ತಮಿಳುನಾಡು, ಮುಂದಿನ ವರ್ಷ ಎಲೆಕ್ಷನ್ ಎದುರಿಸಲಿರೋ ದಕ್ಷಿಣದ ಅತೀ ದೊಡ್ಡ ರಾಜ್ಯ. ಈ ರಾಜ್ಯದ ಬಗ್ಗೆ ಕುತೂಹಲಕ್ಕೆ ಕಾರಣ ಇದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಆದರೆ, ಲೋಕಸಭೆ ಚುನಾವಣೆ ನಂತರ ಬಿಜೆಪಿ ಪರ ಒಂದಿಷ್ಟು ಅಲೆ ಇದೆ ಅನ್ನೋದು ಗೊತ್ತಾಗಿದೆ. ಅದು ಅಣ್ಣಾಮಲೈ ಎಫೆಕ್ಟ್ ಅಂತಿದ್ದಾರೆ ಜನ. ಹೀಗಿರುವಾಗ.. ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯೋ ಎಲೆಕ್ಷನ್ನಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿಯುತ್ತಾ..? ಅಣ್ಣಾಮಲೈ ಸಿಎಂ ಆಗ್ತಾರಾ..? ಈ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ, ಒಂದು ಸ್ಪೆಷಲ್ ಭವಿಷ್ಯ ಹೇಳಿದ್ದಾರೆ.
ತಮಿಳುನಾಡಿನ ಮುಂದಿನ 5 ವರ್ಷಗಳ ಭವಿಷ್ಯವನ್ನೂ ಹೇಳಿಬಿಟ್ಟಿದ್ದಾರೆ ಪ್ರಶಾಂತ್ ಕಿಣಿ. ತಮಿಳುನಾಡಿನಲ್ಲಿರೋದು ಡಿಎಂಕೆ ನೇತೃತ್ವದ ಸರ್ಕಾರ. 234 ಕ್ಷೇತ್ರಳಿರುವ ತಮಿಳುನಾಡಿನಲ್ಲಿ ಡಿಎಂಕೆ 134 ಸ್ಥಾನ ಗಳಿಸಿದ್ದರೆ, ಮಿತ್ರಪಕ್ಷಗಳಾದ ಕಾಂಗ್ರೆಸ್ 17, ಸಿಪಿಐ 2, ಸಿಪಿಎಂ 2, ಸ್ಥಳೀಯ ಪಕ್ಷವಾಗಿರೋ ವಿಸಿಕೆ ಎರಡು ಸ್ಥಾನ ಗಳಿಸಿದೆ. ವಿರೋಧ ಪಕ್ಷದಲ್ಲಿರೋ ಅಣ್ಣಾಡಿಎಂಕೆ ಕೇವಲ 67 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 4, ಪಿಎಂಕೆ 4 ಹಾಗೂ ಪಕ್ಷೇತರರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಆದರೆ ಕಿಣಿ ಪ್ರಕಾರ ಅಣ್ಣಾಮಲೈ ನೇತೃತ್ವದ ಎನ್ಡಿಎ ಒಕ್ಕೂಟ ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದು ಖಚಿತ.
ತಮಿಳುನಾಡಿನಲ್ಲಿ ಕಳೆದ ವರ್ಷ ಬಿಜೆಪಿ ಗಳಿಸಿದ್ದ ಶೇ.11.4 ರಷ್ಟು ವೋಟ್ ಶೇರ್ ಇದ್ಯಲ್ಲ, ಅದೇ ಅತೀ ದೊಡ್ಡ ವೋಟ್ ಶೇರ್. ಅದಕ್ಕೆ ಮೊದಲು ತಮಿಳುನಾಡಿನಲ್ಲಿ ಬಿಜೆಪಿ ವೋಟ್ ಶೇರ್ ಶೇ.2ರಿಂದ 3ರ ಆಸುಪಾಸಿನಲ್ಲಿ ಇರ್ತಾ ಇತ್ತು. ಅದು ಇನ್ನಷ್ಟು ಜಾಸ್ತಿ ಆಗುತ್ತದೆ. ಪ್ರತಿಪಕ್ಷ ಸ್ಥಾನಕ್ಕೆ ಬರಲಿದೆ ಎಂದು ಭವಿಷ್ಯ ಹೇಳ್ತಿದ್ಧಾರೆ ಪ್ರಶಾಂತ್ ಕಿಣಿ. ಅಣ್ಣಾಮಲೈ ನಡೆಸುವ ಸಭೆಗಳಿಗೆ ದೊಡ್ಡ ಮಟ್ಟದಲ್ಲಿ ಜನ ಸೇರುತ್ತಿರುವುದು ಇದಕ್ಕೆ ಸಾಕ್ಷಿ ಅಂತಾರೆ.
ಇನ್ನು ಈ ಬಾರಿ ತಮಿಳುನಾಡಿನ ಸೂಪರ್ ಸ್ಟಾರ್ ನಟ ಇಳೆಯದಳಪತಿ ವಿಜಯ್, ತಮಿಳಿಗ ವೆಟ್ರಿ ಕಳಗಂ ಪಕ್ಷದ ಮೂಲಕ, ಚುನಾವಣೆ ರಣರಂಗಕ್ಕಿಳಿಯುತ್ತಿದ್ಧಾರೆ. ತಮಿಳುನಾಡಿನಲ್ಲಿ ಕರುಣಾನಿಧಿ, ರಾಮಚಂದ್ರನ್, ಜಯಲಲಿತಾ.. ಸಿನಿಮಾ ಸ್ಟಾರ್ ಆಗಿದ್ದು, ಸಿಎಂ ಆಗಿದ್ದ ಇತಿಹಾಸ ಇದೆ. ವಿಜಯ್ ಸಭೆಗಳಿಗೆ, ಲಕ್ಷಾಂತರ ಸಂಖ್ಯೆಯಲ್ಲಿ ಜನರಂತೂ ಸೇರುತ್ತಿದ್ಧಾರೆ. ಅದು ವೋಟ್ ಆದರೆ ಏನು ಬೇಕಾದರೂ ಆಗಬಹುದು ಎನ್ನುವಂತಿದೆ. ಆದರೆ
ಪ್ರಶಾಂತ್ ಕಿಣಿ ಅವರ ಭವಿಷ್ಯದ ಪ್ರಕಾರ 2026ಕ್ಕೆ ಸ್ಟಾಲಿನ್ ಸಿಎಂ. ಅಣ್ಣಾಮಲೈ ವಿರೋಧಪಕ್ಷದ ನಾಯಕ.
ಅಂದಹಾಗೆ ಪ್ರಶಾಂತ್ ಕಿಣಿ, ಟೈಂ ಟ್ರಾವೆಲ್ಲರ್. ಅಂದರೆ ಮುಂದಿನ ಕಾಲಕ್ಕೆ ಹೋಗಿ, ಭವಿಷ್ಯ ಹೇಳುವ ಭವಿಷ್ಯಕಾರ. ಕ್ಷುದ್ರಶಕ್ತಿಗಳು ಒಲಿದಿವೆಯಂತೆ. ಈತ ಹೇಳಿರುವ ಹಲವಾರು ಭವಿಷ್ಯಗಳು ಸತ್ಯವಾಗಿವೆ.