ಹನುಮಾನ್ ದೇಗುಲಕ್ಕೆ ವಿಶ್ವಕಪ್ ಟ್ರೋಫಿ ಕೊಂಡೊಯ್ದ ಜಯ್ ಶಾ & ಸೂರ್ಯಕುಮಾರ್: ವಿಡಿಯೋ ವೈರಲ್!

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತವು ದಾಖಲೆಯ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಲ್ಲದೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತವಾಗಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಇತಿಹಾಸ ನಿರ್ಮಿಸಿದೆ.

ಇತಿಹಾಸ ಬರೆದ ಸೂರ್ಯ ಪಡೆ

ಟಿ20 ವಿಶ್ವಕಪ್ ಆರಂಭವಾದಾಗಿನಿಂದ ಈವರೆಗೆ ಯಾವುದೇ ಹಾಲಿ ಚಾಂಪಿಯನ್ ತಂಡಕ್ಕೆ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಈ ಅಜೆಂಡಾವನ್ನು ಮುರಿದು ಹಾಕಿದೆ. 2024ರಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ, ಈಗ 2026ರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಬೃಹತ್ ಮೊತ್ತದ ಗುರು ನೀಡಿತ್ತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ದಾಳಿಗೆ ತತ್ತರಿಸಿ ಕೇವಲ 96 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಹನುಮಾನ್ ದೇಗುಲದಲ್ಲಿ ಟ್ರೋಫಿಯೊಂದಿಗೆ ಸಂಭ್ರಮ

ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಅಹಮದಾಬಾದ್‌ನ ಸುಪ್ರಸಿದ್ಧ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದರು. ವಿಶ್ವಕಪ್ ಟ್ರೋಫಿಯನ್ನು ಕೈಯಲ್ಲಿ ಹಿಡಿದು ದೇವರ ಆಶೀರ್ವಾದ ಪಡೆದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಗೆಲುವು ಕೋಟ್ಯಂತರ ಭಾರತೀಯರ ಪ್ರಾರ್ಥನೆಯ ಫಲ ಎಂದು ನಾಯಕ ಸೂರ್ಯಕುಮಾರ್ ಈ ಹೇಳಿದರು.

ಕಿವೀಸ್ ವಿರುದ್ಧದ ಸೋಲಿನ ಸರಪಳಿಗೆ ಬ್ರೇಕ್

ಈ ಬಾರಿಯ ವಿಶ್ವಕಪ್ ಗೆಲುವು ಭಾರತಕ್ಕೆ ಕೇವಲ ಟ್ರೋಫಿಯಷ್ಟೇ ಅಲ್ಲ, ಒಂದು ದೊಡ್ಡ ಸಮಾಧಾನವನ್ನೂ ತಂದಿದೆ. ಅದೇನೆಂದರೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಈವರೆಗೆ ಒಂದೇ ಒಂದು ಗೆಲುವು ಲಭಿಸಿರಲಿಲ್ಲ.2007, 2016 ಮತ್ತು 2021ರಲ್ಲೂ ಸೋಲ್ಲನ್ನೇ ಕಂಡಿತ್ತು.

ಆದರೆ, 2026ರ ಈ ಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಧೂಳೀಪಟ ಮಾಡುವ ಮೂಲಕ ಭಾರತ ತನ್ನ ಹಳೆಯ ಬಾಕಿ ತೀರಿಸಿಕೊಂಡಿದೆ. ಗೌತಮ್ ಗಂಭೀರ್ ಅವರ ಮಾರ್ಗದರ್ಶನ ಮತ್ತು ಸೂರ್ಯಕುಮಾರ್ ಅವರ ಚಾಣಾಕ್ಷ ನಾಯಕತ್ವ ಭಾರತವನ್ನು ಮತ್ತೆ ವಿಶ್ವದ ನಂಬರ್ 1 ತಂಡವನ್ನಾಗಿ ಮಾಡಿದೆ.

Exit mobile version