BBK 12: ಗಿಲ್ಲಿಗೆ ಅಡುಗೆ ಚಾಲೆಂಜ್: ಉಪ್ಪಿಟ್ಟೋ ಪಲಾವೋ? ಬ್ರೇನ್ ವರ್ಕ್ ಆಗ್ತಿಲ್ಲ ಎಂದ ಧ್ರುವಂತ್‌

Untitled design 2026 01 12T225935.235

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 (Bigg Boss Kannada 12) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.. ಮನೆಯೊಳಗೂ ಹೊರಗೂ ಗಿಲ್ಲಿ ಹವಾ ಜೋರಾಗಿದ್ದು, ವೀಕೆಂಡ್‌ ಪಂಚಾಯ್ತಿಯಲ್ಲಿ ಸುದೀಪ್‌ (Sudeep) ನೀಡಿದ ವಿಶೇಷ ಶಿಕ್ಷೆಯೇ ಇದಕ್ಕೆ ಕಾರಣವಾಗಿದೆ.

ವೀಕೆಂಡ್‌ ಪಂಚಾಯ್ತಿಯಲ್ಲಿ ಸುದೀಪ್‌, “ಮುಂದಿನ ಒಂದು ವಾರ ಗಿಲ್ಲಿಯೇ ಎಲ್ಲರಿಗೂ ಅಡುಗೆ ಮಾಡಬೇಕು” ಎಂದು ಆದೇಶ ನೀಡಿದ್ದರು. ಅದರಂತೆ ಗಿಲ್ಲಿ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ದು, ಅವರ ಕೈರುಚಿ ಸವಿದ ಮನೆಮಂದಿ ಅಕ್ಷರಶಃ ಹೈರಾಣಾಗಿದ್ದಾರೆ.

ಗಿಲ್ಲಿ ಅಡುಗೆ: ಉಪ್ಪಿಟ್ಟೋ? ಪಲಾವೋ? ಗೊಂದಲದಲ್ಲೇ ಸ್ಪರ್ಧಿಗಳು

ಗಿಲ್ಲಿ ಮಾಡಿದ ಅಡುಗೆಯನ್ನು ಮೊದಲಿಗೆ ಸವಿದವರು ಧ್ರುವಂತ್‌ (Dhruvanth). ತಟ್ಟೆ ಮುಂದೆ ಬಂದ ತಿನಿಸನ್ನು ನೋಡಿ ಗೊಂದಲಗೊಂಡ ಧ್ರುವಂತ್‌, “ಇದು ಏನು? ಉಪ್ಪಿಟ್ಟಾ? ಪಲಾವ್‌ ವಾ? ಅರ್ಥವೇ ಆಗ್ತಿಲ್ಲ” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನ ತಿಂದು “ನನ್ನ ಬ್ರೇನ್‌ ವರ್ಕ್‌ ಆಗ್ತಿಲ್ಲ” ಎಂದು ನೇರವಾಗಿ ಹೇಳಿದ ಧ್ರುವಂತ್‌, ಗಿಲ್ಲಿ ಅಡುಗೆಗೆ ಫನ್ನಿ ಟಚ್ ಕೊಟ್ಟಿದ್ದಾರೆ.

ಇನ್ನು ರಘು ಕೂಡ ಗಿಲ್ಲಿ ಅಡುಗೆಯ ಬಗ್ಗೆ ಕಾಮೆಂಟ್‌ ಮಾಡಿ, “ಸಿಪ್ಪೆ ತೆಗೆದೇ ತರಕಾರಿ ಹಾಕಿದ್ದಾರೆ” ಎಂದು ಹೇಳಿದ್ದಾರೆ..

“ಆಲೂಗಡ್ಡೆ ಗೋಡೆಗೆ ಹೊಡೆದ್ರೆ ವಾಪಸ್ ಬರುತ್ತೆ”: ಧ್ರುವಂತ್ ಕಾಮೆಡಿ

ಗಿಲ್ಲಿ ಮಾಡಿದ ಆಲೂಗಡ್ಡೆ ತಿನಿಸು ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು. “ಆಲೂಗಡ್ಡೆ ಸರಿಯಾಗಿ ಬೆಂದೇ ಇಲ್ಲ. ಗೋಡೆಗೆ ಹೊಡೆದರೆ ವಾಪಸ್ ಬರುತ್ತೆ” ಎಂದು ಧ್ರುವಂತ್‌ ಹೇಳಿದ್ದು ಮನೆಮಂದಿಯನ್ನು ನಗಿಸಿದ್ದಾರೆ.

ಇದಕ್ಕಿಂತ ಹೆಚ್ಚಾಗಿ, “ಈ ಆಲೂಗಡ್ಡೆ ಗಿಲ್ಲಿ ಮೂಗು ಥರ ಇದೆ” ಎಂದು ಹೇಳಿದ ಧ್ರುವಂತ್‌ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, “ನಾನು ಏನು ಮಾಡಲಿ?” ಎಂದು ನಗುತ್ತಲೇ ಉತ್ತರ ಕೊಟ್ಟಿದ್ದಾರೆ.

ಈ ಎಲ್ಲಾ ದೃಶ್ಯಗಳನ್ನು ನೋಡಿ ಅಶ್ವಿನಿ ಗೌಡ ನಗುನಗುತ್ತಲೇ ಸುಸ್ತಾದರು. ಗಿಲ್ಲಿ ಅಡುಗೆ ಮನೆ ಮಾತ್ರವಲ್ಲದೆ ಇಡೀ ಮನೆಯ ವಾತಾವರಣವನ್ನೇ ಲೈಟ್‌ ಮೋಡ್‌ಗೆ ತಂದುಬಿಟ್ಟಿದೆ.

ಟಾಸ್ಕ್‌ & ಬಿರುದು: ಗಿಲ್ಲಿಯ ಆತ್ಮವಿಶ್ವಾಸ ಪೀಕ್!

ಇನ್ನೊಂದೆಡೆ, ಬಿಗ್‌ ಬಾಸ್‌ ಹೊಸ ಟಾಸ್ಕ್‌ ನೀಡಿದ್ದು, “ಅಭಿಮಾನಿಗಳು ನಿಮ್ಮನ್ನು ಯಾವ ಬಿರುದಿನಿಂದ ಗುರುತಿಸಬೇಕು?” ಎಂದು ಸ್ಪರ್ಧಿಗಳಿಗೆ ಕೇಳಲಾಗಿದೆ.

ಈ ಟಾಸ್ಕ್‌ನಲ್ಲಿ ಗಿಲ್ಲಿ ತಮ್ಮ ಆತ್ಮವಿಶ್ವಾಸವನ್ನು ಮತ್ತೊಮ್ಮೆ ತೋರಿಸಿದ್ದು, “ಸಕಲ ಕಲಾ ವಲ್ಲಭ – ಎಲ್ಲ ಆಟ ಬಲ್ಲವ” ಎಂಬ ಬಿರುದನ್ನು ತಮ್ಮ ಹೆಸರಿನ ಮುಂದೆ ಬರೆದಿದ್ದಾರೆ. ಇನ್ನು ಧ್ರುವಂತ್‌ ಅವರು “ಡ್ಯಾಶಿಂಗ್ ಧ್ರುವಂತ್” ಎಂದು ಬರೆದಿದ್ದಾರೆ.

ಸೀಕ್ರೆಟ್ ರೂಂ ಚರ್ಚೆ

ಟಾಸ್ಕ್ ವೇಳೆ ಅಶ್ವಿನಿ ಗೌಡ, “ಸೀಕ್ರೆಟ್ ರೂಂ ಹೀರೋ” ಎಂಬ ಬಿರುದನ್ನು ಸಲಹೆ ನೀಡಿದರೆ, ರಕ್ಷಿತಾ ಶೆಟ್ಟಿ ಅದಕ್ಕೆ ತಿರುಗೇಟು ನೀಡಿ, “ಧನುಷ್‌ ಸೀಕ್ರೆಟ್ ರೂಂ ಜೀರೋ” ಎಂದು ಹೇಳಿದ್ದು ಮನೆಯೊಳಗೆ ಸದ್ದು ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಧ್ರುವಂತ್‌, “ಟಾರ್ಗೆಟ್ ಮಾಡ್ತಾರೆ ಅನ್ನಿಸಿದಾಗ ದೊಡ್ಡ ಘರ್ಜನೆಯೊಂದಿಗೆ ಬಂದಿದ್ದೀನಿ” ಎಂದು ತಮ್ಮ ಆಟದ ಆತ್ಮವಿಶ್ವಾಸ ತೋರಿಸಿದರು.

ಫಿನಾಲೆಗೆ ದಿನಗಣನೆ- ಪೈಪೋಟಿ ಇನ್ನಷ್ಟು ಜೋರು

ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆ ಸಮೀಪಿಸುತ್ತಿದ್ದು, ಈಗಾಗಲೇ ರಾಶಿಕಾ ಎಲಿಮಿನೇಟ್ ಆಗಿದ್ದಾರೆ. ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಗಿಲ್ಲಿಯ ಅಡುಗೆ ಅಬ್ಬರ, ಧ್ರುವಂತ್‌ ಕಾಮೆಡಿ ಕಾಮೆಂಟ್‌, ಹಾಗೂ ಬಿರುದು ಟಾಸ್ಕ್‌ ಇವೆಲ್ಲವೂ ಪ್ರೇಕ್ಷಕರಿಗೆ ಫುಲ್ ಎಂಟರ್‌ಟೈನ್‌ಮೆಂಟ್ ನೀಡುತ್ತಿವೆ.

Exit mobile version