DGMO ಜಂಟಿ ಪತ್ರಿಕಾಗೋಷ್ಠಿ: ಭಾರತ ದಾಳಿಯಿಂದ 100ಕ್ಕೂ ಹೆಚ್ಚು ಉಗ್ರರ ಹ*ತ್ಯೆ

Gqq7ksdwkaahzrd

ಭಾರತದ ಉನ್ನತ ಸೇನಾ ಅಧಿಕಾರಿಗಳು ಭಾನುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್ ಸಿಂದೂರ್ ಮತ್ತು ಅದರ ನಂತರದ ಬೆಳವಣಿಗೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಒಂದು ದಿನದೊಳಗೆ ಈ ಸುದ್ದಿಗೋಷ್ಠಿ ನಡೆದಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ದಿಟ್ಟ ಕ್ರಮಗಳನ್ನು ಜಗತ್ತಿಗೆ ತಿಳಿಸಿದೆ.

ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಆಪರೇಷನ್ ಸಿಂದೂರ್ ಕುರಿತು ಮಾತನಾಡುತ್ತಾ, “ಭಯೋತ್ಪಾದಕರನ್ನು ಮತ್ತು ಅವರ ಆಯೋಜಕರನ್ನು ಶಿಕ್ಷಿಸಲು, ಅವರ ಮೂಲಸೌಕರ್ಯವನ್ನು ನಾಶಪಡಿಸಲು ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಲಾಗಿದೆ,” ಎಂದು ತಿಳಿಸಿದರು. ಈ ದಾಳಿಗಳಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತವು ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು.

ADVERTISEMENT
ADVERTISEMENT

ಮೇ 8 ಮತ್ತು 9ರಂದು ಪಾಕಿಸ್ತಾನದಿಂದ ಭಾರತದ ವಿರುದ್ಧ ದಾಳಿಗೆ ಯತ್ನ ನಡೆದಿತ್ತು. ಆದರೆ ಭಾರತೀಯ ಸೇನೆ ಈ ದಾಳಿಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿತ್ತು. ಪಾಕಿಸ್ತಾನವು ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿಯಾದರೂ, ಭಾರತೀಯ ವಾಯುಸೇನೆಯಿಂದ ಈ ಯತ್ನ ವಿಫಲವಾಯಿತು. ಇದೇ ವೇಳೆ, ಪಾಕಿಸ್ತಾನವು ನಾಗರಿಕರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿತ್ತು. ಆದರೆ, ಭಾರತವು ಕೇವಲ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ನಿಖರ ದಾಳಿಗಳನ್ನು ನಡೆಸಿತ್ತು.

ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು, ಭಾರತದ ದಾಳಿಗಳಿಂದ ಪಾಕಿಸ್ತಾನದ 35 ರಿಂದ 40 ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಭಾರತದ ವಿರುದ್ಧ ಪಾಕಿಸ್ತಾನ ನಡೆಸಿದ ಎಲ್ಲಾ ದಾಳಿಗಳನ್ನು ಭಾರತೀಯ ವಾಯುಸೇನೆ ಯಶಸ್ವಿಯಾಗಿ ತಡೆಗಟ್ಟಿತ್ತು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಎಕೆ ಭಾರ್ತಿ (ಡಿಜಿ ಏರ್ ಆಪರೇಷನ್ಸ್) ಮತ್ತು ಭಾರತೀಯ ನೌಕಾಪಡೆಯ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಕೂಡ ಭಾಗವಹಿಸಿದ್ದರು. ಈ ಮೂವರು ಸೇನಾ ಮುಖ್ಯಸ್ಥರು ಆಪರೇಷನ್ ಸಿಂದೂರ್‌ನ ಯಶಸ್ಸಿನ ಬಗ್ಗೆ ವಿವರಿಸಿದರು. ಭಾರತೀಯ ಸೇನೆಯ ಈ ಸಂಘಟಿತ ಕಾರ್ಯಾಚರಣೆಯು ದೇಶದ ಭದ್ರತೆಗೆ ಒತ್ತು ನೀಡುವ ಜೊತೆಗೆ, ಭಯೋತ್ಪಾದನೆಯ ವಿರುದ್ಧ ದೃಢವಾದ ಸಂದೇಶವನ್ನು ರವಾನಿಸಿದೆ.

ಆಪರೇಷನ್ ಸಿಂದೂರ್ ಕೇವಲ ಒಂದು ಸೇನಾ ಕಾರ್ಯಾಚರಣೆಯಷ್ಟೇ ಅಲ್ಲ, ಭಾರತದ ರಾಷ್ಟ್ರೀಯ ಭದ್ರತೆಗೆ ಬದ್ಧತೆಯ ಸಂಕೇತವಾಗಿದೆ. ಪಾಕಿಸ್ತಾನದಿಂದ ಭಯೋತ್ಪಾದನೆಗೆ ನೀಡಲಾಗುವ ಯಾವುದೇ ಬೆಂಬಲವನ್ನು ಭಾರತ ಸಹಿಸುವುದಿಲ್ಲ ಎಂಬುದನ್ನು ಈ ಕಾರ್ಯಾಚರಣೆ ಸ್ಪಷ್ಟಪಡಿಸಿದೆ.

Exit mobile version