ಪಾಕ್​​ ದಾಳಿಗೆ ಭಾರತ ಕೌಂಟರ್: ಲಾಹೋರ್‌-ಸಿಯಾಲ್‌ಕೋಟ್‌ ಮೇಲೆ ಡ್ರೋನ್ ದಾಳಿ

Untitled design (96)
ADVERTISEMENT
ADVERTISEMENT

ನವದೆಹಲಿ: ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ಮತ್ತೊಮ್ಮೆ ಹೇಡಿತನದ ದಾಳಿಯ ಪ್ರಯತ್ನ ನಡೆದಿದೆ. ಜಮ್ಮು, ಪಂಜಾಬ್, ಮತ್ತು ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ರಾತ್ರಿಯ ವೇಳೆಯಲ್ಲಿ ಪಾಕ್‌ ಡ್ರೋಣ್‌ಗಳು ದಾಳಿಗೆ ಯತ್ನಿಸಿದ್ದವು. ಆದರೆ, ಭಾರತೀಯ ಸಶಸ್ತ್ರ ಪಡೆಗಳು ತಮ್ಮ S-400 ಮತ್ತು ‘ಆಕಾಶ್’ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಈ ದಾಳಿಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಿವೆ. ಈ ದಾಳಿಗೆ ಪ್ರತಿಯಾಗಿ, ಭಾರತವು ಪಾಕಿಸ್ತಾನದ ಪ್ರಮುಖ ನಗರಗಳಾದ ಲಾಹೋರ್‌ ಮತ್ತು ಸಿಯಾಲ್‌ಕೋಟ್‌ ಮೇಲೆ ಡ್ರೋನ್‌ ದಾಳಿಗಳನ್ನು ಪ್ರಾರಂಭಿಸಿದೆ. ಇದರ ಜೊತೆಗೆ, ಸಿಯಾಲ್‌ಕೋಟ್‌ನ ಬಜ್ವತ್‌ ಸೆಕ್ಟರ್‌ನಲ್ಲಿ ಫಿರಂಗಿ ಗುಂಡಿನ ದಾಳಿಯನ್ನೂ ನಡೆಸಲಾಗಿದೆ.

ಪಾಕಿಸ್ತಾನವು ಭಾರತದ ಜಮ್ಮು, ಬಾಲಾಕೋಟ್, ಶ್ರೀನಗರ, ಉಧಂಪುರ, ಮತ್ತು ಅಮೃತಸರದಂತಹ ನಗರಗಳ ಮೇಲೆ ಡ್ರೋಣ್‌ ದಾಳಿಗಳನ್ನು ನಡೆಸಿತ್ತು. ಈ ದಾಳಿಗಳಿಗೆ ತಕ್ಕ ಉತ್ತರವನ್ನು ನೀಡುವ ಸಲುವಾಗಿ, ಭಾರತೀಯ ಸೇನೆಯು ತನ್ನ ತಂತ್ರಗಾರಿಕೆಯನ್ನು ತೀವ್ರಗೊಳಿಸಿದೆ. ಲಾಹೋರ್‌ ಮತ್ತು ಸಿಯಾಲ್‌ಕೋಟ್‌ನಲ್ಲಿ ಭಾರತದ ಡ್ರೋಣ್‌ ದಾಳಿಗಳು ಯಶಸ್ವಿಯಾಗಿ ನಡೆದಿದ್ದು, ಇದು ಪಾಕಿಸ್ತಾನಕ್ಕೆ ಭಾರತದ ಶಕ್ತಿಯನ್ನು ಮತ್ತೊಮ್ಮೆ ತೋರಿಸಿದೆ.

ಈ ಘಟನೆಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಪ್ರಧಾನಮಂತ್ರಿಯವರು ಈ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರಾಜನಾಥ್‌ ಸಿಂಗ್‌ ಅವರು ಸಿಡಿಎಸ್‌ ಜನರಲ್‌ ಅನಿಲ್‌ ಚೌಹಾಣ್‌ ಮತ್ತು ಮೂವರು ಸೇನಾ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಾರ್ಯಾಚರಣೆಗಳ ಬಗ್ಗೆ ಮತ್ತು ಗಡಿಯಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

Exit mobile version