ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಸಾವಿರಾರು ಅಭಿಮಾನಿಗಳು ಛತ್ರಿ ಹಿಡಿದು ನಿಂತ ಕ್ಷಣಕ್ಕೆ ಸಾಕ್ಷಿಯಾದದ್ದು ಹಯಗ್ರೀವ ಟ್ರೈಲರ್ ಲಾಂಚ್ ಇವೆಂಟ್. ಕರುನಾಡ ಶೋಕ್ದಾರ್ ಧನ್ವೀರ್ ನಟನೆಯ ಈ ಮಾಸ್ ಸಿನಿಮಾ, ಟೀಸರ್ ಮೂಲಕವೇ ಕ್ಯೂರಿಯಾಸಿಟಿ ಮೂಡಿಸಿತ್ತು. ಇದೀಗ ಸಕ್ಕರೆ ನಾಡಲ್ಲಿ ರಿಲೀಸ್ ಆಗಿರೋ ಟ್ರೈಲರ್ಗೆ ಸಿನಿಪ್ರಿಯರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹಯಗ್ರೀವ..ಸ್ಯಾಂಡಲ್ವುಡ್ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಸಮೃದ್ಧಿ ಮಂಜುನಾಥ್ ನಿರ್ಮಾಣದ, ರಘುಕುಮಾರ್ ನಿರ್ದೇಶನದ ಹಯಗ್ರೀವ ಇದೇ ಫೆಬ್ರವರಿ 27ಕ್ಕೆ ತೆರೆಗಪ್ಪಳಿಸುತ್ತಿದ್ದು, ಹಾಡುಗಳು ಟೀಸರ್ ಮೂಲಕವೇ ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು. ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಹಯಗ್ರೀವ ಟೀಸರ್ .. ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚೆಸಿತ್ತು.. ಸದ್ಯ ಈಗ ಚಿತ್ರದ ಪವರ್ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿದೆ.. ಆ್ಯಕ್ಷನ್ ಪ್ರೀಯರಿಗಂತೂ ಹಯಗ್ರೀವ ಸಿನಿಮಾ ಸಖತ್ ಮನರಂಜನೆ ನೀಡಲಿದೆ ಅನ್ನೋದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ.
ಮಂಡ್ಯದಲ್ಲಿ ಕರುನಾಡ ಶೋಕ್ದಾರ್ ಹಯಗ್ರೀವನ ಅಬ್ಬರ
ಮಳೆಯಲ್ಲಿ ಕೊಡೆ ಹಿಡಿಯದೇ ನಿಂತ ಡಿಬಾಸ್ ಫ್ಯಾನ್ಸ್..!
ಇದು ರಾಜನ ಕಥೆಯಲ್ಲ ರಾಕ್ಷಸನ ಕಥೆ ಎಂಬ ಸಾಲುಗಳಿಂದ ಟ್ರೈಲರ್ ಆರಂಭವಾಗಿತ್ತೆ. ಖಾಕಿ ತೊಟ್ಟು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್ ಅಬ್ಬರಿಸಿದ್ದಾರೆ. ಹಲವು ಮಿಸ್ಟರಿಯಸ್ ಮರ್ಡರ್ಗಳ ಸುತ್ತ ಕಥೆ ಹಯಗ್ರೀವ ಚಿತ್ರದ ಟ್ರೈಲರ್ ಹೆಣೆಯಲಾಗಿದೆ. ಈ ಚಿತ್ರದಲ್ಲಿ ಧನ್ವೀರ್ಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಗಿಲ್ಲಿ ನಟ , ಅಶ್ವಿನಿ ಗೌಡ, ಶೋಭರಾಜ್ ಸಾಧು ಕೋಕಿಲ ಶರತ್ ಲೋಹಿತಾಶ್ವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಮಂಡ್ಯದಲ್ಲಿ ನಡೆದ ಅದ್ದೂರಿ ಟ್ರೈಲರ್ ಲಾಂಚ್ ಇವೆಂಟ್ ನಡೆದಿದ್ದು, ಇಡೀ ಚಿತ್ರತಂಡವೆ ಭಾಗಿಯಾಗಿತ್ತು.
ಹಾಗೇ ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದು, ಮಂಡ್ಯದ ಜನತೆ ಮತ್ತೆ ಮಾಸ್ ವೈಬ್ಸ್ ನಲ್ಲಿದ್ರು. ಕತ್ತಲಾಗುತ್ತಾ ಮಳೆ ಹನಿಗಳು ಸುರಿಯುತ್ತಿದ್ದರೂ, ಸಾವಿರಾರು ಅಭಿಮಾನಿಗಳು ಮೈದಾನ ಬಿಟ್ಟು ಹೋಗಲಿಲ್ಲ. ಕೈಯಲ್ಲಿ ಛತ್ರಿ, ಹೃದಯದಲ್ಲಿ ಡಿಬಾಸ್ ಪ್ರೀತಿ, ಮಳೆಯನ್ನೇ ಲೆಕ್ಕಿಸದೆ ಇಡೀ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ವೇದಿಕೆಗೆ ವಿಜಯಲಕ್ಷ್ಮಿ, ಧನ್ವಿರ್ ಎಂಟ್ರಿ ಆಗುತ್ತಿದ್ದಂತೆ ಜೈಕಾರಗಳು ಗಗನಕ್ಕೇರಿದವು.
ಇದು ರಾಜನ ಕಥೆಯಲ್ಲ, ರಾಕ್ಷಸನ ಕಥೆ.. ಟೆರಿಫಿಕ್ ಟ್ರೈಲರ್
ಧನ್ವೀರ್ ನಮ್ಮ ಮನೆ ಸದಸ್ಯ ಎಂದ ವಿಜಯಲಕ್ಷ್ಮೀ, ವಿನೀಶ್
ಇದೆ ವೇಳೆ ಮಾತನಾಡಿದ ವಿಜಯಲಕ್ಷ್ಮಿ ಧನ್ವೀರ್ ನಮ್ಮವರೇ ಆಗಿದ್ದಾರೆ. ಅವರು ಹೊರಗಿನವರು ಅನಿಸೋದಿಲ್ಲ. ನಮ್ಮ ಫ್ಯಾಮಿಲಿ ಮೆಂಬರ್ ಅಂತಲೇ ಹೇಳಿಕೊಂಡಿದ್ದಾರೆ. ನಮಗೆ ತೋರಿದ ಪ್ರೀತಿಯನ್ನ ಇವರ ಚಿತ್ರಕ್ಕೂ ತೋರಿಸಿ ಅಂತಲೇ ವಿಜಯಲಕ್ಷ್ಮಿ ದರ್ಶನ್ ಕೇಳಿಕೊಂಡಿದ್ದಾರೆ. ಇದೆ ವೇಳೆ ಅಭಿಮಾನಿಗಳ ಬೆಂಬಲದಿಂದ ದರ್ಶನ್ ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ತಿಳಿಸಿ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.
ತಾಳ್ಮೆಯಿಂದ ಇಡೀ ಕಾರ್ಯಕ್ರಮ ನೋಡಿದ ಮಂಡ್ಯ ಜನತೆಗೆ ಧನ್ವೀರ್ ಕೃತಜ್ಞತೆ ಸಲ್ಲಿಸಿದರು. “ಪೈರಸಿ ನಿಲ್ಲಿಸಿ” ಅನ್ನೋ ಸಂದೇಶದ ಜೊತೆ ಡಿಬಾಸ್ ಪರವಾಗಿ ಹಾಡೊಂದನ್ನು ಹಾಡಿ ಅಭಿಮಾನಿಗಳ ಮನ ಗೆದ್ದರು. ಮಳೆ ಹನಿಗಳ ನಡುವೆ ಬೆಳಗಿದ ಮೊಬೈಲ್ ಫ್ಲ್ಯಾಶ್ಗಳು, ಕೂಗಿದ ಜೈಕಾರಗಳು ಕ್ಷಣಕ್ಷಣಕ್ಕೂ ಇವೆಂಟ್ ಮಾಸ್ ಫೀಲ್ ಹೆಚ್ಚಿಸಿತು.
ಒಟ್ಟಾರೆ, ಡಿಬಾಸ್ ದರ್ಶನ್ ಅವರ ಬಂಟ ಧನ್ವೀರ್ ಗೌಡ ಹಯಗ್ರೀವನಾಗಿ ಬೆಳ್ಳಿತೆರೆ ಮೇಲೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಮಳೆಯನ್ನೇ ಮೀರಿದ ಅಭಿಮಾನಿಗಳ ಪ್ರೀತಿ ಈ ಸಿನಿಮಾಗೆ ಬಿಗ್ ಬೂಸ್ಟ್ ಕೊಟ್ಟಿದೆ. ಇದೇ ಫೆಬ್ರವರಿ 27ಕ್ಕೆ ಚಿತ್ರಮಂದಿರಗಳಲ್ಲಿ ಹಯಗ್ರೀವನ ಆರ್ಭಟವನ್ನ ಕಣ್ತುಂಬಿಕೊಳ್ಳೋಕೆ ನೀವು ರೆಡಿನಾ..?





