ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೂನಿಯನ್ ಬಜೆಟ್ 2026-27 ಮಂಡಿಸುವ ಮೂಲಕ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ 9 ಬಜೆಟ್ಗಳನ್ನು ಪ್ರಸ್ತುತಪಡಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರತಿ ಬಾರಿ ಬಜೆಟ್ ಮಂಡನೆಯ ವೇಳೆ ಅವರು ಆಯ್ಕೆ ಮಾಡಿಕೊಳ್ಳುವ ಸೀರೆಗಳು ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ಕೈಮಗ್ಗ ನೇಕಾರಿಕೆ ಮತ್ತು ರಾಜ್ಯಗಳ ಶ್ರೀಮಂತ ಜವಳಿ ಕಲೆಯನ್ನು ಪ್ರತಿಬಿಂಬಿಸುತ್ತವೆ. ಈ ಸೀರೆಗಳು ಫ್ಯಾಷನ್ ಮಾತ್ರವಲ್ಲದೆ, “ವೋಕಲ್ ಫಾರ್ ಲೋಕಲ್” ಅಭಿಯಾನಕ್ಕೆ ಸಂಕೇತವಾಗಿವೆ.
2026-27 ಬಜೆಟ್ನಲ್ಲಿ ಕಾಂಚೀಪುರಂ ಸೀರೆ :
ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನ ಕಾಂಚೀಪುರಂ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆಳವಾದ ಕೆನ್ನೇರಳೆ/ಕಂದು ಬಣ್ಣದ (ಮ್ಯಾಜೆಂಟಾ/ಡೀಪ್ ಮರೂನ್) ಈ ಸೀರೆಯಲ್ಲಿ ಹೊನ್ನಿನ ಕತ್ತಮ್ (ಚೆಕ್ಗಳು), ಕಾಫಿ ಬಣ್ಣದ ಅಂಚು ಮತ್ತು ಸೂಕ್ಷ್ಮ ಥ್ರೆಡ್ ವರ್ಕ್ ಇತ್ತು. ತಮಿಳುನಾಡಿನ ಶತಮಾನಗಳ ಹಳೆಯ ನೇಕಾರಿಕೆ ಪರಂಪರೆಯನ್ನು ಗೌರವಿಸುವ ರೀತಿಯಲ್ಲಿ ಈ ಸೀರೆಯನ್ನು ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯು ರಾಜ್ಯದ ಜವಳಿ ಕಲಾವಿದರಿಗೆ ಬೆಳಕು ಚೆಲ್ಲುವ ಉದ್ದೇಶವನ್ನು ಹೊಂದಿತ್ತು.
ಹಿಂದಿನ ಬಜೆಟ್ಗಳಲ್ಲಿ ಸೀರೆಗಳ ವಿಶೇಷತೆಗಳು :
ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಜೆಟ್ಗೆ ವಿಶಿಷ್ಟ ಸೀರೆ ಆಯ್ಕೆ ಮಾಡಿ ದೇಶದ ವಿವಿಧ ರಾಜ್ಯಗಳ ಕೈಮಗ್ಗ ಕಲೆಯನ್ನು ಪ್ರಚಾರ ಮಾಡಿದ್ದಾರೆ. ಇಲ್ಲಿದೆ ವರ್ಷಾವಾರು ವಿವರ:
- 2019-20ರ ಬಜೆಟ್ : ಹಣಕಾಸು ಸಚಿವೆಯಾಗಿ ತಮ್ಮ ಮೊದಲ ಬಜೆಟ್ನಲ್ಲಿ ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಧರಿಸಿದ್ದರು. ಅಂದೇ ಅವರು ಸಾಂಪ್ರದಾಯಿಕ ‘ಬಜೆಟ್ ಬ್ರೀಫ್ಕೇಸ್’ ಬದಲು ‘ಬಹಿ-ಖಾತಾ’ ಪದ್ಧತಿ ಜಾರಿಗೆ ತಂದಿದ್ದು.
- 2020-21ರ ಬಜೆಟ್: ಹಳದಿ ಬಣ್ಣದ ರೇಷ್ಮೆ ಸೀರೆ. ಹೆಲ್ತ್ಕೇರ್ ಮತ್ತು ಸ್ವಚ್ಛ ಭಾರತ್ ಯೋಜನೆಗಳಿಗೆ ಒತ್ತು ನೀಡಿದ ಬಜೆಟ್.
- 2021-22ರ ಬಜೆಟ್: ಕೋವಿಡ್ ಸಂಕಷ್ಟದ ಸಮಯದಲ್ಲಿ ಹೈದರಾಬಾದ್ನ ಪೋಚಂಪಳ್ಳಿ ಇಕ್ಕತ್ ರೇಷ್ಮೆ ಸೀರೆ ಧರಿಸಿ ಧೈರ್ಯ ಮತ್ತು ಸ್ಥಿರತೆಯ ಸಂದೇಶ ನೀಡಿದ್ದರು.
- 2022-23ರ ಬಜೆಟ್: ಕೋವಿಡ್ ಸಂಕಷ್ಟದ ಸಮಯದಲ್ಲಿ ಹೈದರಾಬಾದ್ನ ಪೋಚಂಪಳ್ಳಿ ಇಕ್ಕತ್ ರೇಷ್ಮೆ ಸೀರೆ ಧರಿಸಿ ಧೈರ್ಯ ಮತ್ತು ಸ್ಥಿರತೆಯ ಸಂದೇಶ ನೀಡಿದ್ದರು.
- 2023-24ರ ಬಜೆಟ್: ಕರ್ನಾಟಕದ ಹೆಮ್ಮೆಯ ಇಳಕಲ್ ಸೀರೆ ಧರಿಸಿ ರಾಜ್ಯಸಭಾ ಸದಸ್ಯೆಯಾಗಿ ನಾಡಿನ ಕಲೆಗೆ ಗೌರವ ಸಲ್ಲಿಸಿದ್ದರು.
- 2024-25ರ ಮಧ್ಯಂತರ ಬಜೆಟ್ : ಚುನಾವಣಾ ವರ್ಷದ ಮಧ್ಯಂತರ ಬಜೆಟ್ನಲ್ಲಿ ಪಶ್ಚಿಮ ಬಂಗಾಳದ ಪ್ರಸಿದ್ಧ ಕಾಂತ ಹೊಲಿಗೆಯ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆಯಲ್ಲಿ ಮಿಂಚಿದ್ದರು. ಇದು ಅವರ ಮೊದಲ ಮಧ್ಯಂತರ ಬಜೆಟ್ ಕೂಡ ಆಗಿತ್ತು.
- 2024-25ರ ಪೂರ್ಣ ಬಜೆಟ್: ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ನಲ್ಲಿ ಸಚಿವರು ಮಜೆಂಟಾ ಬಾರ್ಡರ್ ಹೊಂದಿದ್ದ ಮಂಗಳಗಿರಿ ಕಾಟನ್ ಸೀರೆಯನ್ನು ಉಟ್ಟಿದ್ದರು. ಈ ಬಜೆಟ್ನಲ್ಲಿ ಮೊಬೈಲ್ ಫೋನ್, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಇಳಿಕೆ ಮಾಡಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದ್ದರು.
- 2025-26ರ ಬಜೆಟ್: ತಮ್ಮ 8ನೇ ಬಜೆಟ್ ಮಂಡನೆಯ ವೇಳೆ ಸಚಿವರು ಬಿಹಾರದ ಖ್ಯಾತ ಮಿಥಿಲಾ ಕಲಾವಿದೆ ಮತ್ತು ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ ಅವರು ಉಡುಗೊರೆಯಾಗಿ ನೀಡಿದ್ದ ಸೀರೆಯನ್ನು ಧರಿಸಿದ್ದರು. ಮಧುಬನಿಯ ಮಿಥಿಲಾ ಆರ್ಟ್ ಇನ್ಸ್ಟಿಟ್ಯೂಟ್ ಭೇಟಿಯ ಸಂದರ್ಭದಲ್ಲಿ ಈ ಸೀರೆ ಅವರಿಗೆ ಲಭಿಸಿತ್ತು.
-
2026-27ರ ಬಜೆಟ್:
ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣದ ಸೀರೆಯಲ್ಲಿ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸೀರೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಸೀರೆಗಳ ಮೂಲಕ ನಿರ್ಮಲಾ ಸೀತಾರಾಮನ್ ಅವರು ಭಾರತದ ಜವಳಿ ವೈವಿಧ್ಯತೆಯನ್ನು ಪ್ರದರ್ಶಿಸುತ್ತಾ, ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸುತ್ತಿದ್ದಾರೆ.
ಬಜೆಟ್ ಮಂಡನೆಯ ಜೊತೆಗೆ ಅವರ ಸೀರೆ ಆಯ್ಕೆಯು ಪ್ರತಿ ವರ್ಷ ಜನರ ಗಮನ ಸೆಳೆಯುತ್ತದೆ. ಇದು ಕೇವಲ ಫ್ಯಾಷನ್ ಆಗಿರದೆ, ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾಗಿದೆ. 9ನೇ ಬಜೆಟ್ನಲ್ಲಿ ಕಾಂಚೀಪುರಂ ಸೀರೆಯ ಆಯ್ಕೆಯು ತಮಿಳುನಾಡಿನ ನೇಕಾರಿಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ.





