ರೀಲ್ಸ್ ಮಾಡಿ ಮತ್ತೆ ಜೈಲು ಕದ ತಟ್ಟಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್: ಮತ್ತೊಂದು ದೂರು ದಾಖಲು

Untitled design (1)

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ಈಗಾಗಲೇ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲುವಾಸ ಅನುಭವಿಸಿದ್ದ ರಜತ್, ಈಗ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ರೀಲ್ಸ್/ಫೋಟೋಶೂಟ್ ಮಾಡಿದ್ದಕ್ಕೆ ದೂರು ದಾಖಲಾಗಿದೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಮೈಸೂರಿನ ಪಾರಂಪರಿಕ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು ರಜತ್ ರೆಟ್ರೋ ಸ್ಟೈಲ್ ಕಾರಿನಲ್ಲಿ ಬಂದು ಸಿಗರೇಟ್ ಹಚ್ಚಿ ವಿಡಿಯೋ/ಫೋಟೋ ಶೂಟ್ ಮಾಡಿದ್ದಾರೆ. ಕಾರಿನಿಂದ ಇಳಿದು ಸಿಗರೇಟ್ ಹಿಡಿದು ಪೋಸ್ ಕೊಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ಕುರಿತು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಿಂದಾಗಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ದೂರು ನೀಡಿದ್ದಾರೆ. ದೂರಿನಲ್ಲಿ ಹೀಗೆ ಹೇಳಲಾಗಿದೆ:

ಹಿಂದಿನ ಪ್ರಕರಣ :

ಬಿಗ್ ಬಾಸ್ ಕನ್ನಡದಲ್ಲಿ ಭಾಗವಹಿಸಿದ್ದ ರಜತ್ ಮತ್ತು ವಿನಯ್ ಗೌಡ ಅವರು ಶೋ ಮುಗಿದ ನಂತರ ಸ್ಟುಡಿಯೋ ಹೊರಗೆ ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಇದರಿಂದ ಶಸ್ತ್ರಾಸ್ತ್ರ ಕಾಯ್ದೆ ಅಡಿ ಎಫ್‌ಐಆರ್ ದಾಖಲಾಗಿ ಇಬ್ಬರನ್ನೂ ಬಂಧಿಸಲಾಗಿತ್ತು. ಜಾಮೀನು ಪಡೆದ ನಂತರವೂ ಕೋರ್ಟ್‌ಗೆ ಸರಿಯಾಗಿ ಹಾಜರಾಗದ ಕಾರಣ ಮತ್ತೆ ಬಂಧನಕ್ಕೆ ಒಳಗಾಗಿದ್ದರು. ಈಗ ಇನ್ನೂ ಆ ಪ್ರಕರಣದ ನೆನಪು ಮಾಸದೇ ಇರುವಾಗಲೇ ಹೊಸ ದೂರು ಎದುರಾಗಿದೆ.

ಈ ವಿವಾದದಿಂದ ರಜತ್ ಅವರ ಫ್ಯಾನ್ಸ್ ಮತ್ತು ನೆಟ್ಟಿಗರಲ್ಲಿ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಪಾರಂಪರಿಕ ಕಟ್ಟಡಗಳ ಬಳಿ ರೀಲ್ಸ್ ಮಾಡುವಾಗ ಜಾಗೃತರಾಗಿರಬೇಕು ಎಂಬ ಸಂದೇಶ ನೀಡುತ್ತದೆ.

Exit mobile version