ಅಲ್ಲು ಫ್ಯಾನ್ಸ್ ಮೀಟ್..ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್

ಕಮೆಂಟ್ ಮಾಡಿ, ಟ್ರೋಲ್ ಮಾಡಿ ಟೈಮ್ ವ್ಯರ್ಥ ಮಾಡ್ಬೇಡಿ

Your paragraph text (22)

ಸ್ಟಾರ್ಸ್ ಹಾಗೂ ಅವ್ರ ಫ್ಯಾನ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಭಿಮಾನಿಗಳ ಹೊರತಾಗಿ ಸ್ಟಾರ್‌ ತನ್ನ ಸ್ಟಾರ್‌ಡಮ್ ತೋರೋಕೆ ಆಗಲ್ಲ. ಅದೇ ರೀತಿ ಫ್ಯಾನ್ಸ್‌ಗೂ ಕೂಡ ಅವ್ರ ನೆಚ್ಚಿನ ನಾಯಕನಟ ಅನ್ನೋರು ಇದ್ದೇ ಇರ್ತಾರೆ. ಪುಷ್ಪ-2 ಚಿತ್ರದ ಬಳಿಕ ಎರಡು ವರ್ಷಗಳ ಗ್ಯಾಪ್ ನೀಡಿದ್ದ ಅಲ್ಲು ಅರ್ಜುನ್, ಇದೀಗ ತಮ್ಮ ಡೈಹಾರ್ಡ್ ಫ್ಯಾನ್ಸ್‌ನ ಮೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇಡೀ ದಿನ ಅವ್ರ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಾರೆ. ಫ್ಯಾನ್ಸ್‌ಗೆ ರಾಕಾ ನೀಡಿದ ರಾಕಿಂಗ್ ಮೆಸೇಜ್ ಜೊತೆ ಹೈಲೈಟ್ಸ್ ಇಲ್ಲಿದೆ.

ಪುಷ್ಪ-2.. 2024ರ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಮೂವಿ. ಈ ಚಿತ್ರದ ಬಳಿಕ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೇಱವ ಚಿತ್ರದ ಮೂಲಕವೂ ಪ್ರೇಕ್ಷಕರ ಮುಂದೆ ಬರಲೇ ಇಲ್ಲ. ತಮಿಳು ಡೈರೆಕ್ಟರ್ ಅಟ್ಲೀ ಜೊತೆ ರಾಕಾ ಅನ್ನೋ ಹಾಲಿವುಡ್ ಸ್ಟ್ಯಾಂಡರ್ಡ್ ಮೂವಿ ಮಾಡ್ತಿರೋ ಅಲ್ಲು, ಅದರ ರಿಲೀಸ್‌ಗೂ ಮೊದಲೇ ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ಅವ್ರ ಜೊತೆ ಕ್ವಾಲಿಟಿ ಸಮಯ ಕಳೆದಿದ್ದಾರೆ. ಅದು ನಿಜಕ್ಕೂ ಅಪರೂಪದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಆಗಿದ್ದು ಇಂಟರೆಸ್ಟಿಂಗ್.

ಹೌದು.. AAFA ಅಂದ್ರೆ ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್ಸ್ ಜೊತೆ ಸ್ಟೈಲಿಶ್ ಸ್ಟಾರ್ ಅಲ್ಲು ಮಾಡಿದ ಸ್ಪೆಷಲ್ ಇವೆಂಟ್‌‌ನಲ್ಲಿ ಬಹುತೇಕ ಎಲ್ಲಾ ಫ್ಯಾನ್ಸ್ ಅಸೋಸಿಯೇಷನ್ಸ್ ಪದಾಧಿಕಾರಿಗಳು ಭಾಗಿಯಾಗಿದ್ರು. ಅದೊಂದು ಫ್ಯಾನ್ಸ್ ಮೀಟ್‌‌ ಮಾತ್ರ ಆಗಿರದೆ, ಅರ್ಥಪೂರ್ಣ ಹಾಗೂ ನೆನಪಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು ವಿಶೇಷ. ಯಾಕಂದ್ರೆ ಅಲ್ಲಿ ಬಂದಂತಹ ಪ್ರತಿಯೊಬ್ಬ ಅಭಿಮಾನಿಗೂ ಅಲ್ಲು ಅರ್ಜುನ್ ಸಮಯ ನೀಡಿದ್ದಾರೆ. ಅವ್ರ ಹಾಕಿಸಿಕೊಂಡಿರೋ ಟ್ಯಾಟೂ ನೋಡಿದ್ದಾರೆ. ಅವ್ರು ತಂದ ಉಡುಗೊರೆ ಸ್ವೀಕರಿಸಿದ್ದಾರೆ. ಅವ್ರ ಸಿಹಿ ಮುತ್ತು, ಅಪ್ಪುಗೆ, ಅಭಿಮಾನ, ಗೌರವ ಸ್ವೀಕರಿಸಿದ್ದಾರೆ. ರಿಟರ್ನ್ ಗಿಫ್ಟ್ ಆಗಿ ಬೊಗಸೆ ತುಂಬಾ ಪ್ರೀತಿ ಕೊಟ್ಟು, ಫೋಟೋ ಕೂಡ ನೀಡಿದ್ದಾರೆ.

ಎಲ್ಲಕ್ಕಿಂತ ಹೈಲೈಟ್ ಅಂದ್ರೆ ಅಲ್ಲು ಅರ್ಜುನ್ ತಮ್ಮ ಫ್ಯಾನ್ಸ್‌ಗೆ ನೀಡಿರೋ ರಾಕಿಂಗ್ ಮೆಸೇಜ್. ಹೌದು.. ಪ್ರತೀ ದಿನ ನೀವು ಎದ್ದಾಗ ನಿಮ್ಮ ಬ್ಯಾಟರಿ ಹಂಡ್ರೆಡ್ ಪರ್ಸೆಂಟ್ ಚಾರ್ಜ್ ಆಗುತ್ತೆ. ಅಥ್ವಾ ನಿಮ್ಮ ಬಳಿ 100 ರೂಪಾಯಿ ಇರುತ್ತೆ. ಆ ಎನರ್ಜಿಯನ್ನ ಅನಾವಶ್ಯಕವಾಗಿ ವ್ಯರ್ಥ ಮಾಡಬೇಡಿ. ನಮಗೆ ಇಷ್ಟ ಇಲ್ಲದೇ ಇರೋರಿಗೆ ಕೆಟ್ಟದಾಗಿ ಕಮೆಂಟ್ ಹಾಕಿ, ಟ್ರೋಲ್ ಮಾಡೋಕೆ ಹೋಗಬೇಡಿ. ಅದರ ಬದಲಿಗೆ ನಿಮಗೆ ನೀವು ಸಮಯ ನೀಡಿ. ಬೇಕು ಅಂದ್ರೆ ನಿಮ್ಮ ಹುಡ್ಗಿ ಮನೆ ಮುಂದೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡಿ. ಅದ್ರಿಂದ ನಿಮಗೆ ನೆಮ್ಮದೆ ಆದ್ರೂ ಸಿಗಲಿದೆ ಅಂದಿದ್ದಾರೆ.

ಅಷ್ಟೇ ಅಲ್ಲ.. ಯಾರೋ ಅಭಿಮಾನಿಯೊಬ್ಬ ದೇವರ ಫೋಟೋ ಹಾಗೂ ವಸ್ತುಗಳನ್ನ ಪ್ರೀತಿಯಿಂದ ತಂದು ಗಿಫ್ಟ್ ಮಾಡಲು ಬಂದಾಗ, ಕಾಲಿಗೆ ಧರಿಸಿದ್ದ ಶೂಗಳನ್ನ ತೆಗೆದು, ಅದನ್ನ ಸ್ವೀಕರಿಸಿದ್ದಾರೆ. ಆ ಮೂಲಕ ತಾನು ಎಷ್ಟು ದೊಡ್ಡ ಸನಾತನಿ, ಹಿಂದೂ ಧರ್ಮದ ಪರಿಪಾಲಕ ಅನ್ನೋದನ್ನ ಅಸಂಖ್ಯಾರ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ಎವೆಲ್ಲಕ್ಕಿಂತ ಹೈಲೈಟ್ ಅಂದ್ರೆ, 3 ರಿಂದ 5 ಲಕ್ಷ ರೂಪಾಯಿ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಕಾರ್ಡ್‌ಗಳನ್ನ ಫ್ಯಾನ್ಸ್‌ಗೆ ವಿತರಿಸಿದ್ದಾರೆ. ಅಲ್ಲದೆ, ಪ್ರತೀ ವರ್ಷ ಅವುಗಳನ್ನ ತಮ್ಮ ಸ್ವಂತ ಖರ್ಚಿನಿಂದ ತಾವೇ ರಿನೆವಲ್ ಕೂಡ ಮಾಡಿಸಿಕೊಡೋ ಭರವಸೆ ನೀಡಿದ್ದಾರೆ. ಇದಲ್ಲವೇ ಒಬ್ಬ ಸೂಪರ್ ಸ್ಟಾರ್ ತನ್ನ ಫ್ಯಾನ್ಸ್‌ ಮೇಲೆ ಇಡಬೇಕಾದ ಪ್ರೀತಿ, ಅಭಿಮಾನ. ಅವ್ರಿಗೆ ಅವರುಗಳ ಪ್ರೀತಿ, ಸ್ನೇಹದ ಬದಲಿಗೆ ಬೇರೇನು ನೀಡೋಕೆ ಸಾಧ್ಯ ಅಲ್ಲವೇ..? ಒಟ್ಟಾರೆ ಅಲ್ಲು ಅರ್ಜುನ್‌ರ ಈ ನಡೆ, ಇತರೇ ಸ್ಟಾರ್‌‌ಗಳು ಹಾಗೂ ಅವ್ರ ಫ್ಯಾನ್ಸ್ ನಡುವಿನ ಬಾಂಡಿಂಗ್‌ಗೆ ಹೊಸ ಮುನ್ನುಡಿ ಬರೆಯೋ ಮುನ್ಸೂಚನೆ ನೀಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version