ಜನಸಂದಣಿಯ ನಡುವೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಭಕ್ತರು: ವಿಡಿಯೋ ವೈರಲ್

Untitled design 2025 06 27t220304.946

ಒಡಿಶಾದ ಪುರಿಯಲ್ಲಿ ನಡೆಯುವ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆ ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷವೂ ಸಹ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಈ ಉತ್ಸವದಲ್ಲಿ ಭಾಗವಹಿಸಿದ್ದರು. ರಥಯಾತ್ರೆಯ ಭಕ್ತರ ಸಾಗರದ ನಡುವೆ ಆಂಬ್ಯುಲೆನ್ಸ್‌‌ವೊಂದು ಸಿಲುಕಿಕೊಂಡ ಘಟನೆ ಎಲ್ಲರ ಗಮನ ಸೆಳೆಯಿತು. ಆದರೆ, ಈ ಸಂದರ್ಭದಲ್ಲಿ ಭಕ್ತರು ಮತ್ತು ಸ್ವಯಂಸೇವಕರು ತೋರಿದ ಮಾನವೀಯತೆಯ ಎಲ್ಲರ ಮನ ಗೆದ್ದಿದೆ.

ರಥಯಾತ್ರೆಯ ದಿನದಂದು, ಜನಸಂದಣಿಯ ತುಂಬಿದ ರಸ್ತೆಯಲ್ಲಿ ಒಂದು ಆಂಬ್ಯುಲೆನ್ಸ್ ಸಿಲುಕಿ ತೊಂದರೆಪಡುತ್ತಿತ್ತು. ಲಕ್ಷಾಂತರ ಜನರ ನಡುವೆ ಸಿಲುಕಿಕೊಂಡಿದ್ದ ಈ ಆಂಬ್ಯುಲೆನ್ಸ್‌ನ ಚಾಲಕನಿಗೆ ದಾರಿಯೇ ಕಾಣದಂತಾಗಿತ್ತು. ಆಂಬ್ಯುಲೆನ್ಸ್‌ನ ಸೈರನ್ ಶಬ್ದ ಕೇಳಿದ ತಕ್ಷಣ ಭಕ್ತರು ಮತ್ತು ಸ್ವಯಂಸೇವಕರು ತಕ್ಷಣವೇ ಗಮನಕೊಟ್ಟು, ವಾಹನಕ್ಕೆ ದಾರಿ ಮಾಡಿಕೊಟ್ಟರು.

ADVERTISEMENT
ADVERTISEMENT

ಸ್ವಯಂಸೇವಕರು ಕೂಡಲೇ ಭಕ್ತರ ಗುಂಪಿನ ನಡುವೆ ಒಂದು ಸುವ್ಯವಸ್ಥಿತ ಮಾನವ ಸರಪಳಿಯನ್ನು ರಚಿಸಲು ಆರಂಭಿಸಿದರು. ಒಬ್ಬರಿಗೊಬ್ಬರು ಕೈ ಕೈ ಹಿಡಿದು, ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿ ನಿಂತು, ಆಂಬ್ಯುಲೆನ್ಸ್‌ಗೆ ಸುಗಮವಾಗಿ ದಾರಿಯನ್ನು ತೆರವುಗೊಳಿಸಿದರು. ಕೆಲವೇ ಕ್ಷಣಗಳಲ್ಲಿ, ಜನಸಂದಣಿಯ ಮಧ್ಯೆ ಒಂದು ದಾರಿ ತಾನಾಗಿಯೇ ತೆರೆದುಕೊಂಡಿತ್ತು. ಈ ದೃಶ್ಯವು ಕೇವಲ ರೋಮಾಂಚನಕಾರಿಯಾಗಿತ್ತು.

ಒಡಿಶಾದಲ್ಲಿ ರಥಯಾತ್ರೆಯಂತಹ ದೊಡ್ಡ ಉತ್ಸವದಲ್ಲಿ, ಎಲ್ಲರೂ ತಮ್ಮ ಧಾರ್ಮಿಕ ಭಾವನೆಯಲ್ಲಿ ಮುಳುಗಿರುವಾಗಲೂ, ಒಂದು ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಿದ ರೀತಿಯು ಶ್ಲಾಘನೀಯವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಈ ಘಟನೆಯ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಭಕ್ತರ ಈ ಮಾನವೀಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

Exit mobile version