ಮೇಷ
ಇಂದು ನಿಮಗೆ ಜವಾಬ್ದಾರಿಗಳ ಹಸ್ತಾಂತರವಾಗುವ ಸಾಧ್ಯತೆಯಿದೆ. ಇದರಿಂದ ಮನಸ್ಸಿಗೆ ಸ್ವಲ್ಪ ಬೇಸರವಾದರೂ, ಪ್ರಭಾವಿ ವ್ಯಕ್ತಿಗಳ ಭೇಟಿ ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. ಹಳೆಯ ಕಹಿ ಘಟನೆಗಳನ್ನು ಮರೆತು ಮುನ್ನಡೆಯಿರಿ. ದೂರದಲ್ಲಿರುವ ಪೋಷಕರ ಆರೋಗ್ಯ ವಿಚಾರಿಸಿ ಮಾತನಾಡುವುದು ಅವರಿಗೆ ನೆಮ್ಮದಿ ನೀಡುತ್ತದೆ. ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆ ಇರಲಿ.
ವೃಷಭ
ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಸಮಯ ವ್ಯರ್ಥವಾಗುವ ಸಾಧ್ಯತೆಯಿದೆ, ಎಚ್ಚರವಿರಲಿ. ಇಂದು ಯಾವುದೇ ವಸ್ತುವನ್ನು ಬಳಸುವ ಮೊದಲು ಅದರ ಗುಣಮಟ್ಟ ಪರೀಕ್ಷಿಸಿ. ಮಕ್ಕಳ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಲಿದೆ. ನಿಮ್ಮ ಮಾತು ಮೃದುವಾಗಿರಲಿ, ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿರುಕು ಬರಬಹುದು. ಕುಟುಂಬದವರೊಂದಿಗೆ ದೂರ ಪ್ರಯಾಣದ ಯೋಗವಿದೆ. ಆರೋಗ್ಯದ ದೃಷ್ಟಿಯಿಂದ ಹೊರಗಿನ ಆಹಾರ ಸೇವನೆ ಬೇಡ.
ಮಿಥುನ
ಸರ್ಕಾರಿ ಕೆಲಸಗಳಿಗಾಗಿ ಹಣ ವ್ಯಯವಾಗುವ ಸಂಭವವಿದೆ. ಉದ್ಯಮದಲ್ಲಿ ಹೊಸ ಹೆಜ್ಜೆ ಇಡುವ ಮೊದಲು ಅನುಭವಿಗಳ ಸಲಹೆ ಪಡೆಯಿರಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. ಆರ್ಥಿಕವಾಗಿ ಯಾರನ್ನೂ ಅತಿಯಾಗಿ ನಂಬಬೇಡಿ, ಮೋಸ ಹೋಗುವ ಸಾಧ್ಯತೆಯಿದೆ. ಉನ್ನತ ಹುದ್ದೆಯ ಅವಕಾಶಗಳು ಬಂದರೂ ಸ್ವೀಕರಿಸಲು ಮನಸ್ಸು ಹಿಂದೇಟು ಹಾಕಬಹುದು.
ಕರ್ಕಾಟಕ
ನಿಮ್ಮ ಮಾತುಗಳು ಬೇರೆಯವರಿಗೆ ನೋವುಂಟು ಮಾಡದಂತೆ ನಿಗಾವಹಿಸಿ. ಕಲಾ ಕ್ಷೇತ್ರದಲ್ಲಿ ಇರುವವರಿಗೆ ಇಂದು ಉತ್ತಮ ಪ್ರೋತ್ಸಾಹ ದೊರೆಯಲಿದೆ. ವೃತ್ತಿ ಜೀವನದಲ್ಲಿ ನಿಧಾನಗತಿಯ ಪ್ರಗತಿ ಇರಲಿದೆ. ಅವಿವಾಹಿತರಿಗೆ ಬಂಧುಗಳ ಮೂಲಕ ವಿವಾಹ ಸಂಬಂಧಗಳು ಕೂಡಿ ಬರಬಹುದು. ಮನೆಯ ಹಿರಿಯರ ಮಾತನ್ನು ಅಸಡ್ಡೆ ಮಾಡಬೇಡಿ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ಕಲಹವಾಗುವ ಸಾಧ್ಯತೆಯಿದ್ದು, ತಾಳ್ಮೆಯಿಂದ ವರ್ತಿಸಿ.
ಸಿಂಹ
ಅಪರಿಚಿತರೊಂದಿಗೆ ಅತಿಯಾದ ಆಪ್ತತೆ ಬೇಡ, ವ್ಯವಹಾರಿಕವಾಗಿ ಮಾತ್ರ ಸಂಬಂಧವಿರಲಿ. ಭವಿಷ್ಯದ ಬಗ್ಗೆ ಗೊಂದಲಗಳಿದ್ದರೂ ಹಣಕಾಸಿನ ತಜ್ಞರ ಸಲಹೆಯಿಂದ ಪರಿಹಾರ ಸಿಗಲಿದೆ. ಅನಗತ್ಯ ಕೆಲಸದ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಕೆಟ್ಟ ಸಹವಾಸದಿಂದ ದೂರವಿರಲು ಇದು ಸಕಾಲ. ನಿಮ್ಮ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು.
ಕನ್ಯಾ
ವ್ಯಾಪಾರದಲ್ಲಿ ನಿರೀಕ್ಷಿತ ವೇಗ ಇರುವುದಿಲ್ಲ. ಕಲಾವಿದರು ಅವಕಾಶಗಳಿಗಾಗಿ ಹೆಚ್ಚಿನ ಶ್ರಮ ವಹಿಸಬೇಕಾಗುವುದು. ಆಸ್ತಿ ಹಂಚಿಕೆ ಅಥವಾ ಸಾಲದ ವಿಚಾರವಾಗಿ ಕುಟುಂಬದಲ್ಲಿ ಬಿಸಿಬಿಸಿ ಚರ್ಚೆ ನಡೆಯಬಹುದು. ಸಹೋದರರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆಯಿದೆ. ತಾಯಿಯ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಿ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
ತುಲಾ
ಇಂದು ಕಾರಣವಿಲ್ಲದೆ ಕೋಪ ಬರುವ ಸಾಧ್ಯತೆಯಿದೆ, ಮನಸ್ಸನ್ನು ಹತೋಟಿಯಲ್ಲಿಡಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕಲಾ ಮತ್ತು ನಟನಾ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ. ನಿಮ್ಮ ಪ್ರಾಮಾಣಿಕತೆಗೆ ಕಚೇರಿಯಲ್ಲಿ ಮೆಚ್ಚುಗೆ ವ್ಯಕ್ತವಾಗಲಿದೆ. ಆರೋಗ್ಯದ ಏರುಪೇರಿನಿಂದಾಗಿ ಸ್ವಲ್ಪ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಬಹುದು.
ವೃಶ್ಚಿಕ
ನಿಮ್ಮ ಶಕ್ತಿ ಮೀರಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಬಹುದು. ಆಪತ್ತಿನ ಸಮಯದಲ್ಲಿ ಸ್ನೇಹಿತರ ನೆರವು ದೊರೆಯಲಿದೆ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಕೆಲವು ಖರೀದಿಗಳನ್ನು ಮುಂದೂಡುವಿರಿ. ಉದ್ಯೋಗದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ಅಪರಿಚಿತ ಪ್ರದೇಶಗಳಿಗೆ ಒಂಟಿಯಾಗಿ ಪ್ರಯಾಣಿಸುವಾಗ ಮುನ್ನೆಚ್ಚರಿಕೆ ವಹಿಸಿ.
ಧನು
ಯುವಕರಿಗೆ ವೃತ್ತಿ ಜೀವನದಲ್ಲಿ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದೆ. ದಾಂಪತ್ಯ ಜೀವನವು ಸುಖಮಯವಾಗಿರಲಿದೆ. ಪ್ರಾಣಿ ಪ್ರೇಮ ಹೆಚ್ಚಾಗಲಿದ್ದು, ದಯೆ ತೋರುವಿರಿ. ಸಾರ್ವಜನಿಕವಾಗಿ ನಿಮ್ಮ ಕೆಲಸಕ್ಕೆ ಸಿಗುವ ಹೊಗಳಿಕೆಯಿಂದ ಸಂಕೋಚ ಉಂಟಾಗಬಹುದು. ಅತಿಯಾದ ಓಡಾಟದಿಂದ ದೈಹಿಕ ಸುಸ್ತು ಕಾಣಿಸಿಕೊಳ್ಳಬಹುದು, ಆರೋಗ್ಯದ ಕಡೆ ಗಮನವಿರಲಿ.
ಮಕರ
ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧ ಗಟ್ಟಿಯಾಗಲಿದೆ. ಹಳೆಯ ಆಸ್ತಿ ಮಾರಾಟದಿಂದ ಅಥವಾ ಬಾಡಿಗೆಯಿಂದ ಆರ್ಥಿಕ ಲಾಭವಾಗಲಿದೆ. ಭೂಮಿ ಮತ್ತು ವಾಹನದ ನಿರ್ವಹಣೆಗೆ ಖರ್ಚು ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ರಾಜಕೀಯ ಅಥವಾ ಪಕ್ಷಪಾತದಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು.
ಕುಂಭ
ವೃತ್ತಿ ಜೀವನದಲ್ಲಿ ಮಹತ್ತರ ಸಾಧನೆ ಮಾಡುವ ದಿನವಿದು. ಹಳೆಯ ಹೂಡಿಕೆಗಳಿಂದ ನಿರೀಕ್ಷಿತ ಲಾಭ ದೊರೆಯಲಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಿರಿ. ಮನೆಗೆ ಅತಿಥಿಗಳ ಆಗಮನದಿಂದ ಸಂಭ್ರಮ ಮನೆ ಮಾಡಲಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಯೋಜಿಸುವಿರಿ, ಆದರೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು.
ಮೀನ
ಆಸ್ತಿಯಲ್ಲಿ ಹೂಡಿಕೆ ಮಾಡಲು ಇಂದು ಸಕಾಲ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಮಾಜಿಕವಾಗಿ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಕೆಲಸದ ಒತ್ತಡದಿಂದಾಗಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಿ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಮೊದಲೇ ಯೋಜಿಸಿಕೊಳ್ಳುವುದು ಉತ್ತಮ.
