• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 9, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

8 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕರುಣ್ ನಾಯರ್

ಸಾಬಣ್ಣ ಎಚ್. ನಂದಿಹಳ್ಳಿ by ಸಾಬಣ್ಣ ಎಚ್. ನಂದಿಹಳ್ಳಿ
June 19, 2025 - 9:54 am
in ಕ್ರೀಡೆ
0 0
0
Add a heading (23)

ಭಾರತೀಯ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಹೊಂದಿರುವ ಕನ್ನಡಿಗ ಕರುಣ್ ನಾಯರ್, 2017ರಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳ ಬಳಿಕ ಭಾರತ ತಂಡದಿಂದ ಕೈಬಿಡಲ್ಪಟ್ಟಿದ್ದರು. ದೇಶೀಯ ಕ್ರಿಕೆಟ್‌ಗೆ ಮರಳಿದ ಅವರು ರನ್‌ಗಳ ಕೊರತೆ ಎದುರಿಸಿ, 2022ರಲ್ಲಿ ಕರ್ನಾಟಕ ತಂಡದಿಂದಲೂ ಹೊರಗುಳಿದಿದ್ದರು. ಕ್ರಿಕೆಟ್‌ ಜೀವನವೇ ಮುಗಿದು ಹೋಯಿತು ಎಂದು ಎಲ್ಲರೂ ಭಾವಿಸಿದ್ದಾಗ, ಕರುಣ್ ಎಕ್ಸ್‌ನಲ್ಲಿ “ಡಿಯರ್ ಕ್ರಿಕೆಟ್, ದಯವಿಟ್ಟು ಒಂದು ಅವಕಾಶ ಕೊಡು” ಎಂದು ಬೇಡಿಕೊಂಡಿದ್ದರು. ಈ ಪ್ರಾರ್ಥನೆಗೆ ಫಲ ಸಿಕ್ಕಂತೆ, 2023ರಿಂದ ಕರುಣ್‌ರ ಕ್ರಿಕೆಟ್ ಜೀವನ ಮರುಹುಟ್ಟು ಪಡೆಯಿತು.

ವಿದರ್ಭ ತಂಡಕ್ಕೆ ವಲಸೆ ಹೋದ ಕರುಣ್, 2023ರ ದೇಶೀಯ ಋತುವಿನಲ್ಲಿ ಲಯ ಕಂಡುಕೊಂಡರು. 2024ರ ಕೌಂಟಿ ಕ್ರಿಕೆಟ್‌ನಲ್ಲಿ ಗಮನ ಸೆಳೆದ ಅವರು, 2024-25ರ ದೇಶೀಯ ಋತುವಿನಲ್ಲಿ ರನ್‌ ಪ್ರವಾಹ ಹರಿಸಿ, 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರಳಿದರು. 33 ವರ್ಷದ ಕರುಣ್ ಇದೀಗ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ಸಜ್ಜಾಗಿದ್ದಾರೆ. ಈ ಪುನರಾಗಮನ, ಭಾರತ ತಂಡಕ್ಕೆ ಮರಳಲು ಬಯಸುವ ಅನೇಕ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದೆ.

RelatedPosts

ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್

ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!

ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್

ADVERTISEMENT
ADVERTISEMENT

ಭಾರತೀಯ ಕ್ರಿಕೆಟ್‌ನಲ್ಲಿ ಇಂಥ ಕಂಬ್ಯಾಕ್‌ ಕಥೆಗಳು ಹೊಸದಲ್ಲ. ಹಲವರು ತಮ್ಮ ವೃತ್ತಿಜೀವನದ ಕೊನೆಯ ಹಂತದಿಂದ ಮರಳಿ ಸಾಧನೆ ಮಾಡಿದ್ದಾರೆ. ಇಂಥ ಕೆಲವು ಕಂಬ್ಯಾಕ್ ಸಾಧಕರ ಸಂಕ್ಷಿಪ್ತ ಕಥೆ ಇಲ್ಲಿದೆ:

ಮೊಹಿಂದರ್ ಅಮರ್‌ನಾಥ್:

1969ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ ಮೊಹಿಂದರ್, ಸ್ಥಿರ ಪ್ರದರ್ಶನದ ಕೊರತೆಯಿಂದ 7 ವರ್ಷ ತಂಡದಿಂದ ದೂರವುಳಿದಿದ್ದರು. 1976ರಲ್ಲಿ ಪುನರಾಗಮನ ಕಂಡ ಅವರು, ಆಲ್‌ರೌಂಡರ್‌ ಆಗಿ ಗಮನ ಸೆಳೆದರೂ, ಮತ್ತೆ ಕೈಬಿಡಲ್ಪಟ್ಟರು. 1982ರಲ್ಲಿ ಮರಳಿ ಬಂದ ಅವರು, 1983ರ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಲವು ಬಾರಿ ಕೈಬಿಡಲ್ಪಟ್ಟರೂ, ಪ್ರತಿ ಬಾರಿಯೂ ಪುನರಾಗಮನದಲ್ಲಿ ಯಶಸ್ವಿಯಾದ ಮೊಹಿಂದರ್, ಭಾರತದ ಮೊದಲ ಕಂಬ್ಯಾಕ್ ಕಿಂಗ್ ಎನಿಸಿದರು.

ಸೌರವ್ ಗಂಗೂಲಿ:

1992ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿದ ಸೌರವ್, ಒಂದೇ ಪಂದ್ಯ ಆಡಿ ಕೈಬಿಡಲ್ಪಟ್ಟರು. 1996ರಲ್ಲಿ ಲಾರ್ಡ್ಸ್‌ನ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಭರ್ಜರಿ ಪುನರಾಗಮನ ಮಾಡಿದರು. 2000ರಲ್ಲಿ ನಾಯಕರಾಗಿ ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದರು. ಆದರೆ, 2005ರಲ್ಲಿ ಕೋಚ್ ಗ್ರೆಗ್ ಚಾಪೆಲ್‌ ಜೊತೆ ಭಿನ್ನಾಭಿಪ್ರಾಯದಿಂದ ತಂಡದಿಂದ ಹೊರಗುಳಿದರು. 2007ರಲ್ಲಿ ರಣಜಿ, ಕೌಂಟಿಯಲ್ಲಿ ರನ್‌ ಸಿಡಿಸಿ ಮರಳಿ ಬಂದ ಅವರು, ಪಾಕ್ ವಿರುದ್ಧ 239 ರನ್‌ ಬಾರಿಸಿ 2008ರಲ್ಲಿ ತೃಪ್ತಿಯಿಂದ ನಿವೃತ್ತರಾದರು.

ಯುವರಾಜ್ ಸಿಂಗ್:

2011ರ ಏಕದಿನ ವಿಶ್ವಕಪ್‌ ಗೆಲುವಿನ ಹೀರೋ ಯುವರಾಜ್, ಕ್ಯಾನ್ಸರ್‌ಗೆ ತುತ್ತಾಗಿ 2012ರಲ್ಲಿ ಕಷ್ಟದ ಅವಧಿಯನ್ನು ಎದುರಿಸಿದರು. ಒಂದೇ ವರ್ಷದಲ್ಲಿ ಕಾಯಿಲೆಯನ್ನು ಗೆದ್ದು 2012ರ ಟಿ20 ವಿಶ್ವಕಪ್‌ಗೆ ಮರಳಿದರು. 2014ರ ಬಳಿಕ ಕೈಬಿಡಲ್ಪಟ್ಟರೂ, 2016ರ ಟಿ20 ವಿಶ್ವಕಪ್‌ಗೆ ಪುನರಾಗಮನ ಕಂಡರು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಆಡಿದರು.

ದಿನೇಶ್ ಕಾರ್ತಿಕ್:

2004ರಲ್ಲಿ ಪದಾರ್ಪಣೆ ಮಾಡಿದ ಕಾರ್ತಿಕ್, ಧೋನಿಯ ಯಶಸ್ಸಿನಿಂದ ವಿಕೆಟ್‌ಕೀಪರ್‌ ಆಗಿ ಸೀಮಿತ ಅವಕಾಶ ಪಡೆದರು. 2019ರ ವಿಶ್ವಕಪ್‌ ಬಳಿಕ ತಂಡದಿಂದ ಹೊರಗುಳಿದ ಅವರು, 2022ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಫಿನಿಷರ್‌ ಆಗಿ ಮಿಂಚಿ, 37ನೇ ವಯಸ್ಸಿನಲ್ಲಿ ಟಿ20 ತಂಡಕ್ಕೆ ಮರಳಿದರು. 2022ರ ಟಿ20 ವಿಶ್ವಕಪ್‌ನಲ್ಲೂ ಆಡಿದರು.

ಜಾವಗಲ್ ಶ್ರೀನಾಥ್:

ಕಪಿಲ್ ದೇವ್ ಬಳಿಕ ಭಾರತದ ವೇಗದ ಬೌಲಿಂಗ್‌ಗೆ ಬಲ ತುಂಬಿದ ಕನ್ನಡಿಗ ಶ್ರೀನಾಥ್, 2001ರಲ್ಲಿ ಜಹೀರ್ ಖಾನ್, ಅಗರ್ಕರ್‌ರ ಉದಯದಿಂದ ಏಕದಿನ ಕ್ರಿಕೆಟ್‌ನಿಂದ ದೂರವಾಗಿದ್ದರು. 2003ರ ವಿಶ್ವಕಪ್‌ಗೆ ಸೌರವ್ ಗಂಗೂಲಿಯ ವಿನಂತಿಯ ಮೇರೆಗೆ ಮರಳಿದ ಅವರು, 16 ವಿಕೆಟ್‌ ಕಿತ್ತು ಭಾರತವನ್ನು ಫೈನಲ್‌ಗೆ ಕೊಂಡೊಯ್ದರು.

ShareSendShareTweetShare
ಸಾಬಣ್ಣ ಎಚ್. ನಂದಿಹಳ್ಳಿ

ಸಾಬಣ್ಣ ಎಚ್. ನಂದಿಹಳ್ಳಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

Please login to join discussion

ತಾಜಾ ಸುದ್ದಿ

Untitled design (89)

ಗ್ಯಾಸ್ ಗೀಜರ್‌ನಿಂದ ಅನಿಲ ಸೋರಿಕೆ: ಉಸಿರುಗಟ್ಟಿ ಸ್ನಾನದ ಮನೆಯಲ್ಲಿ ವ್ಯಕ್ತಿ ಸಾ*ವು!

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 9:41 am
0

Untitled design (88)

ರಾಜ್ಯದಲ್ಲಿ ಮುಂದುವರೆದ ಭಾರೀ ಮಳೆ: ಇಂದಿನಿಂದ ಆ13ರವರೆಗೆ ಈ ಜಿಲ್ಲೆಗಳಲ್ಲಿ ರಣಮಳೆ ಸಾಧ್ಯತೆ!

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 9:16 am
0

Untitled design (87)

ಇಂದು ರಕ್ಷಾಬಂಧನ: ಈ ರಕ್ಷಾಬಂಧನ ಯಾಕೆ ಆಚರಿಸಲಾಗುತ್ತೆ? ಇದರ ಐತಿಹಾಸಿಕ ಮಹತ್ವ ತಿಳಿಯಿರಿ!

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 8:49 am
0

Untitled design (86)

ಇಂದಿನ ರಕ್ಷಾ ಬಂಧನ ಹಬ್ಬ ಅತ್ಯಂತ ಶುಭದಾಯಕ! ಕಾರಣ ಏನು ಗೊತ್ತಾ?

by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 8:33 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (13)
    ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!
    August 7, 2025 | 0
  • Untitled design 2025 08 06t210431.795
    ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್
    August 6, 2025 | 0
  • Untitled design (44)
    ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!
    August 6, 2025 | 0
  • Untitled design 2025 08 05t214533.020
    ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್
    August 5, 2025 | 0
  • 222 (22)
    ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಟೀಂ ಇಂಡಿಯಾಗೆ ಸಚಿನ್‌ ವಿಶೇಷ ಸಂದೇಶ
    August 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version