ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ

Rashi bavishya

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಶನಿವಾರವು ಇಂದು ಎಲ್ಲರ ಜೀವನದಲ್ಲಿ ವಿಶೇಷ ಪರಿಣಾಮ ಬೀರುತ್ತಿದೆ. ಉದ್ಯೋಗದಲ್ಲಿ ಹಿತಶತ್ರುಗಳ ಬಾಧೆ, ಆರೋಗ್ಯದಲ್ಲಿ ಸ್ವಲ್ಪ ಹಿನ್ನಡೆ, ಹಳೆಯ ಹೂಡಿಕೆಯಿಂದ ಅಲ್ಪ ಲಾಭ, ಕುಟುಂಬದಿಂದ ಉತ್ತಮ ಸಹಕಾರ ಮತ್ತು ಕಲ್ಪನೆಗಳಿಗೆ ಸರಿಯಾದ ರೂಪ ದೊರೆಯುವಂತಹ ದಿನವಿದು. ಆದರೆ ಇಂದು ಒಂದು ರಾಶಿಯವರಿಗೆ ಚರಾಸ್ತಿ ಸಂಪತ್ತಿನಲ್ಲಿ ಅನಿರೀಕ್ಷಿತ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯರು ಎಚ್ಚರಿಸಿದ್ದಾರೆ.

ಇಂದಿನ ದಿನ ಭವಿಷ್ಯವನ್ನು ರಾಶಿ ವಾರು ವಿವರವಾಗಿ ತಿಳಿಯಿರಿ:

ಮೇಷ ರಾಶಿ :

ಯಾರನ್ನೂ ತುರ್ತಾಗಿ ನಿಮ್ಮ ದೃಷ್ಟಿಯಿಂದ ಅಳೆಯುವುದು ಸರಿಯಲ್ಲ. ಸಮಯ ವ್ಯರ್ಥ ಮಾಡಬೇಡಿ. ಸಮಯದ ಹೊಂದಾಣಿಕೆ ಅತ್ಯಗತ್ಯ. ಪ್ರೇಯಸಿಯ ನೆನಪು ನಿಯಂತ್ರಣಕ್ಕೆ ಸ್ವಲ್ಪ ಕಷ್ಟವಾಗಬಹುದು. ವಾಹನ ಸಂಚಾರದಲ್ಲಿ ತೊಂದರೆ, ಕಾರಣವಿಲ್ಲದ ಕೋಪ, ಅತಿಯಾದ ಮೋಹದಿಂದ ಹೊರಬರುವುದು ಸುಲಭ. ಶಿಕ್ಷಣಕ್ಕೆ ಸಂಬಂಧಿಸಿದ ಸಮಾರಂಭಗಳಿಗೆ ಆಹ್ವಾನ ಬರಬಹುದು.

ವೃಷಭ ರಾಶಿ :

ಕೆಲಸಗಳಲ್ಲಿ ವಿಳಂಬವಾದರೂ ಪೂರ್ಣಗೊಳಿಸುತ್ತೀರಿ. ಪ್ರಮುಖ ವಿಚಾರಗಳಲ್ಲಿ ಸಹೋದರರ ಸಲಹೆ ಪಡೆಯಿರಿ. ಭೂಮಿ ವ್ಯವಹಾರದಲ್ಲಿ ಒತ್ತಡ ಹೆಚ್ಚು. ಸಂಗಾತಿಯ ಸ್ವಭಾವ ಸುಲಭದಲ್ಲಿ ಅರ್ಥವಾಗದು. ಅತಿಯಾದ ಬಂಧನ ಕಿರಿಕಿರಿ ಉಂಟುಮಾಡಬಹುದು. ನೀವು ಬಯಸಿದ ವಸ್ತು ಯಾವುದೋ ರೂಪದಲ್ಲಿ ನಿಮ್ಮನ್ನು ಸೇರಬಹುದು.

ಮಿಥುನ ರಾಶಿ :

ನಿಮ್ಮ ಮಾತುಗಳೇ ಹಿತಶತ್ರುಗಳನ್ನು ಸೃಷ್ಟಿಸಬಹುದು. ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ. ದೂರ ಪ್ರಯಾಣದ ಸೂಚನೆಗಳು. ಹಿರಿಯರಿಂದ ವಿಶೇಷ ಬೆಂಬಲ ಸಿಗದು. ವಿವಾಹದಲ್ಲಿ ನಿರಾಸಕ್ತಿ, ಹಿರಿಯರ ಕೋಪಕ್ಕೆ ಸಿಲುಕುವ ಸಾಧ್ಯತೆ. ಸ್ವತಂತ್ರವಾಗಿರುವುದು ಇಂದು ನಿಮಗೆ ಇಷ್ಟವಾಗುತ್ತದೆ.

ಕರ್ಕಾಟಕ ರಾಶಿ :

ನಿಗದಿತ ಸಮಯದಲ್ಲಿ ಕೆಲಸಗಳು ಪೂರ್ಣಗೊಳ್ಳದು. ಬಂಧು-ಮಿತ್ರರೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳು. ದೀರ್ಘಕಾಲದಿಂದ ಯಶಸ್ಸು ಸಿಗದಿದ್ದರೂ ಇಂದು ನಿಮ್ಮ ಅತ್ಯುತ್ತಮ ಪ್ರಯತ್ನದಿಂದ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಕುಟುಂಬದ ಕೆಲವು ವಿಚಾರಗಳು ಹಿಡಿಸದೇ ಇರಬಹುದು. ಸಂಬಂಧಗಳನ್ನು ಆತ್ಮೀಯಗೊಳಿಸಲು ಪ್ರಯತ್ನಿಸಿ.

ಸಿಂಹ ರಾಶಿ :

ಕುಟುಂಬದೊಂದಿಗೆ ಧಾರ್ಮಿಕ ಸೇವೆಯಲ್ಲಿ ಭಾಗವಹಿಸುತ್ತೀರಿ. ಮಾತುಗಳಿಂದ ಹಿತಶತ್ರುಗಳು ಉತ್ಪತ್ತಿಯಾಗುತ್ತವೆ. ಸಂಪತ್ತು ಹೆಚ್ಚಳವಾಗುತ್ತದೆ ಆದರೆ ನಿಮಗೆ ಗೊತ್ತಿಲ್ಲದೇ ಚರಾಸ್ತಿ ಸಂಪತ್ತು ಇಲ್ಲವಾಗುವ ಸಾಧ್ಯತೆ ಇದೆ. ಇಷ್ಟವಿಲ್ಲದಿದ್ದರೂ ಕೆಲಸ ಮಾಡಬೇಕಾಗುತ್ತದೆ. ಉದ್ವಿಗ್ನತೆ ತಪ್ಪಿಸಿ ಸಮಚಿತ್ತದಲ್ಲಿರಿ. ನಿಮ್ಮ ಇರುವಿಕೆಯನ್ನು ತೋರಿಸಿ.

ಕನ್ಯಾ ರಾಶಿ :

ದೂರದ ಕನಸುಗಳನ್ನು ನನಸು ಮಾಡಲು ಪ್ರಯತ್ನ ಆರಂಭ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹ. ನೌಕರರ ವಿಚಾರದಲ್ಲಿ ಸರಿಯಾದ ವರ್ತನೆ ತೋರಿಸಿ. ನಿಮ್ಮ ಚಿಂತನೆಯಿಂದ ಕಾರ್ಯ ಮಾಡಿ. ಬೌದ್ಧಿಕ ಕಸರತ್ತು ಪ್ರದರ್ಶಿಸಿ. ಒಂದೇ ರೀತಿಯ ಜೀವನ ಬೇಡ. ವಿದ್ಯಾರ್ಥಿಗಳು ಸಮಯ ನಿರ್ವಹಣೆಯಲ್ಲಿ ಜಾಗರೂಕರಾಗಿ.

ತುಲಾ ರಾಶಿ :

ಒಳ್ಳೆಯ ಸುದ್ದಿಗಳು ಬರಬಹುದು. ನೆರವಿನಿಂದ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ-ಉದ್ಯೋಗದಲ್ಲಿ ಉನ್ನತಿ. ಅರ್ಜಿ ಸಲ್ಲಿಸಿದ್ದರೆ ಹಣ ಖರ್ಚು ಆಗುತ್ತದೆ. ನೀರಿನಿಂದ ಭೀತಿ, ವಾಹನದ ಮೇಲೆ ಅತಿಯಾದ ಪ್ರೀತಿ. ಮಾತುಗಳಲ್ಲಿ ನಂಬಿಕೆ ಕಡಿಮೆಯಾಗಬಹುದು.

ವೃಶ್ಚಿಕ ರಾಶಿ :

ಶ್ರಮಕ್ಕೆ ಸರಿಯಾದ ಮನ್ನಣೆ ಸಿಗದು. ಹಣಕಾಸಿನಲ್ಲಿ ಸ್ವಂತ ಆಲೋಚನೆಗಳು ಕೂಡುವುದಿಲ್ಲ. ಪಾಲುದಾರಿಕೆ ನಿಧಾನ. ಹಣದ ಕಾಳಜಿ ತೊಡೆಯುವುದು ಸಾಧ್ಯ. ಸಪ್ಪೆ ವಿಷಯ ಮುಂದುವರಿಸುವುದಿಲ್ಲ. ಉದ್ಯೋಗ ಒತ್ತಡದಿಂದ ಅನಾರೋಗ್ಯ. ಆದಾಯ ಹೆಚ್ಚಿಸುವುದು ಅನಿವಾರ್ಯ.

ಧನು ರಾಶಿ :

ವೃತ್ತಿಪರ ವ್ಯವಹಾರದಲ್ಲಿ ಧೈರ್ಯದ ನಿರ್ಧಾರಗಳು. ನಿರುದ್ಯೋಗಿಗಳಿಗೆ ಹೊಸ ಅವಕಾಶ. ಸಂಗಾತಿಯ ಅಭಿಪ್ರಾಯ ಅರ್ಥಮಾಡಿಕೊಳ್ಳಿ. ಮೇಲಧಿಕಾರಿಗಳೊಂದಿಗೆ ಚರ್ಚೆ. ಕಿರಿಕಿರಿ ಸಹಿಸಲಾರಿರಿ. ಯಂತ್ರ ಮಾರಾಟದವರಿಗೆ ಉತ್ತಮ ಲಾಭ.

ಮಕರ ರಾಶಿ :

ಆತುರ ಆಲೋಚನೆಗಳಿಂದ ತೊಂದರೆ. ವೃತ್ತಿಪರ ವ್ಯವಹಾರ ನಿಧಾನ. ವಿವಾದಗಳಿಂದ ದೂರವಿರಿ. ವ್ಯರ್ಥ ಖರ್ಚು ಹೆಚ್ಚು. ವೃತ್ತಿಜೀವನ ಹೊಸ ತಿರುವು. ಆರ್ಥಿಕ ಸ್ಥಿತಿ ಉತ್ತಮ. ಪಾರದರ್ಶಕತೆ ತೋರಿಸಿ. ಸಹೋದರಿಯರಿಗೆ ಉಡುಗೊರೆ ನೀಡಿ.

ಕುಂಭ ರಾಶಿ :

ಮಕ್ಕಳು ಶಿಕ್ಷಣ-ಉದ್ಯೋಗದಲ್ಲಿ ಉತ್ತಮ ಫಲ. ಎಲ್ಲಾ ಕಡೆಯಿಂದ ಆದಾಯ. ವೃತ್ತಿ ತೃಪ್ತಿಕರ. ಸಣ್ಣ ವಿಷಯಗಳು ನೋಯಿಸಬಹುದು. ಅಸಮಾಧಾನದಲ್ಲೂ ಉತ್ತಮ ಫಲಿತಾಂಶ. ಕುಟುಂಬ ಜವಾಬ್ದಾರಿ ಬರಬಹುದು. ಚಂಚಲ ಮನಸ್ಸನ್ನು ನಿಶ್ಚಲಗೊಳಿಸಿ.

ಮೀನ ರಾಶಿ :

ಹೊಸ ವಾಹನ ಖರೀದಿ ಮುಂದೂಡಲ್ಪಡುತ್ತದೆ. ನಿರುದ್ಯೋಗಿಗಳಿಗೆ ಅವಕಾಶ ಸಿಗದು. ಕುಟುಂಬದಲ್ಲಿ ಸಂತೋಷ-ಶಾಂತಿ. ಪ್ರೀತಿಪಾತ್ರರೊಂದಿಗೆ ಸಂಬಂಧ ಉತ್ತಮ. ಗೊಂದಲದ ತೀರ್ಮಾನ ಬೇಡ. ಎಲ್ಲವೂ ಅಂದುಕೊಂಡಂತೆ ಆಗದು. ಕಾರ್ಯದ ಆರಂಭ ಸರಿಯಿದ್ದರೂ ಗುರಿ ತಪ್ಪಬಹುದು.

Exit mobile version