ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇದೀಗ ಐಪಿಎಲ್ 2026ರ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್ಸಿಬಿ, ಮತ್ತೊಮ್ಮೆ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಮುಖ್ಯಾಂಶಗಳು:
-
ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿ ಆರ್ಸಿಬಿ ಚಾಂಪಿಯನ್.
-
‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಹಾಗೂ ನಾಯಕ ರಜತ್ ಪಾಟಿದಾರ್ ಆಟಕ್ಕೆ ಕ್ರಿಕೆಟ್ ಲೋಕ ಫಿದಾ.
-
ಆರ್ಸಿಬಿ ಐತಿಹಾಸಿಕ ಗೆಲುವಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಸೇರಿ ಗಣ್ಯರ ಶುಭಾಶಯ.
ಗಲ್ಲಿ ಗಲ್ಲಿಯಲ್ಲೂ ಸಂಭ್ರಮ, ಕೊಹ್ಲಿ ವಿರಾಟ ರೂಪಕ್ಕೆ ಫ್ಯಾನ್ಸ್ ಫಿದಾ!
‘ಈ ಸಲವೂ ಕಪ್ ನಮ್ಮದೇ’ ಎಂದು ಸಾರಿದ್ದ ಅಭಿಮಾನಿಗಳ ಸಂಭ್ರಮವೀಗ ಮುಗಿಲು ಮುಟ್ಟಿದೆ. ಆರ್ಸಿಬಿ ಜಯಭೇರಿ ಬಾರಿಸುತ್ತಿದ್ದಂತೆ ರಾಜ್ಯದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಇಡೀ ಟೂರ್ನಿಯುದ್ದಕ್ಕೂ ಹಾಗೂ ಫೈನಲ್ ಪಂದ್ಯದಲ್ಲಿ ರನ್ ಬೆನ್ನಟ್ಟುವಾಗ ವಿರಾಟ್ ಕೊಹ್ಲಿ ಪ್ರದರ್ಶಿಸಿದ ‘ವಿರಾಟ ರೂಪ’ ಹಾಗೂ ನಾಯಕ ರಜತ್ ಪಟಿದಾರ್ ಅವರ ತಾಳ್ಮೆಯ ಆಟ ಎಲ್ಲರ ಗಮನ ಸೆಳೆದಿದೆ. ಗೆಲುವಿನ ಸಂಭ್ರಮದ ನಡುವೆ ಟ್ವೀಟ್ ಮಾಡಿರುವ ಆರ್ಸಿಬಿ ಫ್ರಾಂಚೈಸಿ, “ಇದು ನಿಮ್ಮ ಗೆಲುವು, ಮನೆಯಲ್ಲಿಯೇ ಸುರಕ್ಷಿತವಾಗಿ ಸಂಭ್ರಮಿಸಿ” ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದೆ.
ಗಣ್ಯಾತಿಗಣ್ಯರಿಂದ ಅಭಿನಂದನೆಗಳ ಮಹಾಪೂರ
ರೆಡ್ ಆರ್ಮಿಯ ಈ ಐತಿಹಾಸಿಕ ಸಾಧನೆಗೆ ರಾಜಕೀಯ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ:
-
-
-
ಡಿ.ಕೆ.ಶಿವಕುಮಾರ್ (ನಿಯೋಜಿತ ಸಿಎಂ): “ಇದು ನಮ್ಮ ಆರ್ಸಿಬಿಯ ಸುವರ್ಣ ಅಧ್ಯಾಯ. ಸತತ 2ನೇ ಬಾರಿ ಕಪ್ ಗೆಲ್ಲುವ ಮೂಲಕ ತಂಡ ಇತಿಹಾಸ ನಿರ್ಮಿಸಿದೆ. ಧೈರ್ಯ ಮತ್ತು ಸಂಯಮದಿಂದ ಆಟಗಾರರು ಬೆಂಗಳೂರಿಗೆ ಹೆಮ್ಮೆ ತಂದಿದ್ದಾರೆ.” ಇದೇ ವೇಳೆ ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲು ಅಹ್ಮದಾಬಾದ್ನಲ್ಲಿ ಆಯೋಜಿಸಿದ್ದಕ್ಕೆ ಅವರು ಅಸಮಾಧಾನವನ್ನೂ ಹೊರಹಾಕಿದ್ದಾರೆ.
-
-
Tonight, Bengaluru rises again as champions!
ಈ ಸಲವೂ ಕಪ್ ನಮ್ದೇ ⭐️⭐️
RCB has created history by clinching a second consecutive IPL title. With grit, composure, and the heart of true champions, the team has once again made Bengaluru proud.
Congratulations to the players,… pic.twitter.com/y2hgXT4m2l
— DK Shivakumar (@DKShivakumar) May 31, 2026
-
-
ಸಿದ್ದರಾಮಯ್ಯ (ಹಂಗಾಮಿ ಸಿಎಂ): “ಆರ್ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್ಸಿಬಿ ಹುಡುಗರು ಪ್ರದರ್ಶಿಸಿದ ನಿರ್ಭೀತ ಕ್ರಿಕೆಟ್ಗೆ ಎದುರಾಳಿ ಬಳಿ ಉತ್ತರವಿರಲಿಲ್ಲ. ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ನಮ್ಮ ಆರ್ಸಿಬಿಗೆ ಅಭಿನಂದನೆಗಳು.” ಜೊತೆಗೆ ವಿಜಯೋತ್ಸವದ ವೇಳೆ ಪೊಲೀಸ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
-
.@RCBTweets has once again emerged as the IPL champions. Throughout the tournament, the fearless brand of cricket displayed by the RCB boys seemed to leave opposing teams with no answers.
Congratulations to our RCB on lifting the trophy for the second consecutive time. This… pic.twitter.com/1AeTz55DIN
— Siddaramaiah (@siddaramaiah) May 31, 2026
-
ಹೆಚ್.ಡಿ.ಕುಮಾರಸ್ವಾಮಿ (ಕೇಂದ್ರ ಸಚಿವ): “ನಮ್ಮ ಹೆಮ್ಮೆಯ ಆರ್ಸಿಬಿ ಸುವರ್ಣ ಇತಿಹಾಸ ಬರೆದಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ತಂಡದ ಶಕ್ತಿಯಾಗಿದ್ದರೆ, ರಜತ್ ಪಟಿದಾರ್ ದೃಢ ನಿಶ್ಚಯದಿಂದ ತಂಡ ಮುನ್ನಡೆಸಿದರು.”
-
ಬಿ.ವೈ.ವಿಜಯೇಂದ್ರ (ಬಿಜೆಪಿ ರಾಜ್ಯಾಧ್ಯಕ್ಷ): “ಬ್ಯಾಕ್ ಟು ಬ್ಯಾಕ್ ಗೆಲ್ಲುವುದಷ್ಟೇ ಅಲ್ಲ, ಆರ್ಸಿಬಿ ಕ್ರಿಕೆಟ್ ಅಂಗಳದಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಚೇಸ್ ಮಾಸ್ಟರ್ ಕೊಹ್ಲಿ ಆಟ ಅದ್ಭುತ.”
