ಹಿಮಾಚಲದಲ್ಲಿ ಭೀಕರ ಪ್ರವಾಹ, ಭಾರೀ ಮಳೆ: ಓರ್ವ ಸಾವು, 18 ಜನ ನಾಪತ್ತೆ

Untitled design (81)

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಮೇಘಸ್ಫೋಟವು ಭೀಕರ ಪ್ರವಾಹ ಉಂಟಾಗಿದೆ. ಇದರ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 18 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಜಿಲ್ಲಾಧಿಕಾರಿ ಅಪೂರ್ವ ದೇವಗನ್ ಅವರ ಪ್ರಕಾರ, ಕೇವಲ ಒಂದೇ ದಿನದಲ್ಲಿ 21.68 ಸೆಂ.ಮೀ. ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ ತೀವ್ರ ತೊಂದರೆ ಉಂಟಾಗಿದೆ.

ನಿನ್ನೆ ಸಂಜೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಂಡಿ ಜಿಲ್ಲೆಯ ಗೋಹರ್, ಕರ್ಸೋಗ್, ಮತ್ತು ಧರಂಪುರ ಪ್ರದೇಶಗಳು ಮೇಘಸ್ಫೋಟದಿಂದ ತತ್ತರಿಸಿ ಹೋಗಿದೆ. ಈ ಪ್ರದೇಶಗಳಲ್ಲಿ ಇದುವರೆಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, 18 ಜನರು ಇನ್ನೂ ಕಾಣೆಯಾಗಿದ್ದಾರೆ.

ನಾಪತ್ತೆಯಾದವರ ಪಟ್ಟಿಯನ್ನು ಗುರುತಿಸಲಾಗಿದ್ದು, ಬಾಗಾ ಗ್ರಾಮದ ಪದಮ್ ಸಿಂಗ್ (75), ದೇವಮ್ಮ ದೇವಿ (70), ಝಾಬೆ ರಾಮ್ (50), ಪಾರ್ವತಿ ದೇವಿ (47), ಸುರ್ಮಿ ದೇವಿ (70), ಇಂದ್ರ ದೇವ್ (29), ಉಮಾವತಿ (27), ಕನಿಕಾ (9), ಮತ್ತು ಗೌತಮ್ (7) ಸೇರಿದಂತೆ ಒಟ್ಟು 18 ಜನರಿದ್ದಾರೆ. ಈ ದುರಂತವು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ.

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಎಲ್ಲಾ ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಸೇತುವೆಗಳು, ಮತ್ತು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತೀವ್ರವಾಗಿ ಶ್ರಮಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (NDRF), ರಾಜ್ಯ ವಿಪತ್ತು ನಿರ್ವಹಣಾ ತಂಡ (SDRF), ಮತ್ತು ಸ್ಥಳೀಯ ಆಡಳಿತವು ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ಮುಂದುವರೆಸಿದೆ.

Exit mobile version