ರಿಷಬ್ ಶೆಟ್ಟಿ ಮೆಗಾ ಪ್ಯಾನ್ ಇಂಡಿಯಾ ಸಿನಿಮಾ ಡ್ರಾಪ್..?

ಅನೈತಿಕ (8)

ಗಾಂಧಿನಗರದಿಂದ ಟಾಲಿವುಡ್‌ವರೆಗೆ ರಿಷಬ್ ಶೆಟ್ಟಿ ಕ್ರೇಜ್ ನೆಕ್ಸ್ಟ್ ಲೆವೆಲ್‌ನಲ್ಲಿದೆ. ಆದರೆ, ಬಿಗ್ ಅನೌನ್ಸ್‌ಮೆಂಟ್ ಒಂದರ ಬೆನ್ನಲ್ಲೇ ಈಗ ತೆಲುಗು ಫಿಲ್ಮ್ ನಗರಿಯಿಂದ ತೀರಾ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ರಿಷಬ್ -ನಾಗವಂಶಿ ಪ್ರಾಜೆಕ್ಟ್ ಶೂಟಿಂಗ್ ಹಂತಕ್ಕೆ ಹೋಗುವ ಮುನ್ನವೇ ಡ್ರಾಪ್ ಆಯ್ತಾ..?ಶೆಟ್ರು ಡಿಮ್ಯಾಂಡ್ ಏನಿತ್ತು..? ಇಲ್ಲಿದೆ ನೋಡಿ ಆ ಹಾಟ್ ಆಂಡ್ ಸ್ಪೈಸಿ ಸ್ಟೋರಿ

ಕಾಂತಾರ ಕೊಟ್ಟ ಸಕ್ಸಸ್ ಗೆ ರಿಷಬ್ ಶೆಟ್ಟಿ ಈಗ ಪ್ಯಾನ್-ಇಂಡಿಯಾ ರೇಂಜ್‌ನಲ್ಲಿ ಬ್ರಾಂಡ್ ಆಗಿಬಿಟ್ಟಿದ್ದಾರೆ. ತೆಲುಗಿನ ದೈತ್ಯ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೇನ್‌ಮೆಂಟ್ಸ್ ಹಾಗೂ ನಾಗವಂಶಿ ಬ್ಯಾಕರ್‌ನಲ್ಲಿ, ಆಕಾಶವಾಣಿ ಖ್ಯಾತಿಯ ಅಶ್ವಿನ್ ಗಂಗರಾಜು ನಿರ್ದೇಶನದ 18ನೇ ಶತಮಾನದ ಹೈ-ವೋಲ್ಟೇಜ್ ಐತಿಹಾಸಿಕ ಆಕ್ಷನ್ ಥ್ರಿಲ್ಲರ್‌ಗೆ ರಿಷಬ್ ಗ್ರ್ಯಾಂಡ್ ಎಂಟ್ರಿ ಕೊಡಬೇಕಿತ್ತು. ಕನ್ನಡ-ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಶೂಟ್ ಆಗಿ, ಪ್ಯಾನ್-ಇಂಡಿಯಾ ಲೆವೆಲ್‌ನಲ್ಲಿ ಧೂಳೆಬ್ಬಿಸಬೇಕಿದ್ದ ಈ ಮೆಗಾ ಪ್ರಾಜೆಕ್ಟ್, ಈಗ ಸೆಟ್‌ಗೆ ಏರುವ ಮುನ್ನವೇ ಸೈಲೆಂಟ್ ಆಗಿ ಡ್ರಾಪ್ ಆಗಿದೆ ಅನ್ನೋ ಬ್ರೇಕಿಂಗ್ ನ್ಯೂಸ್ ಗಾಂಧಿನಗರ ಮತ್ತು ಟಾಲಿವುಡ್ ಅಂಗಳದಲ್ಲಿ ಬೆಂಕಿ ಹೊತ್ತಿಸಿದೆ.

ಈ ಬಿಗ್ ಶಾಕ್‌ಗೆ ಮೇನ್ ರೀಸನ್ ಏನು ಗೊತ್ತಾ? ತೆರೆಮರೆಯಲ್ಲಿ ಕೇಳಿಬರುತ್ತಿರೋ ಸೈಡ್ ಸ್ಟೋರಿ ಪ್ರಕಾರ, ಕಾಂತಾರದ ಗ್ಲೋಬಲ್ ಸಕ್ಸಸ್ ಬಳಿಕ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ರಿಷಬ್, ಈ ಸಿನಿಮಾಕ್ಕಾಗಿ ಭಾರಿ ಮೊತ್ತದ ಸಂಭಾವನೆ ಡಿಮ್ಯಾಂಡ್ ಮಾಡಿದ್ದರಂತೆ. ಕಥೆಯ ಕ್ಯಾನ್ವಾಸ್, ಮೇಕಿಂಗ್ ಬಜೆಟ್ ಮತ್ತು ನಟನ ಮಾಸ್ ಸಂಭಾವನೆ ಎಲ್ಲವನ್ನೂ ಲೆಕ್ಕ ಹಾಕಿದ ನಿರ್ಮಾಪಕ ನಾಗವಂಶಿ, ಅಷ್ಟೊಂದು ರಿಸ್ಕ್ ನಮಗೆ ಬೇಡಪ್ಪಾಅಂತ ಕಾಂಟ್ರಾಕ್ಟ್ ಪೇಪರ್ ಪಕ್ಕಕ್ಕಿಟ್ಟು ಸಾಫ್ಟ್ ಆಗಿ ಎಕ್ಸಿಟ್ ಆಗಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಯಾವುದೇ ‘ಬಜೆಟ್ ಕಟ್’ ಕಥೆಗೆ ಇದುವರೆಗೂ ಎರಡೂ ಕಡೆಯಿಂದ ಆಫೀಶಿಯಲ್ ಮುದ್ರೆ ಮಾತ್ರ ಬಿದ್ದಿಲ್ಲ.

ಯೋಜನೆ ರದ್ದಾಗಿದ್ದೇ ತಡ, ನಿರ್ದೇಶಕ ಅಶ್ವಿನ್ ಗಂಗರಾಜು ಕ್ಯಾಮೆರಾ ಹಿಡಿದು ಬೇರೆ ನಟನ ಶಿಕಾರಿಗೆ ಇಳಿದಿದ್ದರೆ, ರಿಷಬ್ ಶೆಟ್ಟಿ ಅವರ ಫುಲ್ ಫೋಕಸ್ ಮಾತ್ರ ಜೈ ಹನುಮಾನ್ ಮೇಲಿದೆ. ಪ್ರಶಾಂತ್ ವರ್ಮಾ ಕಾಂಬಿನೇಷನ್‌ನ ಹನುಮಂತನ ಅವತಾರ ಒಂದೆಡೆಯಾದರೆ, ಇನ್ನೊಂದೆಡೆ ಸಂದೀಪ್ ಸಿಂಗ್ ನಿರ್ದೇಶನದ ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಐತಿಹಾಸಿಕ ಸಿನಿಮಾಗೂ ರಿಷಬ್ ಭರ್ಜರಿ ಪ್ರಿಪರೇಷನ್ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಸಿತಾರಾ ಬ್ಯಾನರ್‌ನ ಒಂದು ಸಿನಿಮಾ ಡ್ರಾಪ್ ಆದ್ರೂ, ಸಾಲು ಸಾಲು ಪ್ಯಾನ್-ಇಂಡಿಯಾ ಆಫರ್‌ಗಳನ್ನು ಕೈಯಲ್ಲಿಟ್ಟುಕೊಂಡು ರಿಷಬ್ ಶೆಟ್ಟಿ ಮಾತ್ರ ಭಾರತೀಯ ಚಿತ್ರರಂಗದಲ್ಲಿ ಬೋರ್ಡ್ ಖಾಲಿ ಇಲ್ಲದಂತೆ ಓಡುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version