ಉತ್ತರ ಪ್ರದೇಶ: ಮದುವೆಯಾದ ಮಹಿಳೆಯೊಬ್ಬರು ತಮ್ಮ ಪ್ರಿಯಕರನೊಂದಿಗೆ ಸಂಬಂಧವನ್ನು ಮುಂದುವರಿಸಿದ್ದರಿಂದ ಬೇಸತ್ತ ಪತಿಯೊಬ್ಬ ಆಕೆಯನ್ನು ಪ್ರಿಯಕರನಿಗೇ ಒಪ್ಪಿಸಿ, ಅವರ ಮದುವೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆದಿದೆ. ಈ ವಿಚಿತ್ರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆ
ಜಾನ್ಪುರ ಜಿಲ್ಲೆಯ ಸರೈ ಮೊಹಿಯುದ್ದೀನ್ಪುರದ ನಿವಾಸಿ ಅರವಿಂದ್ ಬಿಂದ್, ಎರಡು ವರ್ಷಗಳ ಹಿಂದೆ ಖೇತಸರೈ ನಿವಾಸಿ ರೀಟಾ ಎಂಬಾಕೆಯನ್ನು ವಿವಾಹವಾದವರು. ಆರಂಭದಲ್ಲಿ ಎಲ್ಲವೂ ಸುಗಮವಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ರೀಟಾಳ ವರ್ತನೆಯಲ್ಲಿ ಬದಲಾವಣೆ ಕಾಣಿಸಿತ್ತು. ವಿಚಾರಿಸಿದಾಗ ಅರವಿಂದ್ಗೆ ಆಕೆಯ ಲವ್ ಅಫೇರ್ನ ಸತ್ಯ ತಿಳಿಯಿತು. ರೀಟಾ, ಮದುವೆಗೂ ಮೊದಲೇ ಯಶವಂತ್ ಬಿಂದ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು ಮತ್ತು ಮದುವೆಯಾದರೂ ಆ ಸಂಬಂಧವನ್ನು ಮುಂದುವರಿಸಿದ್ದಳು.
” क्या होगा इस देश का लाड़ो ” 😡😡
उत्तर प्रदेश –
जौनपुर में पति अरविंद ने पत्नी रीता की शादी उसके बॉयफ्रेंड यशवंत से करवा दी। शादी से पहले से दोनों रिलेशन में थे। शादी के बाद एक बार बायफ्रेंड के साथ चली गयी थी, लेकिन रीता अपनी हरकतों से बाज नहीं आई और यह बात फिर पति को ये बात… pic.twitter.com/BSXKYjClDq— Mahima Yadav (@SinghKinngSP) June 18, 2025
ಕೊನೆಗೆ, ರೀಟಾ ತನ್ನ ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿಹೋದಳು. ಅರವಿಂದ್ ಆಕೆಯನ್ನು ಹೇಗೊ ಹುಡುಕಿ ಮನೆಗೆ ಕರೆತಂದರೂ, ಆಕೆ ತನ್ನ ವರ್ತನೆಯನ್ನು ಬದಲಾಯಿಸಲಿಲ್ಲ. ಅತ್ತೆ-ಮಾವನೊಂದಿಗೆ ವಾಸಿಸಲು ನಿರಾಕರಿಸಿದ ಆಕೆ, ಆತ್ಮಹತ್ಯೆಯ ಬೆದರಿಕೆಯನ್ನೂ ಒಡ್ಡಿದಳು. ಈ ಸಮಸ್ಯೆಯಿಂದ ಬೇಸತ್ತ ಅರವಿಂದ್, ರೀಟಾಳನ್ನು ಕರೆದುಕೊಂಡು ನೋಯ್ಡಾಕ್ಕೆ ತೆರಳಿದರು. ಆದರೆ, ಅಲ್ಲಿಯೂ ರೀಟಾ ತನ್ನ ಪ್ರಿಯಕರನೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದಳು. ಅರವಿಂದ್ ಕೆಲಸಕ್ಕೆ ಹೋದಾಗ ಗಂಟೆಗಟ್ಟಲೆ ಯಶವಂತ್ನೊಂದಿಗೆ ಮಾತನಾಡುತ್ತಿದ್ದಳು.
ಬಹಳಷ್ಟು ಬಾರಿ ಸಲಹೆ ನೀಡಿದರೂ ರೀಟಾ ಬದಲಾಗದಿದ್ದಾಗ, ಅರವಿಂದ್ ಒಂದು ದಿಟ್ಟ ನಿರ್ಧಾರಕ್ಕೆ ಬಂದರು. ಆಕೆಯನ್ನು ತನ್ನ ಪ್ರಿಯಕರನೊಂದಿಗೆ ಒಂದುಗೂಡಿಸಲು ನಿರ್ಧರಿಸಿದರು. ಜಾನ್ಪುರಕ್ಕೆ ರೀಟಾಳನ್ನು ಕರೆತಂದ ಅರವಿಂದ್, ಸ್ಥಳೀಯ ದುರ್ಗಾ ದೇವಸ್ಥಾನದಲ್ಲಿ ರೀಟಾ ಮತ್ತು ಯಶವಂತ್ರ ಮದುವೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದರು.
ಮದುವೆಯ ನಂತರ, ಅರವಿಂದ್ ಭಾವುಕರಾಗಿ ವಧು-ವರರನ್ನು ಆಶೀರ್ವದಿಸಿ ಬೀಳ್ಕೊಟ್ಟರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅರವಿಂದ್ರ ತ್ಯಾಗವನ್ನು ಶ್ಲಾಘಿಸಿದ್ದಾರೆ. ಕೆಲವರು ಇದನ್ನು “ಪ್ರೀತಿಯ ಗೆಲುವು” ಎಂದರೆ, ಇನ್ನು ಕೆಲವರು “ಸಂಬಂಧದ ಹೊಸ ವ್ಯಾಖ್ಯಾನ” ಎಂದು ಕರೆದಿದ್ದಾರೆ.