ಪುಷ್ಪ-2 ಬಳಿಕ ಅಲ್ಲು ಅರ್ಜುನ್ ನಸೀಬು ಕಂಪ್ಲೀಟ್ ಬದಲಾಗಿ ಹೋಗಿದೆ. ಈಗಾಗ್ಲೇ ಹಾಲಿವುಡ್ ಶೈಲಿಯ ಸೈನ್ಸ್ ಫಿಕ್ಷನ್ ಮೂವಿಗೆ ಮುಹೂರ್ತ ಇಟ್ಟಿರೋ ಐಕಾನ್ ಸ್ಟಾರ್, ಅದಾದ ಬಳಿಕ ನಮ್ಮ ಮಾನ್ಸ್ಟರ್ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸೋ ಮುನ್ಸೂಚನೆ ನೀಡಿದ್ದಾರೆ. ಈ ಕಾಂಬೋ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ.
- ಅಲ್ಲು ಅರ್ಜುನ್ಗೆ ನೀಲ್ ಆ್ಯಕ್ಷನ್ ಕಟ್.. AA23 ಕನ್ಫರ್ಮ್
- ಮಾನ್ಸ್ಟರ್ ಪ್ರಶಾಂತ್ ನೀಲ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್..!
- ಡ್ರ್ಯಾಗನ್ ಬಳಿಕ ನೀಲ್ ಆಯ್ಕೆ ಪ್ರಭಾಸ್ ಅಥ್ವಾ ಪುಷ್ಪ ಸ್ಟಾರ್?
- ಮೇಕಿಂಗ್ ಮಾಸ್ಟರ್ ಹಿಂದೆ ಬೀಳ್ತಿರೋ ಟಾಲಿವುಡ್ ಸ್ಟಾರ್ಸ್
ನಮ್ಮ ಉಗ್ರಂ ಸಾರಥಿ, ಕೆಜಿಎಫ್ ಮಾನ್ಸ್ಟರ್ ಪ್ರಶಾಂತ್ ನೀಲ್ಗೆ ಎಲ್ಲಿಲ್ಲದ ಡಿಮ್ಯಾಂಡ್. ಅದಕ್ಕೆ ಕಾರಣ ಅವರ ಮೇಕಿಂಗ್ ಪ್ಯಾಟ್ರನ್. ಕತ್ತಲಿದ್ದರೂ ಆ ಪ್ರಪಂಚವನ್ನು ಹಿಂದೆಂದೂ ಯಾರೂ ತೋರಿಸದ ರೀತಿ ಥ್ರಿಲ್ ಕೊಡುವಂತೆ ತೋರಿಸ್ತಾರೆ. ಒಂದೊಂದು ಪಾತ್ರ ಕೂಡ ಪ್ರಜ್ವಲಿಸುತ್ತೆ. ಎಲಿವೇಷನ್ಸ್ ನೆಕ್ಸ್ಟ್ ಲೆವೆಲ್ಗೆ ಇರಲಿವೆ. ಹಾಗಾಗಿಯೇ ಉಗ್ರಂ, ಕೆಜಿಎಫ್ ಹಾಗೂ ಸಲಾರ್ ಸಿನಿಮಾಗಳು ಟಾಕ್ ಆಫ್ ದಿ ಟೌನ್ ಆದವು. ಬಾಕ್ಸ್ ಆಫೀಸ್ನಲ್ಲಿ ಬ್ಯಾಂಗ್ ಮಾಡಿದವು.
ಇದೀಗ ತ್ರಿಬಲ್ ಆರ್ ಹಾಗೂ ದೇವರ ಚಿತ್ರಗಳಿಂದ ಮ್ಯಾನ್ ಆಫ್ ಮಾಸಸ್ ಆಗಿ, ಸಂಚಲನ ಮೂಡಿಸುತ್ತಿರೋ ಜೂನಿಯರ್ ಎನ್ಟಿಆರ್ ಜೊತೆ ಡ್ರ್ಯಾಗನ್ ಸಿನಿಮಾ ಮಾಡ್ತಿದ್ದಾರೆ ಪ್ರಶಾಂತ್ ನೀಲ್. ಅದರ ಶೂಟಿಂಗ್ ಭರದಿಂದ ಸಾಗ್ತಿದ್ದು, ಅದು ಮುಗೀತಾ ಇದ್ದಂತೆ ಸಲಾರ್ ಸೀಕ್ವೆಲ್ ಶೌರ್ಯಂಗ ಪರ್ವ ಶುಭಾರಂಭ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಟ್ರ್ಯಾಕ್ ಕೊಂಚ ಬದಲಾದಂತಿದೆ.
ಯೆಸ್.. ಪುಷ್ಪ-2 ಸಿನಿಮಾದಿಂದ ಗ್ಲೋಬಲ್ ಮಾರ್ಕೆಟ್ನ ಕಬ್ಜ ಮಾಡಿದಂತಹ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ ನೀಲ್ ಎನ್ನಲಾಗ್ತಿದೆ. ಅಲ್ಲು ಅರ್ಜುನ್ 23ನೇ ಸಿನಿಮಾಗೆ ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ. ಆದ್ರೀಗ ಸ್ಟೈಲಿಶ್ ಸ್ಟಾರ್ ತನ್ನ ಹೆಸರಿಡದ 22ನೇ ಸಿನಿಮಾದಲ್ಲಿ ಅಟ್ಲೀ ಜೊತೆ ಕಮಿಟ್ ಆಗಿದ್ದಾರೆ. ಹೌದು.. ಹಾಲಿವುಡ್ ಶೈಲಿಯಲ್ಲಿ 800 ಕೋಟಿ ಬಿಗ್ ಬಜೆಟ್ನಲ್ಲಿ AA22XA6 ಅನ್ನೋ ಸೈನ್ಸ್ ಫಿಕ್ಷನ್ ಮಾಡ್ತಿದ್ದಾರೆ.
ಅಲ್ಲು ಅರ್ಜುನ್ ಸೈನ್ಸ್ ಫಿಕ್ಷನ್ ಎಂಟರ್ಟೈನರ್ಗೆ ದೀಪಿಕಾ ಪಡುಕೋಣೆ ನಾಯಕನಟಿ ಅನ್ನೋದು ಕೂಡ ಇತ್ತೀಚೆಗೆ ಪಕ್ಕಾ ಆಗಿದೆ. ಆದ್ರೆ ಈ ಸಿನಿಮಾ ಬಳಿಕ ನೀಲ್ ಜೊತೆ ನಟಿಸಲಿದ್ದಾರೆ ಅಲ್ಲು ಅನ್ನೋದು ಬಹುತೇಕ ಖಚಿತವಾಗಿದೆ. ಮಾಸ್ ಹೀರೋ ಮಾಸ್ ಡೈರೆಕ್ಟರ್ ಒಂದಾದ್ರೆ ಅಲ್ಲೊಂದು ಬಿಗ್ ಮ್ಯಾಜಿಕ್ ಆಗಲಿದೆ. ಹಾಗಾಗಿ ಅಲ್ಲು ಅರ್ಜುನ್ ಮನೋಜ್ಞ ಅಭಿನಯಕ್ಕೆ ನೀಲ್ ಕಥೆ, ಮೇಕಿಂಗ್ ಜೊತೆಯಾದ್ರೆ ಹಿಸ್ಟರಿ ಕ್ರಿಯೇಟ್ ಆಗೋದ್ರಲ್ಲಿ ಡೌಟೇ ಇಲ್ಲ.
ಒಟ್ಟಾರೆ ನೀಲ್ ಅನ್ನೋ ಮೇಕಿಂಗ್ ಮಾಸ್ಟರ್ ಹಿಂದೆ ಬಿದ್ದಿರೋ ತೆಲುಗು ಸೂಪರ್ ಸ್ಟಾರ್ಗಳಾದ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ರಲ್ಲಿ ಡೈರೆಕ್ಟರ್ ಆಯ್ಕೆ ಯಾರು ಅನ್ನೋದು ಪ್ರಶ್ನೆಯಾಗಿದೆ. ಸಲಾರ್-2 ಶುರುವಾಗುತ್ತಾ ಅಥ್ವಾ AA23 ಕೈಗೆತ್ತಿಕೊಳ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್