ವರದಿ: ಮೂರ್ತಿ.ಬಿ ನೆಲಮಂಗಲ
ಬೆಂಗಳೂರಿನ ಮೇದರಹಳ್ಳಿಯ ವಿನಾಯಕ ಲೇಔಟ್ನಲ್ಲಿ ಬೆಳಗಿನ ಜಾವ 3ಗಂಟೆ ವೇಳೆ ನಡೆದ ಭಯಾನಕ ಘಟನೆ.
ಮನೆಯಲ್ಲಿ ಮಲಗಿದ್ದ ತಾಯಿ, ತಂದೆ ಹಾಗೂ ಅಕ್ಕನ ಮೇಲೆ ಮನೆಯ 22 ವರ್ಷದ ಮಗ ಇದ್ದಕ್ಕಿದ್ದಂತೆ ಚಾಕು ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಂದೆ ಕೃಷ್ಣಮೂರ್ತಿ (51) ತಾಯಿ ಪಾರ್ವತಮ್ಮ (48) ಮಗಳು ನಯನ (24) ಹಲ್ಲೆಗೆ ಒಳಗಾದವರು, ಗಾಯಗೊಂಡ ಮೊವರಿಗೆ ಸಪ್ತಗಿರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನಡೆಸಲಾಗಿದೆ.
ಹಲ್ಲೆ ನಡೆಸಿದ ಮಗ ಹರ್ಷ (22) ಇದೀಗ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಸಂದರ್ಭದಲ್ಲಿ ಹರ್ಷನಿಂದ ಬಚಾವಾಗಲು ಮನೆಯವರು ಕಾರದ ಪುಡಿಯನ್ನು ಎರಚಿದ್ರು, ಆದರೂ ಬಿಡದೆ ಚಾಕುವಿನಿಂದ ಹಲ್ಲೆ ಮುಂದುವರೆಸಿದ್ದ.
ಮನೆಯೊಳಗೆ ಕಿರುಚಾಟ ಕೇಳಿ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಧಾವಿಸಿದ ಸೋಲದೇವನಹಳ್ಳಿ ಪೊಲೀಸರು ಬಾಗಿಲು ಒಡೆದು ಮನೆಯವರನ್ನು ಪವಾಡ ಸದೃಶವಾಗಿ ರಕ್ಷಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸೀನ್ ಆಫ್ ಕ್ರೈಂ ತಂಡ ಶೋಧ ಕಾರ್ಯ ಕೈಗೊಂಡಿದ್ದು, ಮನೆ ತುಂಬೆಲ್ಲಾ ರಕ್ತದ ಕಲೆಗಳು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಮೇದರಹಳ್ಳಿಯ ವಿನಾಯಕ ಲೇಔಟ್ನಲ್ಲಿ ಬಾಡಿಗೆ ಮನೆ ಮಾಡಲಾಗಿತ್ತು,
ಬಾಲರಾಜ್ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದ ಕುಟುಂಬ. ಅಕ್ಕ ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕುವ ಪ್ರಯತ್ನದಲ್ಲಿದ್ರು, ಈತ ಕೂಡ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ, ಎರಡು ದಿನದ ಹಿಂದೆ ಹರ್ಷ ನನ್ನ ಬಳಿ ಬಂದು ಯಾಕೋ ಇತ್ತೀಚಿಗೆ ಭಯ ಆಗುತ್ತಿದೆ ಅಮ್ಮಅಂತ ಅಂದಿದ್ದ,ಅಮ್ಮ ಆಸ್ಪತ್ರೆಗೆ ಹೋಗುವ ಬಾ ಅಂತ ಕರೆದಿದ್ದಕ್ಕೆ ನಿರಾಕರಣೆ ಮಾಡಿದ್ದ ಮಗ, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಗಲಾಟೆ ಮಾಡಿ ನಿದ್ರೆಯಲ್ಲಿ ಮಲಗಿದ್ದ ತಂದೆ ಕೃಷ್ಣ ಮೂರ್ತಿ ಮೇಲೆ ಚಾಕು ಹಿಡಿದು ಮುಗಿ ಬಿದ್ದಿದ್ದ. ನೆರವಿಗೆ ಹೋದ ತಾಯಿ ಪಾರ್ವತಿ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದ. ಮಲಗಿದ್ದ ಅಕ್ಕನ ಮೇಲೂ ಮತ್ತೊಂದು ಚಾಕುವಿನಿಂದ ಕೊಲೆ ಮಾಡಲು ಮುಂದಾಗಿದ್ದ. ಈತನಿಂದ
ಬಚಾವ್ ಆಗಲು ಅಡುಗೆ ಮನೆಯಿಂದ ಖಾರದ ಪುಡಿ ಎರಚಿದ್ರು.
ಗಲಾಟೆ ಮಾಡಿ ಹಲ್ಲೆಗೆ ಮುಂದಾದ ಮಗ,ಮನೆಯಿಂದ ಆಚೆ ಬರುವ ಅಂದ್ರೆ ಪೂರ್ವ ನಿಯೋಜಿತವಾಗಿ ಡೋರ್ ಲಾಕ್ ಮಾಡಿ ಕೀ ಬಿಚ್ಚಿಟ್ಟದ್ದ ಮಗ ಪೊಲೀಸರು ಬಂದಿಲ್ಲ ಅಂದ್ರೆ ನಮ್ಮ ಜೀವ ಉಳಿಯಲು ಸಾಧ್ಯವಿರಲಿಲ್ಲ ಅಂತ ಕಣ್ಣೀರಿಟ್ಟ ತಾಯಿ ಪಾರ್ವತಮ್ಮ.
| Reported by: ಮೂರ್ತಿ.ಬಿ ನೆಲಮಂಗಲ





