ಬರಿಗೈಯಲ್ಲಿ ಚಿರತೆಯೊಂದಿಗೆ ಒಂಟಿಯಾಗಿ ಹೋರಾಡಿದ ಕಾರ್ಮಿಕ: ವಿಡಿಯೋ ವೈರಲ್

Web (84)

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಒಂದು ಇಟ್ಟಿಗೆ ಗೂಡಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿರತೆಯೊಂದಿಗೆ ಒಬ್ಬ ಇಟ್ಟಿಗೆ ಕಾರ್ಮಿಕ ಒಂಟಿಯಾಗಿ, ಬರಿಗೈಯಲ್ಲಿ ಸುಮಾರು ಎರಡು ನಿಮಿಷಗಳ ಕಾಲ ಭೀಕರವಾಗಿ ಹೋರಾಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಇದ್ದಕ್ಕಿದ್ದಂತೆ ಚಿರತೆ ದಾಳಿ ಮಾಡಿದೆ. ಸಂದರ್ಭದಲ್ಲಿ ಒಬ್ಬ ಧೈರ್ಯವಂತ ಕಾರ್ಮಿಕ, ಯಾವುದೇ ಆಯುಧವಿಲ್ಲದೆ, ಚಿರತೆಯೊಂದಿಗೆ ಕೊನೆಯ ಉಸಿರಿನವರೆಗೂ ಹೋರಾಡಿದ್ದಾನೆ. ಚಿರತೆ ಕೂಡ ಆತನ ಮೇಲೆ ಪದೇ ಪದೇ ದಾಳಿಗೆ ಯತ್ನಿಸಿದರೂ, ಕಾರ್ಮಿಕ ಸೋಲು ಒಪ್ಪಿಕೊಳ್ಳದೆ ಕಠಿಣ ಪೈಪೋಟಿಯನ್ನು ನೀಡಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ADVERTISEMENT
ADVERTISEMENT


ವಿಡಿಯೋದಲ್ಲಿ ಗಮನಾರ್ಹವಾದ ಸಂಗತಿಯೆಂದರೆ, ಸ್ಥಳದಲ್ಲಿ ಇದ್ದ ಜನರು ಕಾರ್ಮಿಕನಿಗೆ ಸಹಾಯ ಮಾಡುವ ಬದಲು, ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಕೆಲವರು ಚಿರತೆಯ ಮೇಲೆ ಇಟ್ಟಿಗೆಗಳನ್ನು ಎಸೆದಿದ್ದಾರೆ, ಆದರೆ ಇಟ್ಟಿಗೆಗಳು ಕೆಲವೊಮ್ಮೆ ಹೋರಾಡುತ್ತಿದ್ದ ಕಾರ್ಮಿಕನ ಮೇಲೇ ಬಿದ್ದಿವೆ. ಚಿರತೆ ಆತನ ಮೇಲೆ ಪ್ರಾಬಲ್ಯ ಸಾಧಿಸಲು ಪದೇ ಪದೇ ಯತ್ನಿಸಿದರೂ, ಕಾರ್ಮಿಕನ ಧೈರ್ಯದ ಮುಂದೆ ಅದು ಸೋಲುವಂತಾಯಿತು.

ವಿಡಿಯೋದ ಕೊನೆಯಲ್ಲಿ, ಕಾರ್ಮಿಕ ಚಿರತೆಯನ್ನು ಬಿಟ್ಟು ಅಲ್ಲಿಂದ ಹೊರಡಲು ಆರಂಭಿಸಿದಾಗ, ಚಿರತೆ ಆತನನ್ನು ಕೆಲವು ಕ್ಷಣ ಹಿಂಬಾಲಿಸಿತು. ಆದರೆ, ಸುಸ್ತಾಗಿ ಕೊನೆಗೆ ಚಿರತೆ ಹೊಲದ ಕಡೆಗೆ ಓಡಿ ಪರಾರಿಯಾಯಿತು. ಘಟನೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಮಿಕನ ಧೈರ್ಯವನ್ನು ಸಾಕಷ್ಟು ಬಳಕೆದಾರರು ಹೊಗಳಿದ್ದಾರೆ.

Exit mobile version