ಇರಾನ್-ಅಮೆರಿಕ ಸಂಧಾನಕ್ಕಾಗಿ ಮಧ್ಯಸ್ಥಿಕೆ ವಹಿಸುತ್ತಾ ಭಾರತ ?

Untitled design 2026 03 30T181634.913

ಟೆಹ್ರಾನ್‌ : ಇರಾನ್ ಹಾಗೂ ಅಮೆರಿಕಾ ನಡುವಿನ ಭೀಕರ ಸಂಘರ್ಷ ಆರಂಭವಾಗಿ ತಿಂಗಳು ಕಳೆದರೂ ಶಾಂತಿಯ ಲಕ್ಷಣಗಳು ಕಾಣುತ್ತಿಲ್ಲ. ಉಭಯ ರಾಷ್ಟ್ರಗಳ ಪಟ್ಟು ಸಡಿಲಿಕೆಯಾಗದ ಹಿನ್ನೆಲೆಯಲ್ಲಿ ಜಗತ್ತು ಆತಂಕದಲ್ಲಿದೆ. ಈ ಮಧ್ಯೆ, ಸಂಘರ್ಷಕ್ಕೆ ಅಂತ್ಯ ಹಾಡಲು ಭಾರತದ ಮಧ್ಯಸ್ಥಿಕೆಯನ್ನು ಇರಾನ್ ಬಯಸಿದೆ ಎಂಬ ಮಹತ್ವದ ಬೆಳವಣಿಗೆ ವರದಿಯಾಗಿದೆ.

​ಜಾಗತಿಕ ತೈಲ ಮಾರುಕಟ್ಟೆಗೆ ಬಿಸಿ

​ಯುದ್ಧದ ಪರಿಣಾಮವಾಗಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಸೇರಿದಂತೆ ವಿಶ್ವದಾದ್ಯಂತ ತೈಲ ಬಿಕ್ಕಟ್ಟು ಎದುರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅನಿಲದ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಜೀವನ ನಿರ್ವಹಣೆಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಚಟುವಟಿಕೆಗಳ ಮೇಲೆ ಈ ಯುದ್ಧವು ಭಾರಿ ಹೊಡೆತ ನೀಡುತ್ತಿದೆ.

​ಚೀನಾ ಮತ್ತು ರಷ್ಯಾ ಸೇರಿದಂತೆ ಹಲವು ಪ್ರಬಲ ರಾಷ್ಟ್ರಗಳು ಯುದ್ಧ ವಿರಾಮಕ್ಕೆ ಕರೆ ನೀಡಿದ್ದರೂ, ಅಮೆರಿಕಾ ಮತ್ತು ಇರಾನ್ ಈ ಬಗ್ಗೆ ಕಿವಿಗೊಟ್ಟಿರಲಿಲ್ಲ. ಇನ್ನು ನೆರೆಯ ರಾಷ್ಟ್ರ ಪಾಕಿಸ್ತಾನ ಕೂಡ ಸಂಧಾನದ ಪ್ರಯತ್ನ ನಡೆಸಿತ್ತಾದರೂ, ಉಭಯ ದೇಶಗಳು ಪಾಕಿಸ್ತಾನದ ಮೇಲೆ ನಂಬಿಕೆ ಇಡದ ಕಾರಣ ಆ ಪ್ರಯತ್ನವು ಹಳ್ಳ ಹಿಡಿದಿತ್ತು.

​ಭಾರತದತ್ತ ಮುಖ ಮಾಡಿದ ಇರಾನ್ !

​ಇರಾನ್‌ನ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಅಮೆರಿಕಾ ನಡೆಸಿದ ದಾಳಿಯು ಇರಾನ್ ಅನ್ನು ಕುಗ್ಗಿಸುತ್ತದೆ ಎಂಬ ಲೆಕ್ಕಾಚಾರವಿತ್ತು. ಆದರೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಅಮೆರಿಕಾ ಮತ್ತು ಇಸ್ರೇಲ್‌ಗೆ ಪ್ರತಿರೋಧ ಒಡ್ಡುತ್ತಿರುವುದು ಯುದ್ಧದ ದಿಕ್ಕನ್ನೇ ಬದಲಿಸಿದೆ. ಈ ನಿರ್ಣಾಯಕ ಹಂತದಲ್ಲಿ, ಹೌತಿ ಬಂಡುಕೋರರು ಹಾಗೂ ಇರಾನ್ ಆಡಳಿತವು ಭಾರತವನ್ನು ಸಂಧಾನಕ್ಕಾಗಿ ಆಹ್ವಾನಿಸಿದೆ ಎನ್ನಲಾಗುತ್ತಿದೆ. ​ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಉಭಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಈ ಆಹ್ವಾನಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಈಗ ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.

Exit mobile version