಂ ಪ್ರತಿಕ್ರಿಯೆ

ಎಲ್ಲವೂ ಸುಳ್ಳು.. ಕಾನೂನು ಕ್ರಮಕ್ಕೆ ಮುಂದಾದ ಅಲ್ಲು

ಸದ್ಯ ಈ ಹೇಳಿಕೆ ವೈರಲ್​ ಬೆನ್ನಲ್ಲೆ ಇದೀಗ ಅಲ್ಲು ಅರ್ಜುನ್​ ಟೀಮ್​ ಪ್ರೆಸ್​ ನೋಟ್​ ರಿಲೀಸ್​ ಮಾಡಿದೆ. ಅಲ್ಲು ಅರ್ಜುನ್ ವಿರುದ್ಧದ ಹೇಳಿಕೆಗಳೆಲ್ಲಾ ನಿರಾಧಾರ ಹಾಗೂ ಸುಳ್ಳು. ಅವರು ಎಲ್ಲರನ್ನೂ ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುತ್ತಾರೆ. ನಾವು ಈ ಸುಳ್ಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಕಾನೂನು ತಂಡವು ಇದಕ್ಕೆ ಕಾರಣರಾದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಾಗಿದೆ. ದಯವಿಟ್ಟು ಸತ್ಯಾಂಶ ಗೊತ್ತಿಲ್ಲದೇ ಯಾವುದೇ ಮಾಹಿತಿಯನ್ನು ಹರಡಬೇಡಿ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ .

ಒಟ್ನಲ್ಲಿ  ಅಲ್ಲು ಅರ್ಜುನ್ ಖ್ಯಾತಿ ವಿಶ್ವಮಟ್ಟದಲ್ಲಿ ಇದೆ. ಹೀಗಾಗಿ, ಅವರ ಬಗ್ಗೆ ಈ ರೀತಿ ಸುಳ್ಳು ಆರೋಪ ಮಾಡುವುದರಿಂದ ಅವರ ಕರಿಯರ್​​ಗೆ ಹಾನಿ ಆಗುತ್ತದೆ. ಈ ಕಾರಣದಿಂದಲೇ ಅಲ್ಲು ಅರ್ಜುನ್ ತಂಡ ಇದಕ್ಕೆ ಸ್ಪಷ್ಟನೆ ನೀಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದೆ.

 

 

Exit mobile version