• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡಿಫರೆಂಟ್ ಡಿಕೆ : ಧರ್ಮ.. ದೇವರು. ಜ್ಯೋತಿಷ್ಯ ಮತ್ತು ಡಿಕೆ ಶಿವಕುಮಾರ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
February 27, 2025 - 2:02 pm
in Flash News, ಕರ್ನಾಟಕ
0 0
0

ಮಹೇಶ್ ಕುಮಾರ್ ಕೆ.ಎಲ್. ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್
ಡಿಕೆ ಶಿವಕುಮಾರ್ ರಾಜಕೀಯ ಅಷ್ಟು ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಆದರೆ ಡಿಕೆ ಶಿವಕುಮಾರ್ ಟೀಕೆಗಳಿಗೆಲ್ಲ ಕೇರ್ ಮಾಡಿದವರಲ್ಲ. ಡಿಕೆ ಇಡೋ ಹೆಜ್ಜೆಯೇ ವಿಭಿನ್ನ. ಅವರು ರೆಗ್ಯುಲರ್ ಮಾದರಿಯ ಪೊಲಿಟಿಷಿಯನ್ ಅಲ್ಲ. ಮಾಮೂಲಿ ಸಿದ್ಧಾಂತಗಳನ್ನು ಫಾಲೋ ಮಾಡೋದೇ ಇಲ್ಲ.ಅದರಲ್ಲೂ ಕಾಂಗ್ರೆಸ್ಸಿಗರದ್ದೆಲ್ಲ ಒಂದು ಸ್ಟೈಲ್ ಆದ್ರೆ ಡಿಕೆ ಶಿವಕುಮಾರ್ ಸ್ಟೈಲೇ ಬೇರೆ.
ಕುಂಭಮೇಳದಲ್ಲೂ ಡಿಫರೆಂಟ್ ಡಿಕೆ..!
ಡಿಕೆ ಶಿವಕುಮಾರ್ ಸ್ಟೈಲೇ ಬೇರೆ.. ಡಿಕೆ ರಾಜಕೀಯವೇ ಬೇರೆ. ಡಿಕೆ ಶಿವಕುಮಾರ್ ಅವರು ಇರೋದು ಕಾಂಗ್ರೆಸ್ಸಿನಲ್ಲಿ. ಅವರೀಗ ಕೆಪಿಸಿಸಿ ಅಧ್ಯಕ್ಷರೂ ಹೌದು. ಕಾಂಗ್ರೆಸ್ಸಿನಲ್ಲಿರೋ ಬಹುತೇಕರು ನನಗೆ ನನ್ನ ಆತ್ಮವೇ ದೇವರು ಎನ್ನುತ್ತಾರೆ. ಎಲೆಕ್ಷನ್ ಟೈಮಿನಲ್ಲಿ ಮಾತ್ರ ದೇವಸ್ಥಾನಕ್ಕೆ ಹೋಗ್ತಾರೆ. ಆದರೆ ಡಿಕೆ ಶಿವಕುಮಾರ್ ಹಾಗಲ್ಲ. ವೇದ ಪಂಡಿತರೂ ನಾಚುವಂತೆ ಸಂಸ್ಕೃತ ಶ್ಲೋಕ ಹೇಳುವ ಡಿಕೆ ಶಿವಕುಮಾರ್ ಅಪ್ಪಟ ದೈವಭಕ್ತ.
ಮಳೆಗಾಗಿ ಹೋಮ ಹವನಗಳನ್ನೂ ಮಾಡಿಸ್ತಾರೆ. ಕುಂಭಮೇಳಕ್ಕೂ ಹೋಗ್ತಾರೆ. ಶಿವಪೂಜೆಯನ್ನೂ ಹೋಮ, ಹವನ ಎಲ್ಲವನ್ನೂ ಮಾಡ್ತಾರೆ. ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದ್ರೆ ಪಾಪ ತೊಳ್ಕೊಂಡ್ ಹೋಗುತ್ತೆ ಅಂತಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಹೇಳಿದ್ರೆ, ಅದು ಅವರ ನಂಬಿಕೆ. ನನ್ನ ನಂಬಿಕೆ ನನ್ನದು ಅಂತಾರೆ ಡಿಕೆ. ಅಜ್ಜಯ್ಯನ ಪೀಠದ ಮಹಾಭಕ್ತರಾಗಿರುವ ಡಿಕೆ ಶಿವಕುಮಾರ್, ತಾವು ನಾಸ್ತಿಕರಲ್ಲ ಅಂತ ಪದೇ ಪದೇ ಹೇಳಿಕೊಳ್ತಾರೆ.

ಜ್ಯೋತಿಷ್ಯವನ್ನೂ ನಂಬುವ ಡಿಕೆ ಶಿವಕುಮಾರ್..!
ರಾಜ್ಯ ರಾಜಕೀಯದಲ್ಲಿ ಜ್ಯೋತಿಷ್ಯ, ಕುಂಡಲಿಗಳನ್ನೆಲ್ಲ ನಂಬುವವರು ಯಾರು ಅಂದ್ರೆ ಎಲ್ಲರೂ ದೇವೇಗೌಡರ ಕಡೆ ಕೈತೋರಿಸ್ತಾರೆ. ಬಹುತೇಕ ರಾಜಕಾರಣಿಗಳು ಜ್ಯೋತಿಷ್ಯವನ್ನ ನಂಬ್ತಾರೆ. ಹೊರಗೆ ನಾನು ನಾಸ್ತಿಕವಾದಿ ಅಂತಾ ಹೇಳಿಕೊಳ್ಳುವವರ ಮಧ್ಯೆ ಡಿಕೆ ಶಿವಕುಮಾರ್ ಫುಲ್ ಡಿಫರೆಂಟು. ಅವರು ಅಜ್ಜಯ್ಯನ ಪೀಠದ ಜ್ಯೋತಿಷ್ಯವಾಣಿ, ರಾಜಗುರು ಎಂದೇ ಕರೆಸಿಕೊಳ್ಳುವ ದ್ವಾರಕಾಥ್ ಅವರ ಭವಿಷ್ಯ ಎಲ್ಲವನ್ನೂ ನಂಬುತ್ತಾರೆ. ನಾನು ಜ್ಯೋತಿಷ್ಯವನ್ನ ನಂಬ್ತೇನೆ ಅಂಥಾ ಬಹಿರಂಗವಾಗಿಯೇ ಹೇಳ್ಕೊಳ್ಳೋ ಡಿಕೆ ಶಿವಕುಮಾರ್, ರಾಹುಕಾಲ, ಶುಭಘಳಿಗೆ, ಮುಹೂರ್ತ ಎಲ್ಲವನ್ನೂ ನಂಬ್ತಾರೆ.
ವೇದಾಂತಿ ರಾಜಕಾರಣಿ..!
ಡಿಕೆ ಶಿವಕುಮಾರ್ ವೇದಾಂತವನ್ನೂ ಮಾತಾಡ್ತಾರೆ. ಅದನ್ನ ಎಲ್ಲರೂ ಒಪ್ಪುತ್ತಾರೋ.. ಬಿಡುತ್ತಾರೋ.. ಬೇರೆ. ಡಿಕೆ ಶಿವಕುಮಾರ್ ಹೇಳೋದು ಅವರದ್ದೇ ವೇದಾಂತ. ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ. ಡಿಕೆ ಶಿವಕುಮಾರ್ ಇಷ್ಟೊಂದು ವೇದಾಂತವನ್ನು ಎಲ್ಲಿಂದ ಕಲಿತರು ಎಂದರೆ ಡಿಕೆ ಶಿವಕುಮಾರ್ ಸುಮ್ಮನೆ ನಗುತ್ತಾರಷ್ಟೇ. ಅವರಿಗೆ ವೇದ, ವೇದಾಂತ, ರಾಜಕೀಯ, ಚದುರಂಗ ಎಲ್ಲವೂ ಗೊತ್ತು. ವರ್ತನೆಯಲ್ಲಿ ಮಾತ್ರ ಡೈರೆಕ್ಟ್ ಹಿಟ್ ಮಾಡೆಲ್. ಇದನ್ನು ತಿದ್ದಿಕೊಳ್ಳಿ, ರಾಜಕೀಯವಾಗಿ ಲಾಭವಾಗುತ್ತದೆ ಎಂದು ಅದೆಷ್ಟು ಜನ ಹೇಳಿದ್ದಾರೋ.. ಏನೋ.. ಅಲ್ಲಿಯೂ ಡಿಕೆ ಶಿವಕುಮಾರ್ ಕಂಪ್ಲೀಟ್ ಡಿಫರೆಂಟ್. ತಾವು ಇರೋದೇ ಹೀಗೇ ಎನ್ನುವಂತೆ ವರ್ತಿಸ್ತಾರೆ.
ಹಿಂದೂ.. ಹಿಂದುತ್ವ..!
ಡಿಕೆ ಶಿವಕುಮಾರ್ ಅವರು ಕುಕ್ಕರ್ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅರೆಸ್ಟ್ ಆದ ಆರೋಪಿ ಶಾರೀಕ್ ಪರ ಅವರು ನನ್ನ ಬ್ರದರ್ಸ್ ಎಂದಿದ್ದದ್ದು ಭಾರೀ ಸುದ್ದಿಯಾಗಿತ್ತು. ಡಿಕೆ ಶಿವಕುಮಾರ್ ಹಿಂದೂ ವಿರೋಧಿ ಎಂದು ಬಿಂಬಿಸಲಾಗಿತ್ತು. ಇನ್ನು ಡಿಕೆ ಶಿವಕುಮಾರ್ ಇರೋ ಕಾಂಗ್ರೆಸ್ಸಿನಲ್ಲಿ ಬಹುತೇಕ ಜನ ಹಿಂದೂ ಧರ್ಮವನ್ನ, ಹಿಂದುತ್ವವನ್ನ ಒಪ್ಪೋದಿಲ್ಲ. ಅದು ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ಆರೋಪವೂ ಹೌದು. ಹಿಂದೂ ಧರ್ಮವನ್ನ, ಹಿಂದೂ ಧರ್ಮದ ಮೌಢ್ಯವನ್ನ ಅವರದ್ದೇ ಪಕ್ಷದ ನಾಯಕರು ಟೀಕೆ ಮಾಡ್ತಾ ಇದ್ರೆ, ಡಿಕೆ ಶಿವಕುಮಾರ್ ಹೇಳೋದೇ ಬೇರೆ. ನಾನು ಹಿಂದೂ. ಹಿಂದೂ ಆಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿಯೇ ಸಾಯ್ತೇನೆ ಅಂತಾರೆ.
ಎದುರಾಳಿಗಳ ಜೊತೆ ಸ್ನೇಹ..!
ಡಿಕೆ ಶಿವಕುಮಾರ್ ಹೋರಾಟಕ್ಕೆ ಬಂದರೆ ಯಡಿಯೂರಪ್ಪರನ್ನೂ ನೋಡಲ್ಲ, ದೇವೇಗೌಡರನ್ನೂ ನೋಡಲ್ಲ. ಮೋದಿಯನ್ನೂ ಬಿಡಲ್ಲ. ಆದರೆ ಅದು ಜಸ್ಟ್ ಪಾಲಿಟಿಕ್ಸ್. ರಾಜಕೀಯದ ಹೊರಗೆ ಬಂದ್ರೆ, ಡಿಕೆ ಯಡಿಯೂರಪ್ಪ, ದೇವೇಗೌಡ, ಮೋದಿ ಎಲ್ಲರ ಜೊತೆಯಲ್ಲೂ ಚೆನ್ನಾಗಿಯೇ ಇರ್ತಾರೆ. ಕುಂಭಮೇಳಕ್ಕೆ ಹೋಗಿದ್ದ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನ, ಯೋಗಿ ಸರ್ಕಾರ ಮಾಡಿದ್ದ ವ್ಯವಸ್ಥೆಗಳನ್ನ ಹೊಗಳಿದ್ರು. ಆದರೆ ಕಾಂಗ್ರೆಸ್ಸಿಗರು ಯೋಗಿ ಆದಿತ್ಯನಾಥ್ ಅವರನ್ನ ಟೀಕೆ ಮಾಡ್ತಿದ್ರೆ, ಡಿಕೆ ಡಿಫರೆಂಟ್. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಯಾರು ಅಂತಾನೇ ಗೊತ್ತಿಲ್ಲ ಅಂದಿದ್ದ ಸದ್ಗುರು ಜೊತೆ ವೇದಿಕೆ ಹಂಚಿಕೊಳ್ತಾರೆ. ರಾಹುಲ್ ಗಾಂಧಿ ಪದೇ ಪದೇ ಟೀಕೆ ಮಾಡೋ ಅಂಬಾನಿ ಕುಟುಂಬದ ಮದುವೆಗೂ ಹೋಗಿ ಬರ್ತಾರೆ.
ಈಗ ಡಿಕೆ ಶಿವಕುಮಾರ್ ಅವರ ಈ ವ್ಯಕ್ತಿತ್ವವೇ ಚರ್ಚೆಯಾಗ್ತಾ ಇದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕುಂಭಮೇಳವನ್ನ ಟೀಕೆ ಮಾಡಿದ್ರು. ರಾಹುಲ್ ಗಾಂಧಿ, ಸೋನಿಯಾ, ಪ್ರಿಯಾಂಕಾ ಯಾರೂ ಕೂಡಾ ಕುಂಭಮೇಳಕ್ಕೆ ಹೋಗಲಿಲ್ಲ. ಅದೇ ಕುಂಭಮೇಳಕ್ಕೆ ಡಿಕೆ ಶಿವಕುಮಾರ್ ಹೋಗಿ ಬಂದು, ಯೋಗಿಯನ್ನ ಹೊಗಳಿದ್ದೂ ಆಯ್ತು.
ಇನ್ನು ಈಗ ಸದ್ಗುರು ಮತ್ತು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡು ನಾನೇ ಬೇರೆ.. ನನ್ನ ಸ್ಟೈಲೇ ಬೇರೆ ಅನ್ನೋ ಮೆಸೇಜ್ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್.
ಮಹೇಶ್ ಕುಮಾರ್ ಕೆ.ಎಲ್. ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್

RelatedPosts

2 ಸಾವಿರ ಹಡಗುಗಳಿಂದ ಭೀಕರ ಯುದ್ಧಕ್ಕೆ ತಯಾರಿ ನಡೆಸ್ತಿದ್ಯಾ ಚೀನಾ..?

BREAKING: ದ.ಕೊರಿಯಾ ಮೇಲೆ ಉತ್ತರ ಕೊರಿಯಾ ದಾಳಿ: ಬರೋಬ್ಬರಿ 10 ಬ್ಯಾಲೆಸ್ಟಿಕ್ ಮಿಸೈಲ್‌ಗಳಿಂದ ದಾಳಿ

ನಾಲ್ಕು ವರ್ಷಗಳಲ್ಲೇ ಭೀಕರ ಕುಸಿತ, ಷೇರು ಮಾರುಕಟ್ಟೆ ಹೂಡಿಕೆದಾರರ 20 ಲಕ್ಷ ಕೋಟಿ ರೂ. ಭಸ್ಮ!

ಮದುವೆ ವಿಷಯ ಮುಚ್ಚಿಟ್ಟು ಮೋಸ! ಲಿವ್-ಇನ್ ಗೆಳತಿಯನ್ನು ವೈಯರ್‌ನಿಂದ ಕೊಂದ ವಿವಾಹಿತ

ADVERTISEMENT
ADVERTISEMENT
ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2026 03 14T144412.938

ವಯಸ್ಸು 44 ಆದ್ರೂ ಅನುಷ್ಕಾ ಶೆಟ್ಟಿ ಇನ್ನೂ ಸಿಂಗಲ್ ! ಉದ್ಯಮಿಯ ಜೊತೆ ಸ್ವೀಟಿ ಮದುವೆ..?

by ಯಶಸ್ವಿನಿ ಎಂ
March 14, 2026 - 2:54 pm
0

Untitled design 2026 03 14T143244.985

ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!

by ಯಶಸ್ವಿನಿ ಎಂ
March 14, 2026 - 2:36 pm
0

Untitled design 2026 03 14T133638.160

ಡಾರ್ಕ್ ಸರ್ಕಲ್ ಹಾಗೂ ಮೊಡವೆಗೆ ಇಲ್ಲಿದೆ ನೋಡಿ ಸುಲಭ ಮನೆ ಮದ್ದು

by ಯಶಸ್ವಿನಿ ಎಂ
March 14, 2026 - 1:40 pm
0

Untitled design 2026 03 14T123938.508

2 ಸಾವಿರ ಹಡಗುಗಳಿಂದ ಭೀಕರ ಯುದ್ಧಕ್ಕೆ ತಯಾರಿ ನಡೆಸ್ತಿದ್ಯಾ ಚೀನಾ..?

by ಯಶಸ್ವಿನಿ ಎಂ
March 14, 2026 - 1:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 14T123938.508
    2 ಸಾವಿರ ಹಡಗುಗಳಿಂದ ಭೀಕರ ಯುದ್ಧಕ್ಕೆ ತಯಾರಿ ನಡೆಸ್ತಿದ್ಯಾ ಚೀನಾ..?
    March 14, 2026 | 0
  • Untitled design 2026 03 14T121850.427
    BREAKING: ದ.ಕೊರಿಯಾ ಮೇಲೆ ಉತ್ತರ ಕೊರಿಯಾ ದಾಳಿ: ಬರೋಬ್ಬರಿ 10 ಬ್ಯಾಲೆಸ್ಟಿಕ್ ಮಿಸೈಲ್‌ಗಳಿಂದ ದಾಳಿ
    March 14, 2026 | 0
  • Untitled design 2026 03 14T115922.573
    ನಾಲ್ಕು ವರ್ಷಗಳಲ್ಲೇ ಭೀಕರ ಕುಸಿತ, ಷೇರು ಮಾರುಕಟ್ಟೆ ಹೂಡಿಕೆದಾರರ 20 ಲಕ್ಷ ಕೋಟಿ ರೂ. ಭಸ್ಮ!
    March 14, 2026 | 0
  • Untitled design 2026 03 14T113827.828
    ಮದುವೆ ವಿಷಯ ಮುಚ್ಚಿಟ್ಟು ಮೋಸ! ಲಿವ್-ಇನ್ ಗೆಳತಿಯನ್ನು ವೈಯರ್‌ನಿಂದ ಕೊಂದ ವಿವಾಹಿತ
    March 14, 2026 | 0
  • Untitled design 2026 03 14T112125.415
    ಸನ್ ರೈಸರ್ಸ್ ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್ ?
    March 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version