• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡ್ಯೂಡ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 21, 2025 - 8:20 pm
in ಸಿನಿಮಾ
0 0
0
Befunky collage (10)

ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ ಫುಟ್ಬಾಲ್‍ ಹಿನ್ನೆಲೆಯ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು 12 ಹೊಸ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಅರ್ಧ ಚಿತ್ರೀಕರಣ ಮುಗಿಸಿರುವ ತೇಜ್‍, ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಮಾಡಿದ್ದಾರೆ. MMB Legacyಯಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿ ಚಿತ್ರದ ಹಾಡನ್ನು ಬಿಡುಗಡೆ ಮಾಡಿದವರು ತೇಜ್‍ ಅವರ ಸಂಬಂಧಿ ಮೇಘನಾ ರಾಜ್‍. ಈ ಸಂದರ್ಭದಲ್ಲಿ ನಿರ್ದೇಶಕರಾದ ಹರಿ ಸಂತು ಮತ್ತು ಪ್ರವೀಣ್‍ ನಾಯಕ್‍ ಸಹ ಹಾಜರಿದ್ದರು.

RelatedPosts

ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ

ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ

ಐತಿಹಾಸಿಕ ‘ಹಲಗಲಿ’.. ಬೆಳ್ಳಿತೆರೆಗೆ ಬೇಡನಾಗಿ ಡಾಲಿ..!

ದರ್ಶನ್ ನೆನೆದು ಹಾರ್ಟ್ ಬ್ರೇಕ್ ಪೋಸ್ಟ್ ಮಾಡಿದ ಪತ್ನಿ ವಿಜ್ಜು!

ADVERTISEMENT
ADVERTISEMENT

ಹಾಡು ಬಿಡುಗಡೆ ಮಾಡಿ ಮಾತನಾಡಿದ ಮೇಘನಾ ರಾಜ್, ‘ತೇಜ್‍ ಅವರ ಎಲ್ಲಾ ಪ್ರಯತ್ನಗಳಿಗೂ ನಮ್ಮ ಕುಟುಂಬದ ಪ್ರೋತ್ಸಾಹ ಇದ್ದೇ ಇರುತ್ತದೆ. ಈ ಚಿತ್ರದ ಹಾಡು ಬಿಡುಗಡೆ ಮಾಡಿಕೊಡಬೇಕು ಎಂದಾಗ ಖಂಡಿತಾ ಬರುತ್ತೇನೆ ಎಂದೆ. ಅವರು ನಮ್ಮ ಮನೆಗೆ ಬಂದು ಕ್ರೀಡಾ ಹಿನ್ನೆಲೆಯ ಚಿತ್ರ ಮಾಡುತ್ತಿದ್ದೇನೆ ಎಂದಾಗ, ‘ಚಕ್‍ದೇ ಇಂಡಿಯಾ’ ಮಾದರಿಯ ಚಿತ್ರವಾ ಎಂದು ಕೇಳಿದೆವು. ತಮಿಳಿನ ‘ಬಿಜಿಲ್‍’ ಮಾದರಿಯ ಚಿತ್ರ ಇರಬಹುದು ಅಂದುಕೊಂಡೆವು. ಈ ಚಿತ್ರದ ಹಾಡುಗಳನ್ನು ನೋಡುತ್ತಿದ್ದರೆ, ಬೇರೆ ಕ್ರೀಡೆ ಹಿನ್ನೆಲೆಯ ಚಿತ್ರಗಳು ನೆನಪಿಗೆ ಬರಬಹುದು. ಆದರೆ, ತೇಜ್‍ ಅವರ ತಲೆಯಲ್ಲಿ ಏನು ಓಡುತ್ತಿರುತ್ತದೆ, ಅವರು ಸಿನಿಮಾದಲ್ಲಿ ಏನು ತೋರಿಸುತ್ತಾರೆ ಎಂಬ ಕುತೂಹಲ ನಮಗೂ ಇದೆ. ಅವರು ಪ್ರತಿ ಚಿತ್ರಕ್ಕೂ ಶ್ರಮ ಹಾಕುತ್ತಿರುತ್ತಾರೆ. ಏನೋ ಮಾಡುತ್ತೀನಿ ಎಂಬ ವಿಶ್ವಾಸ ಅವರಿಗಿದೆ. ಅವರಿಗೆ ಒಳ್ಳೆಯದಾಗಲೀ, ಚಿತ್ರ ಯಶಸ್ವಿಯಾಗಲಿ’ ಎಂದರು.

ನಾಯಕ-ನಿರ್ದೇಶಕ ತೇಜ್‍ ಮಾತನಾಡಿ, ‘ನಾನು ನನ್ನ ವೃತ್ತಿಜೀವನದಲ್ಲಿ ಎಂಟು ಸಿನಿಮಾ ಮಾಡಿದ್ದೇನೆ. ಇದು ವೈಯಕ್ತಿಕವಾಗಿ ನನಗೆ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ, ಮಹಿಳೆಯರ ಶಕ್ತಿಯನ್ನು ತೋರಿಸುವ ಚಿತ್ರ. ಈ ಚಿತ್ರ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ನನ್ನ ಕನಸಿಗೆ ಚಿತ್ರತಂಡದ ಪ್ರತಿಯೊಬ್ಬರೂ ನೆರವಾಗಿದ್ದಾರೆ. ನಾನು ರಾಘವೇಂದ್ರ ರಾಜಕುಮಾರ್‍ ಅವರ ಜೊತೆಗೆ ‘ರಾಮಾಚಾರಿ 2.0’ ಚಿತ್ರದಲ್ಲಿ ಮಾತನಾಡುವ ಸಂದರ್ಭದಲ್ಲಿ, ಅವರು ಅಪ್ಪುಗೆ ಫುಟ್ಬಾಲ್‍ ಇಷ್ಟ ಎಂದು ಹೇಳಿದ್ದರು. ಜೊತೆಗೆ ಪುನೀತ್‍, ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂದು ಪ್ರತಿಪಾದಿಸಿಕೊಂಡು ಬಂದವರು. ಈ ಎರಡು ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಈ ಚಿತ್ರವನ್ನು ಪುನೀತ್‍ ಅವರಿಗೆ ಅರ್ಪಿಸುತ್ತಿದ್ದೇವೆ. ಈಗಾಗಲೇ ಶೇ. 50ರಷ್ಟು ಮುಕ್ತಾಯವಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

ಜೀವನದಲ್ಲಿ ಗೆಲ್ಲಬೇಕೆಂದರೆ, ಪ್ರತಿಭೆ ಮತ್ತು ಅದೃಷ್ಟ ಇಲ್ಲದಿದ್ದರೂ ಪರವಾಗಿಲ್ಲ, ಸತತ ಪರಿಶ್ರಮದಿಂದ ಗೆಲ್ಲಬಹುದು ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ ಎಂದ ತೇಜ್‍, ‘ಇಲ್ಲಿ ನಾನು ಕೋಚ್‍ ಆಗಿರುವುದಿಲ್ಲ. ರಂಗಾಯಣ ರಘು ಕೋಚ್ ಆಗಿರುತ್ತಾರೆ. ಅವರು ಮಾಡುವ ತರಲೆಯಿಂದ ನಾನು ಕೋಚ್‍ ಆಗಿ ಬರಬೇಕಾಗುತ್ತದೆ. ಇಲ್ಲಿ ರಾಘಣ್ಣ, ಅವರ ನಿಜಜೀವನದ ಪಾತ್ರವನ್ನೇ ಮಾಡುತ್ತಿದ್ದಾರೆ. ಅಪ್ಪು ಹೆಸರಿನಲ್ಲಿ ಒಂದು ಟೂರ್ನಿ ಆಯೋಜಿಸಿರುತ್ತಾರೆ. ಕರ್ನಾಟಕದ ಬೇರೆಬೇರೆ ಪ್ರದೇಶದ ಫುಟ್ಬಾಲ್ ‍ಗೊತ್ತಿಲ್ಲದ ಹೆಣ‍್ಮಕ್ಕಳು ಒಂದು ತಂಡವಾಗಿ ಹೇಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ‍್ಳುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದರು.

‘ಡ್ಯೂಡ್‍’ ಚಿತ್ರವು ಪಾನಾರೋಮಿಕ್‍ ಸ್ಟುಡಿಯೋ ಬ್ಯಾನರ್‍ ಅಡಿ ನಿರ್ಮಾಣವಾಗಿದ್ದು, ಅಭಿನಯ ಮತ್ತು ನಿರ್ದೇಶನದ ಜೊತೆಗೆ ತೇಜ್‍ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಚಿತ್ರದಲ್ಲಿ ತೇಜ್‍ ಜೊತೆಗೆ ಸಾನ್ಯಾ ಕಾವೇರಮ್ಮ, ರಾಘವೇಂದ್ರ ರಾಜ್‍ಕುಮಾರ್‍, ರಂಗಾಯಣ ರಘು, ಸುಂದರ್‍ ರಾಜ್‍, ವಿಜಯ್‍ ಚೆಂಡೂರು, ಸ್ಪರ್ಶ ರೇಖಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಎಮಿಲ್‍ ಮೊಹಮ್ಮದ್‍ ಸಂಗೀತ ಸಂಯೋಜನೆ ಇದ್ದು, ಪ್ರೇಮ್ ಛಾಯಾಗ್ರಹಣವಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (9)

ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 16, 2025 - 5:32 pm
0

Untitled design (8)

ಧರ್ಮಸ್ಥಳ ಅಸ್ಥಿಪಂಜರ ತನಿಖೆಗೆ SIT ತಾತ್ಕಾಲಿಕ ಬ್ರೇಕ್

by ಶಾಲಿನಿ ಕೆ. ಡಿ
August 16, 2025 - 5:16 pm
0

Untitled design 2025 08 16t164055.039

ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

by ಶಾಲಿನಿ ಕೆ. ಡಿ
August 16, 2025 - 4:57 pm
0

Untitled design 2025 08 16t161255.408

ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ

by ಶಾಲಿನಿ ಕೆ. ಡಿ
August 16, 2025 - 4:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (9)
    ತಲೈವಾ ಜರ್ನಿಗೆ 50 ವರ್ಷ.. ಕೂಲಿಗೆ 200Cr ಹರುಷ
    August 16, 2025 | 0
  • Untitled design 2025 08 16t161255.408
    ನಟ ದರ್ಶನ್ ಮತ್ತೆ ಜೈಲಿಗೆ: ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ
    August 16, 2025 | 0
  • Untitled design (7)
    ಐತಿಹಾಸಿಕ ‘ಹಲಗಲಿ’.. ಬೆಳ್ಳಿತೆರೆಗೆ ಬೇಡನಾಗಿ ಡಾಲಿ..!
    August 16, 2025 | 0
  • 1 (73)
    ದರ್ಶನ್ ನೆನೆದು ಹಾರ್ಟ್ ಬ್ರೇಕ್ ಪೋಸ್ಟ್ ಮಾಡಿದ ಪತ್ನಿ ವಿಜ್ಜು!
    August 16, 2025 | 0
  • 1 (11)
    ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಪತ್ನಿ ಸ್ವಪ್ನಾ ವಿಚ್ಚೇದನ ಕೋರಿ ಕೋರ್ಟ್‌ಗೆ ಅರ್ಜಿ.!
    August 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version