ದಳಪತಿ ವಿಜಯ್ vs ಗವರ್ನರ್: ನಟ ಪ್ರಕಾಶ್‌ ರಾಜ್ ಕೆಂಡಾಮಂಡಲ

BeFunky collage 2026 05 07T132639.203

ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಮತ್ತು ರಾಜ್ಯಪಾಲರ ನಡುವಿನ ಭೇಟಿ ನಂತರ ಉದ್ಭವಿಸಿರುವ ವಿವಾದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನಟ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗವರ್ನರ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಪ್ರತಿಕ್ರಿಯೆ:

ಪ್ರಕಾಶ್ ರಾಜ್ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ದಳಪತಿ ವಿಜಯ್ ಅವರ ಪರವಾಗಿ ಸ್ಪಷ್ಟವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಗವರ್ನರ್ ನಡೆ ಏನು?

ರಾಜ್ಯಪಾಲರು ದಳಪತಿ ವಿಜಯ್ ಅವರು ಸಲ್ಲಿಸಿದ ಬೆಂಬಲ ಪತ್ರಗಳನ್ನು ಸಾಕೆಂದು ತಿರಸ್ಕರಿಸಿ, 118 ಶಾಸಕರ ಸಹಿ ಬೇಕು ಎಂದು ಆಗ್ರಹಿಸಿದ್ದಾರೆ. ಸಂಖ್ಯಾಬಲ ಕೊರತೆ ಎಂದು ಹೇಳಿ ವಿಜಯ್ ಅವರನ್ನು ವಾಪಸ್ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಈ ನಡೆಯನ್ನು ಪ್ರಕಾಶ್ ರಾಜ್ ಸೇರಿದಂತೆ ಹಲವು ವಿಜಯ್ ಬೆಂಬಲಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಈ ವಿವಾದವು ತಮಿಳುನಾಡು ರಾಜಕೀಯವನ್ನು ಮತ್ತಷ್ಟು ಕಾವು ಹೆಚ್ಚಿಸಿದೆ. ದಳಪತಿ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತಿದ್ದರೆ, ರಾಜ್ಯಪಾಲರು ಕಠಿಣ ನಿಲುವು ತಳೆದಿದ್ದಾರೆ.

Exit mobile version